28 ವರ್ಷಗಳ ನಂತರ ಸಂರಕ್ಷಿಸಲ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಯ್ತು ಮೃತದೇಹ ! ಕಾಣೆಯಾಗಿದ್ದ ವ್ಯಕ್ತಿಯ ಶವ ಹಿಮನದಿಯಲ್ಲಿ ಪತ್ತೆಯಾಗಿದ್ದೇಗೆ.

ಪಾಕಿಸ್ತಾನ: ಕಳೆದ 28 ವರ್ಷಗಳ ಹಿಂದೆ ಕಾಣೆಯಾಗಿದ್ದ ವ್ಯಕ್ತಿಯ ಶವ ಹಿಮನದಿಯಲ್ಲಿ ಪತ್ತೆಯಾಗಿದೆ. ಹಿಮನದಿಯಲ್ಲಿ ಆಶ್ಚರ್ಯಕರವಾಗಿ ಚೆನ್ನಾಗಿ ಸಂರಕ್ಷಿಸಲ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬಿಬಿಸಿ ವರದಿ ಮಾಡಿದಂತೆ, ಹಿಂಸಾತ್ಮಕ ಸಂಘರ್ಷದಿಂದ ತಪ್ಪಿಸಿಕೊಳ್ಳಲು ನಾಸಿರುದ್ದೀನ್ ತನ್ನ ಕುಟುಂಬದೊಂದಿಗೆ ಪ್ರಯಾಣಿಸುತ್ತಿದ್ದಾಗ ಕಾಣೆಯಾಗಿದ್ದರು. ಜುಲೈ 31 ರಂದು, ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಕೊಹಿಸ್ತಾನ್ ಪ್ರದೇಶದ ನಿವಾಸಿಗಳು ಲೇಡಿ ಮೆಡೋಸ್ ಹಿಮನದಿಯಲ್ಲಿ ಅವರ ಅವಶೇಷಗಳು ಸಿಕ್ಕಿವೆ.

ಕೆಲವೊಂದು ನಂಬಲು ಅಸಾಧ್ಯವಾಗಿದ್ದರೂ ನಂಬಲೇಬೇಕಾಗುತ್ತದೆ. ಜಗತ್ತಿನಲ್ಲಿ ಅಂತಹ ಹಲವು ವಿಚಾರಗಳಿವೆ. ಕಳೆದ 28 ವರ್ಷಗಳ ಹಿಂದೆ ಕಾಣೆಯಾಗಿದ್ದ ವ್ಯಕ್ತಿಯ ಶವ ಹಿಮನದಿಯಲ್ಲಿ ಪತ್ತೆಯಾಗಿದೆ. ಹಿಮನದಿಯಲ್ಲಿ ಆಶ್ಚರ್ಯಕರವಾಗಿ ಚೆನ್ನಾಗಿ ಸಂರಕ್ಷಿಸಲ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಬಿಬಿಸಿ ವರದಿ ಮಾಡಿದಂತೆ, ಹಿಂಸಾತ್ಮಕ ಸಂಘರ್ಷದಿಂದ ತಪ್ಪಿಸಿಕೊಳ್ಳಲು ನಾಸಿರುದ್ದೀನ್ ತನ್ನ ಕುಟುಂಬದೊಂದಿಗೆ ಪ್ರಯಾಣಿಸುತ್ತಿದ್ದಾಗ ಕಾಣೆಯಾಗಿದ್ದರು. ಜುಲೈ 31 ರಂದು, ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಕೊಹಿಸ್ತಾನ್ ಪ್ರದೇಶದ ನಿವಾಸಿಗಳು ಲೇಡಿ ಮೆಡೋಸ್ ಹಿಮನದಿಯಲ್ಲಿ ಅವರ ಅವಶೇಷಗಳು ಸಿಕ್ಕಿವೆ. ಶವದೊಂದಿಗೆ ದೊರೆತ ಗುರುತಿನ ಚೀಟಿಯು ಅದು ನಸೀರುದ್ದೀನ್‌ಗೆ ಸೇರಿದ್ದು ಎಂದು ದೃಢಪಡಿಸಿದೆ.

ನಾನು ನೋಡಿದ್ದು, ನಂಬಲಸಾಧ್ಯವಾಗಿತ್ತು, ದೇಹವು ಹಾಗೇ ಇತ್ತು, ಬಟ್ಟೆಗಳು ಕೂಡ ಹರಿದಿರಲಿಲ್ಲ ಎಂದು ಸ್ಥಳೀಯರಾದ ಒಮರ್ ಖಾನ್ ತಿಳಿಸಿದ್ದಾರೆ.ಪೊಲೀಸರು ಗುರುತನ್ನು ದೃಢಪಡಿಸಿದ ಬಳಿಕ ನಿವಾಸಿಗಳು ನಾಸಿರುದ್ದೀನ್ ಕಣ್ಮರೆಯಾಗಿದ್ದ ಕುರಿತು ಹೆಚ್ಚಿನ ವಿವರಗಳನ್ನು ಹಂಚಿಕೊಂಡರು. ಪೊಲೀಸರ ಪ್ರಕಾರ, ಜೂನ್ 1997ರಲ್ಲಿ ಹಿಮಬಿರುಗಾಳಿ ಸಮಯದಲ್ಲಿ ನಾಸೀರುದ್ದೀನ್ ಹಿಮನದಿಯ ಬಿರುಕಿನಲ್ಲಿ ಬಿದ್ದು ಕಾಣೆಯಾದರು.

1997ರಲ್ಲಿ ನಾಸೀರುದ್ದೀನ್ ತನ್ನ ಸಹೋದರ ಕತಿರುದ್ದೀನ್ ಜತೆ ಕುದುರೆ ಮೇಲೆ ಪ್ರಯಾಣಿಸುತ್ತಿದ್ದಾಗ ಕಂದಕಕ್ಕೆ ಬಿದ್ದಿದ್ದರು. ಗ್ರಾಮದ ವಿವಾದಿಂದ ತಪ್ಪಿಸಿಕೊಳ್ಳಲು ಇಬ್ಬರೂ ಪರ್ವತ ಏರಿದ್ದರು. ಕತಿರುದ್ದೀನ್ ಬದುಕುಳಿದರೂ, ನಾಸಿರುದ್ದೀನ್ ಉಳಿಯಲಿಲ್ಲ. ತಮ್ಮ ಕುಟುಂಬವು ಇಷ್ಟು ವರ್ಷಗಳಲ್ಲಿ ಅವರನ್ನು ಪತ್ತೆ ಹಚ್ಚಲು ಸಾಕಷ್ಟು ಪ್ರಯತ್ನ ಮಾಡಿತ್ತು.

ಅವರ ದೇಹ ಎಲ್ಲಾದರೂ ಸಿಗಬಹುದೇ ಎಂದು ಕುಟುಂಬದ ಕೆಲವು ಸದಸ್ಯರು ಹಿಮನದಿ ಬಳಿ ತೆರಳಿದ್ದರು. ಆದರೆ ಎಲ್ಲೂ ಕಾಣದ ಕಾರಣ ಪ್ರಯತ್ನವನ್ನೇ ಬಿಟ್ಟಿದ್ದರು. ಪತ್ತೆಯಾದ ನಂತರ ಕುಟುಂಬವು ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿತು, ಅಂತಿಮವಾಗಿ ನಾಸಿರುದ್ದೀನ್ ದೇಹ ಸಿಕ್ಕಿರುವುದು ನೆಮ್ಮದಿಯ ಭಾವವನ್ನುಂಟು ಮಾಡಿದೆ ಎಂದು ಅವರ ಸಂಬಂಧಿ ಹೇಳಿದ್ದಾರೆ.

Related Posts

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ರಾಜ್ಯದಲ್ಲಿ ಸೆಪ್ಟೆಂಬರ್ 21ರಿಂದ ಮೂರು ದಿನಗಳ ಕಾಲ ವಿಶೇಷ ವಿಧಾನಮಂಡಲ ಅಧಿವೇಶನ ನಡೆಸಲು ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಸೆ. 21ರಿಂದ ಸೆ.…

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಗುಂಡ್ಲುಪೇಟೆ ಪಟ್ಟಣದ ಇಂದಿರಾ ಕ್ಯಾಂಟೀನ್‌ಗೆ ಸೋಮವಾರ ಬೆಳಿಗ್ಗೆ ಅಧಿಕಾರಿಗಳ ತಂಡ ದಿಢೀರ್ ಭೇಟಿ ನೀಡಿ ಆಹಾರದ ಶುಚಿತ್ವ, ಗುಣಮಟ್ಟ ಹಾಗೂ ಕುಡಿಯುವ ನೀರಿನ ಪೂರೈಕೆಯನ್ನು ಕೂಲಂಕಷವಾಗಿ ಪರಿಶೀಲಿಸಿತು. ಬಡವರು ಮತ್ತು ಶ್ರಮಿಕರಿಗೆ ಪೌಷ್ಟಿಕ ಹಾಗೂ ಶುಚಿ-ರುಚಿಯಾದ ಆಹಾರ ದೊರೆಯಬೇಕು ಎಂಬ ಶಾಸಕರ…

You Missed

ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು

ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಬಿಗ್ ಬಾಸ್ ಕನ್ನಡ 13: ಈ ಭಾನುವಾರದಿಂದ ‘ಏವಿಯೇಷನ್’ ಥೀಮ್‌ನೊಂದಿಗೆ ಗ್ರ್ಯಾಂಡ್ ಟೇಕ್ ಆಫ್!

ಬಿಗ್ ಬಾಸ್ ಕನ್ನಡ 13: ಈ ಭಾನುವಾರದಿಂದ ‘ಏವಿಯೇಷನ್’ ಥೀಮ್‌ನೊಂದಿಗೆ ಗ್ರ್ಯಾಂಡ್ ಟೇಕ್ ಆಫ್!

ಟಾಕ್ಸಿಕ್‌’ನಲ್ಲಿ ಯಶ್‌ ಅಭಿನಯಕ್ಕೆ ಕಿಚ್ಚನ ಪುತ್ರಿ ಫಿದಾ: ಪ್ರತಿಯೊಂದು ಫ್ರೇಮ್‌ನಲ್ಲೂ ಮ್ಯಾಜಿಕ್‌ ಎಂದ ಸಾನ್ವಿ ಸುದೀಪ್‌

ಟಾಕ್ಸಿಕ್‌’ನಲ್ಲಿ ಯಶ್‌ ಅಭಿನಯಕ್ಕೆ ಕಿಚ್ಚನ ಪುತ್ರಿ ಫಿದಾ: ಪ್ರತಿಯೊಂದು ಫ್ರೇಮ್‌ನಲ್ಲೂ ಮ್ಯಾಜಿಕ್‌ ಎಂದ ಸಾನ್ವಿ ಸುದೀಪ್‌

FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ!

FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ!