2025ಕ್ಕೆ ವಿಶ್ವವೇ ಅಂತ್ಯ ಕಾಣಲಿದೆ ಅಂತೆ. ಇದು ನಿಜಾನಾ?

ಜಗತ್ತು ನಾಶ ಆಗಲಿದೆ ಎಂದು ಹಲವು ವರ್ಷಗಳಿಂದ ಅನೇಕ ಜ್ಯೋತಿಷಿಗಳು ಹಾಗೂ ತಜ್ಞರು ಹೇಳುತ್ತಿದ್ದಾರೆ. ಆದರೆ ಭೂಮಿ ಇನ್ನೂ ಹಾಗೇ ಇದೆ. ಇದೀಗ ಮತ್ತೊಂದು ವರದಿ ಬಂದಿದ್ದು, 2025ಕ್ಕೆ ವಿಶ್ವವೇ ಅಂತ್ಯ ಕಾಣಲಿದೆ ಅಂತೆ. ಇದು ನಿಜಾನಾ?
ಅದು ಪ್ರಪಂಚದಲ್ಲಿಯೇ ಅತೀ ವಿರಳವಾದ ಮೀನು. ತನ್ನ ವಿಶೇಷ ಆಕಾರ, ದೊಡ್ಡ ಕಣ್ಣು, ತಲೆ ಮೇಲಿನ ಜುಟ್ಟಿನಿಂದಾಗಿ ವಿಚಿತ್ರವಾಗಿಯೂ ಕಾಣುತ್ತದೆ. ಕೆಲವೆಡೆ ಅದನ್ನು ದೇವರ ಮೀನು ಅಂತಾನೂ ಕರೆಯುತ್ತಾರೆ. ಅದು ಕಾಣಿಸಿಕೊಂಡರೆ ಸುನಾಮಿ, ಭೂಕಂಪ, ಪ್ರವಾಹ ಇತ್ಯಾದಿ ವಿನಾಶಗಳು ಆಗುತ್ತವೆ ಎನ್ನುತ್ತಾರೆ. ಇದೀಗ ಸಮುದ್ರ ತೀರದಲ್ಲಿ ಇದರ ಮೃತದೇಹ ಪತ್ತೆಯಾಗಿದೆ. ಇದು ಜನರ ಆತಂಕಕ್ಕೆ ಕಾರಣವಾಗಿದೆ!


ಇದರ ಹೆಸರು ಡೂಮ್ಸ್ಡೇ ಅಥವಾ ಓರ್ಫಿಶ್. ಇದು ಅತೀ ವಿರಳ ಮೀನುಗಳಲ್ಲಿ ಒಂದು. ಈ ಮೀನು ಕಳೆದ ವಾರ ದಕ್ಷಿಣ ಕ್ಯಾಲಿಫೋರ್ನಿಯಾದ ಕರಾವಳಿಯಲ್ಲಿ ಸತ್ತ ರೀತಿಯಲ್ಲಿ ಪತ್ತೆಯಾಗಿದ್ಯಂತೆ. ಇದನ್ನು ನೋಡೋಕೆ ಸುತ್ತಮುತ್ತಲಿನ ಜನ ತಂಡೋಪತಂಡವಾಗಿ ಬರುತ್ತಿದ್ದಾರೆ.
30 ಅಡಿ ಬೆಳೆಯುವ 12 ಅಡಿ ಮೀನು ಅಪರೂಪದ ಮೀನಾಗಿದೆ. ಸಾಮಾನ್ಯವಾಗಿ ಈ ಮೀನು ಪ್ರಭೇದಗಳು ಆಳ ಸಮುದ್ರದಲ್ಲಿ ವಾಸಿಸುತ್ತವೆ. ಅಪರೂಪಕ್ಕೆ ಮಾತ್ರ ಮೇಲಕ್ಕೆ ಕಾಣಿಸಿಕೊಳ್ಳುತ್ತವೆ.

ಈ ಮೀನುಗಳು ಕಾಣಿಸಿಕೊಂಡರೆ ಪ್ರಪಂಚದ ವಿನಾಶ ಶುರು ಅಂತಲೂ ಹೇಳಲಾಗುತ್ತದೆ. ಭೀಕರ ಭೂಕಂಪಗಳ ಮೊದಲು ಈ ಮೀನುಗಳು ಕೊಚ್ಚಿಕೊಂಡು ಹೋಗಿರುವುದು ಕಂಡುಬಂದಿದೆ. ಜಪಾನ್ನಲ್ಲಿ 2011ರ ಭೂಕಂಪದ ಮೊದಲು 20 ಓರ್ಫಿಶ್ ಸಮುದ್ರ ತೀರದಲ್ಲಿ ಕಂಡುಬಂದಿತ್ತು.
ಓರ್ಫಿಶ್ ಮತ್ತು ಭೂಕಂಪಗಳ ನಡುವಿನ ಲಿಂಕ್ ಬಗ್ಗೆ ಅನೇಕ ಪ್ರಶ್ನೆಗಳು ಇವೆ. ಓರ್ಫಿಶ್ ನೈಸರ್ಗಿಕ ವಿಪತ್ತುಗಳು ಮತ್ತು ಭೂಕಂಪಗಳ ಮುನ್ಸೂಚಕವಾಗಿ ಪೌರಾಣಿಕ ಖ್ಯಾತಿಯನ್ನು ಹೊಂದಿದ್ದರೂ, ತಜ್ಞರು ಇದನ್ನು ತಳ್ಳಿಹಾಕಿದ್ದಾರೆ.


