ತಮ್ಮ ಸಂಗಾತಿಗಳಿಗೆ ಬಲು ನಿಷ್ಠೆಯಿಂದಿರುವ ಜೀವಿಗಳಿವು;

ಹೌದು ವೀಕ್ಷಕರೇ, ಮನುಷ್ಯರೇ ಆಗಿರಲಿ ಅಥವಾ ಪ್ರಾಣಿಗಳೇ ಆಗಿರಲಿ ಪ್ರೀತಿಯಲ್ಲಿ ಆಕರ್ಷಣೆ ಕಳೆದುಕೊಂಡಾಗ ಇನ್ನೊರ್ವರತ್ತ ಆಕರ್ಷಿತರಾಗುವುದು ಆಶ್ಚರ್ಯವೇನಲ್ಲ. ಅದರಲ್ಲೂ ಇಂದಿನ ಆಧುನಿಕ ಯುಗದಲ್ಲಿ ಮನುಷ್ಯರಲ್ಲಿ ಪ್ರೀತಿ, ಪ್ರೇಮ, ಸಂಬಂಧಕ್ಕೆ ಬೆಲೆಯೇ ಇಲ್ಲದಂತಾಗಿದೆ. ಡಿವೋರ್ಸ್, ಪ್ರೀತಿಯಲ್ಲಿ ಮೋಸ ಇಂತಹ ಘಟನೆಗಳು ನಡೆಯುತ್ತಲೇ ಇವೆ. ಆದ್ರೆ ಈ ಕೆಲವೊಂದಿಷ್ಟು ಜೀವಿಗಳು ಪ್ರೀತಿಯಲ್ಲಿ ತಮ್ಮ ಸಂಗಾತಿಗೆ ಜೀವನದುದ್ದಕ್ಕೂ ತುಂಬಾನೇ ನಿನಿಷ್ಠೆಯಿಂದ ಇರುತ್ತವಂತೆ. ಒಂದು ವೇಳೆ ತನ್ನ ಸಂಗಾತಿ ಸಾವನ್ನಪ್ಪಿದರೆ ಆ ಜೀವಿ ಒಂಟಿಯಾಗಿಯೇ ಜೀವನಪರ್ಯಂತ ಬದುಕುತ್ತವಂತೆ. ಹಾಗಿದ್ರೆ ತಮ್ಮ ಸಂಗಾತಿಗೆ ತುಂಬಾನೇ ನಿಷ್ಠವಾಗಿರುವ ಜೀವಿಗಳು ಯಾವುದೆಂಬುದನ್ನು ನೋಡೋಣ ಬನ್ನಿ.

ಹಂಸಗಳು: ಹಂಸ ಜೋಡಿಗಳನ್ನು ಪ್ರೀತಿಯ ನಿಜವಾದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಒಂದು ಹಂಸವು ಇನ್ನೊಂದರೊಂದಿಗೆ ಜೋಡಿಯಾದ ನಂತರ, ಅವು ಒಟ್ಟಿಗೆ ಗೂಡುಗಳನ್ನು ನಿರ್ಮಿಸುತ್ತವೆ, ಮಕ್ಕಳನ್ನು ಒಟ್ಟಿಗೆ ಬೆಳೆಸುತ್ತವೆ ಮತ್ತು ಪೋಷಕರ ಕರ್ತವ್ಯಗಳನ್ನು ಹಂಚಿಕೊಳ್ಳುತ್ತವೆ .

ತೋಳಗಳು: ತೋಳಗಳು ಅಪಾಯಕಾರಿಯಾಗಿ ಕಾಣುತ್ತವೆ, ಆದರೆ ಅವುಗಳು ಪ್ರೀತಿಯ ವಿಚಾರದಲ್ಲಿ ತುಂಬಾನೇ ಸೌಮ್ಯವಾಗಿರುತ್ತವೆ. ಅವುಗಳು ತಮ್ಮ ಕುಟುಂಬ ಮತ್ತು ಸಂಗಾತಿಗೆ ಬಹಳ ನಿಷ್ಠವಾಗಿರುತ್ತವೆ.

ಬೋಳು ಹದ್ದು: ಅಮೆರಿಕ ರಾಷ್ಟ್ರೀಯ ಪಕ್ಷಿಯಾದ ಬೋಳು ಹದ್ದುಗಳು ತಮ್ಮ ಸಂಗಾತಿಗೆ ತುಂಬಾನೇ ನಿಷ್ಠವಾಗಿರುತ್ತವೆ. ಒಮ್ಮೆ ಅವು ಸಂಗಾತಿಯನ್ನು ಆರಿಸಿಕೊಂಡರೆ, ಅವು ಜೀವನಪರ್ಯಂತ ಒಂದೇ ಸಂಗಾತಿಯ ಜೊತೆಗೆ ಜೀವಿಸುತ್ತವೆ.

ಪೆಂಗ್ವಿನ್: ಪೆಂಗ್ವಿನ್ಗಳು ತಮ್ಮ ಜೀವನದುದ್ದಕ್ಕೂ ಒಂದೇ ಸಂಗಾತಿಯೊಂದಿಗೆ ಇರುತ್ತವೆ. ಅವುಗಳು ಒಟ್ಟಿಗೆ ಮರಿಗಳನ್ನು ನೋಡಿಕೊಳ್ಳುತ್ತವೆ. ಪೆಂಗ್ವಿನ್ಗಳ ನಡುವಿನ ಪ್ರೀತಿಯ ಭಾವನೆ ತುಂಬಾ ಪ್ರಬಲವಾಗಿರುತ್ತದೆ.

