Hyderabad Archives - Good News 24x7 https://www.goodnews24x7.com/tag/hyderabad/ Kannada Mon, 20 Apr 2026 09:16:24 +0000 en-US hourly 1 https://wordpress.org/?v=7.0 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Hyderabad Archives - Good News 24x7 https://www.goodnews24x7.com/tag/hyderabad/ 32 32 ಫ್ಲೈ ೯೧ ವಿಮಾನದಲ್ಲಿ ಆತಂಕದ ಕ್ಷಣ: ಪ್ರಯಾಣಿಕರ ಕಣ್ಣೀರು, ಸಿಬ್ಬಂದಿಯ ಉದ್ಧಟತನ! https://www.goodnews24x7.com/phlai-91-vimanadalli-ata%e1%b9%85kada-k%e1%b9%a3a%e1%b9%87a-praya%e1%b9%87ikara-ka%e1%b9%87%e1%b9%87iru-sibbandiya-uddha%e1%b9%adatana-crewbengalurupassengershyderabadairportfamilieshubbal/ Mon, 20 Apr 2026 09:16:24 +0000 https://www.goodnews24x7.com/?p=9314 ಬೆಂಗಳೂರು: ಹೈದರಾಬಾದ್‌ನಿಂದ ಹುಬ್ಬಳ್ಳಿಗೆ ಹೊರಟಿದ್ದ ಫ್ಲೈ ೯೧ (Fly91) ವಿಮಾನವೊಂದು ಭೀಕರ ಟರ್ಬುಲೆನ್ಸ್‌ಗೆ (ಗಾಳಿಯ ಒತ್ತಡದ ಏರುಪೇರು) ಸಿಲುಕಿ ಪ್ರಯಾಣಿಕರು ಸಾವು-ಬದುಕಿನ ನಡುವೆ ಹೋರಾಟ ನಡೆಸಿದ ಘಟನೆ ನಿನ್ನೆ ನಡೆದಿದೆ. ಸಂಕಷ್ಟದ ಸಮಯದಲ್ಲಿ ಪೈಲಟ್ ಸಮಯಪ್ರಜ್ಞೆ ಮೆರೆದರೆ, ವಿಮಾನ ನಿಲ್ದಾಣದ ಸಿಬ್ಬಂದಿಯ…

The post ಫ್ಲೈ ೯೧ ವಿಮಾನದಲ್ಲಿ ಆತಂಕದ ಕ್ಷಣ: ಪ್ರಯಾಣಿಕರ ಕಣ್ಣೀರು, ಸಿಬ್ಬಂದಿಯ ಉದ್ಧಟತನ! appeared first on Good News 24x7.

]]>

ಬೆಂಗಳೂರು: ಹೈದರಾಬಾದ್‌ನಿಂದ ಹುಬ್ಬಳ್ಳಿಗೆ ಹೊರಟಿದ್ದ ಫ್ಲೈ ೯೧ (Fly91) ವಿಮಾನವೊಂದು ಭೀಕರ ಟರ್ಬುಲೆನ್ಸ್‌ಗೆ (ಗಾಳಿಯ ಒತ್ತಡದ ಏರುಪೇರು) ಸಿಲುಕಿ ಪ್ರಯಾಣಿಕರು ಸಾವು-ಬದುಕಿನ ನಡುವೆ ಹೋರಾಟ ನಡೆಸಿದ ಘಟನೆ ನಿನ್ನೆ ನಡೆದಿದೆ. ಸಂಕಷ್ಟದ ಸಮಯದಲ್ಲಿ ಪೈಲಟ್ ಸಮಯಪ್ರಜ್ಞೆ ಮೆರೆದರೆ, ವಿಮಾನ ನಿಲ್ದಾಣದ ಸಿಬ್ಬಂದಿಯ ಅಮಾನವೀಯ ವರ್ತನೆ ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಆ ೧೫ ನಿಮಿಷಗಳ ಕಾಲ ಮೃತ್ಯು ಕಣ್ಣೆದುರಿಗಿತ್ತು:
ನಿನ್ನೆ ಮಧ್ಯಾಹ್ನ ೩ ಗಂಟೆಗೆ ಹೊರಟ ವಿಮಾನವು ಹುಬ್ಬಳ್ಳಿ ಸಮೀಪಿಸುತ್ತಿದ್ದಂತೆ ಸುಮಾರು ೧೫ ನಿಮಿಷಗಳ ಕಾಲ ತೀವ್ರವಾಗಿ ಅಲುಗಾಡತೊಡಗಿತು. ಟರ್ಬುಲೆನ್ಸ್ ಎಷ್ಟಿತ್ತೆಂದರೆ, ಪ್ರಯಾಣಿಕರು ಬದುಕುವ ಭರವಸೆಯನ್ನೇ ಕೈಬಿಟ್ಟಿದ್ದರು. ಕೆಲವರು ತಮ್ಮ ಕುಟುಂಬದವರಿಗೆ ‘ಕೊನೆಯ ಸಂದೇಶ’ ಕಳುಹಿಸಲು ವಿಡಿಯೋ ರೆಕಾರ್ಡ್ ಮಾಡತೊಡಗಿದರೆ, ಇನ್ನು ಕೆಲವರು ಕಿರುಚಾಡುತ್ತಿದ್ದರು. ಅಲುಗಾಟದ ತೀವ್ರತೆಗೆ ಮಗುವೊಂದು ಕೈಯಿಂದ ಕೆಳಗೆ ಬಿದ್ದ ಘಟನೆಯೂ ನಡೆಯಿತು. ಈ ವೇಳೆ ಗಗನಸಖಿಯರೂ ಕೂಡ ಭಯದಿಂದ ಕಣ್ಣೀರಿಟ್ಟಿದ್ದು ಪರಿಸ್ಥಿತಿಯ ಗಂಭೀರತೆಗೆ ಸಾಕ್ಷಿಯಾಗಿತ್ತು.

೪ ಗಂಟೆಗಳ ಕಾಲ ಆಕಾಶದಲ್ಲೇ ಅಲೆದಾಟ:
ಹುಬ್ಬಳ್ಳಿಯಲ್ಲಿ ಇಳಿಯಲು ಸಾಧ್ಯವಾಗದ ಕಾರಣ ಪೈಲಟ್ ವಿಮಾನವನ್ನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದತ್ತ ತಿರುಗಿಸಿದರು. ಸುಮಾರು ನಾಲ್ಕು ಗಂಟೆಗಳ ಕಾಲ ಆಕಾಶದಲ್ಲೇ ಸುತ್ತಾಡಿದ ವಿಮಾನವು ಕೊನೆಗೆ ರಾತ್ರಿ ೭ ಗಂಟೆಯ ಸುಮಾರಿಗೆ ಬೆಂಗಳೂರಿನಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಯಿತು. ಜೀವ ಉಳಿಸಿದ ಪೈಲಟ್‌ಗೆ ಪ್ರಯಾಣಿಕರು ಚಪ್ಪಾಳೆ ತಟ್ಟಿ ಕೃತಜ್ಞತೆ ಸಲ್ಲಿಸಿದರು.

