Gambhir Archives - Good News 24x7 https://www.goodnews24x7.com/tag/gambhir/ Kannada Tue, 26 Aug 2025 07:45:33 +0000 en-US hourly 1 https://wordpress.org/?v=6.9.4 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Gambhir Archives - Good News 24x7 https://www.goodnews24x7.com/tag/gambhir/ 32 32 ಭಾರತೀಯ ಕ್ರಿಕೆಟ್​ನಲ್ಲೀಗ ಗಂಭೀರ್​ ‘ಪವರ್​ಫುಲ್​’.ಕನ್ನಡಿಗ ಪ್ರಸಿದ್ಧ್​ ಕೃಷ್ಣಗೆ ಆಯ್ಕೆ ಸಮಿತಿ ಅನ್ಯಾಯ.! https://www.goodnews24x7.com/gambhir-is-now-powerful-in-indian-cricket-selection-committee-unfair-to-kannadigas-prasid-krishna/ Tue, 26 Aug 2025 07:45:33 +0000 https://www.goodnews24x7.com/?p=6743   ಟೀಮ್​ ಸೆಲೆಕ್ಷನ್​ ವಿಚಾರದಲ್ಲಂತೂ ಕೋಚ್ ಗಂಭೀರ್​​ ಹೇಳಿದ್ದ ಮಾತೇ ಫೈನಲ್​​. ಏಷ್ಯಾಕಪ್​ಗೆ ಟೀಮ್​ ಅನೌನ್ಸ್​ಮೆಂಟ್​ನೊಂದಿಗೆ ಗಂಭೀರ್​ ರಾಜಕೀಯ ಯಾವ ಮಟ್ಟಕ್ಕಿದೆ ಅನ್ನೋದು ಮತ್ತೊಮ್ಮೆ ಜಗತ್ತಿಗೆ ಗೊತ್ತಾಗಿದೆ. ಗೌತಮ್​ ಗಂಭೀರ್​ ಟೀಮ್​ ಇಂಡಿಯಾದ ಹೆಡ್​ ಕೋಚ್​ ಆದಾಗಿನಿಂದ ರಾಜಕೀಯದ ಚರ್ಚೆ ಜೋರಾಗಿ…

The post ಭಾರತೀಯ ಕ್ರಿಕೆಟ್​ನಲ್ಲೀಗ ಗಂಭೀರ್​ ‘ಪವರ್​ಫುಲ್​’.ಕನ್ನಡಿಗ ಪ್ರಸಿದ್ಧ್​ ಕೃಷ್ಣಗೆ ಆಯ್ಕೆ ಸಮಿತಿ ಅನ್ಯಾಯ.! appeared first on Good News 24x7.

]]>

 

ಟೀಮ್​ ಸೆಲೆಕ್ಷನ್​ ವಿಚಾರದಲ್ಲಂತೂ ಕೋಚ್ ಗಂಭೀರ್​​ ಹೇಳಿದ್ದ ಮಾತೇ ಫೈನಲ್​​. ಏಷ್ಯಾಕಪ್​ಗೆ ಟೀಮ್​ ಅನೌನ್ಸ್​ಮೆಂಟ್​ನೊಂದಿಗೆ ಗಂಭೀರ್​ ರಾಜಕೀಯ ಯಾವ ಮಟ್ಟಕ್ಕಿದೆ ಅನ್ನೋದು ಮತ್ತೊಮ್ಮೆ ಜಗತ್ತಿಗೆ ಗೊತ್ತಾಗಿದೆ.

