ಹಾರ್ಮುಜ್ ಜಲಸಂಧಿಯಲ್ಲಿ ನೇವಲ್‌ ಮೈನ್ಸ್‌– ಇರಾನಿನ 16 ಹಡಗುಗಳನ್ನು ನಾಶ ಮಾಡಿರುವುದಾಗಿ ಅಮೆರಿಕದ ತಿಳಿಸಿದೆ.

ವಾಷಿಂಗ್ಟನ್‌: ತನ್ನ ಮೇಲೆ ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ಇರಾನ್‌ ಈಗ ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳು ಸಂಚರಿಸದಂತೆ ಸಮುದ್ರದ ಒಳಗಡೆ ಸ್ಫೋಟಕವನ್ನು ಇರಿಸಿದ ವಿಚಾರ ಬೆಳಕಿಗೆ ಬಂದಿದೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪ್ರತಿಕ್ರಿಯಿಸಿ, ಇರಾನ್ ಹಾರ್ಮುಜ್ ಜಲಸಂಧಿಯಲ್ಲಿ ಯಾವುದೇ ನೇವಲ್‌ ಮೈನ್ಸ್‌ ಹಾಕಿದ್ದರೆ ತಕ್ಷಣವೇ ತೆಗೆದು ಹಾಕಬೇಕು. ಒಂದು ವೇಳೆ ತೆಗೆಯದೇ ಇದ್ದರೆ ಹಿಂದೆಂದು ಕಾಣದ ರೀತಿಯಲ್ಲಿ ಇರಾನ್‌ ಮೇಲೆ ಮಿಲಿಟರಿ ದಾಳಿ ನಡೆಯಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.ಹಾರ್ಮುಜ್ ಜಲಸಂಧಿಯಲ್ಲಿ ನೇವಲ್‌ ಮೈನ್ಸ್‌ ಹಾಕುತ್ತಿದ್ದ ಇರಾನಿನ 16 ಹಡಗುಗಳನ್ನು ತಾನು ನಾಶ ಮಾಡಿರುವುದಾಗಿ ಅಮೆರಿಕದ ತಿಳಿಸಿದೆ

ಏನಿದು ನೇವಲ್‌ ಮೈನ್ಸ್‌?
ನಕ್ಸಲೈಟ್‌ಗಳು, ಉಗ್ರಗಾಮಿಗಳು ಭೂಮಿ ಒಳಗಡೆ ಬಾಂಬ್‌ ಇಡುವುದನ್ನು ನೀವು ಓದಿರಬಹುದು. ಈ ನೆಲಬಾಂಬ್‌ ಹುದುಗಿಸಿದ ಜಾಗದ ಮೇಲೆ ಕಾಲು ಇಟ್ಟಾಗ ಅಥವಾ ವಾಹನಗಳು ಸಂಚರಿಸಿದಾಗ ಒತ್ತಡದಿಂದ ಅದು ಸ್ಫೋಟಗೊಳ್ಳುತ್ತದೆ. ಅದೇ ರೀತಿಯಾಗಿ ನೀರಿನ ಒಳಗಡೆಯೂ ಸ್ಫೋಟಕಗಳನ್ನು ಇರಿಸಿ ಹಡಗುಗಳು, ಜಲಾಂತರ್ಗಾಮಿಗಳನ್ನು ನಾಶ ಮಾಡಲು ನೇವಲ್‌ ಮೈನ್ಸ್‌ ಬಳಕೆ ಮಾಡಲಾಗುತ್ತದೆ. ಹಡಗುಗಳು ಅವುಗಳ ಸಂಪರ್ಕಕ್ಕೆ ಬಂದಾಗ ಅಥವಾ ಅವುಗಳ ಹತ್ತಿರ ಸುಳಿದಾಗ ಸ್ಫೋಟಗೊಳ್ಳುವಂತೆ ವಿನ್ಯಾಸ ಮಾಡಲಾಗಿರುತ್ತದೆ.ಈ ಮೈನ್‌ಗಳನ್ನು ರಕ್ಷಣಾತ್ಮಕವಾಗಿ (ತನ್ನದೇ ಆದ ಹಡಗುಗಳನ್ನು ರಕ್ಷಿಸಲು) ಅಥವಾ ಆಕ್ರಮಣಕಾರಿಯಾಗಿ (ಶತ್ರುಗಳ ಹಡಗುಗಳ ಸಂಚಾರವನ್ನು ತಡೆಯಲು) ಬಳಸಲಾಗುತ್ತದೆ.

ಯಾವ ರೀತಿ ಇರುತ್ತೆ?
ಕೆಲವು ಮೈನ್‌ಗಳನ್ನು ಸಮುದ್ರದ ತಳಕ್ಕೆ ಹಾಕಿದ್ದರೆ, ಇನ್ನು ಕೆಲವು ನೀರಿನಲ್ಲಿ ತೇಲುತ್ತಿರುತ್ತವೆ. ಈ ಸ್ಫೋಟಕಗಳನ್ನು ತಾಗಿದಾಗ ಸ್ಫೋಟಗೊಳ್ಳುತ್ತದೆ. ಹಡಗು ಸಂಚರಿಸುತ್ತಿದ್ದಾಗ ಕಾಂತೀಯ ಕ್ಷೇತ್ರ, ಪ್ರೊಪೆಲ್ಲರ್‌ ಶಬ್ಧ ನೀರಿನ ಒತ್ತಡದಲ್ಲಿನ ಬದಲಾವಣೆಗಳನ್ನು ಪತ್ತೆಹಚ್ಚಿ ಸ್ಫೋಟಗೊಳ್ಳುವಂತೆ ರೂಪಿಸಲಾಗಿರುತ್ತದೆ.

ಇವುಗಳನ್ನು ವಿಶೇಷ ಹಡಗುಗಳು, ಜಲಾಂತರ್ಗಾಮಿಗಳು ಅಥವಾ ವಿಮಾನಗಳ ಮೂಲಕ ಸಮುದ್ರಕ್ಕೆ ಹಾಕಲಾಗುತ್ತದೆ. ಇವುಗಳು ಕ್ಷಿಪಣಿಗಳಿಗಿಂತ ಕಡಿಮೆ ವೆಚ್ಚದಾಯಕವಾಗಿದೆ ಮಾತ್ರವಲ್ಲ ಶತ್ರು ಹಡಗುಗಳಿಗೆ ಭಾರಿ ಹಾನಿ ಉಂಟುಮಾಡುತ್ತದೆ.

ಇರಾನ್‌ ದೇಶೀಯವಾಗಿ ನೇವಲ್‌ ಮೈನ್ಸ್‌ ತಯಾರಿಸುವ ಸಾಮರ್ಥ್ಯ ಹೊಂದಿದೆ. ಕೆಲವು ಸುಧಾರಿತ ವಿನ್ಯಾಸಗಳನ್ನು ರಷ್ಯಾ, ಚೀನಾ ಅಥವಾ ಉತ್ತರ ಕೊರಿಯಾದಲ್ಲಿ ಅಭಿವೃದ್ಧಿಪಡಿಸಿದ ವ್ಯವಸ್ಥೆಗಳಿಂದ ಪಡೆದಿದೆ ಎನ್ನಲಾಗುತ್ತಿದೆ.
ಅಮೆರಿಕ ಸೆಂಟರ್ ಫಾರ್ ಇಂಟರ್ನ್ಯಾಷನಲ್ ಮ್ಯಾರಿಟೈಮ್ ಸೆಕ್ಯುರಿಟಿಯ ಪ್ರಕಾರ ಇರಾನ್ ಸುಮಾರು 2,000 ರಿಂದ 5,000 ನೇವಲ್‌ ಮೈನ್ಸ್‌ ಹೊಂದಿರುವ ಸಾಧ್ಯತೆಯಿದೆ.

Related Posts

100 ಪರ್ಸೆಂಟ್ ಶುದ್ಧ ಪೆಟ್ರೋಲ್‌ಗೆ ಆಗ್ರಹಿಸಿ ಆಗಸ್ಟ್ 4ಕ್ಕೆ ಸಂಸತ್ ಚಲೋ !

  E20 ಜನತಾ ಪಕ್ಷವು ಶೇ.20 ಎಥೆನಾಲ್ ಮಿಶ್ರಿತ ಪೆಟ್ರೋಲ್ ಬದಲಿಗೆ ಶೇ. 100 ಶುದ್ಧ ಪೆಟ್ರೋಲ್ ನೀಡಲು ಆಗ್ರಹಿಸುತ್ತಿದೆ. E20 ಇಂಧನದಿಂದ ವಾಹನಗಳ ಮೈಲೇಜ್ ಕಡಿಮೆಯಾಗಿ, ಎಂಜಿನ್ ಸಮಸ್ಯೆಗಳು ಹೆಚ್ಚುತ್ತಿವೆ ಎಂಬುದು ಅವರ ಆರೋಪ. ಸಚಿವ ನಿತಿನ್ ಗಡ್ಕರಿ ರಾಜೀನಾಮೆಗೆ…

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

  ಹೃದಯವೇದ್ರಾವಕ ಘಟನೆಯೊಂದು ಹುಣಸೂರಿನಲ್ಲಿ ನಡೆದಿದೆ ಪತ್ನಿ ಮಕ್ಕಳನ್ನು ಹತ್ಯೆಗೈದು ಪತಿ ನೇಣಿಗೆ ಶರಣಾಗಿರುವ ಪ್ರಕರಣ ಹುಣಸೂರು ನಗರದ ನ್ಯೂ ಮಾರುತಿ ಬಡಾವಣೆಯಲ್ಲಿ ಘಟನೆ ನ್ಯೂ ಮಾರುತಿ ಬಡಾವಣೆಯ ಹರೀಶ್ 49, ಪತ್ನಿ ನಿಶ್ಚಿತ 36 ಮಕ್ಕಳಾದ ನೆಕ್ಸಾ 13 ರಕ್ಷಾ…

You Missed

100 ಪರ್ಸೆಂಟ್ ಶುದ್ಧ ಪೆಟ್ರೋಲ್‌ಗೆ ಆಗ್ರಹಿಸಿ ಆಗಸ್ಟ್ 4ಕ್ಕೆ ಸಂಸತ್ ಚಲೋ !

100 ಪರ್ಸೆಂಟ್ ಶುದ್ಧ ಪೆಟ್ರೋಲ್‌ಗೆ ಆಗ್ರಹಿಸಿ ಆಗಸ್ಟ್ 4ಕ್ಕೆ ಸಂಸತ್ ಚಲೋ !

ನೀಟ್ ಪತ್ರಿಕೆ ಸೋರಿಕೆ : ದೇಶ ಮತ್ತು ವಿದ್ಯಾರ್ಥಿಗಳ ಹಿತಾಸಕ್ತಿಯೇ ನಮಗೆ ಮುಖ್ಯ ಎಂದ ಅಮಿತ್ ಶಾ !

ನೀಟ್ ಪತ್ರಿಕೆ ಸೋರಿಕೆ : ದೇಶ ಮತ್ತು ವಿದ್ಯಾರ್ಥಿಗಳ ಹಿತಾಸಕ್ತಿಯೇ ನಮಗೆ ಮುಖ್ಯ ಎಂದ ಅಮಿತ್ ಶಾ !

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !