ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರವಾಗಿ ಮಾತನಾಡಿದ ಅವರು ಸಿಎಂ ಬದಲಾವಣೆ ಬಗ್ಗೆ ಮಾತನಾಡಲು ನಾನ್ಯಾರು ಆ ಕುರಿತು ನಾನು ಮಾತನಾಡಲ್ಲ ಸಿದ್ದರಾಮಯ್ಯ ದೈವೇಚ್ಛೆ ಇರೋವರೆಗೂ ಸಿಎಂ ಆಗಿರುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ.
ಮೂರು ಪಕ್ಷದಲ್ಲೂ ರಾಜ್ಯಾಧ್ಯಕ್ಷ ಬದಲಾವಣೆ ವಿಚಾರ ಎಲ್ಲವನ್ನೂ ಜನ ನೋಡ್ತಿದ್ದಾರೆ. ಪಕ್ಷ ಸಂಘಟನೆ ದೃಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಲ್ಲ ಪಕ್ಷಗಳೂ ಕೂಡ ಹಿರಿಯರಿದ್ದಾರೆ.ಮಾಜಿ ಸಿಎಂಗಳಿದ್ದಾರೆ. ಬೀದಿಯಲ್ಲಿ ನಿಂತು ಮಾಟ ಮಾಡುವವರಿಗೆ ಬುದ್ಧಿ ಮಾತು ಹೇಳಬೇಕು.ಹೇಳಿಕೆ ಕೊಡಲು ದುಡ್ಡು ಕೊಡಬೇಕಿಲ್ಲ ಆದ್ರೆ ಯಾಕೆ ಸುಮ್ಮನಿದ್ದಾರೋ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.

ನಾನು ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷದ ಆಕಾಂಕ್ಷಿ ಅಲ್ಲ
19 ಜನ ಶಾಸಕರಿಗೆ ನಾಯಕ ಆಗಲಿಕ್ಕೆ ನನಗೆ ಯೋಗತ್ಯೇ ಇಲ್ಲ. ಇನ್ನು ರಾಜ್ಯಾಧ್ಯಕ್ಷ ಆಗೋಕೆ ಆಗತ್ತಾ, ನಾನು ಆಕಾಂಕ್ಷಿ ಅಲ್ಲವೇ ಅಲ್ಲ, ನಾನು ನನ್ನ ಕ್ಷೇತ್ರದ ಜನರ ಕೆಲ್ಸ ಮಾಡ್ತಿದ್ದ್ದೇನೆ ಕುಮಾರಸ್ವಾಮಿ ಎಲ್ಲವನ್ನೂ ನಿರ್ಧಾರ ಮಾಡ್ತಾರೆ. ನನ್ನ ಅವರ ಮದ್ಯೆ ಮುನಿಸಿಲ್ಲ ಆದ್ರೆ ನಾನು ಸ್ವಲ್ಪ ದೂರವಿದ್ದೇನೆ ಮುಂದೆ ಏನಾಗತ್ತೆ ನೋಡಣ ಜೆಡಿಎಸ್ ರಾಜ್ಯಾಧ್ಯಕ್ಷರ ಬಗ್ಗೆ ಕುಮಾರಸ್ವಾಮಿ ನಿರ್ಧಾರ ಅಂತಿಮ ಎಂದು ತಿಳಿಸಿದರು.