ಗೌತಮ್​ ಗಂಭೀರ್​ ಟೀಮ್​ ಇಂಡಿಯಾದ ಹೆಡ್​ ಕೋಚ್​ ಆದಾಗಿನಿಂದ ರಾಜಕೀಯದ ಚರ್ಚೆ ಜೋರಾಗಿ ನಡೆದಿದೆ. ಗಂಭೀರ್​ಗೆ ಬಾಸ್​​ಗಳು ಫುಲ್​​ ಪವರ್​ ನೀಡಿರೋದು ಓಪನ್​ ಸೀಕ್ರೆಟ್​. ಸದ್ಯ ಟೀಮ್​ ಇಂಡಿಯಾದಲ್ಲಿ ಪವರ್​​ ಫುಲ್ ಪರ್ಸನ್​ ಗಂಭೀರ್ ಆಡಿದ್ದೇ ಆಟ. ಟೀಮ್​ ಸೆಲೆಕ್ಷನ್​ ವಿಚಾರದಲ್ಲಂತೂ ಗಂಭೀರ್​​ ಹೇಳಿದೆ ಮಾತೇ ಫೈನಲ್​​. ಏಷ್ಯಾಕಪ್​ಗೆ ಟೀಮ್​ ಅನೌನ್ಸ್​ಮೆಂಟ್​ನೊಂದಿಗೆ ಗಂಭೀರ್​ ರಾಜಕೀಯ ಯಾವ ಮಟ್ಟಕ್ಕಿದೆ ಅನ್ನೋದು ಮತ್ತೊಮ್ಮೆ ಜಗತ್ತಿಗೆ ಗೊತ್ತಾಗಿದೆ.

 

ಏಷ್ಯಾಕಪ್​ ಟೀಮ್​ನಲ್ಲಿ ಕನ್ನಡಿಗ ಪ್ರಸಿದ್ಧ ಕೃಷ್ಣಗೆ ಸ್ಥಾನ ಸಿಗುತ್ತೆ ಅನ್ನೋದು ಟಾಕ್​ ಜೋರಾಗಿತ್ತು. ಕಳೆದ ಐಪಿಎಲ್​ನ ಪರ್ಪಲ್​ ಕ್ಯಾಪ್​ ಹೋಲ್ಡರ್​ ಆಗಿ ಪ್ರಸಿದ್ಧ್​ ಕೃಷ್ಣ ಹೊರಹೊಮ್ಮಿದ್ರು. 15 ಪಂದ್ಯಗಳಲ್ಲಿ 25 ವಿಕೆಟ್​ ಬೇಟೆಯಾಡಿದ್ರು. ಹೀಗಾಗಿ ಪ್ರಸಿದ್ಧ್​​ಗೆ ಏಷ್ಯಾಕಪ್​​ ಟಿಕೆಟ್​ ಫಿಕ್ಸ್​ ಎನ್ನಲಾಗಿತ್ತು. ಸೆಲೆಕ್ಷನ್​​ ಮೀಟಿಂಗ್​​ ಪ್ರಸಿದ್ಧ ಆಯ್ಕೆ ಜೋರು ಚರ್ಚೆಯೂ ನಡೆದಿತ್ತು. ಆದ್ರೆ, ಫೈನಲ್​ ಟೀಮ್​ ಅನೌನ್ಸ್​ ಆದಾಗ ಆಗಿದ್ದು ನಿರಾಸೆ.

