Chennai Archives - Good News 24x7 https://www.goodnews24x7.com/tag/chennai/ Kannada Tue, 12 May 2026 08:59:21 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Chennai Archives - Good News 24x7 https://www.goodnews24x7.com/tag/chennai/ 32 32 ತಮಿಳುನಾಡಲ್ಲಿ 717 ಬಾರ್ ಗಳಿಗೆ ಬೀಗ CM ವಿಜಯ್ ಖಡಕ್ ಆರ್ಡರ್ ! https://www.goodnews24x7.com/cm-vijay-orders-closure-of-717-bars-in-tamil-nadu/ Tue, 12 May 2026 08:59:21 +0000 https://www.goodnews24x7.com/?p=9504 ತಮಿಳುನಾಡಿನಾದ್ಯಂತ ಧಾರ್ಮಿಕ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ವ್ಯಾಪ್ತಿಯಲ್ಲಿರುವ 717 ಮದ್ಯದಂಗಡಿಗಳನ್ನು ಎರಡು ವಾರಗಳಲ್ಲಿ ಮುಚ್ಚಲು ತಮಿಳುನಾಡಿನ ನೂತನ ಮುಖ್ಯಮಂತ್ರಿ ವಿಜಯ್ ಆದೇಶಿಸಿದ್ದಾರೆ. ತಮಿಳುನಾಡು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಮಂಗಳವಾರ ತಮ್ಮ ಮೊದಲ…

The post ತಮಿಳುನಾಡಲ್ಲಿ 717 ಬಾರ್ ಗಳಿಗೆ ಬೀಗ CM ವಿಜಯ್ ಖಡಕ್ ಆರ್ಡರ್ ! appeared first on Good News 24x7.

]]>

ತಮಿಳುನಾಡಿನಾದ್ಯಂತ ಧಾರ್ಮಿಕ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ವ್ಯಾಪ್ತಿಯಲ್ಲಿರುವ 717 ಮದ್ಯದಂಗಡಿಗಳನ್ನು ಎರಡು ವಾರಗಳಲ್ಲಿ ಮುಚ್ಚಲು ತಮಿಳುನಾಡಿನ ನೂತನ ಮುಖ್ಯಮಂತ್ರಿ ವಿಜಯ್ ಆದೇಶಿಸಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಮಂಗಳವಾರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ಧಾರದಲ್ಲಿ, ಜೋಸೆಫ್ ವಿಜಯ್ ಈ ಆದೇಶವನ್ನು ಹೊರಡಿಸಿದ್ದಾರೆ.

ದೇವಾಲಯಗಳು, ಮಸೀದಿಗಳು, ಚರ್ಚ್‌ಗಳು, ಶಾಲೆಗಳು, ಕಾಲೇಜುಗಳು ಮತ್ತು ಬಸ್ ನಿಲ್ದಾಣಗಳ 500 ಮೀಟರ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ತಮಿಳುನಾಡು ರಾಜ್ಯ ಮಾರುಕಟ್ಟೆ ನಿಗಮ (ಟ್ಯಾಸ್ಮ್ಯಾಕ್) ಮಳಿಗೆಗಳನ್ನು ಮುಂದಿನ ಎರಡು ವಾರಗಳಲ್ಲಿ ಮುಚ್ಚಲು ಅಧಿಕಾರಿಗಳಿಗೆ ಆದೇಶ ನೀಡಲಾಗಿದೆ.ತಮಿಳುನಾಡು ಸರ್ಕಾರದ ಪ್ರಕಾರ, ರಾಜ್ಯದಲ್ಲಿ ಪ್ರಸ್ತುತ ಒಟ್ಟು 4,765 ಮದ್ಯದಂಗಡಿಗಳಿವೆ. ಮುಚ್ಚಲು ಗುರುತಿಸಲಾದ 717 ರಲ್ಲಿ 276 ಪೂಜಾ ಸ್ಥಳಗಳ ಬಳಿ, 186 ಶಿಕ್ಷಣ ಸಂಸ್ಥೆಗಳ ಬಳಿ ಮತ್ತು 255 ಬಸ್ ನಿಲ್ದಾಣಗಳ ಬಳಿ ಇವೆ.

ಇದನ್ನೂ ನೋಡಿ : https://www.instagram.com/reel/DYL_4HpET3c/?utm_source=ig_web_copy_link&igsh=MzRlODBiNWFlZA==

ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ ವಿಜಯ್ ಅವರ ಈ ಕ್ರಮವು ಮೊದಲ ಪ್ರಮುಖ ನೀತಿ ಹಸ್ತಕ್ಷೇಪವಾಗಿದೆ ಮತ್ತು ಸೂಕ್ಷ್ಮ ಸಾರ್ವಜನಿಕ ಪ್ರದೇಶಗಳಲ್ಲಿ ಮದ್ಯದ ಲಭ್ಯತೆಯ ಕುರಿತಾದ ಕಳವಳಗಳನ್ನು ಪರಿಹರಿಸುವ ಗುರಿಯನ್ನು ಹೊಂದಿರುವ ಪ್ರಮುಖ ಸಾಮಾಜಿಕ ಸುಧಾರಣಾ ಕ್ರಮವಾಗಿ ಹೊಸ ಸರ್ಕಾರವು ಇದನ್ನು ಬಿಂಬಿಸುತ್ತಿದೆ.

ಆದಾಗ್ಯೂ, ಟಾಸ್ಮ್ಯಾಕ್ ರಾಜ್ಯದ ಅತಿದೊಡ್ಡ ಆದಾಯ ಗಳಿಸುವ ಸಾರ್ವಜನಿಕ ವಲಯದ ಉದ್ಯಮಗಳಲ್ಲಿ ಒಂದಾಗಿದೆ ಮತ್ತು ಅದರ ಮಳಿಗೆಗಳನ್ನು ಮುಚ್ಚುವ ನಿರ್ಧಾರವು ತಮಿಳುನಾಡು ಸರ್ಕಾರಕ್ಕೆ ಅದರ ಆರ್ಥಿಕ ಪರಿಣಾಮಗಳು ಮತ್ತು ಕಲ್ಯಾಣ ಭರವಸೆಗಳನ್ನು ಪೂರೈಸುವ ಸಾಮರ್ಥ್ಯದ ಬಗ್ಗೆ ಚರ್ಚೆಗಳನ್ನು ಹುಟ್ಟುಹಾಕುವ ಸಾಧ್ಯತೆಯಿದೆ.ರಾಜಕೀಯ ಪಕ್ಷಗಳು ಮತ್ತು ನಾಯಕರು ಈ ನಿರ್ಧಾರವನ್ನು ಸ್ವಾಗತಿಸಿದ್ದು, ಇದು ದೀರ್ಘಕಾಲದ ಬೇಡಿಕೆಯನ್ನು ಪರಿಹರಿಸುವ ಮತ್ತು ಮದ್ಯ ನಿಯಂತ್ರಣವನ್ನು ಬಲಪಡಿಸುವತ್ತ ಒಂದು ಹೆಜ್ಜೆ ಎಂದು ಬಣ್ಣಿಸಿದ್ದಾರೆ.

The post ತಮಿಳುನಾಡಲ್ಲಿ 717 ಬಾರ್ ಗಳಿಗೆ ಬೀಗ CM ವಿಜಯ್ ಖಡಕ್ ಆರ್ಡರ್ ! appeared first on Good News 24x7.

]]>
‘ಜೈಲರ್ 2’ ಚಿತ್ರಕ್ಕೆ ಪವನ್ ಕಲ್ಯಾಣ್ ನೋ: ಅತಿಥಿ ಪಾತ್ರದ ಆಯ್ಕೆಯಲ್ಲೇ ಸಿನೆಮಾತಂಡಕ್ಕೆ ಎದುರಾಯ್ತು ದೊಡ್ಡ ವಿಘ್ನ! https://www.goodnews24x7.com/pawan-kalyan-not-in-jailer-2-the-film-crew-faced-a-big-hurdle-in-choosing-a-guest-role/ Sat, 11 Apr 2026 11:08:11 +0000 https://www.goodnews24x7.com/?p=9208 ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ಸಿನೆಮಾ ‘ಜೈಲರ್ 2’ ಈಗ ಅತಿಥಿ ಪಾತ್ರವೊಂದರ ಆಯ್ಕೆಯಿಂದಾಗಿ ಸುದ್ದಿಯಲ್ಲಿದೆ. ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣಗೊಂಡು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದರೂ, ಕೇವಲ ಐದು ದಿನಗಳ ಕಾಲ ಶೂಟಿಂಗ್ ಮಾಡಬೇಕಿರುವ ಒಂದು ಪ್ರಮುಖ ಅತಿಥಿ…

The post ‘ಜೈಲರ್ 2’ ಚಿತ್ರಕ್ಕೆ ಪವನ್ ಕಲ್ಯಾಣ್ ನೋ: ಅತಿಥಿ ಪಾತ್ರದ ಆಯ್ಕೆಯಲ್ಲೇ ಸಿನೆಮಾತಂಡಕ್ಕೆ ಎದುರಾಯ್ತು ದೊಡ್ಡ ವಿಘ್ನ! appeared first on Good News 24x7.

