2025ಕ್ಕೆ ವಿಶ್ವವೇ ಅಂತ್ಯ ಕಾಣಲಿದೆ ಅಂತೆ. ಇದು ನಿಜಾನಾ?

ಜಗತ್ತು ನಾಶ ಆಗಲಿದೆ ಎಂದು ಹಲವು ವರ್ಷಗಳಿಂದ ಅನೇಕ ಜ್ಯೋತಿಷಿಗಳು ಹಾಗೂ ತಜ್ಞರು ಹೇಳುತ್ತಿದ್ದಾರೆ. ಆದರೆ ಭೂಮಿ ಇನ್ನೂ ಹಾಗೇ ಇದೆ. ಇದೀಗ ಮತ್ತೊಂದು ವರದಿ ಬಂದಿದ್ದು, 2025ಕ್ಕೆ ವಿಶ್ವವೇ ಅಂತ್ಯ ಕಾಣಲಿದೆ ಅಂತೆ. ಇದು ನಿಜಾನಾ?
ಅದು ಪ್ರಪಂಚದಲ್ಲಿಯೇ ಅತೀ ವಿರಳವಾದ ಮೀನು. ತನ್ನ ವಿಶೇಷ ಆಕಾರ, ದೊಡ್ಡ ಕಣ್ಣು, ತಲೆ ಮೇಲಿನ ಜುಟ್ಟಿನಿಂದಾಗಿ ವಿಚಿತ್ರವಾಗಿಯೂ ಕಾಣುತ್ತದೆ. ಕೆಲವೆಡೆ ಅದನ್ನು ದೇವರ ಮೀನು ಅಂತಾನೂ ಕರೆಯುತ್ತಾರೆ. ಅದು ಕಾಣಿಸಿಕೊಂಡರೆ ಸುನಾಮಿ, ಭೂಕಂಪ, ಪ್ರವಾಹ ಇತ್ಯಾದಿ ವಿನಾಶಗಳು ಆಗುತ್ತವೆ ಎನ್ನುತ್ತಾರೆ. ಇದೀಗ ಸಮುದ್ರ ತೀರದಲ್ಲಿ ಇದರ ಮೃತದೇಹ ಪತ್ತೆಯಾಗಿದೆ. ಇದು ಜನರ ಆತಂಕಕ್ಕೆ ಕಾರಣವಾಗಿದೆ!


ಇದರ ಹೆಸರು ಡೂಮ್ಸ್ಡೇ ಅಥವಾ ಓರ್ಫಿಶ್. ಇದು ಅತೀ ವಿರಳ ಮೀನುಗಳಲ್ಲಿ ಒಂದು. ಈ ಮೀನು ಕಳೆದ ವಾರ ದಕ್ಷಿಣ ಕ್ಯಾಲಿಫೋರ್ನಿಯಾದ ಕರಾವಳಿಯಲ್ಲಿ ಸತ್ತ ರೀತಿಯಲ್ಲಿ ಪತ್ತೆಯಾಗಿದ್ಯಂತೆ. ಇದನ್ನು ನೋಡೋಕೆ ಸುತ್ತಮುತ್ತಲಿನ ಜನ ತಂಡೋಪತಂಡವಾಗಿ ಬರುತ್ತಿದ್ದಾರೆ.
30 ಅಡಿ ಬೆಳೆಯುವ 12 ಅಡಿ ಮೀನು ಅಪರೂಪದ ಮೀನಾಗಿದೆ. ಸಾಮಾನ್ಯವಾಗಿ ಈ ಮೀನು ಪ್ರಭೇದಗಳು ಆಳ ಸಮುದ್ರದಲ್ಲಿ ವಾಸಿಸುತ್ತವೆ. ಅಪರೂಪಕ್ಕೆ ಮಾತ್ರ ಮೇಲಕ್ಕೆ ಕಾಣಿಸಿಕೊಳ್ಳುತ್ತವೆ.