ಐಪಿಎಲ್​ನ ಪರ್ಪಲ್​ ಕ್ಯಾಪ್​ ಹೋಲ್ಡರ್​​ಗೆ ಕೊಕ್​ ಕೊಟ್ಟ ಸೆಲೆಕ್ಷನ್​ ಕಮಿಟಿ 3ನೇ ವೇಗಿಯಾಗಿ ಮಣೆ ಹಾಕಿರೋದು ಗಂಭೀರ್​​ ಶಿಷ್ಯ ಹರ್ಷಿತ್​ ರಾಣಾಗೆ. ಐಪಿಎಲ್​​ 2025ನಲ್ಲಿ 14 ಪಂದ್ಯಗಳನ್ನಾಡಿದ ಈತ ಕೇವಲ 15 ವಿಕೆಟ್​ ಕಬಳಿಸಿದ್ದ. ಇಷ್ಟೆ ಅಲ್ಲ, 10.18ರ ಎಕಾನಮಿಯಲ್ಲಿ ರನ್​ ಬಿಟ್ಟು ಕೊಟ್ಟು ದುಬಾರಿಯಾಗಿದ್ದ. ಇನ್ನು, ಟೀಮ್​ ಇಂಡಿಯಾ ಪರ ಆಡಿರೋ ಏಕೈಕ ಟಿ20ಯಲ್ಲೂ 9ರ ಎಕಾನಮಿಯಲ್ಲಿ ರನ್​ಬಿಟ್ಟು ಕೊಟ್ಟಿದ್ದಾನೆ. ಇಂತಾ ವೇಗಿಗೆ ಸೆಲೆಕ್ಷನ್​ ಕಮಿಟಿ ಮಣೆ ಹಾಕಿದೆ. ರಾಣಾ ಸ್ಥಾನ ನೀಡೋ ಭರದಲ್ಲಿ 2024 ಟಿ20 ವಿಶ್ವಕಪ್​ ಗೆದ್ದ ತಂಡದ ಸದಸ್ಯ ಅನುಭವಿ ಮೊಹಮ್ಮದ್​ ಸಿರಾಜ್​ಗೂ ಕೊಕ್​ ನೀಡಲಾಗಿದೆ.

ಗಂಭೀರ್​ ಕೋಚ್​ ಆದಾಗಿನಿಂದಲೂ ಹರ್ಷಿತ್​ ರಾಣಾ ಪರ ಜೋರಾಗೆ ಬ್ಯಾಟಿಂಗ್​ ನಡೆಸಿದ್ದಾರೆ. ಕಳೆದ ವರ್ಷದ ಅಂತ್ಯದಲ್ಲಿ ನಡೆದ ಬಾರ್ಡರ್​​-ಗವಾಸ್ಕರ್​ ಟೆಸ್ಟ್​ ಸರಣಿಯ ತಂಡದಲ್ಲಿ ಕೇವಲ 13 ಫಸ್ಟ್​ ಕ್ಲಾಸ್​ ಪಂದ್ಯಗಳನ್ನಾಡಿದ್ದ ಅನಾನುಭವಿ ರಾಣಾಗೆ ಸ್ಥಾನ ನೀಡಲಾಗಿತ್ತು. ಇಷ್ಟೇ ಅಲ್ಲ, ಪ್ಲೇಯಿಂಗ್​ ಇಲೆವೆನ್​ನಲ್ಲಿ ಚಾನ್ಸ್​ ನೀಡಿ ಆಡಿಸಲಾಯ್ತು. ರೆಡ್​ಬಾಲ್​ ಕ್ರಿಕೆಟ್​​ನಲ್ಲಿ ಅತಿ ಕಡಿಮೆ ಅನುಭವ ಹೊಂದಿದ್ರೂ ರಾಣಾನ ಸೆಲೆಕ್ಟ್​​ ಮಾಡಿದ್ದು, ಡೆಬ್ಯೂ ಮಾಡಿಸಿದ್ದು ಇದೆರಡರ ಹಿಂದಿದ್ದಿದ್ದು ಗಂಭೀರ್​.

ಆರ್ಷ್​​ದೀಪ್​ ಸಿಂಗ್​ ಕಳೆದ 2 ವರ್ಷದಿಂದ ಟೀಮ್​ ಇಂಡಿಯಾದ ಭಾಗವಾಗಿದ್ದಾರೆ. ಆದ್ರೆ, ಈ ಆರ್ಷ್​​​ದೀಪ್​ಗೂ ಮುನ್ನ ಏಕದಿನ ಫಾರ್ಮೆಟ್​​ಗೆ ಡೆಬ್ಯೂ ಮಾಡಿದ್ದು ಹರ್ಷಿತ್​ ರಾಣಾ. ಅದೂ ಮಹತ್ವದ ಚಾಂಪಿಯನ್ಸ್​ ಟ್ರೋಫಿ ಟೂರ್ನಿಯಲ್ಲಿ. ಕಳೆದ ತಿಂಗಳು ನಡೆದ ಇಂಗ್ಲೆಂಡ್​ ಪ್ರವಾಸದ ವೇಳೆ ಹರ್ಷಿತ್​​ ರಾಣಾನ ತಂಡದಲ್ಲಿ ಉಳಿಸಿಕೊಳ್ಳೋಕೆ ಗೌತಮ್​ ಗಂಭೀರ್​​ ಶತ ಪ್ರಯತ್ನ ಪಟ್ಟಿದ್ರು. ಅಂದುಕೊಂಡಂತೆ ಒಂದು ಪಂದ್ಯದ ವೇಳೆ ತಂಡದಲ್ಲಿ ಉಳಿಸಿಕೊಂಡಿದ್ರು ಕೂಡ. ಆದ್ರೆ, ತೀವ್ರ ಟೀಕೆ ಎದುರಾದ ಬಳಿಕ ತಂಡದಿಂದ ರಿಲೀಸ್​ ಮಾಡಲಾಗಿತ್ತು.

ಗೌತಮ್​ ಗಂಭೀರ್​ ಭಾರತೀಯ ಕ್ರಿಕೆಟ್​​ನಲ್ಲಿ ಎಷ್ಟು ಪವರ್​ಫುಲ್​ ಆಗಿದ್ದಾರೆ ಅನ್ನೋದಕ್ಕೆ ಹರ್ಷಿತ್​ ರಾಣಾ ಕಥೆ ಬೆಸ್ಟ್​ ಎಕ್ಸಾಂಪಲ್​ ಆಗಿದೆ. 6 ತಿಂಗಳ ಅವಧಿಯಲ್ಲಿ ಶಿಷ್ಯನನ್ನ ಆಲ್​​ಫಾರ್ಮೆಟ್​ ಪ್ಲೇಯರ್​ ಮಾಡಿದ್ದಾರೆ. ಆದ್ರೆ, ಗುರು ಗಂಭೀರ್​ ಬ್ಯಾಟಿಂಗ್​ ಮಾಡಿದ್ದಕ್ಕೆ ತಕ್ಕಂತೆ ಹರ್ಷಿತ್​ ರಾಣಾ ಪರ್ಫಾಮ್​ ಮಾಡಿಲ್ಲ. ಏಷ್ಯಾಕಪ್​ನಲ್ಲಾದ್ರೂ ನ್ಯಾಯ ಒದಗಿಸ್ತಾರಾ?.

 

The post ಭಾರತೀಯ ಕ್ರಿಕೆಟ್​ನಲ್ಲೀಗ ಗಂಭೀರ್​ ‘ಪವರ್​ಫುಲ್​’.ಕನ್ನಡಿಗ ಪ್ರಸಿದ್ಧ್​ ಕೃಷ್ಣಗೆ ಆಯ್ಕೆ ಸಮಿತಿ ಅನ್ಯಾಯ.! appeared first on Good News 24x7.

]]>
ಶೀಘ್ರದಲ್ಲೇ ದಾದಾಗೆ ಭಾರತದ ಮುಖ್ಯ ಕೋಚ್ ಹುದ್ದೆ? ದ್ರಾವಿಡ್, ಗಂಭೀರ್ ನಂತರ ಇದೀಗ ಸೌರವ್ ಗಂಗೂಲಿ ಸರದಿ https://www.goodnews24x7.com/dada-to-be-indias-head-coach-soon-after-dravid-gambhir-now-its-sourav-gangulys-turn/ Tue, 26 Aug 2025 05:47:34 +0000 https://www.goodnews24x7.com/?p=6731 ಟೀಮ್ ಇಂಡಿಯಾದ ದಂತಕಥೆಯ ಬ್ಯಾಟ್ಸ್‌ಮನ್ ಸೌರವ್ ಗಂಗೂಲಿ ಅವರನ್ನು SA20 ತಂಡದ ಪ್ರಿಟೋರಿಯಾ ಕ್ಯಾಪಿಟಲ್ಸ್‌ನ ಮುಖ್ಯ ಕೋಚ್ ಆಗಿ ನೇಮಿಸಲಾಯಿತು. ಈ ಕಾರಣದಿಂದಾಗಿ, ಅವರು ಟೀಮ್ ಇಂಡಿಯಾದ ಕೋಚ್ ಆಗುವ ವದಂತಿಗಳು ಸಹ ಹೊರಹೊಮ್ಮಲು ಪ್ರಾರಂಭಿಸಿವೆ. ಟೀಮ್ ಇಂಡಿಯಾದ ಮಾಜಿ ನಾಯಕ…