ಈ ಮೀನುಗಳು ಸಮುದ್ರದ ಆಳದಲ್ಲಿ ತನ್ನ ಜೀವನಕ್ಕೆ ತೊಂದರೆ ಆದಾಗ, ದಿಗ್ಭ್ರಮೆಗೊಂಡಾಗ, ಅನಾರೋಗ್ಯಗೊಂಡಾಗ ಮಾತ್ರ ಮೇಲಕ್ಕೆ ಬರುತ್ತವೆ. ಹೀಗಾಗಿ ಇದು ಪ್ರಕೃತಿ ವಿಕೋಪದ ಮುನ್ಸೂಚನೆ ಅಂತ ಜನರು ಹೇಳುತ್ತಾರೆ.
ಇದಕ್ಕೆ ಪುಷ್ಟಿ ನೀಡುವಂತೆ ಈ ಓರ್ಫಿಶ್ ಮೀನುಗಳು ಕಂಡು ಬಂದ ನಂತರ ಅನಾಹುತ ಸಂಭವಿಸಿದ್ಯಂತೆ. ಇದು ಕಂಡ ಕೇವಲ ಎರಡು ದಿನಗಳ ನಂತರ, ಕ್ಯಾಲಿಫೋರ್ನಿಯಾವು ಲಾಸ್ ಏಂಜಲೀಸ್ನ ದಕ್ಷಿಣಕ್ಕೆ 4.4-ತೀವ್ರತೆಯ ಭೂಕಂಪದಿಂದ ಅಪ್ಪಳಿಸಿತು.
ಇನ್ಸ್ಟಿಟ್ಯೂಟ್, NOAA ಸೌತ್ವೆಸ್ಟ್ ಫಿಶರೀಸ್ ಸೈನ್ಸ್ ಸೆಂಟರ್ನ ಸಹಭಾಗಿತ್ವದಲ್ಲಿ, ಅದರ ಸಾವಿಗೆ ಕಾರಣವೇನು ಎಂಬುದರ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಅದರ ದೇಹದ ಮೇಲೆ ವಿಶ್ಲೇಷಣೆಯನ್ನು ನಡೆಸುತ್ತದೆ. 336 ಆಳ ಸಮುದ್ರದ ಮೀನುಗಳನ್ನು 221 ಭೂಕಂಪಗಳೊಂದಿಗೆ ಹೋಲಿಸಿದಾಗ, ಕೇವಲ ಒಂದು ಘಟನೆಯು ತೋರಿಕೆಯ ಪರಸ್ಪರ ಸಂಬಂಧವನ್ನು ತೋರಿಸಿದೆ ಅಂತ ತಜ್ಞರು ಹೇಳಿದ್ದಾರೆ.

Related Posts

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ರಾಜ್ಯದಲ್ಲಿ ಸೆಪ್ಟೆಂಬರ್ 21ರಿಂದ ಮೂರು ದಿನಗಳ ಕಾಲ ವಿಶೇಷ ವಿಧಾನಮಂಡಲ ಅಧಿವೇಶನ ನಡೆಸಲು ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಸೆ. 21ರಿಂದ ಸೆ.…

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಗುಂಡ್ಲುಪೇಟೆ ಪಟ್ಟಣದ ಇಂದಿರಾ ಕ್ಯಾಂಟೀನ್‌ಗೆ ಸೋಮವಾರ ಬೆಳಿಗ್ಗೆ ಅಧಿಕಾರಿಗಳ ತಂಡ ದಿಢೀರ್ ಭೇಟಿ ನೀಡಿ ಆಹಾರದ ಶುಚಿತ್ವ, ಗುಣಮಟ್ಟ ಹಾಗೂ ಕುಡಿಯುವ ನೀರಿನ ಪೂರೈಕೆಯನ್ನು ಕೂಲಂಕಷವಾಗಿ ಪರಿಶೀಲಿಸಿತು. ಬಡವರು ಮತ್ತು ಶ್ರಮಿಕರಿಗೆ ಪೌಷ್ಟಿಕ ಹಾಗೂ ಶುಚಿ-ರುಚಿಯಾದ ಆಹಾರ ದೊರೆಯಬೇಕು ಎಂಬ ಶಾಸಕರ…

You Missed

ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು

ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಬಿಗ್ ಬಾಸ್ ಕನ್ನಡ 13: ಈ ಭಾನುವಾರದಿಂದ ‘ಏವಿಯೇಷನ್’ ಥೀಮ್‌ನೊಂದಿಗೆ ಗ್ರ್ಯಾಂಡ್ ಟೇಕ್ ಆಫ್!

ಬಿಗ್ ಬಾಸ್ ಕನ್ನಡ 13: ಈ ಭಾನುವಾರದಿಂದ ‘ಏವಿಯೇಷನ್’ ಥೀಮ್‌ನೊಂದಿಗೆ ಗ್ರ್ಯಾಂಡ್ ಟೇಕ್ ಆಫ್!

ಟಾಕ್ಸಿಕ್‌’ನಲ್ಲಿ ಯಶ್‌ ಅಭಿನಯಕ್ಕೆ ಕಿಚ್ಚನ ಪುತ್ರಿ ಫಿದಾ: ಪ್ರತಿಯೊಂದು ಫ್ರೇಮ್‌ನಲ್ಲೂ ಮ್ಯಾಜಿಕ್‌ ಎಂದ ಸಾನ್ವಿ ಸುದೀಪ್‌

ಟಾಕ್ಸಿಕ್‌’ನಲ್ಲಿ ಯಶ್‌ ಅಭಿನಯಕ್ಕೆ ಕಿಚ್ಚನ ಪುತ್ರಿ ಫಿದಾ: ಪ್ರತಿಯೊಂದು ಫ್ರೇಮ್‌ನಲ್ಲೂ ಮ್ಯಾಜಿಕ್‌ ಎಂದ ಸಾನ್ವಿ ಸುದೀಪ್‌

FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ!

FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ!