ಇನ್ನು ಈ ನೋಟಿಸ್ ಕುರಿತಂತೆ ಮಾತನಾಡಿರುವ ಎಂ.ಪಿ ರೇಣುಕಾಚಾರ್ಯ, ವಿಜಯೇಂದ್ರರನ್ನ ಟೀಕೆ ಮಾಡಿದ್ರೆ ನಾನು ಒಳ್ಳೆಯವನಾ..? ಬಿಜೆಪಿ ರಾಜ್ಯಾಧ್ಯಕ್ಷರನ್ನ ಟೀಕಿಸಿದರೇ ರೇಣುಕಾಚಾರ್ಯ ಒಳ್ಳೆಯವನಾ..? ಬಿಎಸ್ ವೈ ಟೀಕಿಸಿದವರನ್ನ ಉಚ್ಚಾಟನೆ ಮಾಡಲಿಲ್ಲ. ಪಕ್ಷವನ್ನ ಸಮರ್ಥನೆ ಮಾಡಿಕೊಳ್ಳುವುದು ಅಪರಾಧನಾ..? ಶೋಕಾಸ್ ನೋಟಿಸ್ ಗೆ ದಾಖಲೆ ಸಮೇತ ಉತ್ತರ ನೀಡುತ್ತೇನೆ ಎಂದರು. ಅವರು ನೀಡಿರುವ ಹೇಳಿಕೆಯ ಬಗ್ಗೆ ತಕ್ಕ ಸಮರ್ಥನೆ ನೀಡುವುದಾಗಿ ಹೇಳಿದ್ದಾರೆ.

ನಾನು ಹೇಳಿರುವ ಹೇಳಿಕೆ ಬೇರೆ ಆದರೆ,ಹೈಕಮಾಂಡ್ ಗೆ ತಪ್ಪು ಸಂದೇಶ ನೀಡಿದ್ದಾರೆ. ನನಗೆ ಶೋಕಾಸ್ ನೋಟಿಸ್ ನೀಡಿದ್ದಕ್ಕೆ ಭಯವಿಲ್ಲ ನಾನು ಹೆದರಲ್ಲ. ಬಿಜೆಪಿಯಲ್ಲಿ ಆಗಿರುವ ಗೊಂದಲ ಪಕ್ಷ ವಿರೋಧಿ ಚಟುವಟಿಕೆ ಕುರಿತು ಎಲ್ಲದಕ್ಕೂ ಉತ್ತರ ನೀಡುತ್ತೇನೆ. ನಾನು ಎರಡು ಬಾರಿ ಜೈಲಿಗೆ ಹೋಗಿ ಬಂದಿದ್ದೇನೆ. ಪಕ್ಷ ಸಂಘಟನೆ ಮಾಡಿದ್ದೇನೆ. ನನ್ನಂಥವರಿಗೆ ನೋಟಿಸ್ ನೀಡಿದ್ದಾರಲ್ಲ ಎಂದು ಎಂ.ಪಿ ರೇಣುಕಾಚಾರ್ಯ ಬೇಸರ ವ್ಯಕ್ತಪಡಿಸಿದರು.