ಬೆಂಗಳೂರು :- ಬಿಹಾರ ಚುನಾವಣೆ ಮುಗಿಯುತ್ತಿದ್ದಂತೆ ರಾಜ್ಯ ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿ ನಡೆಯುವ ಸಾಧ್ಯತೆ ನಿಚ್ಚಳವಾಗತೊಡಗಿದ್ದು, ನವೆಂಬರ್ ಮಾಸಾಂತ್ಯಕ್ಕೆ ಸುಮಾರು 15ಕ್ಕೂ ಹೆಚ್ಚು ಮಂದಿ ಹಾಲಿ ಸಚಿವರು ಮಾಜಿಗಳಾಗ ಲಿದ್ದಾರೆ. ಇದೇ ವೇಳೆ ಹೊಸ ಮುಖಗಳ ಪಡೆ ಸಿದ್ದರಾಮಯ್ಯ ಅವರ ಸಂಪುಟಕ್ಕೆ ಸೇರ್ಪಡೆಯಾಗಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಈ ಮೂಲ ನೀಡುತ್ತಿರುವ ಮಾಹಿತಿ ನಂಬುವುದಾದರೆ ಬಿಹಾರ ಚುನಾವಣೆ ಮುಗಿಯುತ್ತಿದ್ದಂತೆಯೇ ಅಂದರೆ ನವೆಂಬರ್ ಎರಡನೇ ವಾರದಲ್ಲಿ ರಾಜ್ಯ ನಾಯಕತ್ವ ಹೈಕಮಾಂಡ್ನೊಂದಿಗೆ ಸಂಪುಟ ವಿಸ್ತರಣೆ ಬಗ್ಗೆ ಅಂತಿಮ ಮಾತುಕತೆ ನಡೆಸಲಿದ್ದು, ಸಂಪುಟ ವಿಸ್ತರಣೆ ಕಸರತ್ತು ಆರಂಭಿಸಲಿದ್ದು, ಮಾಸಾಂ ತ್ಯದ ವೇಳೆಗೆ ಈ ಪ್ರಕ್ರಿಯೆ ಪೂರ್ಣಗೊಳಿ ಸಲಿದ್ದಾರೆ. ತನ್ಮೂಲಕ ಚಳಿಗಾಲದ ಅಧಿವೇಶ ನದಲ್ಲಿ ಹೊಸ ಮುಖಗಳು ಸದನದಲ್ಲಿ ಹುಟ್ಟಿಕೊಳ್ಳಲಿವೆ.
ಈಗ ಬದಲಾವಣೆ ಯಾಕಾಗಿ?
ಕೆಲ ಸಚಿವರ ಕಾರ್ಯವೈಖರಿ ಬಗ್ಗೆ ಶಾಸಕರಿಂದಲೇ ತೀವ್ರ ಆಕ್ಷೇಪ, ಅಸಮಾಧಾನವಿದೆ. ಕೆಲ ಸಚಿವರ ವಿರುದ್ಧ ಆರೋಪಗಳು ಕೇಳಿಬಂದಿವೆ.
ಕೆಲ ಸಚಿವರ ಬಗ್ಗೆ ಹೈಕಮಾಂಡ್ ಮಟ್ಟಕ್ಕೂ ದೂರುಗಳು ಹೋಗಿದ್ದವೇಳೆ ಕೆಲ ಬದಲಾವಣೆ ಮಾಡುವಂತೆ ರಾಜ್ಯ ನಾಯಕತ್ವಕ್ಕೂ ಸೂಚನೆ ನೀಡಿತ್ತು. ಆದರೆ ದೂರು, ಅಸಮಾಧಾನ ವಿಷಯ ಮುಂದಿಟ್ಟುಕೊಂಡೇ ಸಂಪುಟದ ಸಚಿವರಿಗೆ ಕೊಕ್ ನೀಡುವ ಮನಸ್ಥಿತಿಯಲ್ಲಿ ಸಿಎಂ ಸಿದ್ದರಾಮಯ್ಯ ಇಲ್ಲ
ಹೀಗಾಗಿ ಸರ್ಕಾರಕ್ಕೆ ಎರಡೂವರೆ ವರ್ಷ ತುಂಬಿದ ನೆಪ, ಹೊಸಬರಿಗೆ ಅವಕಾಶದ ಕಾರಣ ನೀಡಿ ಹಲವರಿಗೆ ಸಂಪುಟದಿಂದ ಕೊಕ್ ಸಂಭವ
13ಕ್ಕೆ ಸಿಎಂ ಡಿನ್ನರ್ ಮೀಟಿಂಗ್! ಕುತೂಹಲ ಮೂಡಿಸಿದ ಸಿಎಂ ಸಿದ್ದರಾಮಯ್ಯ ನಡೆ
ಬೆಂಗಳೂರು: ಸಚಿವ ಸಂಪುಟ ಪುನರ್ ರಚನೆ ಊಹಾಪೋಹಗಳ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ಆ .13 ರ ರಾತ್ರಿ ಕೂಟ ಏರ್ಪಡಿಸ್ಸಿದ್ದುಕುತೂಹಲ ಮೂಡಿಸಿದೆ. ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯಲ್ಲಿ ಈ ಔತಣ ಕೂಟ ಆಯೋಜಿಸಿದ್ದು, ಈ ವೇಳೆ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚೆಯಾಗುವ ಸಾಧ್ಯತೆಯಿದೆ.