The post ಶೀಘ್ರದಲ್ಲೇ ದಾದಾಗೆ ಭಾರತದ ಮುಖ್ಯ ಕೋಚ್ ಹುದ್ದೆ? ದ್ರಾವಿಡ್, ಗಂಭೀರ್ ನಂತರ ಇದೀಗ ಸೌರವ್ ಗಂಗೂಲಿ ಸರದಿ appeared first on Good News 24x7.

]]>

ಟೀಮ್ ಇಂಡಿಯಾದ ದಂತಕಥೆಯ ಬ್ಯಾಟ್ಸ್‌ಮನ್ ಸೌರವ್ ಗಂಗೂಲಿ ಅವರನ್ನು SA20 ತಂಡದ ಪ್ರಿಟೋರಿಯಾ ಕ್ಯಾಪಿಟಲ್ಸ್‌ನ ಮುಖ್ಯ ಕೋಚ್ ಆಗಿ ನೇಮಿಸಲಾಯಿತು. ಈ ಕಾರಣದಿಂದಾಗಿ, ಅವರು ಟೀಮ್ ಇಂಡಿಯಾದ ಕೋಚ್ ಆಗುವ ವದಂತಿಗಳು ಸಹ ಹೊರಹೊಮ್ಮಲು ಪ್ರಾರಂಭಿಸಿವೆ. ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಇತ್ತೀಚೆಗೆ ಕ್ರಿಕೆಟ್ ಲೋಕದಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಗಂಗೂಲಿ ಈಗ SA20 ನ ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡದ ಹೊಸ ಮುಖ್ಯ ತರಬೇತುದಾರರಾಗಿದ್ದಾರೆ. ಗಂಗೂಲಿ ಒಬ್ಬ ಆಟಗಾರ, ನಾಯಕ, ಪ್ರಸಾರಕ, CAB ಅಧ್ಯಕ್ಷ, ದೆಹಲಿ ಕ್ಯಾಪಿಟಲ್ಸ್ ನಿರ್ದೇಶಕ ಮತ್ತು ಬಿಸಿಸಿಐ ಅಧ್ಯಕ್ಷರಾಗಿ ಭಾರತೀಯ ಕ್ರಿಕೆಟ್‌ಗಾಗಿ ನಿರಂತರವಾಗಿ ಕೆಲಸ ಮಾಡಿದ್ದಾರೆ. ಗಂಗೂಲಿ ಅವರ ಅದ್ಭುತ ವೃತ್ತಿಜೀವನವನ್ನು ನೋಡಿದರೆ, ಅವರು ಖಂಡಿತವಾಗಿಯೂ ಒಂದು ಹಂತದಲ್ಲಿ ಕೋಚಿಂಗ್‌ಗೆ ಸೇರುತ್ತಾರೆ ಎಂಬುದು ಖಚಿತವಾಗಿತ್ತು.

