ಹೆಚ್.ಡಿ. ಕೋಟೆ ಒಕ್ಕಲಿಗ ಸಮಾಜದ ಪ್ರಭಾವಿ ಕಾಂಗ್ರೆಸ್ ಮುಖಂಡ ಈರೇಗೌಡರಿಗೆ ಕೊನೆಗೂ ಮೈಮೂಲ್ ಅಧ್ಯಕ್ಷ ಸ್ಥಾನ ದೊರಕಿದೆ. ಹಾಲಿ ಅಧ್ಯಕ್ಷ ಟಿ ನರಸಿಪುರದ HCM ಬಲಗೈ ಬಂಟ ಚಲುವರಾಜು ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಾರಣ ಇಂದು ಚುನಾವಣೆ ಚುನಾವಣೆ ನಡೆಯಿತು.

ಯಾವೋಬ್ಬ ನಿರ್ದೇಶಕನೂ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸದ ಕಾರಣ ಈರೇಗೌಡ ಮೈಮೂಲ್ ಅಧ್ಯಕ್ಷಗಾದಿಗೆ ಅವಿರೋದವಾಗಿ ಆಯ್ಕೆ ಆದರು. ಈರೇಗೌಡ ಅಧ್ಯಕ್ಷರಾಗಲು ಸಿಎಂ ಸೇರಿದಂತೆ ಪ್ರಮುಖ ಕಾಂಗ್ರೆಸ್ ನಾಯಕರ ಬಳಿ ಅನಿಲ್ ಚಿಕ್ಕಮಾದು ಮಾಡಿದ ಪ್ರಭಾವ ವರ್ಕ್ ಔಟ್ ಆಗಿದ್ದು ಹೆಚ್ ಡಿ ಕೋಟೆ ಇತಿಹಾಸದಲ್ಲಿ ಮೊದಲ ಬಾರಿಗೆ ಮೈಮುಲ್ ಅಧ್ಯಕ್ಷ ಸ್ಥಾನ ದೊರಕಿದೆ.
ಇನ್ನುಳಿದ 5 ತಿಂಗಳ ಕಾಲಾವದಿಗೆ ಈರೇಗೌಡ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ, ಕೊನೆ ಅವದಿ ಅಧ್ಯಕ್ಷ ಸ್ಥಾನ ಮಾರ್ಚ್ 16 ಕ್ಕೆ ಕೊನೆಗೊಳ್ಳಲಿದೆ. ಒಟ್ಟು ಸ್ಥಾನ 19 ಪೈಕಿ ಒಂದು ನಾಮಿನಿ ಅಧಿಕಾರಿಗಳ ಓಟ್ಟು 3 ಜನ ಸೇರಿ 19 ಜನ ಮತದಾನದ ಹಕ್ಕು ಪಡೆದಿದ್ದರು.ಈರೇಗೌಡರ ವಿರುದ್ದ ಯಾರೂ ನಾಮಪತ್ರ ಸಲ್ಲಿಸದ ಕಾರಣ ಮೈಮುಲ್ ಅಧ್ಯಕ್ಷ ಸ್ಥಾನ ಅವಿರೋದ ವಾಗಿ ಆಯ್ಕೆ ಆಗಿದೆ.




