ಪ್ರಿಯಕರನ ಜೊತೆ ಓಡಿ ಹೋದವಳು ಬೇರೊಬ್ಬನ ಜೊತೆ ಮದುವೆಯಾಗಿ ಮನೆಗೆ ಮರಳಿದಳು !

ಈ ಸ್ಟೋರಿ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿರೋದು. ಯುವತಿಯ ಹೆಸರು ಶ್ರದ್ಧಾ ತಿವಾರಿ. ಮದುವೆಯಾದ ಹುಡುಗನ ಹೆಸರು ಕರಣ್‌ದೀಪ್. ಕಾಲೇಜಿನ ಎಲೆಕ್ಟ್ರಿಷಿಯನ್. ಇವ್ರಿಬ್ಬರು ಮದುವೆಯಾಗಿದ್ದಾರೆ.. ಇವ್ರ ಮದುವೆಗೆ ಕಾರಣ ಈಕೆಯ ಮಾಜಿ ಲವರ್​ ಸಾರ್ಥಕ್‌.

ಶ್ರದ್ಧಾ ತಿವಾರಿ ವಾರದ ಹಿಂದೆ ತನ್ನ ಮನೆಯಿಂದ ಓಡಿ ಹೋಗಿದ್ದಳು. ಆಗಸ್ಟ್ 23 ರಂದು ಎಂಐಜಿ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿ ಶ್ರದ್ಧಾ, ಮನೆ ಬಿಟ್ಟು ಸೀದಾ ತನ್ನ ಪ್ರಿಯಕರ ಸಾರ್ಥಕ್‌ನನ್ನ ಮೀಟ್​ ಆಗೋದಕ್ಕೆ ಹೋಗಿದ್ದಳು. ರೈಲ್ವೆ ನಿಲ್ದಾಣ ಒಂದರಲ್ಲಿ ಸುಮಾರು ಹೊತ್ತು ಕಾದ್ರು. ಸಾರ್ಥಕ್‌ ಬರೋ ಮೂಮೆಂಟ್​ ಕಾಣಿಲ್ಲ. ಎಷ್ಟೇ ಹೊತ್ತು ಕಾದರೂ ಆತ ಬರಲೇ ಇಲ್ಲ.

ಪ್ರೀತಿಯ ‘ಸಾರ್ಥಕ’ತೆ!
ಇದರಿಂದಾಗಿ ಶ್ರದ್ಧಾಗೆ ದಿಕ್ಕೇ ತೋಚದಂತಾಗಿತ್ತು. ಶ್ರದ್ಧಾ ವಾಪಸ್‌ ಮನೆಗೆ ಹೋಗದೇ ಯಾವುದೇ ಗುರಿ ತೋಚದೆ ಸುಮ್ಮನೆ ರೈಲು ಹತ್ತಿ ಪ್ರಯಾಣಿಸಿದ್ಲು.. ಕೆಲವು ಗಂಟೆಗಳ ಬಳಿಕ ಆಕೆ ಜಬ್ ವಿ ಮೆಟ್ ಸಿನಿಮಾದಿಂದ ಪ್ರಸಿದ್ಧವಾದ ರತ್ಲಂನಲ್ಲಿ ಇಳಿದಿದ್ಲು.. ಆಕೆ ತನ್ನ ಭವಿಷ್ಯದ ಬಗ್ಗೆ ತುಂಬಾ ಗೊಂದಲದಲ್ಲಿದ್ಲು.. ಅಷ್ಟರಲ್ಲಿ ಶ್ರದ್ಧಾ ಇಂದೋರ್‌ನ ತನ್ನ ಕಾಲೇಜಿನಲ್ಲಿ ಕೆಲಸ ಮಾಡ್ತಿದ್ದ ಎಲೆಕ್ಟ್ರಿಷಿಯನ್ ಕರಣ್‌ದೀಪ್‌ನನ್ನು ಭೇಟಿಯಾಗ್ತಾಳೆ. ಶ್ರದ್ಧಾ ಒಬ್ಬಂಟಿಯಾಗಿ ಕುಳಿತಿದ್ದನ್ನ ಕಂಡ ಕರಣ್‌ದೀಪ್ ಅವಳ ಬಳಿಗೆ ಬಂದು ಏನಾಯ್ತು ಅಂತ ವಿಚಾರಿಸಿದ್ದ.. ಆಗ ಅವಳ ಮಾತು ಕೇಳಿದ ನಂತರ ಮನೆಗೆ ಹಿಂತಿರುಗಿ ಪೋಷಕರಿಗೆ ನಡೆದ ಘಟನೆ ವಿವರಿಸುವಂತೆ ಶ್ರದ್ಧಾಗೆ ಸಲಹೆ ಕೊಟ್ಟಿದ್ದ.. ಆದ್ರೆ ಶ್ರದ್ಧಾ ಅದಕ್ಕೆ ಒಪ್ಪದೇ, ತಾನು ಮದುವೆಯಾಗಲು ಮನೆ ಬಿಟ್ಟಿದ್ದೆ.. ಈಗ ಮದುವೆ ಆಗದೇ ಮನೆಗೆ ವಾಪಸ್‌ ಹೋಗಲಾರೆ ಎಂದಿದ್ಲು..

