
ನಿನ್ನೆ ತಡರಾತ್ರಿ ವೇಳೆ ಮರಿಸ್ವಾಮಿ ಹಾಗೂ ಮತ್ತೊಬ್ಬ ವ್ಯಕ್ತಿ ವಿವಿ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಹೋಟೆಲ್ ಒಂದರ ಬಳಿ ಸ್ಕೂಟರ್ ಜೊತೆ ನಿಂತಿದ್ದಾರೆ.ಸ್ಕೂಟರ್ ಗೆ ನಂಬರ್ ಪ್ಲೇಟ್ ಹಾಕಿರಲಿಲ್ಲ.ಈ ಬಗ್ಗೆ ರಾತ್ರಿ ಗಸ್ತಿನಲ್ಲಿದ್ದ ವಿವಿಪುರಂ ಠಾಣೆಯ ಪೇದೆಗಳಾದ ರೆಹಮಾನ್ ಮತ್ತು ಕೌಶಿಕ್ ರವರು ಪ್ರಶ್ನಿಸಿದ್ದಾರೆ.ಪೊಲೀಸರ ಪ್ರಶ್ನೆಗೆ ಕೆರಳಿದ ಮರಿಸ್ವಾಮಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಳ್ಳುವಾಗ ಕಿತ್ತುಕೊಳ್ಳಲು ಬಂದಿದ್ದಾರೆ.ಹಿರಿಯ ಪೊಲೀಸ್ ಅಧಿಕಾರಿ ಬರುತ್ತಿದ್ದಾರೆ ಇಲ್ಲೇ ಇರುವಂತೆ ತಾಕೀತು ಮಾಡುತ್ತಿದ್ದರೂ ಓಡಿಹೋಗುವ ಪ್ರಯತ್ನ ಮಾಡಿದ್ದಾರೆ.ಕೊನೆಗೆ ಪೊಲೀಸರು ಚೇಸ್ ಮಾಡಿ ಮರಿಸ್ವಾಮಿಯನ್ನ ಹಿಡಿದಿದ್ದಾರೆ.ಯಾವ ಪೊಲೀಸ್ ಏನು ಮಾಡಲು ಸಾಧ್ಯವಿಲ್ಲ ಎಂದು ಮರಿಸ್ವಾಮಿ ಧಂಕಿ ಹಾಕಿರುವುದಾಗಿ ಸಿಬ್ಬಂದಿಗಳು ಆರೋಪಿಸಿದ್ದಾರೆ.ಈ ಸಂಭಂಧ ಮರಿಸ್ವಾಮಿ ಹಾಗೂ ಮತ್ತೊಬ್ಬನ ವಿರುದ್ದ ಸಿಬ್ಬಂದಿಗಳಾದ ರೆಹಮಾನ್ ಹಾಗೂ ಕೌಶಿಕ್ ರವರು ವಿವಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…





