ಆರ್.ಸಿ.ಬಿ ಗೆ ಸೇರಿದ ಬಳಿಕ ಎಲ್ಲೆಡೆಯಿಂದ ಮನ್ನಣೆ ಸಿಕ್ತಾ ಇದೆ, ಟೀಮ್ ಇಂಡಿಯಾದಲ್ಲಿ ಇಷ್ಟು ಮನ್ನಣೆ ಸಿಕ್ಕಿರಲಿಲ್ಲ; ಜಿತೇಶ್ ಶರ್ಮಾ ಹೇಳಿಕೆ !!!

ಭಾರತ ತಂಡಕ್ಕಾಗಿ ಆಡುವುದು ಎಷ್ಟೋ ಆಟಗಾರರ ಕನಸಾಗಿರುತ್ತದೆ. ಅದರಲ್ಲೂ ಟೀಮ್ ಇಂಡಿಯಾಗೆ ಆಯ್ಕೆಯಾಗಬೇಕಾದರೆ ಅತ್ಯದ್ಭುತ ಪ್ರತಿಭೆಯ ಜೊತೆಗೆ ಅದೃಷ್ಟವನ್ನು ಸಹ ಹೊಂದಿರಬೇಕು. ಅಂತರ ರಾಷ್ಟ್ರೀಯ ಕ್ರಿಕೆಟ್ ನಲ್ಲಿ ಭಾರತದ ಪರ ಆಡುವುದು ಮತ್ತು ಪ್ರದರ್ಶನ ನೀಡುವುದು ಪ್ರತಿಯೊಬ್ಬರ ಕನಸೇ ಸರಿ. ಆದರೆ ಆರ್.ಸಿ.ಬಿ ವಿಕೆಟ್ ಕೀಪರ್ ಪ್ಲಸ್ ಬ್ಯಾಟ್ಸ್ ಮ್ಯಾನ್ ದ್ವಿತೇಶ್ ಶರ್ಮಾ ಆಘಾತಕಾರಿ ಹೇಳಿಕೆಯನ್ನು ಬಹಿರಂಗಪಡಿಸಿದ್ದಾರೆ. ಟೀಮ್ ಇಂಡಿಯಾದಲ್ಲಿ ಆಡಿದರೂ ಸಹ ನನ್ನನ್ನು ಯಾರು ಅಷ್ಟೊಂದು ಗುರುತಿಸಿರಲಿಲ್ಲ, ಹೆಚ್ಚಾಗಿ ಮನ್ನಣೆಯೂ ಸಹ ಭಾರತ ತಂಡದಲ್ಲಿ ಸಿಗಲಿಲ್ಲ. ಆದರೆ ಆರ್.ಸಿ.ಬಿ ತಂಡಕ್ಕೆ ಸೇರಿದ ಬಳಿಕ ಅಭಿಮಾನಿಗಳು ಆಟೋಗ್ರಾಫ್ ಗಾಗಿ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಆದರೆ ಟೀಮ್ ಇಂಡಿಯಾ ಪರ ಆಡುತ್ತಿದ್ದಾಗ ಕೇವಲ ಮೂರರಿಂದ ನಾಲ್ಕು ಜನ ಅಭಿಮಾನಿಗಳು ಮಾತ್ರ ಆಟೋಗ್ರಾಫ್ ಕೇಳುತ್ತಿದ್ದರು ಎಂದು ಹೇಳಿದ್ದಾರೆ.

