2025ಕ್ಕೆ ವಿಶ್ವವೇ ಅಂತ್ಯ ಕಾಣಲಿದೆ ಅಂತೆ. ಇದು ನಿಜಾನಾ?

ಜಗತ್ತು ನಾಶ ಆಗಲಿದೆ ಎಂದು ಹಲವು ವರ್ಷಗಳಿಂದ ಅನೇಕ ಜ್ಯೋತಿಷಿಗಳು ಹಾಗೂ ತಜ್ಞರು ಹೇಳುತ್ತಿದ್ದಾರೆ. ಆದರೆ ಭೂಮಿ ಇನ್ನೂ ಹಾಗೇ ಇದೆ. ಇದೀಗ ಮತ್ತೊಂದು ವರದಿ ಬಂದಿದ್ದು, 2025ಕ್ಕೆ ವಿಶ್ವವೇ ಅಂತ್ಯ ಕಾಣಲಿದೆ ಅಂತೆ. ಇದು ನಿಜಾನಾ?
ಅದು ಪ್ರಪಂಚದಲ್ಲಿಯೇ ಅತೀ ವಿರಳವಾದ ಮೀನು. ತನ್ನ ವಿಶೇಷ ಆಕಾರ, ದೊಡ್ಡ ಕಣ್ಣು, ತಲೆ ಮೇಲಿನ ಜುಟ್ಟಿನಿಂದಾಗಿ ವಿಚಿತ್ರವಾಗಿಯೂ ಕಾಣುತ್ತದೆ. ಕೆಲವೆಡೆ ಅದನ್ನು ದೇವರ ಮೀನು ಅಂತಾನೂ ಕರೆಯುತ್ತಾರೆ. ಅದು ಕಾಣಿಸಿಕೊಂಡರೆ ಸುನಾಮಿ, ಭೂಕಂಪ, ಪ್ರವಾಹ ಇತ್ಯಾದಿ ವಿನಾಶಗಳು ಆಗುತ್ತವೆ ಎನ್ನುತ್ತಾರೆ. ಇದೀಗ ಸಮುದ್ರ ತೀರದಲ್ಲಿ ಇದರ ಮೃತದೇಹ ಪತ್ತೆಯಾಗಿದೆ. ಇದು ಜನರ ಆತಂಕಕ್ಕೆ ಕಾರಣವಾಗಿದೆ!


ಇದರ ಹೆಸರು ಡೂಮ್ಸ್ಡೇ ಅಥವಾ ಓರ್ಫಿಶ್. ಇದು ಅತೀ ವಿರಳ ಮೀನುಗಳಲ್ಲಿ ಒಂದು. ಈ ಮೀನು ಕಳೆದ ವಾರ ದಕ್ಷಿಣ ಕ್ಯಾಲಿಫೋರ್ನಿಯಾದ ಕರಾವಳಿಯಲ್ಲಿ ಸತ್ತ ರೀತಿಯಲ್ಲಿ ಪತ್ತೆಯಾಗಿದ್ಯಂತೆ. ಇದನ್ನು ನೋಡೋಕೆ ಸುತ್ತಮುತ್ತಲಿನ ಜನ ತಂಡೋಪತಂಡವಾಗಿ ಬರುತ್ತಿದ್ದಾರೆ.
30 ಅಡಿ ಬೆಳೆಯುವ 12 ಅಡಿ ಮೀನು ಅಪರೂಪದ ಮೀನಾಗಿದೆ. ಸಾಮಾನ್ಯವಾಗಿ ಈ ಮೀನು ಪ್ರಭೇದಗಳು ಆಳ ಸಮುದ್ರದಲ್ಲಿ ವಾಸಿಸುತ್ತವೆ. ಅಪರೂಪಕ್ಕೆ ಮಾತ್ರ ಮೇಲಕ್ಕೆ ಕಾಣಿಸಿಕೊಳ್ಳುತ್ತವೆ.

ಈ ಮೀನುಗಳು ಕಾಣಿಸಿಕೊಂಡರೆ ಪ್ರಪಂಚದ ವಿನಾಶ ಶುರು ಅಂತಲೂ ಹೇಳಲಾಗುತ್ತದೆ. ಭೀಕರ ಭೂಕಂಪಗಳ ಮೊದಲು ಈ ಮೀನುಗಳು ಕೊಚ್ಚಿಕೊಂಡು ಹೋಗಿರುವುದು ಕಂಡುಬಂದಿದೆ. ಜಪಾನ್ನಲ್ಲಿ 2011ರ ಭೂಕಂಪದ ಮೊದಲು 20 ಓರ್ಫಿಶ್ ಸಮುದ್ರ ತೀರದಲ್ಲಿ ಕಂಡುಬಂದಿತ್ತು.
ಓರ್ಫಿಶ್ ಮತ್ತು ಭೂಕಂಪಗಳ ನಡುವಿನ ಲಿಂಕ್ ಬಗ್ಗೆ ಅನೇಕ ಪ್ರಶ್ನೆಗಳು ಇವೆ. ಓರ್ಫಿಶ್ ನೈಸರ್ಗಿಕ ವಿಪತ್ತುಗಳು ಮತ್ತು ಭೂಕಂಪಗಳ ಮುನ್ಸೂಚಕವಾಗಿ ಪೌರಾಣಿಕ ಖ್ಯಾತಿಯನ್ನು ಹೊಂದಿದ್ದರೂ, ತಜ್ಞರು ಇದನ್ನು ತಳ್ಳಿಹಾಕಿದ್ದಾರೆ.


