ಮಾರ್ಚ್ 3 ,ರಂದು ಖಗ್ರಾಸ ಚಂದ್ರಗ್ರಹಣ !

ಪ್ರಸಕ್ತ ವರ್ಷ2026ದ ಮೊದಲ ಖಗ್ರಾಸ ಚಂದ್ರಗ್ರಹಣ ಮಾ. 3ರಂದು ಸಂಭವಿ ಸಲಿದೆ. ವಿಶ್ವಾವಸು ನಾಮ ಸಂವತ್ಸರದ ಫಾಲ್ಗುಣ ಮಾಸದ ಹುಣ್ಣಿಮೆಯ ದಿನವಾದ ಮಂಗಳವಾರ ಖಗ್ರಾಸ ಚಂದ್ರಗ್ರಹಣ ಸಂಭವಿಸಲಿದೆ. ಈ ಗ್ರಹಣವು ಭಾರತದಲ್ಲಿ ಗೋಚರಿಸುತ್ತದೆ. ಪುಬ್ಬಾ ನಕ್ಷತ್ರ, ಸಿಂಹ ರಾಶಿಯಲ್ಲಿ ಖಗ್ರಾಸ ಚಂದ್ರಗ್ರಹಣ ಸಂಭವಿಸಲಿದೆ. ಹೀಗಾಗಿ ಈ ಗ್ರಹಣವು ಮಘಾ ನಕ್ಷತ್ರ, ಪುಬ್ಬ, ಉತ್ತರ, ಭರಣಿ ಮತ್ತು ಪೂರ್ವಾಷಾಢ ನಕ್ಷತ್ರದವರಿಗೆ ಹಾಗೂ ಸಿಂಹ ರಾಶಿ, ಕನ್ಯಾ, ಮಕರ, ವೃಷಭ ರಾಶಿಯವರೆಗೆ ಸ್ವಲ್ಪ ಅನಿಷ್ಟ ಕಾರಿಯಾಗಲಿದೆ. ಇದಕ್ಕೆ ಪರಿಹಾರವೂ ಇದೆ ಎಂದು ದೈವಜ್ಞಕೆ.ಎನ್. ಸೋಮಯಾಜಿ ತಿಳಿಸಿದರು.

ಗ್ರಹಣದ ಸ್ಪರ್ಶ ಕಾಲ ಮಧ್ಯಾಹ್ನ 3.20ಕ್ಕೆಸಂಭವಿಸಲಿದೆ. ಗ್ರಹಣದ ಮಧ್ಯಕಾಲ ಸಂಜೆ 5.04ಕ್ಕೆ, ಉನ್ನಿಲನ ಕಾಲ ಸಂಜೆ 5.3 5.33ಕ್ಕೆ. ಮೋಕ್ಷಕಾಲವು ಸಂಜೆ 6.47ಕ್ಕೆ ಆಗಲಿದೆ. ಈ ಗ್ರಹಣ ಶುಚಿ ಕಾಲದಲ್ಲಿ ಊಟೋಪಚಾರ, ನಿದ್ದೆ ನಿಷಿದ್ಧವಾದುದು. ಗ್ರಹಣ ಕಾಲಕ್ಕೆ ಕನಿಷ್ಠ 6 ಗಂಟೆಗಳ ಮುಂಚೆ ಆಹಾರ ಸೇವಿಸಬೇಕು. ಮೋಕ್ಷಕಾಲದ ನಂತರ ಸ್ನಾನಾದಿ ರ್ಭೂತರಾಗಿ ದೇವತಾ ಧ್ಯಾನದೊಂದಿಗೆ ನಿತ್ಯ ಜೀವನಕ್ಕೆ ಮರಳುವುದು.ಗ್ರಹಣ ದೋಷ ಪರಿಹಾರಕ್ಕಾಗಿ ಅಕ್ಕಿ, ದೋಷ ಪರಿಹಾರಕ್ಕೆ ಏನು ದಾನ?: ಹುರುಳಿ ಮತ್ತು ಬೆಳ್ಳಿ ಲೋಹ ಸಹಿತವಾಗಿ ವಸ್ತ್ರದಾನ ಮಾಡಬೇಕು. ಜತೆಗೆ ಗ್ರಹಣ ಕಾಲದಲ್ಲಿನಾನಾ ದೇವತಾಧ್ಯಾನ, ತರ್ಪಣ,ಜಪ ಮಾಡಬೇಕು. ದಾನಗಳು ಮತ್ತು ದೇವರ ಧ್ಯಾನದಿಂದ ಅನಿಷ್ಟಗಳು ಶುಭಫಲ ಪ್ರಾಪ್ತಿ ಪರಿಹಾರವಾಗಿ ಯಾಗುತ್ತದೆ. ಗ್ರಹಣದ ವೇಳೆ ಆಹಾರ ಸೇವನೆ ಮತ್ತು ಪ್ರಕೃತಿ ಕರೆಗೆ ವಯೋವೃದ್ಧರು, ರೋಗಿಗಳು, ಗರ್ಭಿಣಿಯರು, ರಜಸ್ವಲೆ (ಋತುಮತಿ) ಯಾದವರು ಮತ್ತು ಚಿಕ್ಕ ಮಕ್ಕಳಿಗೆ ವಿನಾಯಿತಿಯಿದೆ ಸೋಮಯಾಜಿ ನುಡಿದರು.

