ಬೆಂಗಳೂರು: ರಸ್ತೆಗಳ ಬಗ್ಗೆ ಐದು ವರ್ಷದ ಬಾಲಕಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾಳೆ. ನಗರದ ಟ್ರಾಫಿಕ್ ಸಮಸ್ಯೆಯನ್ನು ಸರಿಪಡಿಸುವಂತೆ ಆಕೆ ಪತ್ರದಲ್ಲಿ ಕೇಳಿಕೊಂಡಿದ್ದಾಳೆ. ಪ್ರಧಾನಿ ಮೋದಿ ಆಗಸ್ಟ್ 11 ರಂದು ಬೆಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ರಸ್ತೆಗುಂಡಿ ಸಮಸ್ಯೆ ಇಂದಿನದ್ದಲ್ಲ, ಚುನವಾವಣೆ ಸಮಯದಲ್ಲಿ ಎಷ್ಟೇ ಸರಿ ಡಾಂಬರು ಹಾಕಿಸಿದರೂ ಕೆಲವೇ ದಿನದಲ್ಲಿ ಅದು ಕಿತ್ತುಬಂದು ಸಮಸ್ಯೆ ಉಂಟಾಗುತ್ತದೆ. ರಸ್ತೆಗುಂಡಿಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಇದ್ದಾರೆ, ಮೃತಪಟ್ಟಿದ್ದ ಘಟನೆಯೂ ನಡೆದಿತ್ತು. ಇನ್ನು ಟ್ರಾಫಿಕ್ನಿಂದ ಅಂತೂ ಕೇಳೋದೆ ಬೇಡ. ಇದರಿಂದ ಕಚೇರಿಗಳಿಗೆ ಶಾಲಾ ಕಾಲೇಜಿಗೆ ಲೇಟಾಗಿ ಹೋಗಿದ್ದು ಇದೆ. ಸದ್ಯ ಈ ಪುಟ್ಟ ಹುಡುಗಿಯ ಲೆಟರ್ ಭಾರಿ ವೈರಲ್ ಆಗಿದೆ.
ಬೆಂಗಳೂರಿನ ನಿವಾಸಿ ಅಭಿರೂಪ್ ಅವರ ಮಗಳು ಆರ್ಯ ಎಂಬ ಐದು ವರ್ಷದ ಹುಡುಗಿ ಈ ಪತ್ರ ಬರೆದಿದ್ದಾಳೆ. ಆರ್ಯಳ ಪತ್ರ ಸಾರ್ವಜನಿಕರ ಗಮನ ಸೆಳೆದಿದೆ. ಆನ್ಲೈನ್ನಲ್ಲಿ ಅನೇಕರು ಆಕೆಗೆ ಬೆಂಬಲ ನೀಡಿದ್ದಾರೆ.
ಆರ್ಯ ತನ್ನ ಪತ್ರದಲ್ಲಿ ಏನಿದೆ?
ನರೇಂದ್ರ ಮೋದಿ ಜೀ, ಬೆಂಗಳೂರಿನಲ್ಲಿ ತುಂಬಾ ಟ್ರಾಫಿಕ್ ಇದೆ. ನಾವು ಶಾಲೆ ಮತ್ತು ಕಚೇರಿಗಳಿಗೆ ತಡವಾಗಿ ಹೋಗುತ್ತಿದ್ದೇವೆ. ರಸ್ತೆಗಳು ತುಂಬಾ ಕೆಟ್ಟದಾಗಿವೆ. ದಯವಿಟ್ಟು ಇದನ್ನು ಸರಿಪಡಿಸಲು ಸಹಾಯ ಮಾಡಿ” ಎಂದು ಆರ್ಯ ಮೋದಿಗೆ ಪತ್ರ ಬರೆದಿದಾಳೆ .
ಆರ್ಯ ಮೋದಿಗೆ ಬರೆದ ಪತ್ರಕ್ಕೆ ಒಬ್ಬರು ಪ್ರತಿಕ್ರಿಯಿಸಿ, ಐದು ವರ್ಷದ ಬಾಲಕಿಯ ಆಸೆ ಈಡೇರುತ್ತದೆ ಎಂದಿದರೆ. ಮತ್ತೊಬ್ಬ ಬಳಕೆದಾರರು 15 ವರ್ಷಗಳ ಹಿಂದೆ ತಮ್ಮ ಮಗಳು ಮುಂಬೈನಲ್ಲಿ ಶಬ್ದ ಮಾಲಿನ್ಯದ ಬಗ್ಗೆ ರಾಷ್ಟ್ರಪತಿಗಳಿಗೆ ಬರೆದಿದ್ದನ್ನು ನೆನಪಿಸಿಕೊಂಡಿದ್ದಾರೆ. ಆ ಬಳಿಕ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು ಎಂದು ತಿಳಿಯಲಾಗಿದೆ.