ಫ್ಲೈ ೯೧ ಸಿಬ್ಬಂದಿಯ ಅಸಭ್ಯ ವರ್ತನೆ:
ವಿಮಾನ ಸುರಕ್ಷಿತವಾಗಿ ಇಳಿದ ನಂತರ ಪ್ರಯಾಣಿಕರಿಗೆ ಸಮಾಧಾನ ಹೇಳಬೇಕಿದ್ದ ಫ್ಲೈ ೯೧ ಏರ್‌ಲೈನ್ಸ್‌ನ ನೆಲದ ಸಿಬ್ಬಂದಿ (Ground Staff) ಅತ್ಯಂತ ಉದ್ಧಟತನದಿಂದ ವರ್ತಿಸಿದ್ದಾರೆ. “ಇದೇ ವಿಮಾನ ಮತ್ತೆ ಹುಬ್ಬಳ್ಳಿಗೆ ಹೋಗುತ್ತದೆ, ಹತ್ತುವವರು ಹತ್ತಿ ಇಲ್ಲದಿದ್ದರೆ ಇಳಿದು ಹೋಗಿ” ಎಂದು ಅಹಂಕಾರದ ಧಾಟಿಯಲ್ಲಿ ಮಾತನಾಡಿದ್ದಾರೆ. ಸಾವಿನ ದವಡೆಯಿಂದ ಬಂದಿದ್ದ ಪ್ರಯಾಣಿಕರಿಗೆ ಕನಿಷ್ಠ ಸೌಜನ್ಯವನ್ನೂ ತೋರಿಸದ ಸಿಬ್ಬಂದಿಯ ನಡೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. “ಮಾನವೀಯತೆ ಇಲ್ಲದ ಇಂತಹ ಏರ್‌ಲೈನ್ಸ್‌ನಲ್ಲಿ ನಾವು ಮತ್ತೆ ಹೇಗೆ ಧೈರ್ಯವಾಗಿ ಪ್ರಯಾಣಿಸಲಿ?” ಎಂದು ಪ್ರಯಾಣಿಕರು ಪ್ರಶ್ನಿಸಿದ್ದಾರೆ.

The post ಫ್ಲೈ ೯೧ ವಿಮಾನದಲ್ಲಿ ಆತಂಕದ ಕ್ಷಣ: ಪ್ರಯಾಣಿಕರ ಕಣ್ಣೀರು, ಸಿಬ್ಬಂದಿಯ ಉದ್ಧಟತನ! appeared first on Good News 24x7.

]]>
ಪ್ರತಿಬಂಧಿತ ಪ್ರೇಮದ ವಿಕೃತ ರೂಪ: ಎಚ್‌ಐವಿ ಪಾಸಿಟಿವ್ ರಕ್ತ ಇಂಜೆಕ್ಟ್ ಮಾಡಿದ್ದಕ್ಕೆ ಮನನೊಂದ ಯುವತಿ ಆ*ಹತ್ಯೆ! https://www.goodnews24x7.com/a-twisted-form-of-inhibited-love-a-young-woman-commits-suicide-after-being-injected-with-hiv-positive-blood/ Sat, 11 Apr 2026 09:33:29 +0000 https://www.goodnews24x7.com/?p=9200 ಹೈದರಾಬಾದ್: ಮದುವೆಯಾಗಲು ನಿರಾಕರಿಸಿದ ಕಾರಣಕ್ಕೆ ವ್ಯಕ್ತಿಯೊಬ್ಬ ಯುವತಿಗೆ ಎಚ್‌ಐವಿ ಸೋಂಕಿತ ರಕ್ತವನ್ನು ಇಂಜೆಕ್ಟ್ ಮಾಡಿದ್ದ ವಿಕೃತ ಘಟನೆ ಈಗ ದುರಂತ ಅಂತ್ಯ ಕಂಡಿದೆ. ಆರೋಪಿ ಮನೋಹರ್ ಎಸಗಿದ ಈ ಪೈಶಾಚಿಕ ಕೃತ್ಯದಿಂದ ತೀವ್ರ ಮಾನಸಿಕ ಖಿನ್ನತೆಗೊಳಗಾಗಿದ್ದ 24 ವರ್ಷದ ಯುವತಿ, ಏಪ್ರಿಲ್…

The post ಪ್ರತಿಬಂಧಿತ ಪ್ರೇಮದ ವಿಕೃತ ರೂಪ: ಎಚ್‌ಐವಿ ಪಾಸಿಟಿವ್ ರಕ್ತ ಇಂಜೆಕ್ಟ್ ಮಾಡಿದ್ದಕ್ಕೆ ಮನನೊಂದ ಯುವತಿ ಆ*ಹತ್ಯೆ! appeared first on Good News 24x7.