ಬೇಯಿಸಿದ ಆಹಾರಕ್ಕೆ ದರ್ಬೆಅನ್ವಯವಲ್ಲ: ತುಪ್ಪ, ಹಾಲು, ಮೊಸರು,
ಉಪ್ಪಿನಕಾಯಿ, ಕುಡಿಯುವ ನೀರಿನ ಪಾತ್ರೆ ಮತ್ತು ನೀರಿನ ಟ್ಯಾಂಕ್ ಇತ್ಯಾದಿಗಳಿಗೆ ದರ್ಬೆಯನ್ನು ಇಡು ವುದರಿಂದ ಗ್ರಹಣದ ಮೈಲಿಗೆ ತಗಲು ವುದಿಲ್ಲ. ಈ ನಿಯಮ ಬೇಯಿಸಿದ ಮತ್ತು ಕರಿದ ಪದಾರ್ಥಗಳಿಗೆ ಅನ್ವಯಿಸುವುದಿಲ್ಲ ಎಂದು ಸೋಮಯಾಜಿ ತಿಳಿಸಿದರು.

Related Posts

ಜ್ಯೋತಿಷಿ ಹೇಳಿದ ‘ನೀನು ಅಲ್ಪಾಯುಷಿ’, ನೇಣು ಬಿಗಿದುಕೊಂಡು ಟೆಕ್ಕಿ ಆತ್ಮ*ತ್ಯೆ!

ಜ್ಯೋತಿಷಿ ಯೊಬ್ಬರ ಮಾತು ನಂಬಿ ಬೆಂಗಳೂರಿನ ಮಹಿಳಾ ಟೆಕ್ಕಿಯೊಬ್ಬರು ನೇಣು ಬಿಗಿದು ಕೊಂಡು ಆತ್ಮ*ತ್ಯೆ ಮಾಡಿಕೊಂಡಿ ರುವ ಘಟನೆ ಬೆಂಗಳೂ ರಿನ ಬಾಗಲಗುಂಟೆಯ ಎಂಇಐ ಲೇಔಟ್‌ನಲ್ಲಿ ಸಂಭವಿಸಿದೆ. ವಿದ್ಯಾಜ್ಯೋತಿ (29) ನೇಣುಬಿಗಿದು ಕೊಂಡು ಆತ್ಮಹತ್ಯೆ ಶರಣಾಗಿರುವ ಯುವತಿ. ಖಾಸಗಿ ಕಂಪನಿಯೊಂದರಲ್ಲಿ ಕೆಲಸ…

Who is Mahal Roja Mallikarjuna Mutya?

