ದೇವರಿಗೂ ಮಿಗಿಲು ಅಮ್ಮನ ಮಡಿಲು ….

ಜೀವನದಲ್ಲಿ ಅಮ್ಮ ಎಂಬ ಎರಡಕ್ಷರ ಜೊತೆಗಿರಲು, ಕಷ್ಟ ಎಂಬ ಎರಡಕ್ಷರ ಕಾಣುವುದಿಲ್ಲ. ನವಮಾಸ ಗರ್ಭದಲ್ಲಿ ಹೊತ್ತು, ಜನ್ಮ ನೀಡಿದ ಅವಳು ಜನ್ಮ ಮಾಸುವವರೆಗೂ ಪ್ರೀತಿಯನ್ನು ಬಿಟ್ಟು ಇನ್ನೇನನ್ನೂ ನೀಡಲಾರಳು. ಮಕ್ಕಳು ತಪ್ಪು ಮಾಡಿದಾಗ ಕೋಪವೇ ಅವಳ ಬೆತ್ತ, ನಮಗೆ ನೋವಾದಾಗ ಅವಳು ಕಣ್ಣೀರಾಕುವಳು ಅದುವೇ ಅವಳ ಮುಗ್ಧತೆಯ ಪ್ರೀತಿ. ಶಿಸ್ತು ,ಬದುಕಿನ ಅರ್ಥ ತಿಳಿಸುವ ವೈಖರಿಯಲ್ಲಿಯೇ ಗುರುವಾದವಳು. ನಗುವೆಂಬ ಅಮೂಲ್ಯವಾದ ಆಭರಣ ತೊಟ್ಟವಳು ಅಮ್ಮ. ನಮ್ಮ ಏಳಿಗೆಗಾಗಿ ಕಾಣದ ದೇವರಿಗೆ ಹರಕೆ ಹೊತ್ತು, ಸದಾ ಸುಖವಿರಲಿ ಮಕ್ಕಳ ಬಾಳಿನಲ್ಲಿ ಎಂದು ಬೇಡಿದವಳು ನನ್ನಮ್ಮ. ಹೊಲ-ಗದ್ದೆಗಳಲ್ಲಿ, ಬಿಸಿಲು, ಮಳೆ,ಚಳಿ,ಗಾಳಿ ಎನ್ನದೇ ದೇಹದಂಡಿಸಿ ದುಡಿದು ಮಕ್ಕಳಿಗಾಗಿ ಒಂದಿಷ್ಟು ಹಣ ಕೂಡಿಡುವಳು. ಆ ಹಣದಿಂದ ಮಕ್ಕಳ ಜೀವನ ಹಸನಾಗುವುದನ್ನು ನೋಡುವುದೇ ಅವಳ ಜೀವನದ ಮುಖ್ಯ ಗುರಿ. ನಮಗಾಗಿ ಗುಡಿ-ಗೋಪುರ ಸುತ್ತುವ ಅವಳೇ ಕಣ್ಣಿಗೆ ಕಾಣುವ, ಮುಕ್ಕೋಟಿ ದೇವರನ್ನು ಮೀರಿಸುವ ಮಮತೆಯ ಸಿರಿ ಅಮ್ಮ. ಆಕೆಯ ಕಾಲಿನ ಧೂಳು ಸಹ ನನ್ನಣೆಗೆ ಸಿಂಧೂರವೇ ಸರಿ..

ಈ ಸುಂದರ ಜೀವನ ನೀಡಿದ್ದಕ್ಕೆ ಧನ್ಯವಾದಗಳು ಅಮ್ಮ…. ಎಂದಿಗೂ ನಿನ್ನ ಮಡಿಲಿನಲ್ಲಿ ಪುಟ್ಟ ಮಗು ನಾನು…. ದೇವರಿಗೂ ಸವಾಲಾಕುವೆ ನಿನ್ನ ಪ್ರೀತಿ ಪಡೆದ ನಾನು ಜಗತ್ತಿನ ಶ್ರೀಮಂತೆ ಎಂದು…..ಅಮ್ಮ; ಇದು ಖಂಡಿತ ಒಂದು ಶಬ್ದವಲ್ಲ. ಬದಲಿಗೆ ಅದೊಂದು ಭಾವನೆ. ಸಂತೋಷ, ಸುಖ, ದುಃಖ, ನೋವು, ನಲಿವು ಹೀಗೆ ಎಲ್ಲದಕ್ಕೆ ಅಮ್ಮನೇ ಆಧಾರ. ಆಕೆಯೇ ನಮ್ಮ ಮೊದಲ ನುಡಿ. ಜಗತ್ತಿನಲ್ಲಿ ಅಮ್ಮ ಅನ್ನುವ ಶಬ್ದಕ್ಕಿಂತ ತೂಕದ ಇನ್ನೊಂದು ಶಬ್ದ-ಭಾವನೆ ಇರಲಿಕ್ಕಿಲ್ಲ.ಪ್ರತಿ ವ್ಯಕ್ತಿಯ ಬದುಕಿನಲ್ಲಿ ಅಮ್ಮನ ಮನೆಯಷ್ಟು ಆಪ್ತ ಮನೆ ಇನ್ನೊಂದು ಸಿಗಲಾರದು. ಅಮ್ಮನ ಮಡಿಲು ನೀಡುವ ಸುಖವನ್ನು ಜಗತ್ತಿನ ಯಾವುದೇ ವಸ್ತು ನೀಡಲಾರದು.