]]>

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ಸಿನೆಮಾ ‘ಜೈಲರ್ 2’ ಈಗ ಅತಿಥಿ ಪಾತ್ರವೊಂದರ ಆಯ್ಕೆಯಿಂದಾಗಿ ಸುದ್ದಿಯಲ್ಲಿದೆ. ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣಗೊಂಡು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದರೂ, ಕೇವಲ ಐದು ದಿನಗಳ ಕಾಲ ಶೂಟಿಂಗ್ ಮಾಡಬೇಕಿರುವ ಒಂದು ಪ್ರಮುಖ ಅತಿಥಿ ಪಾತ್ರಕ್ಕೆ ಸೂಕ್ತ ನಟ ಸಿಗದೆ ಚಿತ್ರತಂಡ ಕಂಗಾಲಾಗಿದೆ. ಈ ಮಹತ್ವದ ಪಾತ್ರಕ್ಕಾಗಿ ಮೊದಲು ನಂದಮೂರಿ ಬಾಲಕೃಷ್ಣ ಮತ್ತು ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಅವರನ್ನು ಸಂಪರ್ಕಿಸಲಾಗಿತ್ತು. ಆದರೆ ಅವರಿಬ್ಬರೂ ನಯವಾಗಿ ತಿರಸ್ಕರಿಸಿದ ಬೆನ್ನಲ್ಲೇ, ಈಗ ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ಕೂಡ ಈ ಆಫರ್ ಅನ್ನು ನಿರಾಕರಿಸಿದ್ದಾರೆ ಎನ್ನಲಾಗಿದೆ.

ರಾಜಕೀಯ ಒತ್ತಡದ ಕಾರಣ ಹಿಂದೆ ಸರಿದ ಪವನ್ ಕಲ್ಯಾಣ್:
ಪವನ್ ಕಲ್ಯಾಣ್ ಪ್ರಸ್ತುತ ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಸಕ್ರಿಯ ರಾಜಕೀಯ ಜವಾಬ್ದಾರಿಗಳ ಕಾರಣದಿಂದ ಚಿತ್ರೀಕರಣಕ್ಕೆ ಸಮಯ ನೀಡಲು ಅಸಾಧ್ಯ ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ತೆಲುಗಿನಲ್ಲಿಯೂ ಅವರು ಯಾವುದೇ ಹೊಸ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿಲ್ಲ. ರಜನಿಕಾಂತ್, ಶಿವರಾಜ್‌ಕುಮಾರ್ ಮತ್ತು ಮೋಹನ್‌ಲಾಲ್ ಅವರಂತಹ ದಿಗ್ಗಜರ ಜೊತೆ ಪವನ್ ಕಲ್ಯಾಣ್ ಅವರನ್ನು ಒಂದೇ ತೆರೆಯ ಮೇಲೆ ನೋಡಬೇಕೆಂಬ ಅಭಿಮಾನಿಗಳ ಆಸೆಗೆ ಈ ನಿರ್ಧಾರದಿಂದ ತಣ್ಣೀರೆರಚಿದಂತಾಗಿದೆ.

ಬಿಡುಗಡೆಯ ತಯಾರಿಯಲ್ಲಿ ‘ಜೈಲರ್ 2’:
ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಈ ಚಿತ್ರವನ್ನು ಸನ್ ಪಿಕ್ಚರ್ಸ್ ಅದ್ಧೂರಿಯಾಗಿ ನಿರ್ಮಿಸುತ್ತಿದ್ದು, ಅನಿರುದ್ಧ್ ರವಿಚಂದರ್ ಸಂಗೀತ ನೀಡುತ್ತಿದ್ದಾರೆ. ಈ ಬಾರಿ ಚಿತ್ರದಲ್ಲಿ ಎಸ್‌ಜೆ ಸೂರ್ಯ ಅವರು ಪ್ರಬಲ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಆಗಸ್ಟ್ ಎರಡನೇ ವಾರದಲ್ಲಿ ಸಿನಿಮಾ ತೆರೆಗೆ ಬರುವ ನಿರೀಕ್ಷೆಯಿದೆ. ಆದರೆ, ಪ್ರಮುಖ ಅತಿಥಿ ಪಾತ್ರದ ಗೊಂದಲ ಇನ್ನೂ ಬಗೆಹರಿಯದಿರುವುದು ಚಿತ್ರತಂಡಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

The post ‘ಜೈಲರ್ 2’ ಚಿತ್ರಕ್ಕೆ ಪವನ್ ಕಲ್ಯಾಣ್ ನೋ: ಅತಿಥಿ ಪಾತ್ರದ ಆಯ್ಕೆಯಲ್ಲೇ ಸಿನೆಮಾತಂಡಕ್ಕೆ ಎದುರಾಯ್ತು ದೊಡ್ಡ ವಿಘ್ನ! appeared first on Good News 24x7.

]]>
ಐಪಿಎಲ್ 2026 ಆರಂಭಕ್ಕೂ ಮುನ್ನ ಸಿಎಸ್ ಕೆಗೆ ಭಾರೀ ಹಿನ್ನಡೆ: ಕಾಲಿನ ಗಾಯದಿಂದ MS Dhoni ಮೊದಲ ಎರಡು ವಾರ ಔಟ್. https://www.goodnews24x7.com/csk-suffers-major-setback-ahead-of-ipl-2026-ms-dhoni-out-for-first-two-weeks-due-to-leg-injury/ Sat, 28 Mar 2026 10:11:32 +0000 https://www.goodnews24x7.com/?p=9001 ಐಪಿಎಲ್ 2026ರ 19ನೇ ಆವೃತ್ತಿ ಆರಂಭವಾಗುವ ಮುನ್ನವೇ Chennai Super Kings ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ತಂಡದ ಮಾಜಿ ನಾಯಕ ಹಾಗೂ ಅನುಭವಿ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ MS Dhoni ಕಾಲಿನ ಸ್ನಾಯು ಗಾಯ (calf strain)ದಿಂದ ಬಳಲುತ್ತಿದ್ದು, ಟೂರ್ನಿಯ ಮೊದಲ…

The post ಐಪಿಎಲ್ 2026 ಆರಂಭಕ್ಕೂ ಮುನ್ನ ಸಿಎಸ್ ಕೆಗೆ ಭಾರೀ ಹಿನ್ನಡೆ: ಕಾಲಿನ ಗಾಯದಿಂದ MS Dhoni ಮೊದಲ ಎರಡು ವಾರ ಔಟ್. appeared first on Good News 24x7.

]]>

ಐಪಿಎಲ್ 2026ರ 19ನೇ ಆವೃತ್ತಿ ಆರಂಭವಾಗುವ ಮುನ್ನವೇ Chennai Super Kings ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ತಂಡದ ಮಾಜಿ ನಾಯಕ ಹಾಗೂ ಅನುಭವಿ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ MS Dhoni ಕಾಲಿನ ಸ್ನಾಯು ಗಾಯ (calf strain)ದಿಂದ ಬಳಲುತ್ತಿದ್ದು, ಟೂರ್ನಿಯ ಮೊದಲ ಎರಡು ವಾರಗಳ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ ಎಂದು ಫ್ರಾಂಚೈಸಿ ಅಧಿಕೃತವಾಗಿ ತಿಳಿಸಿದೆ. ಧೋನಿ ಅನುಪಸ್ಥಿತಿ ತಂಡದ ಸಮತೋಲನದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದ್ದು, ಆರಂಭಿಕ ಪಂದ್ಯಗಳಲ್ಲಿ ತಂಡಕ್ಕೆ ದೊಡ್ಡ ಸವಾಲಾಗಲಿದೆ.

ಇಂದು ಶನಿವಾರದಿಂದ ಟೂರ್ನಿ ಶುರುವಾಗುತ್ತಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ Royal Challengers Bengaluru ತಂಡವು Sunrisers Hyderabad ವಿರುದ್ಧ M. Chinnaswamy Stadiumನಲ್ಲಿ ಮುಖಾಮುಖಿಯಾಗಲಿದೆ. ಇನ್ನೊಂದೆಡೆ, ಸಿಎಸ್ ಕೆ ತನ್ನ ಮೊದಲ ಪಂದ್ಯವನ್ನು ಸೋಮವಾರ Rajasthan Royals ವಿರುದ್ಧ ಆಡಲಿದ್ದು, ಧೋನಿ ಅನುಪಸ್ಥಿತಿಯಲ್ಲಿ ತಂಡದ ನಾಯಕತ್ವ ಮತ್ತು ವಿಕೆಟ್ ಕೀಪಿಂಗ್ ಜವಾಬ್ದಾರಿಗಳ ಬಗ್ಗೆ ಕುತೂಹಲ ಹೆಚ್ಚಾಗಿದೆ.

ಪ್ರಸ್ತುತ ಧೋನಿ ಗಾಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದು, ವೈದ್ಯಕೀಯ ತಂಡ ಅವರ ಚೇತರಿಕೆಯನ್ನು ನಿಗಾ ವಹಿಸುತ್ತಿದೆ. ಅವರು ಸಂಪೂರ್ಣ ಫಿಟ್ ಆದ ಬಳಿಕ ಮಾತ್ರ ತಂಡಕ್ಕೆ ಮರಳಲಿದ್ದಾರೆ ಎಂದು ತಿಳಿದುಬಂದಿದೆ. ಇತ್ತೀಚೆಗೆ M. A. Chidambaram Stadiumನಲ್ಲಿ ನಡೆದ ಅಭ್ಯಾಸ ಪಂದ್ಯದಲ್ಲಿ ಧೋನಿ ಬ್ಯಾಟಿಂಗ್ ಮಾಡುತ್ತಿರುವ ದೃಶ್ಯಗಳು ಅಭಿಮಾನಿಗಳಿಗೆ ಆತ್ಮವಿಶ್ವಾಸ ನೀಡಿದ್ದರೂ, ಗಾಯದ ಸಮಸ್ಯೆ ಮತ್ತೆ ತಲೆದೋರಿರುವುದು ಚಿಂತೆಗೆ ಕಾರಣವಾಗಿದೆ.

ಧೋನಿ ಹೊರಗುಳಿದಿರುವ ಹಿನ್ನೆಲೆಯಲ್ಲಿ, ಆರಂಭಿಕ ಪಂದ್ಯಗಳಲ್ಲಿ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು Sanju Samson ವಹಿಸುವ ಸಾಧ್ಯತೆ ಇದೆ. ನಾಯಕ Ruturaj Gaikwad ನೇತೃತ್ವದಲ್ಲಿ ತಂಡವು ತನ್ನ ಆರುನೇ ಐಪಿಎಲ್ ಪ್ರಶಸ್ತಿಗಾಗಿ ಪೈಪೋಟಿ ನಡೆಸಲು ಸಜ್ಜಾಗಿದೆ. ಇದೇ ವೇಳೆ, ಆಲ್‌ರೌಂಡರ್‌ಗಳಾದ Ravindra Jadeja ಮತ್ತು Sam Curran ತಂಡ ಬದಲಾವಣೆ ಸೇರಿದಂತೆ ಹಲವು ಬದಲಾವಣೆಗಳ ನಡುವೆ ಸೀಸ್‌ನ್ ಆರಂಭವಾಗುತ್ತಿದೆ.

ಇಂಗ್ಲೆಂಡ್‌ನ ಆಲ್‌ರೌಂಡರ್ Sam Curran ಕೂಡ ಗಾಯದ ಕಾರಣದಿಂದ ಟೂರ್ನಿಯಿಂದ ಹೊರಗುಳಿದಿರುವುದು ಸಿಎಸ್ ಕೆಗೆ ಮತ್ತೊಂದು ಹಿನ್ನಡೆಯಾಗಿದೆ. ಸೋಮವಾರ Barsapara Cricket Stadiumನಲ್ಲಿ ನಡೆಯುವ Rajasthan Royals ಮತ್ತು Chennai Super Kings ನಡುವಿನ ಪಂದ್ಯದಲ್ಲಿ, ಆಟಗಾರರ ಬದಲಾವಣೆಗಳು ಹಾಗೂ ಧೋನಿ ಗೈರುಹಾಜರಿ ಪಂದ್ಯಕ್ಕೆ ಹೆಚ್ಚುವರಿ ಕುತೂಹಲವನ್ನು ತಂದಿದೆ.

The post ಐಪಿಎಲ್ 2026 ಆರಂಭಕ್ಕೂ ಮುನ್ನ ಸಿಎಸ್ ಕೆಗೆ ಭಾರೀ ಹಿನ್ನಡೆ: ಕಾಲಿನ ಗಾಯದಿಂದ MS Dhoni ಮೊದಲ ಎರಡು ವಾರ ಔಟ್. appeared first on Good News 24x7.

]]>
ಚಿನ್ನದ ಬೆಲೆಯಲ್ಲಿ ಸತತ ಇಳಿಕೆ! https://www.goodnews24x7.com/gold-prices-continue-to-fallgold-prices-continue-to-fall/ Tue, 24 Mar 2026 12:07:27 +0000 https://www.goodnews24x7.com/?p=8964 ಚಿನ್ನದ ಬೆಲೆಯಲ್ಲಿ ಇಳಿಕೆಯಾದರೆ, ಬೆಳ್ಳಿ ಬೆಲೆಯಲ್ಲಿ ಐದು ರೂ ಹೆಚ್ಚಳ ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ 12,865 ರೂ ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ 14,035 ರೂ ಇದೆ. ಬೆಳ್ಳಿ ಬೆಲೆ ಬೆಂಗಳೂರು, ಮುಂಬೈ ಮೊದಲಾದೆಡೆ ಗ್ರಾಮ್​ಗೆ 235…

The post ಚಿನ್ನದ ಬೆಲೆಯಲ್ಲಿ ಸತತ ಇಳಿಕೆ! appeared first on Good News 24x7.

]]>

ಚಿನ್ನದ ಬೆಲೆಯಲ್ಲಿ ಇಳಿಕೆಯಾದರೆ, ಬೆಳ್ಳಿ ಬೆಲೆಯಲ್ಲಿ ಐದು ರೂ ಹೆಚ್ಚಳ ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ 12,865 ರೂ ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ 14,035 ರೂ ಇದೆ. ಬೆಳ್ಳಿ ಬೆಲೆ ಬೆಂಗಳೂರು, ಮುಂಬೈ ಮೊದಲಾದೆಡೆ ಗ್ರಾಮ್​ಗೆ 235 ರೂ ಇದೆ. ಚೆನ್ನೈ ಮೊದಲಾದೆಡೆ ಬೆಲೆ 240 ರೂ ಇದೆ.

ಚಿನ್ನದ ಬೆಲೆಯ ಸತತ ಇಳಿಕೆ ಮುಂದುವರಿಯುತ್ತಿದೆ. ಆಭರಣ ಪ್ರಿಯ ಮಹಿಳೆಯರ ಆನಂದಕ್ಕೆ ಪಾರವೇ ಇಲ್ಲದಂತಾಗಿದೆ. ಚಿನ್ನದ ಬೆಲೆ ಗಗನಕ್ಕೇರಿದ್ದಾಗ ಆತಂಕದಲ್ಲಿ ಚಿನ್ನ ಖರೀದಿ ಬಿಟ್ಟಿರದ ಮಹಿಳೆಯರು ಈಗ ಬಂಗಾರದ ಬೆಲೆ ಸತತವಾಗಿ ಇಳಿಯುತ್ತಿರುವುದರಿಂದ ಚಿನ್ನದಂಗಡಿಗಳಿಗೆ ಲಗ್ಗೆ ಇಡುತ್ತಿದ್ದಾರೆ. ಮಂಗಳವಾರ ಚಿನ್ನದ ಬೆಲೆ ಒಂದೇ ದಿನ 270 ರೂ ಕಡಿಮೆ ಆಗಿದೆ. ಬೆಂಗಳೂರಿನಲ್ಲಿ ಆಭರಣ ಚಿನ್ನದ ಬೆಲೆ 12,865 ರೂ ಮುಟ್ಟಿದೆ. ಇದೇ ವೇಳೆ, ಬೆಳ್ಳಿ ಬೆಲೆಯಲ್ಲಿ ಐದು ರೂ ಹೆಚ್ಚಳವಾಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,28,650 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,40,350 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 23,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,28,650 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 23,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 24,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಮಾರ್ಚ್ 24ಕ್ಕೆ)
24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,035 ರೂ
22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,865 ರೂ
18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,526 ರೂ
ಬೆಳ್ಳಿ ಬೆಲೆ 1 ಗ್ರಾಂಗೆ: 235 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,035 ರೂ
22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,865 ರೂ
ಬೆಳ್ಳಿ ಬೆಲೆ 1 ಗ್ರಾಂಗೆ: 235 ರೂ

 

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)
ಬೆಂಗಳೂರು: 12,865 ರೂ
ಚೆನ್ನೈ: 13,000 ರೂ
ಮುಂಬೈ: 12,865 ರೂ
ದೆಹಲಿ: 12,880 ರೂ
ಕೋಲ್ಕತಾ: 12,865 ರೂ
ಕೇರಳ: 12,865 ರೂ
ಅಹ್ಮದಾಬಾದ್: 12,870 ರೂ
ಜೈಪುರ್: 12,880 ರೂ
ಲಕ್ನೋ: 12,880 ರೂ
ಭುವನೇಶ್ವರ್: 12,865 ರೂ

The post ಚಿನ್ನದ ಬೆಲೆಯಲ್ಲಿ ಸತತ ಇಳಿಕೆ! appeared first on Good News 24x7.

]]>
ಇದೆಂಥಾ ಕಾಲ ಬಂತಪ್ಪಾ… ಹೋಟೆಲ್​ಗಳ ಬಿಲ್​ನಲ್ಲಿ ಗ್ಯಾಸ್ ಶುಲ್ಕ! https://www.goodnews24x7.com/this-is-a-long-time-ago-gas-charges-in-hotel-billsthis-is-a-long-time-ago-gas-charges-in-hotel-bills/ Fri, 13 Mar 2026 12:39:33 +0000 https://www.goodnews24x7.com/?p=8887   ಬೆಂಗಳೂರು ಮತ್ತು ಚೆನ್ನೈ ಹೋಟೆಲ್‌ಗಳಲ್ಲಿ ಈಗ ತಿಂಡಿ ಬಿಲ್‌ನೊಂದಿಗೆ ಹೊಸ ‘ಗ್ಯಾಸ್ ಶುಲ್ಕ’ ಸೇರಿಸಲಾಗುತ್ತಿರುವುದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ವಾಣಿಜ್ಯ ಗ್ಯಾಸ್ ಸಿಲಿಂಡರ್ ಪೂರೈಕೆ ಕೊರತೆ ಮತ್ತು ಹೆಚ್ಚಿದ ಬೇಡಿಕೆಯಿಂದಾಗಿ ಹೋಟೆಲ್ ಮಾಲೀಕರು ಈ ಹೊರೆಯನ್ನು ಗ್ರಾಹಕರ ಮೇಲೆ ಹಾಕುತ್ತಿದ್ದಾರೆ.…

The post ಇದೆಂಥಾ ಕಾಲ ಬಂತಪ್ಪಾ… ಹೋಟೆಲ್​ಗಳ ಬಿಲ್​ನಲ್ಲಿ ಗ್ಯಾಸ್ ಶುಲ್ಕ! appeared first on Good News 24x7.

]]>

 

ಬೆಂಗಳೂರು ಮತ್ತು ಚೆನ್ನೈ ಹೋಟೆಲ್‌ಗಳಲ್ಲಿ ಈಗ ತಿಂಡಿ ಬಿಲ್‌ನೊಂದಿಗೆ ಹೊಸ ‘ಗ್ಯಾಸ್ ಶುಲ್ಕ’ ಸೇರಿಸಲಾಗುತ್ತಿರುವುದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ವಾಣಿಜ್ಯ ಗ್ಯಾಸ್ ಸಿಲಿಂಡರ್ ಪೂರೈಕೆ ಕೊರತೆ ಮತ್ತು ಹೆಚ್ಚಿದ ಬೇಡಿಕೆಯಿಂದಾಗಿ ಹೋಟೆಲ್ ಮಾಲೀಕರು ಈ ಹೊರೆಯನ್ನು ಗ್ರಾಹಕರ ಮೇಲೆ ಹಾಕುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬಿಲ್‌ನ ಫೋಟೋಗಳು ವೈರಲ್ ಆಗಿದ್ದು, ಗ್ರಾಹಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನಾವು ಯಾವುದೇ ದುಬಾರಿ ಹೋಟೆಲ್‌ಗೆ ಹೋದಾಗ ಬಿಲ್​ನ ಕೊನೆಯಲ್ಲಿ ಜಿಎಸ್‌ಟಿ ಶುಲ್ಕವನ್ನೂ ಸೇರಿಸುವುದು ಸಾಮಾನ್ಯ. ಆದರೆ ಈಗ, ಅದರ ಜೊತೆ ಮತ್ತೊಂದು ಶುಲ್ಕವನ್ನು ಸೇರಿಸುತ್ತಿದ್ದಾರೆ. ದೇಶಾದ್ಯಂತ ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ಪೂರೈಕೆ ವ್ಯತ್ಯಯ, ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೋಟೆಲ್ ವ್ಯವಸ್ಥಾಪಕರು ಗ್ರಾಹಕರ ಮೇಲೆ ಆ ಹೊರೆಯನ್ನು ಹಾಕುತ್ತಿದ್ದಾರೆ. ಗ್ಯಾಸ್ ಪೂರೈಕೆ ಸಮಸ್ಯೆ ಹೆಸರಿನಲ್ಲಿ ತಿಂಡಿಯ ಬಿಲ್‌ಗೆ ಹೆಚ್ಚುವರಿ ‘ಗ್ಯಾಸ್ ಶುಲ್ಕ ’ ಸೇರಿಸುತ್ತಿದ್ದಾರೆ. ಚೆನ್ನೈ ಹಾಗೂ ಬೆಂಗಳೂರಿನಲ್ಲಿ ಈ ರೀತಿಯ ಘಟನೆ ಬೆಳಕಿಗೆ ಬಂದಿದೆ.

ಚೆನ್ನೈಯಲ್ಲಿ ತಿಂಡಿ ತಿನ್ನಲು ಹೋಟೆಲ್‌ಗೆ ತೆರಳಿದ ಗ್ರಾಹಕರೊಬ್ಬರು ಇಡ್ಲಿ ಮತ್ತು ವಡಾ ತಿಂದಿದ್ದಾರೆ. ನಂತರ ಬಿಲ್ ಕೇಳಿದಾಗ, ಹೋಟೆಲ್ ಮ್ಯಾನೇಜರ್ ಬಿಲ್‌ನಲ್ಲಿ ತಿಂಡಿ ಜೊತೆಗೆ ಗ್ಯಾಸ್ ಶುಲ್ಕವನ್ನು ಜಿಎಸ್‌ಟಿ ಜತೆ ಸೇರಿಸಿದ್ದಾರೆ. ‘ಗ್ಯಾಸ್ ಶುಲ್ಕ – 9.52 ರೂ.’ ಎಂದು ನಮೂದಾಗಿದ್ದುದನ್ನು ನೋಡಿ ಗ್ರಾಹಕ ಆಘಾತಕ್ಕೊಳಗಾಗಿದ್ದಾರೆ. ನಂತರ, ಅವರು ಬಿಲ್ ಪಾವತಿಸಿ ಅದರ ಫೋಟೋ ತೆಗೆದು ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ಪೋಸ್ಟ್ ಮಾಡಿದ್ದಾರೆ. ಜತೆಗೆ, ‘‘ಇದು ವಿಚಾರ. ಇಂಥಾ ದಿನ ಬರಬಹುದೆಂದು ನಾವು ಊಹಿಸಿದ್ದೆವಾ’’ ಎಂದು ಅವರು ಪ್ರಶ್ನಿಸಿದ್ದಾರೆ. ಈ ಫೋಟೊ ಸದ್ಯ ವೈರಲ್ ಆಗುತ್ತಿದೆ.

ಇದೀಗ ಹೋಟೆಲ್​​ಗಳ ಬಿಲ್​​​ನಲ್ಲಿ ಗ್ಯಾಸ್ ಶುಲ್ಕ ಸೇರಿಸಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ. ಇನ್ನು ಕೆಲವು ಹೋಟೆಲ್​​ಗಳ ಬಿಲ್​ಗಳಲ್ಲಿ ಗ್ಯಾಸ್ ಶುಲ್ಕ ಎಂದು ನಮೂದಿಸದಿದ್ದರೂ, ಎಲ್​​ಪಿಜಿ ಪೂರೈಕೆ ಸಮಸ್ಯೆಯ ನೆಪವೊಡ್ಡಿ ಗ್ರಾಹಕರಿಂದ ಹೆಚ್ಚು ದುಡ್ಡು ವಸೂಲಿ ಮಾಡಲಾಗುತ್ತಿದೆ.ಚೆನ್ನೈಯಲ್ಲಿ ಮಾತ್ರವಲ್ಲದೆ ದೇಶದಾದ್ಯಂತದ ಅನೇಕ ಪ್ರಮುಖ ನಗರಗಳಲ್ಲಿಯೂ ಈ ಪರಿಸ್ಥಿತಿ ಇದೆ. ಬೆಂಗಳೂರಿನಲ್ಲಿ ಕೂಡ ಇದೇ ರೀತಿಯ ಘಟನೆ ಬೆಳಕಿಗೆ ಬಂದಿದೆ. ನಗರದ ಹೋಟೆಲ್‌ಗೆ ಊಟಕ್ಕೆ ಹೋದ ಗ್ರಾಹಕನಿಗೆ ಗ್ಯಾಸ್ ಚಾರ್ಜ್ ಹೆಸರಿನಲ್ಲಿ ಹೆಚ್ಚುವರಿಯಾಗಿ 30 ರೂ. ಶುಲ್ಕ ವಿಧಿಸಲಾಗಿದೆ ಎಂದು ಆರೋಪಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಫೋಟೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

ಗ್ಯಾಸ್ ಕೊರತೆಯಿಂದಾಗಿ ಪಿಜಿಗಳಲ್ಲಿ ಆಹಾರವನ್ನು ನೀಡುತ್ತಿಲ್ಲ ಮತ್ತು ಇದರಿಂದಾಗಿ ಹೋಟೆಲ್​​ಗೆ ಹೋದರೆ ಅವರು ಜನರನ್ನು ಲೂಟಿ ಮಾಡುತ್ತಿದ್ದಾರೆ ಎಂದು ವ್ಯಕ್ತಿಯೊಬ್ಬರು ಎಕ್ಸ್​​​ನಲ್ಲಿ ಹೋಟೆಲ್ ಬಿಲ್ ಪೋಸ್ಟ್ ಮಾಡಿ, ನಗರ ಪೊಲೀಸರನ್ನು ಟ್ಯಾಗ್ ಮಾಡಿದ್ದಾರೆ.ಸದ್ಯ ಹೋಟೆಲ್​ ಬಿಲ್​ಗಳಲ್ಲಿ ಗ್ಯಾಸ್ ಶುಲ್ಕಗಳಿಗೆ ಸಂಬಂಧಿಸಿದ ಪೋಸ್ಟ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ. ಇವುಗಳನ್ನು ನೋಡಿದ ನೆಟಿಜನ್‌ಗಳು ಹೋಟೆಲ್ ಆಡಳಿತ ಮಂಡಳಿಗಳ ವರ್ತನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ಯಾಸ್ ಕೊರತೆ ಇದ್ದರೆ, ಅವರು ಮುಂಚಿತವಾಗಿ ಸ್ಟಾಕ್ ತರಬೇಕಿತ್ತು. ಅದು ಬಿಟ್ಟು ಆ ಹೊರೆಯನ್ನು ಗ್ರಾಹಕರ ಮೇಲೆ ಏಕೆ ಹಾಕಬೇಕು ಎಂದು ಅನೇಕರು ಪ್ರಶ್ನಿಸುತ್ತಿದ್ದಾರೆ. ಒಟ್ಟಿನಲ್ಲಿ ಇರಾನ್-ಇಸ್ರೇಲ್ ಯುದ್ಧ, ಮಧ್ಯಪ್ರಾಚ್ಯ ಸಂಘರ್ಷ ಭಾರತದ ಹೋಟೆಲ್​​ಗಳ ಬಿಲ್​ಗಳಲ್ಲಿ ‘ಗ್ಯಾಸ್ ಶುಲ್ಕ’ ಸೇರ್ಪಡೆಗೆ ಕಾರಣವಾಗಿದ್ದು ಸುಳ್ಳಲ್ಲ!

 

The post ಇದೆಂಥಾ ಕಾಲ ಬಂತಪ್ಪಾ… ಹೋಟೆಲ್​ಗಳ ಬಿಲ್​ನಲ್ಲಿ ಗ್ಯಾಸ್ ಶುಲ್ಕ! appeared first on Good News 24x7.

]]>
ಎಂ.ಎಸ್ ಧೋನಿ ಹೇಳಿಕೆಗೆ ಫ್ಯಾನ್ಸ್ ಶಾಕ್ ! ಇನ್ಮುಂದೆ IPL ಆಡುತ್ತೇನೆ ಎಂದು ಭಾವಿಸಬೇಡಿ.. ​ https://www.goodnews24x7.com/fans-shocked-by-ms-dhonis-statement-dont-think-he-will-play-ipl-from-now-on/ Thu, 07 Aug 2025 09:04:23 +0000 https://www.goodnews24x7.com/?p=5507 ಧೋನಿ ಮತ್ತೆ ಚೆನ್ನೈ ಸೂಪರ್ ಕಿಂಗ್ಸ್​ ತಂಡದ ನಾಯಕನಾಗಿದ್ದರು. ಆದ್ರೆ ಕ್ಯಾಪ್ಟನ್ಸಿಯಲ್ಲಿ ಧೋನಿ ಫೇಲ್ ಆದರು. ಇದರ ಬೆನ್ನಲ್ಲೇ ಅವರ ಐಪಿಎಲ್ ನಿವೃತ್ತಿ ಬಗ್ಗೆ ಮತ್ತಷ್ಟು ವದಂತಿಗಳು ಕೇಳಿ ಬಂದಿದ್ದವು. ಇದೀಗ ಈ ಬಗ್ಗೆ ಎಂ.ಎಸ್ ಧೋನಿ ಪ್ರತಿಕ್ರಿಯಿಸಿದ್ದಾರೆ. ಇಂಡಿಯನ್ ಪ್ರೀಮಿಯರ್…

The post ಎಂ.ಎಸ್ ಧೋನಿ ಹೇಳಿಕೆಗೆ ಫ್ಯಾನ್ಸ್ ಶಾಕ್ ! ಇನ್ಮುಂದೆ IPL ಆಡುತ್ತೇನೆ ಎಂದು ಭಾವಿಸಬೇಡಿ.. ​ appeared first on Good News 24x7.

]]>

ಧೋನಿ ಮತ್ತೆ ಚೆನ್ನೈ ಸೂಪರ್ ಕಿಂಗ್ಸ್​ ತಂಡದ ನಾಯಕನಾಗಿದ್ದರು. ಆದ್ರೆ ಕ್ಯಾಪ್ಟನ್ಸಿಯಲ್ಲಿ ಧೋನಿ ಫೇಲ್ ಆದರು. ಇದರ ಬೆನ್ನಲ್ಲೇ ಅವರ ಐಪಿಎಲ್ ನಿವೃತ್ತಿ ಬಗ್ಗೆ ಮತ್ತಷ್ಟು ವದಂತಿಗಳು ಕೇಳಿ ಬಂದಿದ್ದವು. ಇದೀಗ ಈ ಬಗ್ಗೆ ಎಂ.ಎಸ್ ಧೋನಿ ಪ್ರತಿಕ್ರಿಯಿಸಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್​)ನಲ್ಲಿ ಧೋನಿ ಆಡುತ್ತಾರೋ, ಇಲ್ವೋ ಎನ್ನುವುದು ಕಳೆದ ಎರಡ್ಮೂರು ಸೀಸನ್​ನಿಂದ ದೊಡ್ಡ ಚರ್ಚೆ ನಡೆಯುತ್ತಿದೆ.
ಎಂ.ಎಸ್ ಧೋನಿ ಅವರು ಮುಂದಿನ ಐಪಿಎಲ್ ಸೀಸನ್​ನಲ್ಲಿ ಮುಂದುವರೆಯುತ್ತಾರೋ, ಇಲ್ಲವೋ ಎನ್ನುವುದನ್ನು ಫ್ರಾಂಚೈಸಿ ಕೂಡ ಈ ಬಗ್ಗೆ ಸ್ಪಷ್ಟಪಡಿಸಿಲ್ಲ. ಧೋನಿ ಅವರು ಅಧಿಕೃತವಾಗಿ ಎಲ್ಲಿಯು ಹೇಳಿಲ್ಲ. ಇದನ್ನು ಈಗಲೂ ರಹಸ್ಯವಾಗಿ ಇಡಲಾಗಿದೆ. ಇತ್ತೀಚೆಗೆ ನಡೆದ ಕಾರ್ಯಕ್ರಮ ಒಂದರಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ತಂಡದ ನಾಯಕ ಎಂ.ಎಸ್ ಧೋನಿ ಅವರು ನಿವೃತ್ತಿ ಬಗ್ಗೆ ಮಾತನಾಡಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿರುವ ಎಂ.ಎಸ್ ಧೋನಿ, ಐಪಿಎಲ್ ನಿವೃತ್ತಿ ಘೋಷಣೆ ಮಾಡುವುದಕ್ಕೆ ನನಗೆ ಸಾಕಷ್ಟು ಸಮಯ ಇದೆ. ನೀವು ಯೆಲ್ಲೋ ಕಲರ್ ಜೆರ್ಸಿಯಲ್ಲೇ ಇನ್ನಷ್ಟು ಕಾಲ ಉಳಿಯಬೇಕು ಎನ್ನುವುದು ಅಭಿಮಾನಿಗಳ ಆಸೆ ಆಗಿದ್ರೇ ಅದೇ ಜೆರ್ಸಿಯಲ್ಲೇ ಇರುತ್ತೇನೆ. ಆದರೆ ಆಡುತ್ತೇನೋ, ಇಲ್ಲವೋ ಎನ್ನುವುದು ಬೇರೆ ವಿಷಯ ಎಂದು ಧೋನಿ ಹೇಳಿದ್ದಾರೆ.

ನಾನು ಯಾವಾಗಲೂ ಚೆನ್ನೈ ತಂಡದ ಜೊತೆ ಇರುತ್ತೇನೆ. ಅಭಿಮಾನಿಗಳಿಂದ ಹರ್ಷೋದ್ಗಾರಗಳು ಇನ್ನು 15, 20 ವರ್ಷಗಳ ಕಾಲ ಬಂದರೂ ನಾನು ಅಷ್ಟು ವರ್ಷ ಆಡುವುದಿಲ್ಲ. ಇದು ಅಭಿಮಾನಿಗಳಿಗು ಗೊತ್ತು ಎಂದು ಪ್ರಶ್ನೆವೊಂದಕ್ಕೆ ಎಂ.ಎಸ್ ಧೋನಿ ಅವರು ಉತ್ತರ ನೀಡಿದ್ದಾರೆ. ಸದ್ಯ ಚೆನ್ನೈ ತಂಡದ ನಾಯಕನಾಗಿ ಈಗಲೂ ಧೋನಿ ಅವರೇ ಇದ್ದಾರೆ.

The post ಎಂ.ಎಸ್ ಧೋನಿ ಹೇಳಿಕೆಗೆ ಫ್ಯಾನ್ಸ್ ಶಾಕ್ ! ಇನ್ಮುಂದೆ IPL ಆಡುತ್ತೇನೆ ಎಂದು ಭಾವಿಸಬೇಡಿ.. ​ appeared first on Good News 24x7.

]]>
ಸಸ್ಯಾಹಾರಿ ಕುಟುಂಬಗಳಿಗೆ ಮಾತ್ರ ಬಾಡಿಗೆ ನೀಡುವುದು ಎಂದ ಮನೆಯ ಮಾಲೀಕ…. https://www.goodnews24x7.com/%e0%b2%b8%e0%b2%b8%e0%b3%8d%e0%b2%af%e0%b2%be%e0%b2%b9%e0%b2%be%e0%b2%b0%e0%b2%bf-%e0%b2%95%e0%b3%81%e0%b2%9f%e0%b3%81%e0%b2%82%e0%b2%ac%e0%b2%97%e0%b2%b3%e0%b2%bf%e0%b2%97%e0%b3%86-%e0%b2%ae%e0%b2%be/ Sun, 29 Jun 2025 09:33:04 +0000 https://www.goodnews24x7.com/?p=4818 ಬಾಡಿಗೆ ಮನೆ ನೀಡಲು ಈ ಮಾಲೀಕರು ಒಂದಲ್ಲ ಒಂದು ನಿಯಮಗಳನ್ನು ಮಾಡುತ್ತಾರೆ. ಬ್ಯಾಚುಲರ್​​​​ಗೆ ಬಾಡಿಗೆ ಮನೆ ನೀಡಲ್ಲ, ಒಳ್ಳೆಯ ಕೆಲಸದಲ್ಲಿ ಇದ್ರೆ ಮಾತ್ರ ಬಾಡಿಗೆ ಮನೆ , ಹೀಗೆ ಅನೇಕ ಕಾರಣಗಳು ಹಾಗೂ ನಿಯಮ, ಇದೀಗ ಮತ್ತೊಂದು ನಿಯಮ ಇದಕ್ಕೆ ಸೇರಿಕೊಂಡಿದೆ,…

The post ಸಸ್ಯಾಹಾರಿ ಕುಟುಂಬಗಳಿಗೆ ಮಾತ್ರ ಬಾಡಿಗೆ ನೀಡುವುದು ಎಂದ ಮನೆಯ ಮಾಲೀಕ…. appeared first on Good News 24x7.

]]>

ಬಾಡಿಗೆ ಮನೆ ನೀಡಲು ಈ ಮಾಲೀಕರು ಒಂದಲ್ಲ ಒಂದು ನಿಯಮಗಳನ್ನು ಮಾಡುತ್ತಾರೆ. ಬ್ಯಾಚುಲರ್​​​​ಗೆ ಬಾಡಿಗೆ ಮನೆ ನೀಡಲ್ಲ, ಒಳ್ಳೆಯ ಕೆಲಸದಲ್ಲಿ ಇದ್ರೆ ಮಾತ್ರ ಬಾಡಿಗೆ ಮನೆ , ಹೀಗೆ ಅನೇಕ ಕಾರಣಗಳು ಹಾಗೂ ನಿಯಮ, ಇದೀಗ ಮತ್ತೊಂದು ನಿಯಮ ಇದಕ್ಕೆ ಸೇರಿಕೊಂಡಿದೆ, ಮಾಂಸಹಾರಿಗಳಿಗೆ ಬಾಡಿಗೆ ಮನೆ ಇಲ್ಲ, ಸಸ್ಯಹಾರಿಗಳಿಗೆ ಮಾತ್ರ ಬಾಡಿಗೆ ನೀಡಲಾಗುವುದು ಎಂಬ ಸಂದೇಶ ವೈರಲ್​ ಆಗಿದೆ. ಚೆನ್ನೈನಲ್ಲಿ ಮನೆಗಳು ಬಾಡಿಗೆಗೆ ಸಿಗುವುದೇ ಕಷ್ಟ ಅದರಲ್ಲಿ ಈ ನಿಯಮ ಎಂದು ವ್ಯಕ್ತಿಯೊಬ್ಬರು ಎಕ್ಸ್​​ನಲ್ಲಿ ಮನೆ ಮಾಲೀಕರಿಂದ ಬಂದ ಸಂದೇಶದ ಸ್ಕ್ರೀನ್‌ಶಾಟ್‌ ಹಂಚಿಕೊಂಡಿದ್ದಾರೆ.

ಬೆಂಗಳೂರು, ಚೆನ್ನೈನಂತಹ ಮಹಾನಗರಗಳಲ್ಲಿ ಬಾಡಿಗೆಗೆ ಮನೆ ಸಿಗುವುದೇ ಕಷ್ಟ, ಅದರಲ್ಲೂ ಬ್ಯಾಚುಲರ್​​ಗೆ ಬಾಡಿಗೆ ಮನೆ ನೀಡಲು ಹಿಂದು-ಮುಂದು ನೋಡುತ್ತಾರೆ. ಆದರೆ ಇದೀಗ ಮತ್ತೊಂದು ವಿಚಾರಕ್ಕೆ ಬಾಡಿಗೆ ನೀಡುವವರು ಕಿರಿಕ್ ಮಾಡುತ್ತಿದ್ದಾರೆ ಎಂದು ಒಂದು ಪೋಸ್ಟ್​​​ ವೈರಲ್​​ ಆಗುತ್ತಿದೆ. ಹೌದು ಮಾಂಸಹಾರಿಗಳಿಗೆ ಬಾಡಿಗೆ ಮನೆ ನೀಡುತ್ತಿಲ್ಲ. ಇದರಿಂದ ಅದೆಷ್ಟು ಮಾಂಸಹಾರಿಗಳಿಗೆ ಬಾಡಿಗೆ ಮನೆ ಸಿಗದೇ ಕಷ್ಟಪಡುತ್ತಿದ್ದಾರೆ. 90%ದಷ್ಟು ಮನೆ ಬಾಡಿಗೆ ನೀಡುವವರು ಈ ವಿಚಾರವೊಂದು ಕೇಳಿ ಕೇಳುತ್ತಾರೆ ಎಂದು ಈ ವೈರಲ್​​ ಪೋಸ್ಟ್​​​ನಲ್ಲಿ ಹಂಚಿಕೊಂಡಿದ್ದಾರೆ. ಎಕ್ಸ್​​ ಖಾತೆಯಲ್ಲಿ ಚೆನ್ನೈ ನಿವಾಸಿ ಪ್ರಶಾಂತ್ ರಂಗಸ್ವಾಮಿ ಎಂಬುವವರು, ಮನೆ ಮಾಲೀಕರಿಂದ ಬಂದ ಸಂದೇಶದ ಸ್ಕ್ರೀನ್‌ಶಾಟ್‌ನ್ನು ಎಕ್ಸ್​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್​​​ ಹೀಗಿದೆ ನೋಡಿ: “ಕ್ಷಮಿಸಿ ಸರ್. ಸಸ್ಯಾಹಾರಿ ಕುಟುಂಬಗಳನ್ನು ಮಾತ್ರ ನೋಡುತ್ತಿದ್ದೇನೆ” ಎಂದು ಮನೆ ಮಾಲೀಕರ ಸಂದೇಶ ಹಾಕಿದ್ದಾರೆ. ಮಾಂಸಹಾರಿಗಳು ಚೆನ್ನೈನಲ್ಲಿ ಬಾಡಿಗೆಗೆ ಫ್ಲಾಟ್‌ಗಳನ್ನು ಹುಡುಕಲು ತುಂಬಾ ಕಷ್ಟ ಎಂದು ಬರೆದುಕೊಂಡಿದ್ದಾರೆ.

ಈ ಪೋಸ್ಟ್​​​ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ದೊಡ್ಡ, ದೊಡ್ಡ ನಗರಗಳಲ್ಲಿ ಆಹಾರ ಆಧಾರಿತವಾಗಿ ತಾರತಮ್ಯ ಮಾಡುವ ಬಗ್ಗೆ ಅನೇಕರು ಬೇಸರ ವ್ಯಕ್ತಪಡಿಸಿದ್ದಾರೆ. ದೇಶದ ಅನೇಕ ಕಡೆಯಲ್ಲಿ ಇಂತಹ ಘಟನೆಗಳು ನಡೆದಿದೆ. ಇದೀಗ ಈ ಒಂದು ವಿಚಾರ ವೈರಲ್​ ಆಗಿದೆ. ಇಂತಹ ತಾರತಮ್ಯವನ್ನು ಮೊದಲು ನಿಲ್ಲಿಸಬೇಕು ಎಂದು ಸೋಶಿಯಲ್​​ ಮೀಡಿಯಾದಲ್ಲಿ ಒತ್ತಾಯ ಮಾಡಿದ್ದಾರೆ. ಕೆಲವು ಬಳಕೆದಾರರು ಈ ಪದ್ಧತಿಯನ್ನು ಖಂಡನೆ ಮಾಡಿದ್ದಾರೆ. ಜಾತಿ ಅಥವಾ ಧರ್ಮದ ಆಧಾರದ ಮೇಲೆ ಬಾಡಿಗೆದಾರರನ್ನು ತಿರಸ್ಕರಿಸುವ ಜನರು ಕಡಿಮೆ. ಇನ್ನು ಇದರಲ್ಲಿ ನೀವು ಮುಸ್ಲಿಮರಾಗಿದ್ದರೆ, ಕ್ಷಮಿಸಿ, ನಾವು ಮುಸ್ಲಿಮರಿಗೆ ಬಾಡಿಗೆಗೆ ನೀಡುವುದಿಲ್ಲ ಎಂಬ ಘಟನೆಗಳು ಕೂಡ ನಡೆದಿದೆ ಎಂದು ಕಾಮೆಂಟ್​​ ಮಾಡಿದ್ದಾರೆ.

The post ಸಸ್ಯಾಹಾರಿ ಕುಟುಂಬಗಳಿಗೆ ಮಾತ್ರ ಬಾಡಿಗೆ ನೀಡುವುದು ಎಂದ ಮನೆಯ ಮಾಲೀಕ…. appeared first on Good News 24x7.

]]>
ಇಂದು ಭಾರತ VS ಇಂಗ್ಲೆಂಡ್ ವಿರುದ್ಧ ಎರಡನೇ​ ಟಿ20 ಪಂದ್ಯ https://www.goodnews24x7.com/india-vs-england-2nd-t20i-match-today/ Sat, 25 Jan 2025 03:51:19 +0000 https://www.goodnews24x7.com/?p=1918 ಭಾರತ ತಂಡ ಇಂಗ್ಲೆಂಡ್ ವಿರುದ್ಧ ಎರಡನೇ ಟಿ-20 ಪಂದ್ಯವನ್ನು ಆಡಲಿದೆ, ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿದೆ. ಭಾರತ ಎದುರು ಮೊದಲ ಟಿ-20 ಮ್ಯಾಚ್‌ನಲ್ಲಿ ಹೀನಾಯ ಸೋಲುಂಡು ಆಘಾತ ಎದುರಿಸಿರುವ ಇಂಗ್ಲೆಂಡ್ ಇದೀಗ ಕಮ್‌ಬ್ಯಾಕ್‌ ಮಾಡುವ ತವಕದಲ್ಲಿದೆ. ಭಾರತ ತಂಡ :…

The post ಇಂದು ಭಾರತ VS ಇಂಗ್ಲೆಂಡ್ ವಿರುದ್ಧ ಎರಡನೇ​ ಟಿ20 ಪಂದ್ಯ appeared first on Good News 24x7.

]]>

ಭಾರತ ತಂಡ ಇಂಗ್ಲೆಂಡ್ ವಿರುದ್ಧ ಎರಡನೇ ಟಿ-20 ಪಂದ್ಯವನ್ನು ಆಡಲಿದೆ, ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿದೆ. ಭಾರತ ಎದುರು ಮೊದಲ ಟಿ-20 ಮ್ಯಾಚ್‌ನಲ್ಲಿ ಹೀನಾಯ ಸೋಲುಂಡು ಆಘಾತ ಎದುರಿಸಿರುವ ಇಂಗ್ಲೆಂಡ್ ಇದೀಗ ಕಮ್‌ಬ್ಯಾಕ್‌ ಮಾಡುವ ತವಕದಲ್ಲಿದೆ.

ಭಾರತ ತಂಡ : ಸಂಜು ಸ್ಯಾಮ್ಸನ್(W), ಅಭಿಷೇಕ್ ಶರ್ಮಾ, ಸೂರ್ಯಕುಮಾರ್ ಯಾದವ್(C), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ನಿತೀಶ್ ಕುಮಾರ್ ರೆಡ್ಡಿ, ಅಕ್ಸರ್ ಪಟೇಲ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಮೊಹಮ್ಮದ್ ಶಮಿ, ವಾಷಿಂಗ್ಟನ್ ಸುಂದರ್, ಧ್ರುವ ಜುರೆಲ್, ಹರ್ಷಿತ್ ರಾಣಾ

ಇಂಗ್ಲೆಂಡ್ ತಂಡ : ಬೆನ್ ಡಕೆಟ್, ಫಿಲಿಪ್ ಸಾಲ್ಟ್(W), ಜೋಸ್ ಬಟ್ಲರ್(C), ಹ್ಯಾರಿ ಬ್ರೂಕ್, ಲಿಯಾಮ್ ಲಿವಿಂಗ್‌ಸ್ಟೋನ್, ಜಾಕೋಬ್ ಬೆಥೆಲ್, ಜೇಮೀ ಓವರ್ಟನ್, ಬ್ರೈಡನ್ ಕಾರ್ಸ್, ಜೋಫ್ರಾ ಆರ್ಚರ್, ಆದಿಲ್ ರಶೀದ್, ಮಾರ್ಕ್ ವುಡ್, ಸಾಕಿಬ್ ಮಹಮೂದ್, ಗಸ್ ಅಟ್ಕಿನ್ಸನ್, ಜೇಮೀ ಸ್ಮಿತ್, ರೆಹಾನ್ ಅಹ್ಮದ್

The post ಇಂದು ಭಾರತ VS ಇಂಗ್ಲೆಂಡ್ ವಿರುದ್ಧ ಎರಡನೇ​ ಟಿ20 ಪಂದ್ಯ appeared first on Good News 24x7.

