ಮೊಬೈಲ್ ಬಳಕೆದಾರರಿಗೆ eSIM ಹಗರದ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಭಾರತ ಸರ್ಕಾರ ಸೂಚಿಸಿದೆ. ಸೈಬರ್ ವಂಚನೆ ಎಷ್ಟು ಅಪಾಯಕಾರಿ ಎಂದರೆ ವಂಚಕರು OTP ಅಥವಾ ATM ವಿವರಗಳನ್ನು ನಮೂದಿಸದೆ ನಿಮ್ಮ ಬ್ಯಾಂಕ್ ಖಾತೆಯಿಂದ ಹಣ ಕದಿಯಬಹುದು ಎಂದು ಸೈಬರ್ ಅಪರಾಧ ಸಮನ್ವಯ ಕೇಂದ್ರ (I4C) ಎಚ್ಚರಿಸಿದೆ.
I4C ಪ್ರಕಾರ.. ವಂಚಕರು ಮೊದಲು ಬಳಕೆದಾರರಿಗೆ ಕರೆ ಮಾಡ್ತಾರೆ. ನಂತರ ನಕಲಿ eSIM ಸಕ್ರಿಯಗೊಳಿಸುವ ಲಿಂಕ್ ಕಳುಹಿಸುತ್ತಾರೆ. ಆ ಲಿಂಕ್ ಕ್ಲಿಕ್ ಮಾಡಿದ ತಕ್ಷಣ, ಆ ಸಿಮ್ ಸ್ವಯಂಚಾಲಿತವಾಗಿ eSIM ಆಗಿ ಪರಿವರ್ತನೆಗೊಳ್ಳುತ್ತದೆ. ನಂತರ ಫೋನ್ನಲ್ಲಿರುವ ಅಸಲಿ ಸಿಮ್ ಕಾರ್ಯ ನಿರ್ವಹಿಸೋದನ್ನು ನಿಲ್ಲಿಸುತ್ತದೆ. ನೆಟ್ವರ್ಕ್ ಸಿಗ್ನಲ್ಗಳು ಕೂಡ ಕಣ್ಮರೆಯಾಗುತ್ತವೆ.
ಬಳಿಕ ಆ ನಂಬರ್ಗೆ ಕರೆಗಳು ಮತ್ತು SMS ಬರೋದು ಸ್ಥಗಿತಗೊಳ್ಳುತ್ತದೆ. ಎಲ್ಲಾ ಸಂದೇಶಗಳು ಮತ್ತು ವಂಚಕರ ಬಳಿಯಿರುವ eSIM ಗೆ ಹೋಗಲು ಪ್ರಾರಂಭಿಸುತ್ತದೆ. ಆ ಮೂಲಕ ಸೈಬರ್ ವಂಚಕರು ನಿಮ್ಮ ಖಾತೆಯಿಂದ ಹಣ ದೋಚುತ್ತಾರೆ.
ಗೃಹ ಸಚಿವಾಲಯದ ಅಡಿಯಲ್ಲಿ ಜನವರಿ 2020 ರಲ್ಲಿ I4C ರಚಿಸಲಾಗಿದೆ. ಇದು ಸೈಬರ್ ಅಪರಾಧಗಳನ್ನು ನಿಗ್ರಹಿಸುವ ಗುರಿ ಹೊಂದಿದೆ. ನಿರಂತರವಾಗಿ ಹೆಚ್ಚುತ್ತಿರುವ ಡಿಜಿಟಲ್ ವಹಿವಾಟುಗಳು ಮತ್ತು ಸ್ಮಾರ್ಟ್ಫೋನ್ ಬಳಕೆದಾರರ ಸಂಖ್ಯೆಯೊಂದಿಗೆ ಅಂತಹ ವಂಚನೆಗಳ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಈ ಕಾರಣಕ್ಕಾಗಿ ಸರ್ಕಾರ eSIM ಹಗರಣದ ಬಗ್ಗೆ ಎಚ್ಚರಿಕೆ ನೀಡಿದೆ.