ಅಮ್ಮನಿಗೆ ಸರಿ ಸಾಟಿ ಅಮ್ಮನೇ. ಅದಕ್ಕಾಗಿಯೇ ಅಮ್ಮನನ್ನು ನಮ್ಮಲ್ಲಿ ಮಾತೃ ದೇವತೆ ಎಂದೇ ಪೂಜಿಸುತ್ತಾರೆ. ಅಮ್ಮ ಅನ್ನುವುದು ಒಂದು ವ್ಯಕ್ತಿ ಅಲ್ಲ; ಅಮ್ಮ ಅನ್ನುವುದು ಕೇವಲ ಎರಡು ಪದಗಳಲ್ಲ; ಬದಲಿಗೆ ಅಮ್ಮ ಎಂದರೆ ಒಂದು ಸುಂದರ ಭಾವನೆ. ಅಮ್ಮ ಎಂದರೆ ಏನು? ಅದು ಶ್ರೀ ಕೃಷ್ಣ ಪರಮಾತ್ಮನ ವಿಶ್ವರೂಪದಂತೆ.ಅಲ್ಲಿ ಎಲ್ಲವೂ ಇದೆ; ಎಲ್ಲೆಡೆಯೂ ಇರುವುದು ಅಮ್ಮನೇ.ಇಂತಹ ಅಮ್ಮನ ಋಣ ನೆನಪಿಸಿಕೊಳ್ಳಲೊಂದು ಅಮ್ಮಂದಿರ ದಿನ. ಪ್ರಪಂಚದೆಲ್ಲೆಡೆ ಇರುವ ಎಲ್ಲಾ ತಾಯಂದಿರಿಗೂ ವಿಶ್ವ ತಾಯಂದಿರ ದಿನದ ಶುಭಾಶಯಗಳು.

 

Related Posts

ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್!

ಹಣದುಬ್ಬರ ಹಾಗೂ ಬೆಲೆ ಏರಿಕೆಯಿಂದ ತತ್ತರಿಸಿರುವ ಸಾಮಾನ್ಯ ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್ ನೀಡಿವೆ. ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದ ಬಿಸಿ ಇದೀಗ ನೇರವಾಗಿ ಭಾರತೀಯರ ಜೇಬಿಗೆ ತಟ್ಟಿದೆ. ನವದೆಹಲಿ: ಹಣದುಬ್ಬರ ಹಾಗೂ ಬೆಲೆ ಏರಿಕೆಯಿಂದ…

ಸ್ಟೂಡೆಂಟ್ ಎಲೆಕ್ಷನ್ ಗೆ ಅಸ್ತು ಎಂದ ಸಿಎಂ!

(ಕೆಎಂಶಿ)-ಉನ್ನತ ‘ಶಿಕ್ಷಣ ವಲಯದಲ್ಲಿ ಸಾಮಾಜಿಕ ನ್ಯಾಯ ಕಲ್ಪಿ ಸಲು, ರಾಜ್ಯದ ಎಲ್ಲ ಸರ್ಕಾರಿ, ಖಾಸಗಿ ಮತ್ತು ಡೀಮ್ಸ್ ವಿಶ್ವವಿದ್ಯಾಲಯಗಳಲ್ಲಿ ಜಾತಿ ಆಧಾರಿತ ದೌರ್ಜನ್ಯ ತಡೆಯಲು ರೋಹಿತ್ ವೇಮುಲ ಕಾಯಿದೆ ಜಾರಿಗೆ ತರಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ…

You Missed

ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್!

ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್!

ಸ್ಟೂಡೆಂಟ್ ಎಲೆಕ್ಷನ್ ಗೆ ಅಸ್ತು ಎಂದ ಸಿಎಂ!

ಸ್ಟೂಡೆಂಟ್ ಎಲೆಕ್ಷನ್ ಗೆ ಅಸ್ತು ಎಂದ ಸಿಎಂ!

ರಾಧಿಕಾ ಪಂಡಿತ್ ಜೊತೆ ಹೊಸ ಲುಕ್‌ನಲ್ಲಿ ‘ರಾಕಿಂಗ್’ ಸ್ಟಾರ್!

ರಾಧಿಕಾ ಪಂಡಿತ್ ಜೊತೆ ಹೊಸ ಲುಕ್‌ನಲ್ಲಿ ‘ರಾಕಿಂಗ್’ ಸ್ಟಾರ್!

ಕನ್ನಡ ಚಿತ್ರರಂಗದ ವ್ಯಕ್ತಿಯೊಬ್ಬರ ನಿವಾಸ ಮ್ಯೂಸಿಯಂ ಆಗಲಿದೆ

ಕನ್ನಡ ಚಿತ್ರರಂಗದ ವ್ಯಕ್ತಿಯೊಬ್ಬರ ನಿವಾಸ ಮ್ಯೂಸಿಯಂ ಆಗಲಿದೆ

ಸಚಿನ್ ತೆಂಡೂಲ್ಕರ್ ಸೊಸೆ ಎಷ್ಟು ಶ್ರೀಮಂತೆ ಗೊತ್ತಾ?

ಸಚಿನ್ ತೆಂಡೂಲ್ಕರ್ ಸೊಸೆ ಎಷ್ಟು ಶ್ರೀಮಂತೆ ಗೊತ್ತಾ?

ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಮೇಲೆ ಪೊಲೀಸ್ ಕಣ್ಣು!

ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಮೇಲೆ ಪೊಲೀಸ್ ಕಣ್ಣು!