ತಮ್ಮ ಕೋಚಿಂಗ್ ವೃತ್ತಿಜೀವನವನ್ನು ಪ್ರಾರಂಭಿಸಿದ ಸೌರವ್ ಗಂಗೂಲಿ
ಈಗ ಸೌರವ್ ಗಂಗೂಲಿ ತರಬೇತಿ ನೀಡಲು ಪ್ರಾರಂಭಿಸಿರುವುದರಿಂದ, ಇದು ಕೇವಲ ಆರಂಭವಷ್ಟೇ ಮತ್ತು ಭವಿಷ್ಯದಲ್ಲಿ ದೊಡ್ಡ ವಿಷಯಗಳು ಸಂಭವಿಸಲಿವೆ ಎಂದು ತೋರುತ್ತದೆ. ರವಿಶಾಸ್ತ್ರಿ, ರಾಹುಲ್ ದ್ರಾವಿಡ್, ಗೌತಮ್ ಗಂಭೀರ್ ನಂತರ, ಈಗ ಸೌರವ್ ಗಂಗೂಲಿ ಅವರ ಹೆಸರನ್ನು ಸಹ ಈ ಪಟ್ಟಿಯಲ್ಲಿ ಸೇರಿಸಬಹುದು. ಗಂಗೂಲಿ ಯಾವಾಗಲೂ ಪ್ರತಿಭೆಯನ್ನು ಗುರುತಿಸುವಲ್ಲಿ ಪರಿಣಿತರಾಗಿದ್ದಾರೆ. ಅವರು ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಜಹೀರ್ ಖಾನ್ ಮತ್ತು ಹರ್ಭಜನ್ ಸಿಂಗ್ ಅವರಂತಹ ಆಟಗಾರರನ್ನು ಪ್ರೋತ್ಸಾಹಿಸಿ ಬೆಳೆಯಲು ಬಿಟ್ಟವರು. ಇವರಿಗಿಂತ ಮೊದಲು ಯಾರೂ ಭಾರತೀಯ ಕ್ರಿಕೆಟ್‌ಗೆ ಇಷ್ಟೊಂದು ಪಂದ್ಯ ವಿಜೇತರನ್ನು ನೀಡಿರಲಿಲ್ಲ.

ದಾದಾ ಅವರ ತರಬೇತಿ ಅನುಭವ : ಕೋಚಿಂಗ್ ಒಂದು ಕಠಿಣ ಕೆಲಸ, ಮಾನಸಿಕಕ್ಕಿಂತ ಹೆಚ್ಚಿನ ದೈಹಿಕ ಶ್ರಮ ಬೇಕಾಗುತ್ತದೆ. ರವಿಶಾಸ್ತ್ರಿ ಅವರ ಅಧಿಕಾರಾವಧಿಯ ಅಂತ್ಯದ ವೇಳೆಗೆ ಅವರು ಬೇಸರಗೊಂಡಿದ್ದರು ಮತ್ತು ರಾಹುಲ್ ದ್ರಾವಿಡ್ ಕೂಡ ಎರಡು ವರ್ಷಗಳ ದೀರ್ಘ ಅವಧಿಗಳ ನಂತರ ಕುಟುಂಬಕ್ಕೆ ಆದ್ಯತೆ ನೀಡಲು ನಿರ್ಧರಿಸಿದರು. ಗಂಗೂಲಿಗೂ ಈ ಸವಾಲು ಸುಲಭವಲ್ಲ. 53 ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಚೇತರಿಸಿಕೊಂಡಿರುವ ಅವರು ಎಂದಿಗಿಂತಲೂ ಹೆಚ್ಚು ಫಿಟ್ ಆಗಿ ಕಾಣುತ್ತಾರೆಯಾದರೂ ಅದು ಸುಲಭವಲ್ಲ. ಎಲ್ಲಕ್ಕಿಂತ ಹೆಚ್ಚಾಗಿ, ಗಂಗೂಲಿ ಸದಾ ತಮ್ಮನ್ನು ತಾವು ಕಾರ್ಯನಿರತವಾಗಿರಿಸಿಕೊಳ್ಳಲು ಮತ್ತು ಆಟಕ್ಕೆ ಏನನ್ನಾದರೂ ಮರಳಿ ನೀಡಲು ಬಯಸುತ್ತಾರೆ. ಗಂಭೀರ್ ಅವರಂತೆಯೇ, ಅವರು ಈಗಾಗಲೇ ಐಪಿಎಲ್ ಕೋಚಿಂಗ್ ವ್ಯವಸ್ಥೆಯ ಭಾಗವಾಗಿದ್ದಾರೆ. ಬಹುಶಃ ಭಾರತದ ಮುಖ್ಯ ಕೋಚ್ ಆಗುವ ಅವರ ಹಾದಿ ದೂರವಿಲ್ಲ ಎನ್ನಬಹುದು.
ಗಂಗೂಲಿಯವರ ನಿಲುವು ಎಷ್ಟು ದೊಡ್ಡದೆಂದರೆ ಅವರನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಕಳೆದ 14 ವರ್ಷಗಳಿಂದ ಭಾರತೀಯ ತರಬೇತುದಾರರು ಪ್ರಾಬಲ್ಯ ಸಾಧಿಸಿದ್ದಾರೆ, ಆದ್ದರಿಂದ ಬಿಸಿಸಿಐ ವಿದೇಶಿ ಅಭ್ಯರ್ಥಿಗೆ ಅವಕಾಶ ನೀಡುತ್ತದೆಯೇ ಅಥವಾ ಇಲ್ಲವೇ ಎಂದು ಹೇಳುವುದು ಕಷ್ಟ.

