ಮೈಸೂರಿನ ಲಿಂಗಾಂಬುದಿಪಾಳ್ಯ. ನಿವಾಸಿ ರುಕ್ಕಿಣಿ ಅವರು ಲಾಕರ್ನಲ್ಲಿಟ್ಟಿದ್ದ ಒಂದು ಕೆಜಿ ಚಿನ್ನದ ನಾಣ್ಯಗಳಲ್ಲಿ ಅರ್ಧ ದಷ್ಟು ಕಡಿಮೆಯಾಗಿದೆ ಎಂದು ಕುವೆಂಪು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈ ಸಂಬಂಧ ಬ್ಯಾಂಕ್ ಆಫ್ ಬರೋಡಾ ಕುವೆಂಪುನಗರ ಶಾಖೆಯ ಮ್ಯಾನೇಜರ್ ಹಾಗೂ ಸಿಬ್ಬಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ದೂರಿನಲ್ಲಿರುವುದು: ಮೊದಲು ಬ್ಯಾಂಕ್ ಆಫ್ ಬರೋಡಾ ಕೊಯಮತ್ತೂರಿನ ಶಾಖೆಯ ಲಾಕರ್ನಲ್ಲಿ ಚಿನ್ನದ ಆಭರಣ ಹಾಗೂ ನಾಣ್ಯಗಳನ್ನು ಇಟ್ಟಿದ್ದೆ. ನಂತರ ಮೈಸೂರಿನ ಪಂಚಮಂತ್ರ ರಸ್ತೆಯಲ್ಲಿರುವ ಕುವೆಂಪು ನಗರ ಶಾಖೆಯ ಲಾಕರ್ಗೆ ವರ್ಗಾವಣೆ ಪಡೆದುಕೊಂಡೆ. ಆ ವೇಳೆ ಬ್ಯಾಂಕ್ ಮ್ಯಾನೇಜರ್ ನಿಮ್ಮ ಚಿನ್ನದ ನಾಣ್ಯ
ಗಳನ್ನು ಸುರಕ್ಷಿತವಾಗಿ ಲಾಕರ್ನಲ್ಲಿ ಇಟ್ಟುಕೊಳ್ಳುವುದಾಗಿ ಹೇಳಿ ಅಗ್ರಿಮೆಂಟ್ ಮಾಡಿಕೊಂಡಿದ್ದರಿಂದ ಸುಮಾರು 1 ಕೆಜಿ ಚಿನ್ನದ ನಾಣ್ಯವನ್ನು 2023ರ ಏಪ್ರಿಲ್ 10ರಂದು ಲಾಕರ್ನಲ್ಲಿಟ್ಟಿದ್ದೆ. 2024ರ ಡಿಸೆಂಬರ್ 18ರಂದು ಲಾಕರ್ ಪರಿಶೀಲಿಸಿದಾಗ ಚಿನ್ನದ ನಾಣ್ಯ ಕಡಿಮೆಯಾಗಿರುವಂತೆ ಕಾಣಿಸಿತು. ಅನುಮಾನಗೊಂಡು ವಿಚಾರಿಸಿದಾಗ ಬ್ಯಾಂಕ್ ಸಿಬ್ಬಂದಿ ಸ್ಪಷ್ಟ ಮಾಹಿತಿ ನೀಡಲಿಲ್ಲ. ಪ್ರಸಕ್ತ ವರ್ಷದ ಮಾ.3ರಂದು ಲಾಕರ್ನಲ್ಲಿದ್ದ ನಾಣ್ಯಗಳ ತೂಕ ಮಾಡಿಸಿದಾಗ 550 ಗ್ರಾಂ 905 ಮಿಲಿ ಇತ್ತು. ಬಳಿಕ ಮೇ 9ರಂದು ಪರಿ ក 492 0 988 2 ಚಿನ್ನದ ನಾಣ್ಯಗಳಿದ್ದವು. ಬ್ಯಾಂಕ್ ಲಾಕರ್ ರಿಜಿಸ್ಟರ್ನಲ್ಲಿದ್ದ ನನ್ನ ಫೋಟೊ ಬದಲಾ ಯಿಸಿ, ಅದರ ಮೇಲೆ ಸೀಲ್ ಹಾಕಲಾ ಗಿದೆ. ಲಾಕರ್ನಲ್ಲಿದ್ದ ನಾಣ್ಯಗಳಲ್ಲಿ ಸುಮಾರು 500 ಗ್ರಾಂ ಚಿನ್ನದ ನಾಣ್ಯ ನಾಪತ್ತೆಯಾಗಿರುವ ಬಗ್ಗೆ ಈವರೆಗೂ ಮಾಹಿತಿ ನೀಡಿಲ್ಲ ಎಂದು ಮಹಿಳೆ ಪೊಲೀಸ ರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.





