ಐಪಿಎಲ್ 2024ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಮುನ್ನಡೆಸಿದ್ದ ಶ್ರೇಯಸ್ ಅಯ್ಯರ್ ಅವರನ್ನು ತಂಡ ಕೈ ಬಿಟ್ಟಿತ್ತು. ಅಲ್ಲದೆ ಇವರಿಗೆ ಹರಾಜಿನಲ್ಲಿ ಮಣೆ ಸಹ ಹಾಕಲಿಲ್ಲ. ತಮ್ಮ ತಂಡದಲ್ಲಿದ್ದ ಯುವ ಆಟಗಾರ ವೆಂಕಟೇಶ್ ಅಯ್ಯರ್ಗೆ ಭಾರೀ ಹಣವನ್ನು ಹೂಡಿತು. ಆದರೆ ಯಾವುದೇ ಒಬ್ಬ ನಾಯಕತ್ವದ ಗುಣಗಳನ್ನು ಹೊಂದಿರುವ ಆಟಗಾರರನ್ನು ಪಡೆಯುವಲ್ಲಿ ವಿಫಲವಾಗಿತ್ತು. ಆದರೆ ಈಗ ತನ್ನಲ್ಲೇ ಇದ್ದ ಒಬ್ಬ ಅನುಭವಿ ಆಟಗಾರನ ಹೆಗಲಿಗೆ ಕೆಕೆಆರ್ ತಂಡದ ಜವಾಬ್ದಾರಿಯನ್ನು ನೀಡಿದೆ. ಅಜಿಂಕ್ಯ ರಹಾನೆ ಈ ಬಾರಿಯ ಐಪಿಎಲ್ನಲ್ಲಿ ಕೆಕೆಆರ್ ತಂಡವನ್ನು ಮುನ್ನಡೆಸಲಿದ್ದಾರೆ.





