ಮಂಡ್ಯ: ಅವ್ರೆಲ್ಲ ಹಳೆ ಸ್ನೇಹಿತರು. ಎರಡು ಗುಂಪುಗಳಾಗಿ ಪ್ರತ್ಯೇಕವಾಗಿ ಒಂದೇ ಬಾರ್ಗೆ ಎಂಟ್ರಿ ಕೊಟ್ಟಿದ್ರು. ಆದ್ರೆ ಈ ವೇಳೆ ಎಣ್ಣೆ ಮತ್ತು ನೆತ್ತಿಗೇರ್ತಿದ್ದಂತೆ ಎರಡು ಗುಂಪಿನ ನಡುವೆ ಗಲಾಟೆಯಾಗಿದೆ. ಎಣ್ಣೆ ಮತ್ತಲ್ಲಿದ್ದ ಗುಂಪು ಹಳೆ ಸ್ನೇಹಿತನನ್ನೆ ಅಟ್ಟಾಡಿಸಿ ಹತ್ಯೆ ಮಾಡಿದ್ದಾರೆ. ಹಾಗಿದ್ರೆ ಈ ಘಟನೆ ನಡೆದಿದ್ದು ಎಲ್ಲಿ.? ಸ್ನೇಹಿತರೆ ಸ್ನೇಹಿತನನ್ನ ಹತ್ಯೆ ಮಾಡಿದ್ದು ಹೇಕೆ ಅಂತೀರಾ? ಈ ಸ್ಟೋರಿ ನೋಡಿ.
ಇಂತಾದ್ದೊಂದು ಘಟನೆ ನಡೆದಿದ್ದು ಮಂಡ್ಯ ಜಿಲ್ಲೆಯ ಮದ್ದೂರಿನಲ್ಲ. ಈ ದೃಶ್ಯದಲ್ಲಿ ಕಾಣ್ತಿರುವ ಈತನ ಹೆಸ್ರು ಅರುಣ್ ಅಂತ ಮದ್ದೂರಿ ವಡ್ಡರದೊಡ್ಡಿ ಗ್ರಾಮದವ್ನು. ಕೆಲ ವರ್ಷಗಳ ಹಿಂದೆ ಗ್ರಾಮ ಬಿಟ್ಟು ಬೆಂಗಳೂರು ಸೇರಿಕೊಂಡಿದ್ದ ಅರುಣ್ ಆಟೋ ಚಾಲಕನಾಗಿದ್ದ. ಆದ್ರೆ ಹಬ್ಬದ ಪ್ರಯುಕ್ತ ಮೊನ್ನೆಯಷ್ಟೆ ಗ್ರಾಮಕ್ಕೆ ಬಂದಿದ್ದ ಅರುಣ್, ಗೆಳೆಯನ ಜೊತೆ ಎಣ್ಣೆ ಹೊಡೆಯೋಕೆ ಅಂತ ಬಾರ್ಗೆ ಹೋಗಿದ್ದ. ಈ ವೇಳೆ ಬಾರ್ಗೆ ಅರುಣುನ ಹಳೆ ಸ್ನೇಹಿತರ ಗ್ಯಾಂಗ್ ಕೂಡ ಎಂಟ್ರಿ ಕೊಟ್ಟಿತ್ತು. ಈ ವೇಳೆ ಮಾತಿಗೆ ಮಾತು ಬೆಳೆದು ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿಕೊಂಡಿದ್ದಾರೆ.
ಇನ್ನು ಬಾರ್ನಲ್ಲಿ ಗಲಾಟೆ ಆಗ್ತಿದ್ದಂತೆ ಬಾರ್ ಓನರ್ ಎರಡು ಗ್ಯಾಂಗ್ನವರನ್ನ ಬಾರ್ನಿಂದ ಹೊರಕ್ಕೆ ಹಾಕಿದ್ದಾರೆ. ಇದಾದ ಬಳಿಕ ಗೆಳೆಯ ದೇವರಾಜ್ ಜೊತೆ ಅರುಣ್ ಮದ್ದೂರು ಕಡೆ ಹೊರಟಿದ್ದ. ಆದ್ರೆ ಇಷ್ಟಕ್ಕೆ ಸುಮ್ಮನಾಗದ ಮತ್ತೊಂದು ಗ್ಯಾಂಗ್ ಅರುಣನನ್ನ ಅಡ್ಡಗಟ್ಟಿ ರಸ್ತೆಯಲ್ಲಿ ಅಟ್ಟಾಡಿಸಿಕೊಂಡು ಹಲ್ಲೆ ನಡೆಸಿದ್ದಾರೆ. ಈ ವೇಳೆ ತೀವ್ರ ಗಾಯಗೊಂಡಿದ್ದ ಅರುಣ್ ಸಾವನ್ನಪ್ಪಿದ್ದ. ಆದ್ರೆ ಅರುಣ್ ಜೊತೆ ಇದ್ದ ದೇವರಾಜು ಘಟನೆ ಬಗ್ಗೆ ವಿವರಿಸಿದ್ದು, ಸೂರಿ ಹಾಗೂ ವಿಕಾಸ್ ಎಂಬುವವರ ನಡುವೆ ಜಗಳವಾಗಿತ್ತು. ಸೂರಿ ಹಾಗೂ ಅರುಣ್ ಇಬ್ಬರು ಒಂದೆ ರೀತಿ ಬಿಳಿ ಬಟ್ಟೆ ಹಾಕಿದ್ದರು. ಅವರಿಗೆ ಸೂರಿ ಮೇಲೆ ಕೋಪ ಇತ್ತು ಹೀಗಾಗಿ ಕತ್ತಲೆಯಲ್ಲಿ ಬಳಿ ಬಣ್ಣದ ಶರ್ಟ್ ನೋಡಿ ಸೂರಿ ಅಂತ ಅರುಣನನ್ನ ಹೊಡೆದು ಕೊಂದಿದ್ದಾರೆ ಎಂದಿದ್ದಾನೆ.
ಇನ್ನು ಘಟನೆ ಬಳಿಕ ಅರುಣ್ ಜೊತೆ ಇದ್ದ ದೇವರಾಜ್ ಪೊಲೀಸರಿಗೆ ವಿಚಾರ ಮುಟ್ಟಿಸಿದ್ದ. ನಂತ್ರ ಪೊಲೀಸರು ಸ್ಥಳಕ್ಕೆ ಹೋಗುವಷ್ಟರಲ್ಲಿ ಅರುಣ್ ಯಣವಾಗಿ ಬಿದ್ದಿದ್ದ. ಸದ್ಯ ಈ ಬಗ್ಗೆ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನ ತಮ್ಮ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.