ಇನ್ನು ವಾಸ್ತವವಾಗಿ ಹೇಳಬೇಕೆಂದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾನ್ಚೈಸಿಯು ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಒಂದು ವಿಶೇಷವಾದ ವಿಡಿಯೋವನ್ನು ಹಂಚಿಕೊಂಡಿದ್ದು, ಇದರಲ್ಲಿ ಜಿತೇಶ್ ಶರ್ಮಾ ತಮ್ಮ ಕ್ರಿಕೆಟ್ ಪ್ರಯಾಣದ ಬಗ್ಗೆ ಮಾತನಾಡಿದ್ದಾರೆ. ನಾನು ಆರ್.ಸಿ.ಬಿ ಸೇರಿದ ಬಳಿಕ ಐಪಿಎಲ್ ಗು ಮುನ್ನ ಸೈಯದ್ ಮುಸ್ತಾಕ್ ಅಲಿ ಟ್ರೋಫಿಯಲ್ಲಿ ಆಟವನ್ನು ಆಡ್ತಾ ಇದ್ದೆ. ಆ ವೇಳೆ ಅಭಿಮಾನಿಗಳು ಜಿತೇಶ್ ,ಜಿತೇಶ್ , ಆರ್ ಸಿ ಬಿ ಆರ್ ಸಿ ಬಿ ಎಂದು ಕೂಗುತ್ತಿದ್ದರು. ಆಗ ನಾನು ಯಾವುದೇ ಸಣ್ಣ ತಂಡಕ್ಕೆ ಹೋಗಿಲ್ಲ ಎಂದು ಅರಿತುಕೊಂಡೆ. ಆರ್.ಸಿ.ಬಿ ಪರ ಆಡುವುದು ಸಣ್ಣ ವಿಷಯವಂತು ಅಲ್ಲವೇ ಅಲ್ಲ. ಈ ತಂಡದಲ್ಲಿ ವಿಭಿನ್ನ ಭಾವನೆಗಳಿವೆ. ಇದೀಗ 100 ರಿಂದ 150 ಜನರು ಆಟೋಗ್ರಾಫ್ ಕೇಳ್ತಾ ಇದ್ದಾರೆ. ಆದರೆ ಭಾರತ ತಂಡಕ್ಕೆ ಪ್ರತಿನಿಧಿಸುತ್ತಿರುವಾಗ 3 ರಿಂದ 4 ಜನರು ಸಹ ಬಂದಿರಲಿಲ್ಲ. ಈಗ ನನಗೆ ಅರ್ಥವಾಗುತ್ತಿದೆ ಆರ್.ಸಿ.ಬಿ ಫ್ರಾಂಚೈಸಿಯು ಒಂದು ವಿಶೇಷ ಹಾಗು ವಿಭಿನ್ನವಾದ ತಂಡ ಎಂದು, ಅಲ್ಲದೆ ಅಭಿಮಾನಿಗಳು ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ ಎಂದು ಹೇಳಿದ್ದಾರೆ.

ಜಿತೇಶ್ ಶರ್ಮಾ ರವರ ಪ್ರದರ್ಶನದ ಬಗ್ಗೆ ಹೇಳುವುದಾದರೆ. ಅವರು ಭಾರತದ ಪರ ಒಂಬತ್ತು ಟಿ 20 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 14.28 ರ ಸರಾಸರಿಯಲಿ ಕೇವಲ 100 ರನ್ ಕಲೆ ಹಾಕಿದ್ದಾರೆ. ಇನ್ನು ಐಪಿಎಲ್ ನಲ್ಲಿ ಆರ್.ಸಿ.ಬಿ ಪರ ನಾಲ್ಕು ಇನ್ನಿಂಗ್ಸ್ ಗಳಲ್ಲಿ 29 ಸರಾಸರಿ ಮತ್ತು 157 ಸ್ಟ್ರೈಕ್ ರೇಟ್ ನೊಂದಿಗೆ 88 ರನ್ ಗಳಿಸಿದ್ದಾರೆ. ಈ ಪಂದ್ಯಾವಳಿಯಲ್ಲಿ ಒಟ್ಟಾರೆ ದಾಖಲೆಯ ಬಗ್ಗೆ ಹೇಳುವುದಾದರೆ, ಜಿತೇಶ್ ಶರ್ಮಾ 46 ಪಂದ್ಯಗಳನ್ನಾಡಿದ್ದು, 23 ಸರಾಸರಿ ಮತ್ತು 151 ಸ್ಟ್ರೈಕ್ರೆಟ್ ನೊಂದಿಗೆ 818 ರನ್ ಗಳಿಸಿದ್ದಾರೆ.

ಅವರ ಸಂದರ್ಶನದಿಂದ ತಿಳಿದಿದ್ದೇನೆಂದರೆ, ಆರ್.ಸಿ.ಬಿ ಪರ ಪಂದ್ಯವಾಡುತ್ತಿರುವುದು ಅವರಿಗೆ ಖುಷಿ ತಂದಿದೆ ಎಂದು.

Related Posts

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ರಾಜ್ಯದಲ್ಲಿ ಸೆಪ್ಟೆಂಬರ್ 21ರಿಂದ ಮೂರು ದಿನಗಳ ಕಾಲ ವಿಶೇಷ ವಿಧಾನಮಂಡಲ ಅಧಿವೇಶನ ನಡೆಸಲು ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಸೆ. 21ರಿಂದ ಸೆ.…

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಗುಂಡ್ಲುಪೇಟೆ ಪಟ್ಟಣದ ಇಂದಿರಾ ಕ್ಯಾಂಟೀನ್‌ಗೆ ಸೋಮವಾರ ಬೆಳಿಗ್ಗೆ ಅಧಿಕಾರಿಗಳ ತಂಡ ದಿಢೀರ್ ಭೇಟಿ ನೀಡಿ ಆಹಾರದ ಶುಚಿತ್ವ, ಗುಣಮಟ್ಟ ಹಾಗೂ ಕುಡಿಯುವ ನೀರಿನ ಪೂರೈಕೆಯನ್ನು ಕೂಲಂಕಷವಾಗಿ ಪರಿಶೀಲಿಸಿತು. ಬಡವರು ಮತ್ತು ಶ್ರಮಿಕರಿಗೆ ಪೌಷ್ಟಿಕ ಹಾಗೂ ಶುಚಿ-ರುಚಿಯಾದ ಆಹಾರ ದೊರೆಯಬೇಕು ಎಂಬ ಶಾಸಕರ…

You Missed

ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು

ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಬಿಗ್ ಬಾಸ್ ಕನ್ನಡ 13: ಈ ಭಾನುವಾರದಿಂದ ‘ಏವಿಯೇಷನ್’ ಥೀಮ್‌ನೊಂದಿಗೆ ಗ್ರ್ಯಾಂಡ್ ಟೇಕ್ ಆಫ್!

ಬಿಗ್ ಬಾಸ್ ಕನ್ನಡ 13: ಈ ಭಾನುವಾರದಿಂದ ‘ಏವಿಯೇಷನ್’ ಥೀಮ್‌ನೊಂದಿಗೆ ಗ್ರ್ಯಾಂಡ್ ಟೇಕ್ ಆಫ್!

ಟಾಕ್ಸಿಕ್‌’ನಲ್ಲಿ ಯಶ್‌ ಅಭಿನಯಕ್ಕೆ ಕಿಚ್ಚನ ಪುತ್ರಿ ಫಿದಾ: ಪ್ರತಿಯೊಂದು ಫ್ರೇಮ್‌ನಲ್ಲೂ ಮ್ಯಾಜಿಕ್‌ ಎಂದ ಸಾನ್ವಿ ಸುದೀಪ್‌

ಟಾಕ್ಸಿಕ್‌’ನಲ್ಲಿ ಯಶ್‌ ಅಭಿನಯಕ್ಕೆ ಕಿಚ್ಚನ ಪುತ್ರಿ ಫಿದಾ: ಪ್ರತಿಯೊಂದು ಫ್ರೇಮ್‌ನಲ್ಲೂ ಮ್ಯಾಜಿಕ್‌ ಎಂದ ಸಾನ್ವಿ ಸುದೀಪ್‌

FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ!

FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ!