
ಈ ವೇಳೆ ಮದ್ದೂರು ಗ್ರಾಮದ ಮುಖಂಡರಾದ ಪುರುಷೋತ್ತಮ್ ರವರು ಮಾತನಾಡಿ ಮದ್ದೂರು ಗ್ರಾಮದಲ್ಲಿ ಸವಿತಾ ಸಮಾಜದ ಮಹದೇವ ಶೆಟ್ಟಿ ಎಂಬುವವರು ನಿಧನರಾಗಿದ್ದು, ಮದ್ದೂರು ಗ್ರಾಮದಲ್ಲಿ ಶವ ಸಾಗಿಸಲು ದಾರಿ ಇಲ್ಲದೆ ಸುವರ್ಣವತಿ ನದಿಯ ನೀರಿನ ದಾರಿಯಲ್ಲಿ ಶವ ತೆಗೆದುಕೊಂಡು ಹೋಗುವ ಪರಿಸ್ಥಿತಿ ಉಂಟಾಗಿದೆ, ಮತ್ತು ಈ ಭಾಗದಲ್ಲಿ ಸುಮಾರು 100-150 ಎಕರೆ ಜಮೀನುಗಳಿಗೆ ಹೋಗಲು ಹಾಗೂ ವ್ಯವಸಾಯ ಮಾಡಲು ದಾರಿ ಇಲ್ಲದೆ ಪರದಾಡುವಂತಾಗಿದೆ.

ಈ ಬಗ್ಗೆ ಕ್ಷೇತ್ರದ ಶಾಸಕರಾದ ಎ. ಆರ್. ಕೃಷ್ಣಮೂರ್ತಿ ರವರು ಹಾಗೂ ಅಧಿಕಾರಿಗಳು ಇದನ್ನು ಪರಿಶೀಲಿಸಿ ಈ ಗ್ರಾಮದಲ್ಲಿ ತಕ್ಷಣ ಸೇತುವೆ ಆಗಬೇಕು, ಈ ಗ್ರಾಮದಲ್ಲಿ ಕೆಲವು ದಿನಗಳ ಹಿಂದೆಯೂ ಸಹ ಎರಡು ಸವಗಳನ್ನು ಸಾಗಿಸಲು ಇದೇ ರೀತಿ ನದಿಯ ಮೂಲಕವೇ ಹೋಗಬೇಕಾಗಿತ್ತು, ಅದೇ ರೀತಿ ಈ ನದಿಯನ್ನು ದಾಟಿ ಜಮೀನುಗಳಿಗೆ ಹೋಗಿ ಕೃಷಿ ಚಟುವಟಿಕೆಯನ್ನು ನಡೆಸ ಬೇಕಾಗಿದೆ, ಹಾಗಾಗಿ ನದಿಗೆ ತಕ್ಷಣ ಒಂದು ಸೇತುವೆ ನಿರ್ಮಾಣ ಮಾಡಿಕೊಡಬೇಕು ಎಂದು ಮನವಿ ಮಾಡಿದರು.