ಈ ಮೀನುಗಳು ಕಾಣಿಸಿಕೊಂಡರೆ ಪ್ರಪಂಚದ ವಿನಾಶ ಶುರು ಅಂತಲೂ ಹೇಳಲಾಗುತ್ತದೆ. ಭೀಕರ ಭೂಕಂಪಗಳ ಮೊದಲು ಈ ಮೀನುಗಳು ಕೊಚ್ಚಿಕೊಂಡು ಹೋಗಿರುವುದು ಕಂಡುಬಂದಿದೆ. ಜಪಾನ್ನಲ್ಲಿ 2011ರ ಭೂಕಂಪದ ಮೊದಲು 20 ಓರ್ಫಿಶ್ ಸಮುದ್ರ ತೀರದಲ್ಲಿ ಕಂಡುಬಂದಿತ್ತು.
ಓರ್ಫಿಶ್ ಮತ್ತು ಭೂಕಂಪಗಳ ನಡುವಿನ ಲಿಂಕ್ ಬಗ್ಗೆ ಅನೇಕ ಪ್ರಶ್ನೆಗಳು ಇವೆ. ಓರ್ಫಿಶ್ ನೈಸರ್ಗಿಕ ವಿಪತ್ತುಗಳು ಮತ್ತು ಭೂಕಂಪಗಳ ಮುನ್ಸೂಚಕವಾಗಿ ಪೌರಾಣಿಕ ಖ್ಯಾತಿಯನ್ನು ಹೊಂದಿದ್ದರೂ, ತಜ್ಞರು ಇದನ್ನು ತಳ್ಳಿಹಾಕಿದ್ದಾರೆ.


ಈ ಮೀನುಗಳು ಸಮುದ್ರದ ಆಳದಲ್ಲಿ ತನ್ನ ಜೀವನಕ್ಕೆ ತೊಂದರೆ ಆದಾಗ, ದಿಗ್ಭ್ರಮೆಗೊಂಡಾಗ, ಅನಾರೋಗ್ಯಗೊಂಡಾಗ ಮಾತ್ರ ಮೇಲಕ್ಕೆ ಬರುತ್ತವೆ. ಹೀಗಾಗಿ ಇದು ಪ್ರಕೃತಿ ವಿಕೋಪದ ಮುನ್ಸೂಚನೆ ಅಂತ ಜನರು ಹೇಳುತ್ತಾರೆ.
ಇದಕ್ಕೆ ಪುಷ್ಟಿ ನೀಡುವಂತೆ ಈ ಓರ್ಫಿಶ್ ಮೀನುಗಳು ಕಂಡು ಬಂದ ನಂತರ ಅನಾಹುತ ಸಂಭವಿಸಿದ್ಯಂತೆ. ಇದು ಕಂಡ ಕೇವಲ ಎರಡು ದಿನಗಳ ನಂತರ, ಕ್ಯಾಲಿಫೋರ್ನಿಯಾವು ಲಾಸ್ ಏಂಜಲೀಸ್ನ ದಕ್ಷಿಣಕ್ಕೆ 4.4-ತೀವ್ರತೆಯ ಭೂಕಂಪದಿಂದ ಅಪ್ಪಳಿಸಿತು.
ಇನ್ಸ್ಟಿಟ್ಯೂಟ್, NOAA ಸೌತ್ವೆಸ್ಟ್ ಫಿಶರೀಸ್ ಸೈನ್ಸ್ ಸೆಂಟರ್ನ ಸಹಭಾಗಿತ್ವದಲ್ಲಿ, ಅದರ ಸಾವಿಗೆ ಕಾರಣವೇನು ಎಂಬುದರ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಅದರ ದೇಹದ ಮೇಲೆ ವಿಶ್ಲೇಷಣೆಯನ್ನು ನಡೆಸುತ್ತದೆ. 336 ಆಳ ಸಮುದ್ರದ ಮೀನುಗಳನ್ನು 221 ಭೂಕಂಪಗಳೊಂದಿಗೆ ಹೋಲಿಸಿದಾಗ, ಕೇವಲ ಒಂದು ಘಟನೆಯು ತೋರಿಕೆಯ ಪರಸ್ಪರ ಸಂಬಂಧವನ್ನು ತೋರಿಸಿದೆ ಅಂತ ತಜ್ಞರು ಹೇಳಿದ್ದಾರೆ.

