ಬೆಂಗಳೂರು: ಕರ್ನಾಟಕ ಸರ್ಕಾರವು ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದ್ದು, ಈಗಾಗಲೇ ನಡೆಯುತ್ತಿರುವ ರಾಗಿ ಮಾಲ್ಟ್ ವಿತರಣಾ ಯೋಜನೆಯನ್ನು ಮುಂದುವರಿಸಿ, ವಾರದಲ್ಲಿ 3 ದಿನಗಳ ಬದಲು 5 ದಿನಗಳವರೆಗೆ ವಿಸ್ತರಿಸುವ ನಿರ್ಧಾರವನ್ನು ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಹೆಚ್.ಕೆ. ಪಾಟೀಲ್ ಅವರು ಈ ವಿಷಯದ ಕುರಿತು ಮಾಹಿತಿ ನೀಡಿದರು.
ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್, ಮುದ್ದೇನಹಳ್ಳಿ (ಚಿಕ್ಕಬಳ್ಳಾಪುರ) ವತಿಯಿಂದ ಈಗಾಗಲೇ ತರಗತಿ 1 ರಿಂದ 10ರ ವರೆಗೆ ಬಿಸಿ ಹಾಲಿನಲ್ಲಿ ಮಿಶ್ರಣ ಮಾಡಿದ “ಸಾಯಿ ಶ್ಯೂರ್” ರಾಗಿ ಹೆಲ್ತ್ ಮಿಕ್ಸ್ ಪೌಡರ್ ವಿತರಣೆ ನಡೆಯುತ್ತಿದೆ. ಈಗಿನಿಂದ ಈ ಸೇವೆ ವಾರದಲ್ಲಿ ಐದು ದಿನ ಲಭ್ಯವಾಗಲಿದೆ.
ಸಚಿವ ಸಂಪುಟದಿಂದ ಇನ್ನಷ್ಟು ಪ್ರಮುಖ ತೀರ್ಮಾನಗಳು:
ರೈತರು ಮತ್ತು ಕನ್ನಡಪರ ಹೋರಾಟಗಾರರ ವಿರುದ್ಧದ 60 ಪ್ರಕರಣಗಳನ್ನು ವಾಪಸ್ ಪಡೆಯಲು ನಿರ್ಧಾರ.
ಮೆಟ್ರೋ ಎಲಿವೇಟೆಡ್ ಕಾರಿಡಾರ್ (ಹಂತ-3) ಗೆ ಅನುಮೋದನೆ:
ಜೆಪಿನಗರ 4ನೇ ಹಂತದಿಂದ ಹೆಬ್ಬಾಳ, ಹೊಸಹಳ್ಳಿಯಿಂದ ಮಾಗಡಿ ರಸ್ತೆ ಮಾರ್ಗವಾಗಿ ಕಡಬಗೆರೆವರೆಗೆ
ಒಟ್ಟು ಉದ್ದ: 37.121 ಕಿ.ಮೀ.
ಡಬಲ್ ಡೆಕ್ಕರ್ ಮೆಟ್ರೋ ನಿರ್ಮಾಣಕ್ಕೆ ಅನುಮೋದನೆ
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಶುಲ್ಕದಲ್ಲಿ ಬದಲಾವಣೆ:
ಮಾರುಕಟ್ಟೆ ಶುಲ್ಕ: 41 ಪೈಸೆಯಿಂದ 42 ಪೈಸೆಗೆ
ವಹಿವಾಟು ವೆಚ್ಚ: 0.01 ಪೈಸೆ ಹೆಚ್ಚಳ
ಆಶಾ ಕಿರಣ ಯೋಜನೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಜಾರಿಗೊಳ್ಳಲಿದೆ.
ಉಚಿತ ಕಣ್ಣಿನ ತಪಾಸಣೆ ಮತ್ತು ಅಂಧತ್ವ ನಿವಾರಣಾ ಕಾರ್ಯಕ್ರಮ
₹52.85 ಕೋಟಿ ಅನುದಾನ
ಹೊಸ ಮೆಡಿಕಲ್ ಕಾಲೇಜು ಸ್ಥಾಪನೆ – ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರ ತಾಲ್ಲೂಕಿನ ರಾಯಸಂದ್ರ ಗ್ರಾಮದಲ್ಲಿ
25 ಎಕರೆ ಜಮೀನು ಖರೀದಿಗೆ ₹65 ಕೋಟಿ ಮೊತ್ತಕ್ಕೆ ಕರ್ನಾಟಕ ಗೃಹ ಮಂಡಳಿಯಿಂದ ಅನುಮೋದನೆ