ಗೌತಮ್ ಗಂಭೀರ್ ಅಧಿಕಾರಾವಧಿಯಲ್ಲಿ ಮಿಶ್ರ ಪ್ರತಿಕ್ರಿಯೆ, ಭಾರತದ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಅವರ ಅಧಿಕಾರಾವಧಿ ಇಲ್ಲಿಯವರೆಗೆ ಮಿಶ್ರ ಪ್ರತಿಕ್ರಿಯೆಗಳನ್ನು ನೀಡಿದೆ. ಇಂಗ್ಲೆಂಡ್ ಪ್ರವಾಸದವರೆಗೆ ಅವರು ಯಶಸ್ಸಿಗಿಂತ ವೈಫಲ್ಯಗಳೇ ಹೆಚ್ಚಾಗಿದ್ದವು, ಚಾಂಪಿಯನ್ಸ್ ಟ್ರೋಫಿ ಗೆಲುವು ಮಾತ್ರ ದೊಡ್ಡ ಗೆಲುವು ಆಗಿದೆ. ಗಂಭೀರ್ ಅವರ ಒಪ್ಪಂದವು 2027 ರವರೆಗೆ ಇದೆ. ಆದರೆ ಕೆಲ ವಿಮರ್ಶಕರು ಈಗಾಗಲೇ ಅವರನ್ನು ಪದಚ್ಯುತಗೊಳಿಸಬೇಕೆಂದು ಒತ್ತಾಯಿಸುತ್ತಿದ್ದಾರೆ, ಇದು ಭಾರತದ ಮುಂದಿನ ಮುಖ್ಯ ಕೋಚ್ ಬಗ್ಗೆ ಊಹಾಪೋಹಗಳಿಗೆ ಕಾರಣವಾಗಿದೆ. ಗಂಗೂಲಿ ಅವರ ಹೆಸರು ಸದ್ಯ ಈ ಪಟ್ಟಿಯಲ್ಲಿ ಕೇಳಿಬರುತ್ತಿದೆ.

The post ಶೀಘ್ರದಲ್ಲೇ ದಾದಾಗೆ ಭಾರತದ ಮುಖ್ಯ ಕೋಚ್ ಹುದ್ದೆ? ದ್ರಾವಿಡ್, ಗಂಭೀರ್ ನಂತರ ಇದೀಗ ಸೌರವ್ ಗಂಗೂಲಿ ಸರದಿ appeared first on Good News 24x7.

]]>