ಅತಿಚಿಕ್ಕ ವಯಸ್ಸಿಗೆ ಮಠದ ಪೀಠಾಧಿಪತಿ ಆಗಿ ಅಪ್ಪಾಜಿ ಎನಿಸಿಕೊಂಡ 26ರ ಯುವಕ,ಬಾಲಕಿಯ ಜೊತೆಗಿನ ಅನುಚಿತ ವರ್ತನೆಯ ವಿಡಿಯೋ ವೈರಲ್ ಆದ ಬೆನ್ನಲ್ಲೇ ಮಲ್ಲಿಕಾರ್ಜುನ ಮುತ್ಯಾ ನಾಪತ್ತೆಯಾಗಿದ್ದಾರೆ. ಉತ್ತರ ಕರ್ನಾಟಕ ಕೆಲ ಜಿಲ್ಲೆಗಳಲ್ಲಿ ದೇವಮಾನವನ ಎನ್ನಿಸಿಕೊಂಡಿರುವ 26 ವರ್ಷದ ಈ ಯುವಕನ ಹಿನ್ನೆಲೆ…

You Missed

UPSC ಪರೀಕ್ಷೆಯಲ್ಲಿ ಅನುಜ್‌ ಅಗ್ನಿಹೋತ್ರಿ ಫಸ್ಟ್ ರ‍್ಯಾಂಕ್

UPSC ಪರೀಕ್ಷೆಯಲ್ಲಿ ಅನುಜ್‌ ಅಗ್ನಿಹೋತ್ರಿ ಫಸ್ಟ್ ರ‍್ಯಾಂಕ್

ಬಜೆಟ್​​ನಲ್ಲಿ ಬೆಂಗಳೂರಿಗೆ ಏನು ಸಿಕ್ತು?

ಬಜೆಟ್​​ನಲ್ಲಿ ಬೆಂಗಳೂರಿಗೆ ಏನು ಸಿಕ್ತು?

ತ್ರಿಷಾ, ವಿಜಯ್ ಮುಚ್ಚುಮರೆ ಇಲ್ಲದೇ ತಿರುಗಾಡುತ್ತಿದ್ದಾರೆ!

ತ್ರಿಷಾ, ವಿಜಯ್ ಮುಚ್ಚುಮರೆ ಇಲ್ಲದೇ ತಿರುಗಾಡುತ್ತಿದ್ದಾರೆ!

2026 ರ ಬಜೆಟ್​​ನಲ್ಲಿ ರಾಜ್ಯದ ಜನರಿಗೆ ಏನೆಲ್ಲಾ ಸಿಕ್ತು?

ಯುವ ಜನತೆ ಸಾಯುತ್ತಿರುವುದಕ್ಕೆ ಕಾರಣ ಕೋವಿಡ್ ಲಸಿಕೆ ಅಲ್ವವೇ ಅಲ್ಲ; ಅಸಲಿ ಸತ್ಯ ಬಿಚ್ಚಿಟ್ಟ ಡಾಕ್ಟರ್!

ಯುವ ಜನತೆ ಸಾಯುತ್ತಿರುವುದಕ್ಕೆ ಕಾರಣ ಕೋವಿಡ್ ಲಸಿಕೆ ಅಲ್ವವೇ ಅಲ್ಲ; ಅಸಲಿ ಸತ್ಯ ಬಿಚ್ಚಿಟ್ಟ ಡಾಕ್ಟರ್!

ಯುವಹೃದಯಕ್ಕೆ ಎದುರಾಗಿದೆ ಕುತ್ತು: 40ರ ಹರೆಯದವರಲ್ಲಿ ಹೆಚ್ಚುತ್ತಿದೆ ಹೃದಯಾಘಾತದ ಭೀತಿ!

ಯುವಹೃದಯಕ್ಕೆ ಎದುರಾಗಿದೆ ಕುತ್ತು: 40ರ ಹರೆಯದವರಲ್ಲಿ ಹೆಚ್ಚುತ್ತಿದೆ ಹೃದಯಾಘಾತದ ಭೀತಿ!