
ಇದೇ ವೇಳೆ ಮಾತನಾಡಿರುವ ಸಿರಾಜ್, ಕಳೆದ ಏಳು ವರ್ಷಗಳಿಂದ ನಾನು ಆರ್ಸಿಬಿ ಪರ ಆಡುತ್ತಿದ್ದೆ. ಹಾಗಾಗಿ ಸಹಜವಾಗಿಯೇ ಭಾವುಕನಾದೆ. ಯಾವಾಗ ಗಿಲ್ ಅವರು ನನ್ನ ಕೈಗೆ ಬಾಲ್ ನೀಡಿದರೋ ಆಗ ಕಾಮನ್ ಆದೆ. ನಾನು ನಿರಂತರವಾಗಿ ಪಂದ್ಯಗಳನ್ನು ಆಡಿದೆ. ಆದ್ದರಿಂದ ಯಾವ ತಪ್ಪುಗಳನ್ನು ಮಾಡ್ತಿದ್ದೇನೆಂದು ಅರ್ಥವಾಗಲಿಲ್ಲ. ಬಿಡುವು ಸಿಕ್ಕಾಗ ಬೌಲಿಂಗ್ ಮತ್ತು ಫಿಟ್ನೆಸ್ನತ್ತ ಗಮನಹರಿಸಿದೆ.

ಗುಜರಾತ್ ಟೈಟಾನ್ಸ್ಗೆ ಸೇರಿದಾಗ ಆಶಿಶ್ ನೆಹ್ರಾ ಭಾಯ್ ಜೊತೆ ಮಾತನಾಡಿದೆ. ನಿಮ್ಮ ಆಟವನ್ನು ಆನಂದಿಸಿ, ಮಾಡಬೇಕಾದ ಕೆಲಸ ಮಾಡಿ ಎಂದರು. ನಾನು ತಂಡದಲ್ಲಿರುವ ಇತರ ಬೌಲರ್ಗಳಾದ ರಬಾಡ, ಇಶಾಂತ್ ಮತ್ತು ಇತರೆ ಬೌಲರ್ಗಳೊಂದಿಗೆ ಮಾತನಾಡುತ್ತೇನೆ. ಅವರಿಂದ ಪ್ರತಿಕ್ರಿಯೆಯನ್ನು ತೆಗೆದುಕೊಳ್ಳುತ್ತೇನೆ. ಅದು ನನಗೆ ನಿಜವಾಗಿಯೂ ಸಹಾಯಕ್ಕೆ ಬರುತ್ತಿದೆ. ಒಬ್ಬ ಬೌಲರ್ ಆಗಿ ಯಾವಾಗಲೂ ಆತ್ಮವಿಶ್ವಾಸ ಹೊಂದಲು ಬಯಸುತ್ತೇನೆ. ಇದು ಪ್ರಮುಖ ವಿಷಯ ಎಂದಿದ್ದಾರೆ. ಸಿರಾಜ್ ರವರು ಉತ್ತಮ ಬೌಲಿಂಗ್ ಪ್ರದರ್ಶನವನ್ನು ಮಾಡಿದ್ದು ಜಿಟಿ ಅಭಿಮಾನಿಗಳಿಗೆ ಸಂತಸವನ್ನು ತಂದಿದ್ದು, ಆರ್ಸಿಬಿ ಅಭಿಮಾನಿಗಳು ಅವರನ್ನು ಬೇರೆ ತಂಡದಲ್ಲಿ ನೋಡಿ ಮನನೊಂದು ಕೊಂಡಿದ್ದಾರೆ.





