ಆಪಲ್ ಕಂಪನಿ ಮಾಲೀಕ ಸ್ಟೀವ್ ಜಾಬ್, ಪತ್ನಿ ಲಾರೆನ್, ಮಹಾಮೇಳದಲ್ಲಿ ಭಾಗಿ.

ಪ್ರಯಾಗ್‌ರಾಜ್, ಜ.12- ಉತ್ತರ ಪ್ರದೇಶದ ಧಾರ್ಮಿಕ ನಗರವಾದ ಪ್ರಯಾಗ ರಾಜ್‌ನಲ್ಲಿ ನಡೆಯಲಿರುವ ಮಹಾಕುಂಭ ಮೇಳಕ್ಕೆ ಕೌಂಟ್‌ಡೌನ್ ಶುರುವಾಗಿದೆ.

ಪ್ರಯಾಗ್‌ರಾಜ್ ನಲ್ಲಿ ಲಕ್ಷಾಂತರ ಜನರ ಸಮ್ಮುಖದಲ್ಲಿ . ಮಹಾ ಕುಂಭಮೇಳ ನಡೆಯಲಿದೆ. ಇದೀಗ ಮಹಾ ಕುಂಭಮೇಳದಲ್ಲಿ ವಿಶೇಷ ಸಂಗತಿ ಎಂದರೆ, ಜಗತ್ಪಸಿದ್ದ ಆಪಲ್ ಕಂಪನಿ ಮಾಲೀಕ ಸ್ಟೀವ್ ಜಾಬ್ ಅವರ ಪತ್ನಿ ‘ಲಾರೆನ್ ಮಹಾ ಕುಂಭಮೇಳದಲ್ಲಿ ಪಾಲ್ಗೊಳ್ಳಲಿದ್ದಾರೆ. ಅವರು ಕಲ್ಪವಾಸ ವ್ರತ ಮಾಡಲಿದ್ದಾರೆ. ಕುಂಭಮೇಳದ ಜಾಗಕ್ಕೆ ತಲುಪುವ ಮೊದಲೇ ಕೇಸರಿ ಬಣ್ಣದ ಬಟ್ಟೆಗಳನ್ನು ಧರಿಸಿದ ಲಾರೆನ್ ಅವರು ತನ್ನ ಹೆಸರನ್ನು ಸಹ ಬದಲಾಯಿಸಿಕೊಂಡಿದ್ದು, ಗುರು ನಿರಂಜನಿ ಪೀಠಾಧೀಶ್ವರ ಮಹಂತ್ ಕೈಲಾಶಾನಂದ ಗಿರಿ ಅವರಿಗೆ ತಮ್ಮ ಗೋತ್ರವನ್ನು ನೀಡಿದ ಬಳಿಕ ಲಾರೆನ್‌ಗೆ ಅವರು ಕಮಲಾ ಎಂದು ಹೆಸರಿಟ್ಟರು. ನಂತರ ಆಪಲ್ ಕಂಪನಿ ಮಾಲೀಕ ಸ್ಟೀವ್ ಜಾಬ್ ಅವರ ಪತ್ನಿ ಲಾರೆನ್ ಪಾಶ್ಚಿಮಾತ್ಯ ಉಡುಗೆಯ ಬದಲು ಸನ್ಯಾಸಿ ನಿಲುವಂಗಿಯನ್ನು ಧರಿಸಿರುವುದು ಅಚ್ಚರಿ ಮೂಡಿಸಿದೆ.
ಪ್ರಯಾಗರಾಜ್‌ನಲ್ಲಿ ನಡೆಯುವ ಮಹಾಕುಂಭಮೇಳದಲ್ಲಿ ಲಾರೆನ್ ಅವರು ತಮ್ಮ ಹೆಸರನ್ನು ಕಮಲಾ ಎಂದು ಬದಲಾಯಿಸಿಕೊಳ್ಳುವ ಮೂಲಕ ಸನಾತನ ಧರ್ಮದ ಆಚರಣೆಗಳನ್ನು ಅರ್ಥೈಸಿಕೊಳ್ಳಲು ಮುಂದಾಗಿದ್ದಾರೆ. ಅವರು ಮಹಾಕುಂಭಮೇಳದ ಸಮಯ ದಲ್ಲಿ ಅಲ್ಲಿ ನಡೆಯುವ ಕಥೆಗಳು ಮತ್ತು ಪ್ರವಚನಗಳಲ್ಲಿ ಭಾಗವಹಿಸುತ್ತಾರೆ ಎಂದು ತಿಳಿದು ಬಂದಿದೆ.