Related Posts

ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್!

ಹಣದುಬ್ಬರ ಹಾಗೂ ಬೆಲೆ ಏರಿಕೆಯಿಂದ ತತ್ತರಿಸಿರುವ ಸಾಮಾನ್ಯ ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್ ನೀಡಿವೆ. ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದ ಬಿಸಿ ಇದೀಗ ನೇರವಾಗಿ ಭಾರತೀಯರ ಜೇಬಿಗೆ ತಟ್ಟಿದೆ. ನವದೆಹಲಿ: ಹಣದುಬ್ಬರ ಹಾಗೂ ಬೆಲೆ ಏರಿಕೆಯಿಂದ…

ಸ್ಟೂಡೆಂಟ್ ಎಲೆಕ್ಷನ್ ಗೆ ಅಸ್ತು ಎಂದ ಸಿಎಂ!

(ಕೆಎಂಶಿ)-ಉನ್ನತ ‘ಶಿಕ್ಷಣ ವಲಯದಲ್ಲಿ ಸಾಮಾಜಿಕ ನ್ಯಾಯ ಕಲ್ಪಿ ಸಲು, ರಾಜ್ಯದ ಎಲ್ಲ ಸರ್ಕಾರಿ, ಖಾಸಗಿ ಮತ್ತು ಡೀಮ್ಸ್ ವಿಶ್ವವಿದ್ಯಾಲಯಗಳಲ್ಲಿ ಜಾತಿ ಆಧಾರಿತ ದೌರ್ಜನ್ಯ ತಡೆಯಲು ರೋಹಿತ್ ವೇಮುಲ ಕಾಯಿದೆ ಜಾರಿಗೆ ತರಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ…

You Missed

ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್!

ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್!

ಸ್ಟೂಡೆಂಟ್ ಎಲೆಕ್ಷನ್ ಗೆ ಅಸ್ತು ಎಂದ ಸಿಎಂ!

ಸ್ಟೂಡೆಂಟ್ ಎಲೆಕ್ಷನ್ ಗೆ ಅಸ್ತು ಎಂದ ಸಿಎಂ!

ರಾಧಿಕಾ ಪಂಡಿತ್ ಜೊತೆ ಹೊಸ ಲುಕ್‌ನಲ್ಲಿ ‘ರಾಕಿಂಗ್’ ಸ್ಟಾರ್!

ರಾಧಿಕಾ ಪಂಡಿತ್ ಜೊತೆ ಹೊಸ ಲುಕ್‌ನಲ್ಲಿ ‘ರಾಕಿಂಗ್’ ಸ್ಟಾರ್!

ಕನ್ನಡ ಚಿತ್ರರಂಗದ ವ್ಯಕ್ತಿಯೊಬ್ಬರ ನಿವಾಸ ಮ್ಯೂಸಿಯಂ ಆಗಲಿದೆ

ಕನ್ನಡ ಚಿತ್ರರಂಗದ ವ್ಯಕ್ತಿಯೊಬ್ಬರ ನಿವಾಸ ಮ್ಯೂಸಿಯಂ ಆಗಲಿದೆ

ಸಚಿನ್ ತೆಂಡೂಲ್ಕರ್ ಸೊಸೆ ಎಷ್ಟು ಶ್ರೀಮಂತೆ ಗೊತ್ತಾ?

ಸಚಿನ್ ತೆಂಡೂಲ್ಕರ್ ಸೊಸೆ ಎಷ್ಟು ಶ್ರೀಮಂತೆ ಗೊತ್ತಾ?

ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಮೇಲೆ ಪೊಲೀಸ್ ಕಣ್ಣು!

ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಮೇಲೆ ಪೊಲೀಸ್ ಕಣ್ಣು!