ಕರಣ್‌ದೀಪ್‌ ಎಷ್ಟು ಮನವೊಲಿಕೆ ಮಾಡಿದ್ರು ಕರಗದ ಶ್ರದ್ಧಾಗೆ, ಫೈನಲಿ ತನ್ನನ್ನ ಮದುವೆ ಆಗುವಂತೆ ಕರಣ್‌ ಪ್ರಪೋಸ್‌ ಮಾಡಿದ್ದಾನೆ. ಇದಕ್ಕೆ ಶ್ರದ್ಧಾ ಕೂಡಾ ಓಕೆ ಎಂದು ಸೂಚನೆ ಕೊಟ್ಟಿದ್ದಾಳೆ. ನಂತರ ಇಬ್ಬರೂ ಮಹೇಶ್ವರ-ಮಂಡಲೇಶ್ವರಕ್ಕೆ ಪ್ರಯಾಣ ಬೆಳೆಸಿ. ಅಲ್ಲಿ ಮದುವೆಯಾಗಿದ್ದಾರೆ. ನಂತರ ಅಲ್ಲಿಂದ ಅವರು ಮಂದಸೌರ್‌ಗೆ ಹೋಗಿದ್ದಾರೆ.

ಇವ್ರದ್ದು ಇಷ್ಟಾದ್ರೆ, ಈ ನಡುವೆ ಶ್ರದ್ಧಾಳ ತಂದೆ ಅನಿಲ್ ತಿವಾರಿಯ ತೀವ್ರ ಹುಡುಕಾಟ ಶುರುವಾಗಿ ಬಿಟ್ಟಿತ್ತು. ತನ್ನ ಮಗಳನ್ನ ಹುಡುಕಿಕೊಡುವವರಿಗೆ 50 ಸಾವಿರ ರೂಪಾಯಿ ಬಹುಮಾನ ಘೋಷಿಸಿದ್ರು. ಆಗಸ್ಟ್​ 28 ರಂದು ಶ್ರದ್ಧಾ ಕೊನೆಗೂ ತನ್ನ ತಂದೆಗೆ ಕರೆ ಮಾಡಿ ಮಂದ್ಸೌರ್‌ನಲ್ಲಿ ತಾನು ಸುರಕ್ಷಿತವಾಗಿರೋ ಬಗ್ಗೆ ತಿಳಿಸಿದ್ದಾಳೆ.. ಸಮಾಧಾನಗೊಂಡ ತಂದೆ ರೈಲು ಟಿಕೆಟ್​ ಖರೀದಿಗೆ ಕರಣ್‌ದೀಪ್‌ಗೆ ಫೋನ್​​ಪೇ ಮಾಡಿದ್ದ..
ಇಂದೋರ್​ಗೆ ಹಿಂತಿರುಗಿದ ಶ್ರದ್ಧಾ ಮತ್ತು ಕರಣ್‌ದೀಪ್ ಸೀದಾ ಎಂಐಜಿ ಪೊಲೀಸ್ ಠಾಣೆಗೆ ಹೋಗಿ ನಡೆದ ಘಟನೆ ವಿವರಿಸಿದ್ರು. ಸದ್ಯ ಶ್ರದ್ಧಾ ತಂದೆ ಅನಿಲ್ ತಿವಾರಿ, ತಮ್ಮ ಮಗಳು ವಾಪಾಸ್​ ಬಂದಿರೋದಕ್ಕೆ ನಿಟ್ಟುಸಿರು ಬಿಟ್ಟಿದ್ದಾರೆ. ಅಷ್ಟೇ ಅಲ್ಲದೆ ಇಬ್ಬರ ಮದುವೆಯನ್ನ ಶ್ರದ್ಧಾ ಕುಟುಂಬ ಒಪ್ಪಿಕೊಂಡಿದ್ದು, ಪ್ರಕರಣ ಸುಖಾಂತ್ಯ ಕಂಡಿದೆ. ಈ ಸ್ಟೋರಿ ನೋಡಿದ್ರೆ ದೊಡ್ಡವರು ಹೇಳಿದ ಮಾತೊಂದು ನೆನಪಾಗುತ್ತೆ.. ಪ್ರೀತಿ ಹುಟ್ಟೋದಕ್ಕೆ 100 ವರ್ಷ ಬೇಕಾಗಿಲ್ಲ.. ಒಂದು ಕ್ಷಣ ಸಾಕು.

Related Posts

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

  ಹೃದಯವೇದ್ರಾವಕ ಘಟನೆಯೊಂದು ಹುಣಸೂರಿನಲ್ಲಿ ನಡೆದಿದೆ ಪತ್ನಿ ಮಕ್ಕಳನ್ನು ಹತ್ಯೆಗೈದು ಪತಿ ನೇಣಿಗೆ ಶರಣಾಗಿರುವ ಪ್ರಕರಣ ಹುಣಸೂರು ನಗರದ ನ್ಯೂ ಮಾರುತಿ ಬಡಾವಣೆಯಲ್ಲಿ ಘಟನೆ ನ್ಯೂ ಮಾರುತಿ ಬಡಾವಣೆಯ ಹರೀಶ್ 49, ಪತ್ನಿ ನಿಶ್ಚಿತ 36 ಮಕ್ಕಳಾದ ನೆಕ್ಸಾ 13 ರಕ್ಷಾ…

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

  ಒಡಿಶಾದ ಶಿಕ್ಷಾ ಓ ಅನುಸಂಧಾನ ವಿಶ್ವವಿದ್ಯಾಲಯವು ಕರ್ನಾಟಕದ ಹೆಮ್ಮೆಯ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿ ಸನ್ಮಾನಿಸಿದೆ. ನ್ಯಾಯಾಂಗ ಕ್ಷೇತ್ರದಲ್ಲಿ ಸಲ್ಲಿಸಿದ ವಿಶಿಷ್ಟ ಸೇವೆ, ನ್ಯಾಯದ ಪರವಾದ ಬದ್ಧತೆ, ವಿದ್ವತ್ತು ಹಾಗೂ ಮಾನವೀಯ ಮೌಲ್ಯಗಳ…

You Missed

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ !

ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ !

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!