ಸ್ವಾಮಿ ಕೈಲಾಶಾ ನಂದ ಗಿರಿ ಅವರ ಪ್ರಕಾರ ಲಾರೆನ್ ಜಾಬ್ ಸನಾತನ ಧರ್ಮದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ ಅವರು ಕೈಲಾಶಾನಂದ ಗಿರಿ ಅವರನ್ನು ತನ್ನ ತಂದೆ ಎಂದು ಪರಿಗಣಿಸಿದ್ದಾರಂತೆ. ಸ್ವಾಮಿ ಕೈಲಾಶಾನಂದ ಗಿರಿ ಅವರಿಗೆ ತಮ್ಮ ಗೋತ್ರವನ್ನು ನೀಡಿದ ಲಾರೆನ್ ಅವರು ಪ್ರಸ್ತುತ ತಮ್ಮ ತಂಡದೊಂದಿಗೆ ವಾರಣಾಸಿಯಲ್ಲಿ ನೆಲೆಸಿದ್ದಾರೆ. ಲಾರೆನ್ ಪೊವೆಲ್ ಜ.13 ರಂದು ಕಾಶಿಯಿಂದ ಪ್ರಯಾಗರಾಜ್‌ಗೆ ತೆರಳಲಿದ್ದಾರೆ. ಮಹಾಕುಂಭದಲ್ಲಿ ಶ್ರೀ ನಿರಂಜನಿ ಅಖಾರದ ಆಚಾರ್ಯ ಮಹಾಮಂಡಲೇಶ್ವರರು ಸ್ವಾಮಿ ಕೈಲಾಶಾನಂದ ಗಿರಿಯ ಶಿಬಿರದಲ್ಲಿ ತಂಗಲಿದ್ದಾರೆ. 10 ದಿನಗಳ ಕಾಲ ಕಲ್ಪವಾಸ ವ್ರತವನ್ನು ಆಚರಿಸುತ್ತಾರೆ. ಋಷಿಮುನಿಗಳ ಸಹವಾಸದಲ್ಲಿ ಇದ್ದುಕೊಂಡು ಸನಾತನ, ಆಧ್ಯಾತ್ಮಿಕತೆ ಮತ್ತು ಭಾರತೀಯ ಸಂಸ್ಕೃತಿಯನ್ನು ಲಾರೆನ್ ಕಲಿಯಲಿದ್ದಾರೆ ಎಂದು ತಿಳಿದು ಬಂದಿದೆ.
ಲಾರೆನ್ ಅವರ ಭೇಟಿಯ ಬಗ್ಗೆ ಆಧ್ಯಾತ್ಮಿಕ ಗುರು ಸ್ವಾಮಿ ಕೈಲಾಶಾನಂದ ಗಿರಿ ಮಹಾರಾಜ್ ಅವರು, ಕಾಶಿ ತಲುಪಿದ ನಂತರ ಲಾರೆನ್ ಜಾಬ್, ಬಾಬಾ ವಿಶ್ವನಾಥರನ್ನು ಭೇಟಿ ಮಾಡಲು ಹೋದರು. ಈ ಸಮಯದಲ್ಲಿ ಅವರು ಬಾಬಾನನ್ನು ನೋಡುತ್ತಲೇ ಇದ್ದರು. ನಂತರ ಅವರಿಗೆ ಬಾಬಾ ವಿಶ್ವನಾಥ್ ಇರುವ ಸ್ಥಳದ ಬಗ್ಗೆ ಮಾಹಿತಿ ನೀಡಲಾಯಿತು. ಲಾರೆನ್ ಗರ್ಭಗುಡಿಯ ಹೊರಗಿನಿಂದ ಬಾಬಾರ ಆಶೀರ್ವಾದ ಪಡೆದರು. ಸನಾತನ ಧರ್ಮದಲ್ಲಿ ಹಿಂದೂಯೇತರರು ಶಿವಲಿಂಗವನ್ನು ಮುಟ್ಟುವುದಿಲ್ಲ. ಎಂಬುದನ್ನು ಗಮನದಲ್ಲಿಟ್ಟುಕೊಂಡು ಹೊರಗಿನಿಂದ ದರ್ಶನ ಪಡೆದರು ಎಂದು ಹೇಳಿದರು. ಸ್ಟೀವ್ ಜಾಬ್ ಪ್ರಸಿದ್ದ ಆಪಲ್ ಕಂಪನಿಯ ಸಹ-ಸಂಸ್ಥಾಪಕರಾಗಿದ್ದಾರೆ. ಅವರು ಆಧ್ಯಾತ್ಮಿಕತೆಯಲ್ಲಿ ಆಳವಾದ ಆಸಕ್ತಿಯನ್ನು ಹೊಂದಿದ್ದರು. ಪತ್ನಿ ಲಾರೆನ್ ಕೂಡ ತನ್ನ ದಿವಂಗತ ಪತಿಯಂತೆ ಆಧ್ಯಾತ್ಮಿಕತೆಯನ್ನು ನಂಬುತ್ತಾರೆ. ಹೀಗಾಗಿ, ಅವರು ಸನಾತನ ಧರ್ಮವನ್ನು ಅರ್ಥಮಾಡಿಕೊಳ್ಳಲು ಮಹಾಕುಂಭಕ್ಕೆ ಬಂದಿದ್ದಾರೆ.

Related Posts

ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್!

ಹಣದುಬ್ಬರ ಹಾಗೂ ಬೆಲೆ ಏರಿಕೆಯಿಂದ ತತ್ತರಿಸಿರುವ ಸಾಮಾನ್ಯ ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್ ನೀಡಿವೆ. ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದ ಬಿಸಿ ಇದೀಗ ನೇರವಾಗಿ ಭಾರತೀಯರ ಜೇಬಿಗೆ ತಟ್ಟಿದೆ. ನವದೆಹಲಿ: ಹಣದುಬ್ಬರ ಹಾಗೂ ಬೆಲೆ ಏರಿಕೆಯಿಂದ…

ಸ್ಟೂಡೆಂಟ್ ಎಲೆಕ್ಷನ್ ಗೆ ಅಸ್ತು ಎಂದ ಸಿಎಂ!

(ಕೆಎಂಶಿ)-ಉನ್ನತ ‘ಶಿಕ್ಷಣ ವಲಯದಲ್ಲಿ ಸಾಮಾಜಿಕ ನ್ಯಾಯ ಕಲ್ಪಿ ಸಲು, ರಾಜ್ಯದ ಎಲ್ಲ ಸರ್ಕಾರಿ, ಖಾಸಗಿ ಮತ್ತು ಡೀಮ್ಸ್ ವಿಶ್ವವಿದ್ಯಾಲಯಗಳಲ್ಲಿ ಜಾತಿ ಆಧಾರಿತ ದೌರ್ಜನ್ಯ ತಡೆಯಲು ರೋಹಿತ್ ವೇಮುಲ ಕಾಯಿದೆ ಜಾರಿಗೆ ತರಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ…

You Missed

ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್!

ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್!

ಸ್ಟೂಡೆಂಟ್ ಎಲೆಕ್ಷನ್ ಗೆ ಅಸ್ತು ಎಂದ ಸಿಎಂ!

ಸ್ಟೂಡೆಂಟ್ ಎಲೆಕ್ಷನ್ ಗೆ ಅಸ್ತು ಎಂದ ಸಿಎಂ!

ರಾಧಿಕಾ ಪಂಡಿತ್ ಜೊತೆ ಹೊಸ ಲುಕ್‌ನಲ್ಲಿ ‘ರಾಕಿಂಗ್’ ಸ್ಟಾರ್!

ರಾಧಿಕಾ ಪಂಡಿತ್ ಜೊತೆ ಹೊಸ ಲುಕ್‌ನಲ್ಲಿ ‘ರಾಕಿಂಗ್’ ಸ್ಟಾರ್!

ಕನ್ನಡ ಚಿತ್ರರಂಗದ ವ್ಯಕ್ತಿಯೊಬ್ಬರ ನಿವಾಸ ಮ್ಯೂಸಿಯಂ ಆಗಲಿದೆ

ಕನ್ನಡ ಚಿತ್ರರಂಗದ ವ್ಯಕ್ತಿಯೊಬ್ಬರ ನಿವಾಸ ಮ್ಯೂಸಿಯಂ ಆಗಲಿದೆ

ಸಚಿನ್ ತೆಂಡೂಲ್ಕರ್ ಸೊಸೆ ಎಷ್ಟು ಶ್ರೀಮಂತೆ ಗೊತ್ತಾ?

ಸಚಿನ್ ತೆಂಡೂಲ್ಕರ್ ಸೊಸೆ ಎಷ್ಟು ಶ್ರೀಮಂತೆ ಗೊತ್ತಾ?

ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಮೇಲೆ ಪೊಲೀಸ್ ಕಣ್ಣು!

ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಮೇಲೆ ಪೊಲೀಸ್ ಕಣ್ಣು!