ಈ ಮೀನುಗಳು ಸಮುದ್ರದ ಆಳದಲ್ಲಿ ತನ್ನ ಜೀವನಕ್ಕೆ ತೊಂದರೆ ಆದಾಗ, ದಿಗ್ಭ್ರಮೆಗೊಂಡಾಗ, ಅನಾರೋಗ್ಯಗೊಂಡಾಗ ಮಾತ್ರ ಮೇಲಕ್ಕೆ ಬರುತ್ತವೆ. ಹೀಗಾಗಿ ಇದು ಪ್ರಕೃತಿ ವಿಕೋಪದ ಮುನ್ಸೂಚನೆ ಅಂತ ಜನರು ಹೇಳುತ್ತಾರೆ.
ಇದಕ್ಕೆ ಪುಷ್ಟಿ ನೀಡುವಂತೆ ಈ ಓರ್ಫಿಶ್ ಮೀನುಗಳು ಕಂಡು ಬಂದ ನಂತರ ಅನಾಹುತ ಸಂಭವಿಸಿದ್ಯಂತೆ. ಇದು ಕಂಡ ಕೇವಲ ಎರಡು ದಿನಗಳ ನಂತರ, ಕ್ಯಾಲಿಫೋರ್ನಿಯಾವು ಲಾಸ್ ಏಂಜಲೀಸ್ನ ದಕ್ಷಿಣಕ್ಕೆ 4.4-ತೀವ್ರತೆಯ ಭೂಕಂಪದಿಂದ ಅಪ್ಪಳಿಸಿತು.
ಇನ್ಸ್ಟಿಟ್ಯೂಟ್, NOAA ಸೌತ್ವೆಸ್ಟ್ ಫಿಶರೀಸ್ ಸೈನ್ಸ್ ಸೆಂಟರ್ನ ಸಹಭಾಗಿತ್ವದಲ್ಲಿ, ಅದರ ಸಾವಿಗೆ ಕಾರಣವೇನು ಎಂಬುದರ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಅದರ ದೇಹದ ಮೇಲೆ ವಿಶ್ಲೇಷಣೆಯನ್ನು ನಡೆಸುತ್ತದೆ. 336 ಆಳ ಸಮುದ್ರದ ಮೀನುಗಳನ್ನು 221 ಭೂಕಂಪಗಳೊಂದಿಗೆ ಹೋಲಿಸಿದಾಗ, ಕೇವಲ ಒಂದು ಘಟನೆಯು ತೋರಿಕೆಯ ಪರಸ್ಪರ ಸಂಬಂಧವನ್ನು ತೋರಿಸಿದೆ ಅಂತ ತಜ್ಞರು ಹೇಳಿದ್ದಾರೆ.

Related Posts

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

  ಹೃದಯವೇದ್ರಾವಕ ಘಟನೆಯೊಂದು ಹುಣಸೂರಿನಲ್ಲಿ ನಡೆದಿದೆ ಪತ್ನಿ ಮಕ್ಕಳನ್ನು ಹತ್ಯೆಗೈದು ಪತಿ ನೇಣಿಗೆ ಶರಣಾಗಿರುವ ಪ್ರಕರಣ ಹುಣಸೂರು ನಗರದ ನ್ಯೂ ಮಾರುತಿ ಬಡಾವಣೆಯಲ್ಲಿ ಘಟನೆ ನ್ಯೂ ಮಾರುತಿ ಬಡಾವಣೆಯ ಹರೀಶ್ 49, ಪತ್ನಿ ನಿಶ್ಚಿತ 36 ಮಕ್ಕಳಾದ ನೆಕ್ಸಾ 13 ರಕ್ಷಾ…

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

  ಒಡಿಶಾದ ಶಿಕ್ಷಾ ಓ ಅನುಸಂಧಾನ ವಿಶ್ವವಿದ್ಯಾಲಯವು ಕರ್ನಾಟಕದ ಹೆಮ್ಮೆಯ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿ ಸನ್ಮಾನಿಸಿದೆ. ನ್ಯಾಯಾಂಗ ಕ್ಷೇತ್ರದಲ್ಲಿ ಸಲ್ಲಿಸಿದ ವಿಶಿಷ್ಟ ಸೇವೆ, ನ್ಯಾಯದ ಪರವಾದ ಬದ್ಧತೆ, ವಿದ್ವತ್ತು ಹಾಗೂ ಮಾನವೀಯ ಮೌಲ್ಯಗಳ…

You Missed

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ !

ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ !

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!