ಬೀವರ್ಗಳು: ಬೀವರ್ಗಳನ್ನು ವಿಶ್ವದ ಅತ್ಯಂತ ಶ್ರಮಶೀಲ ಪ್ರಾಣಿಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ. ಅತ್ಯುತ್ತಮ ಎಂಜಿನಿಯರ್ ಅಂತಲೇ ಹೆಸರುವಾಸಿಯಾಗಿರುವ ಈ ಪುಟ್ಟ ಬೀವರ್ಗಳು ಪ್ರೀತಿ, ಸಂಬಂಧದ ವಿಚಾರದಲ್ಲೂ ತುಂಬಾನೇ ನಿಷ್ಠವಾಗಿರುತ್ತವೆ.

ಗಿಬ್ಬನ್ಸ್: ಮಂಗನ ಜಾತಿಗೆ ಸೇರಿದ ಈ ಪ್ರಾಣಿಗಳು ತಮ್ಮ ಸಂಗಾತಿಗಳೊಂದಿಗೆ ನಿಕಟ ಬಂಧಗಳನ್ನು ಸೃಷ್ಟಿಸುತ್ತವೆ. ಅವು ತಮ್ಮ ಮರಿಗಳನ್ನು ಒಟ್ಟಿಗೆ ಬೆಳೆಸುತ್ತವೆ ಮತ್ತು ಹೆಚ್ಚಿನ ಸಮಯವನ್ನು ತಮ್ಮ ಸಂಗಾತಿಯೊಂದಿಗೆ ಕಳೆಯುತ್ತವೆ. ತಮ್ಮ ಸಂಗಾತಿ ಸತ್ತರೆ ಒಂಟಿಯಾಗಿ ವಾಸಿಸುತ್ತವೆ.

 

 

 

 

 

 

Related Posts

ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್!

ಹಣದುಬ್ಬರ ಹಾಗೂ ಬೆಲೆ ಏರಿಕೆಯಿಂದ ತತ್ತರಿಸಿರುವ ಸಾಮಾನ್ಯ ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್ ನೀಡಿವೆ. ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದ ಬಿಸಿ ಇದೀಗ ನೇರವಾಗಿ ಭಾರತೀಯರ ಜೇಬಿಗೆ ತಟ್ಟಿದೆ. ನವದೆಹಲಿ: ಹಣದುಬ್ಬರ ಹಾಗೂ ಬೆಲೆ ಏರಿಕೆಯಿಂದ…

ಸ್ಟೂಡೆಂಟ್ ಎಲೆಕ್ಷನ್ ಗೆ ಅಸ್ತು ಎಂದ ಸಿಎಂ!

(ಕೆಎಂಶಿ)-ಉನ್ನತ ‘ಶಿಕ್ಷಣ ವಲಯದಲ್ಲಿ ಸಾಮಾಜಿಕ ನ್ಯಾಯ ಕಲ್ಪಿ ಸಲು, ರಾಜ್ಯದ ಎಲ್ಲ ಸರ್ಕಾರಿ, ಖಾಸಗಿ ಮತ್ತು ಡೀಮ್ಸ್ ವಿಶ್ವವಿದ್ಯಾಲಯಗಳಲ್ಲಿ ಜಾತಿ ಆಧಾರಿತ ದೌರ್ಜನ್ಯ ತಡೆಯಲು ರೋಹಿತ್ ವೇಮುಲ ಕಾಯಿದೆ ಜಾರಿಗೆ ತರಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ…

You Missed

ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್!

ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್!

ಸ್ಟೂಡೆಂಟ್ ಎಲೆಕ್ಷನ್ ಗೆ ಅಸ್ತು ಎಂದ ಸಿಎಂ!

ಸ್ಟೂಡೆಂಟ್ ಎಲೆಕ್ಷನ್ ಗೆ ಅಸ್ತು ಎಂದ ಸಿಎಂ!

ರಾಧಿಕಾ ಪಂಡಿತ್ ಜೊತೆ ಹೊಸ ಲುಕ್‌ನಲ್ಲಿ ‘ರಾಕಿಂಗ್’ ಸ್ಟಾರ್!

ರಾಧಿಕಾ ಪಂಡಿತ್ ಜೊತೆ ಹೊಸ ಲುಕ್‌ನಲ್ಲಿ ‘ರಾಕಿಂಗ್’ ಸ್ಟಾರ್!

ಕನ್ನಡ ಚಿತ್ರರಂಗದ ವ್ಯಕ್ತಿಯೊಬ್ಬರ ನಿವಾಸ ಮ್ಯೂಸಿಯಂ ಆಗಲಿದೆ

ಕನ್ನಡ ಚಿತ್ರರಂಗದ ವ್ಯಕ್ತಿಯೊಬ್ಬರ ನಿವಾಸ ಮ್ಯೂಸಿಯಂ ಆಗಲಿದೆ

ಸಚಿನ್ ತೆಂಡೂಲ್ಕರ್ ಸೊಸೆ ಎಷ್ಟು ಶ್ರೀಮಂತೆ ಗೊತ್ತಾ?

ಸಚಿನ್ ತೆಂಡೂಲ್ಕರ್ ಸೊಸೆ ಎಷ್ಟು ಶ್ರೀಮಂತೆ ಗೊತ್ತಾ?

ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಮೇಲೆ ಪೊಲೀಸ್ ಕಣ್ಣು!

ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಮೇಲೆ ಪೊಲೀಸ್ ಕಣ್ಣು!