]]>
ಫಿಟ್ ಅಂಡ್ ಫೈನ್ ಆಗಿದ್ದ ತಮಿಳು ನಟ ವಿಶಾಲ್ಗೆ ನಿಜಕ್ಕೂ ಆಗಿದ್ದೇನು ಗೊತ್ತಾ? https://www.goodnews24x7.com/%e0%b2%ab%e0%b2%bf%e0%b2%9f%e0%b3%8d-%e0%b2%85%e0%b2%82%e0%b2%a1%e0%b3%8d-%e0%b2%ab%e0%b3%88%e0%b2%a8%e0%b3%8d-%e0%b2%86%e0%b2%97%e0%b2%bf%e0%b2%a6%e0%b3%8d%e0%b2%a6-%e0%b2%a4%e0%b2%ae%e0%b2%bf/ Wed, 08 Jan 2025 06:15:27 +0000 https://www.goodnews24x7.com/?p=1615 ತಮಿಳು ನಟ ವಿಶಾಲ್ ಅವರು ‘ಮದ ಗಜ ರಾಜ’ ಚಿತ್ರದ ಪ್ರೀ-ರಿಲೀಸ್ ಈವೆಂಟ್ನಲ್ಲಿ ಕೈ ನಡುಗುತ್ತಿದ್ದ ದೃಶ್ಯ ವೈರಲ್ ಆಗಿದೆ. ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ, ವಿಶಾಲ್ ಅವರಿಗೆ ಜ್ವರ ಇದ್ದ ಕಾರಣ ನಡುಕ ಉಂಟಾಗಿತ್ತೆಂದು ಸ್ಪಷ್ಟನೆ ಸಿಕ್ಕಿದೆ. ಅವರ ಡೆಡಿಕೇಷನ್ಗೆ…

The post ಫಿಟ್ ಅಂಡ್ ಫೈನ್ ಆಗಿದ್ದ ತಮಿಳು ನಟ ವಿಶಾಲ್ಗೆ ನಿಜಕ್ಕೂ ಆಗಿದ್ದೇನು ಗೊತ್ತಾ? appeared first on Good News 24x7.

]]>

ತಮಿಳು ನಟ ವಿಶಾಲ್ ಅವರು ‘ಮದ ಗಜ ರಾಜ’ ಚಿತ್ರದ ಪ್ರೀ-ರಿಲೀಸ್ ಈವೆಂಟ್ನಲ್ಲಿ ಕೈ ನಡುಗುತ್ತಿದ್ದ ದೃಶ್ಯ ವೈರಲ್ ಆಗಿದೆ. ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ, ವಿಶಾಲ್ ಅವರಿಗೆ ಜ್ವರ ಇದ್ದ ಕಾರಣ ನಡುಕ ಉಂಟಾಗಿತ್ತೆಂದು ಸ್ಪಷ್ಟನೆ ಸಿಕ್ಕಿದೆ. ಅವರ ಡೆಡಿಕೇಷನ್ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಮಿಳು ನಟ ವಿಶಾಲ್ ಅವರು ಸಾಕಷ್ಟು ಹೆಸರು ಮಾಡಿದ್ದಾರೆ. ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಅವರು ಮಾಸ್ ಆಗಿ ಗಮನ ಸೆಳೆಯುತ್ತಾರೆ. ಯಾವುದೇ ವಿಚಾರ ಇದ್ದರೂ ನೇರ ಮಾತುಗಳಲ್ಲಿ ಹೇಳುತ್ತಾರೆ. ಯಾರೇ ಪ್ರಶ್ನೆ ಮಾಡಿದರೂ ಅವರಿಗೆ ಉತ್ತರ ನೀಡುತ್ತಾರೆ. ಇಂಥ ವಿಶಾಲ್ ಅವರು ಈಗ ಸಖತ್ ಡಲ್ ಆಗಿದ್ದಾರೆ. ಇತ್ತೀಚೆಗೆ ಅವರ ನಟನೆಯ ‘ಮದ ಗಜ ರಾಜ’ ಸಿನಿಮಾದ ಪ್ರೀ ರಿಲೀಸ್ ಈವೆಂಟ್ಗೆ ಆಗಮಿಸಿದ್ದರು. ಆಗ ಅವರ ಕೈ ನಡುಗಿದೆ. ಇದು ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.


ಚೆನ್ನೈನಲ್ಲಿ ಇತ್ತೀಚೆಗೆ ‘ಮದ ಗಜ ರಾಜ’ ತಂಡದವರು ಅದ್ದೂರಿಯಾಗಿ ಪ್ರೀ-ರಿಲೀಸ್ ಈವೆಂಟ್ ಮಾಡಿದರು. ಈ ಚಿತ್ರಕ್ಕೆ ವಿಶಾಲ್ ಹೀರೋ. ಹೀಗಾಗಿ, ಅವರು ಕೂಡ ವೇದಿಕೆ ಏರಿದ್ದರು. ಅವರು ಮಾತನಾಡುವಾಗ ಕೈ ನಡುಗುತ್ತಿತ್ತು. ಮಾತುಗಳನ್ನಾಡಲು ಕಷ್ಟಪಟ್ಟರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಶಾಲ್ಗೆ ಏನಾಯಿತು ಎಂದು ಫ್ಯಾನ್ಸ್ ಆತಂಕ ಹೊರಹಾಕಿದ್ದಾರೆ.

ವಿಶಾಲ್ ಅವರು ಮಾತನಾಡುವಾಗ ಮೈಕ್ನ ಗಟ್ಟಿ ಹಿಡಿದು ಮಾತನಾಡುತ್ತಿದ್ದರು. ಅವರ ಮಾತುಗಳು ನೇರವಾಗಿ ಇರುತ್ತಿದ್ದವು. ಆದರೆ, ಮೊದಲಿದ್ದ ವಿಶಾಲ್ ಈಗ ಕಾಣೆ ಆಗಿದ್ದಾರೆ. ಈಗ ಕೇಳಿ ಬರುತ್ತಿರುವ ಸ್ಪಷ್ಟನೆ ಏನೆಂದರೆ ಅವರಿಗೆ ಆ ಸಂದರ್ಭದಲ್ಲಿ ತೀವ್ರ ಜ್ವರ ಇತ್ತು. ಆದಗ್ಯೂ ಅವರು ವೇದಿಕೆ ಏರಿ ಮಾತನಾಡಿದ್ದರು. ಜ್ವರ ಇದ್ದ ಕಾರಣದಿಂದಲೇ ಅವರಿಗೆ ನಡುಕ ಶುರುವಾಗಿತ್ತು ಎನ್ನಲಾಗಿದೆ.
ಸದ್ಯ ವಿಶಾಲ್ ಬಗ್ಗೆ ಎಲ್ಲ ಕಡೆಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಜ್ವರದ ಮಧ್ಯೆಯೂ ಅವರು ಕಮಿಟ್ಮೆಂಟ್ ಮರೆಯಲಿಲ್ಲ ಎಂದು ಅನೇಕರು ಹೇಳಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ನಡೆದಿವೆ. ‘ವಿಶಾಲ್ ಡೆಡಿಕೇಷನ್. ಅವರು ಜ್ವರದ ಮಧ್ಯೆಯೂ ಸಿನಿಮಾ ಪ್ರಮೋಟ್ ಮಾಡಿದ್ದಾರೆ’ ಎಂದಿದ್ದಾರೆ ಅಭಿಮಾನಿಗಳು.
‘ಮದ ಗಜ ರಾಜ’ ಸಿನಿಮಾದಲ್ಲಿ ಅಂಜಲಿ, ಸೋನು ಸೂದ್, ವರಲಕ್ಷ್ಮೀ ಶರತ್ಕುಮಾರ್ ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾನ ಸುಂದರ್ ಸಿ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ 2013ರಲ್ಲೇ ರಿಲೀಸ್ ಆಗಬೇಕಿತ್ತು. ಆದರೆ, 12 ವರ್ಷಗಳ ಬಳಿಕ ಸಿನಿಮಾ ರಿಲೀಸ್ ಆಗುತ್ತಿದೆ. ಜನವರಿ 12ರಂದು ಸಿನಿಮಾ ಬಿಡುಗಡೆ ಆಗುತ್ತಿದೆ.

The post ಫಿಟ್ ಅಂಡ್ ಫೈನ್ ಆಗಿದ್ದ ತಮಿಳು ನಟ ವಿಶಾಲ್ಗೆ ನಿಜಕ್ಕೂ ಆಗಿದ್ದೇನು ಗೊತ್ತಾ? appeared first on Good News 24x7.

]]>