]]>

ಹೈದರಾಬಾದ್: ಮದುವೆಯಾಗಲು ನಿರಾಕರಿಸಿದ ಕಾರಣಕ್ಕೆ ವ್ಯಕ್ತಿಯೊಬ್ಬ ಯುವತಿಗೆ ಎಚ್‌ಐವಿ ಸೋಂಕಿತ ರಕ್ತವನ್ನು ಇಂಜೆಕ್ಟ್ ಮಾಡಿದ್ದ ವಿಕೃತ ಘಟನೆ ಈಗ ದುರಂತ ಅಂತ್ಯ ಕಂಡಿದೆ. ಆರೋಪಿ ಮನೋಹರ್ ಎಸಗಿದ ಈ ಪೈಶಾಚಿಕ ಕೃತ್ಯದಿಂದ ತೀವ್ರ ಮಾನಸಿಕ ಖಿನ್ನತೆಗೊಳಗಾಗಿದ್ದ 24 ವರ್ಷದ ಯುವತಿ, ಏಪ್ರಿಲ್ 10ರಂದು ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆ*ಹತ್ಯೆಗೆ ಶರಣಾಗಿದ್ದಾಳೆ.

ಏನಿದು ಘಟನೆ?:
ಆರೋಪಿ ಮನೋಹರ್ ಮತ್ತು ಸಂತ್ರಸ್ತೆ ಸಂಬಂಧಿಕರಾಗಿದ್ದು, ಇವರಿಬ್ಬರಿಗೆ ಮದುವೆ ಮಾಡಲು ಕುಟುಂಬಸ್ಥರು ಈ ಹಿಂದೆ ನಿರ್ಧರಿಸಿದ್ದರು. ಆದರೆ, ಆರೋಪಿಯ ಪೋಷಕರು ಎಚ್‌ಐವಿ ಪೀಡಿತರಾಗಿದ್ದ ಕಾರಣ, ಮುನ್ನೆಚ್ಚರಿಕಾ ಕ್ರಮವಾಗಿ ಯುವತಿಯ ಪೋಷಕರು ಕಳೆದ ಸೆಪ್ಟೆಂಬರ್‌ನಲ್ಲಿ ಮನೋಹರ್‌ನನ್ನು ಪರೀಕ್ಷೆಗೆ ಒಳಪಡಿಸಿದ್ದರು. ಪರೀಕ್ಷೆಯಲ್ಲಿ ಅವನಿಗೂ ಎಚ್‌ಐವಿ ಇರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಯುವತಿಯು ಮದುವೆಯನ್ನು ನಿರಾಕರಿಸಿದ್ದಳು. ಇದರಿಂದ ಕ್ರೋಧಗೊಂಡ ಮನೋಹರ್, ಮಾರ್ಚ್ 11ರಂದು ಯುವತಿಯ ಮನೆಗೆ ಬಲವಂತವಾಗಿ ನುಗ್ಗಿ ತನಗಿದ್ದ ಎಚ್‌ಐವಿ ಸೋಂಕಿತ ರಕ್ತವನ್ನು ಆಕೆಗೆ ಇಂಜೆಕ್ಟ್ ಮಾಡಿದ್ದ.

ಮಾನಸಿಕ ನೋವಿಗೆ ಬಲಿಯಾದ ಯುವತಿ:
ಘಟನೆಯ ನಂತರ ಪೊಲೀಸರು ಮನೋಹರ್‌ನನ್ನು ಬಂಧಿಸಿ ಜೈಲಿಗಟ್ಟಿದ್ದರು. ಆದರೆ, ರಕ್ತದ ಮೂಲಕ ಸೋಂಕು ಹರಡಿರುವ ಭೀತಿ ಮತ್ತು ನಡೆದ ಘಟನೆಯಿಂದ ಯುವತಿ ತೀವ್ರ ಮಾನಸಿಕ ಒತ್ತಡಕ್ಕೆ ಸಿಲುಕಿದ್ದಳು. ಇದೇ ಖಿನ್ನತೆಯಿಂದಾಗಿ ಆಕೆ ಏಪ್ರಿಲ್ 10ರಂದು ಆತ್ಮಹತ್ಯೆಯ ಹಾದಿ ತುಳಿದಿದ್ದಾಳೆ ಎಂದು ಪೊಲೀಸರು ಶಂಕಿಸಿದ್ದಾರೆ. ಪ್ರಸ್ತುತ ಪ್ರಕರಣದ ಎಲ್ಲಾ ಆಯಾಮಗಳನ್ನು ಪರಿಶೀಲಿಸುತ್ತಿರುವುದಾಗಿ ಪೋಚಾರಂ ಐಟಿ ಕಾರಿಡಾರ್ ಪೊಲೀಸರು ತಿಳಿಸಿದ್ದಾರೆ.

ಆಸ್ಪತ್ರೆಗಳ ನಿರ್ಲಕ್ಷ್ಯದ ಇತಿಹಾಸ:
ಈ ಘಟನೆ ದೇಶಾದ್ಯಂತ ಚರ್ಚೆಗೆ ಗ್ರಾಸವಾಗುತ್ತಿರುವ ಬೆನ್ನಲ್ಲೇ, ಕಳೆದ ಡಿಸೆಂಬರ್‌ನಲ್ಲಿ ಮಧ್ಯಪ್ರದೇಶದ ಸತ್ನಾದಲ್ಲಿ ನಡೆದ ಘಟನೆಯೂ ನೆನಪಿಗೆ ಬರುತ್ತಿದೆ. ಅಲ್ಲಿ ಥಲಸೀಮಿಯಾ ಚಿಕಿತ್ಸೆ ಪಡೆಯುತ್ತಿದ್ದ ಐವರು ಮಕ್ಕಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಅಶುದ್ಧ ರಕ್ತ ವರ್ಗಾವಣೆ ಮಾಡಿದ ಪರಿಣಾಮವಾಗಿ ಎಚ್‌ಐವಿ ಸೋಂಕು ತಗುಲಿತ್ತು. ಇಂತಹ ಘಟನೆಗಳು ರಕ್ತ ತಪಾಸಣಾ ಪ್ರೋಟೋಕಾಲ್‌ಗಳ ವೈಫಲ್ಯ ಮತ್ತು ಸಮಾಜದಲ್ಲಿನ ವಿಕೃತ ಮನಸ್ಥಿತಿಯ ಭಯಾನಕ ಮುಖವನ್ನು ಅನಾವರಣಗೊಳಿಸುತ್ತಿವೆ.

The post ಪ್ರತಿಬಂಧಿತ ಪ್ರೇಮದ ವಿಕೃತ ರೂಪ: ಎಚ್‌ಐವಿ ಪಾಸಿಟಿವ್ ರಕ್ತ ಇಂಜೆಕ್ಟ್ ಮಾಡಿದ್ದಕ್ಕೆ ಮನನೊಂದ ಯುವತಿ ಆ*ಹತ್ಯೆ! appeared first on Good News 24x7.

]]>
ಐಪಿಎಲ್ 2026 ಆರಂಭಕ್ಕೂ ಮುನ್ನ ಸಿಎಸ್ ಕೆಗೆ ಭಾರೀ ಹಿನ್ನಡೆ: ಕಾಲಿನ ಗಾಯದಿಂದ MS Dhoni ಮೊದಲ ಎರಡು ವಾರ ಔಟ್. https://www.goodnews24x7.com/csk-suffers-major-setback-ahead-of-ipl-2026-ms-dhoni-out-for-first-two-weeks-due-to-leg-injury/ Sat, 28 Mar 2026 10:11:32 +0000 https://www.goodnews24x7.com/?p=9001 ಐಪಿಎಲ್ 2026ರ 19ನೇ ಆವೃತ್ತಿ ಆರಂಭವಾಗುವ ಮುನ್ನವೇ Chennai Super Kings ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ತಂಡದ ಮಾಜಿ ನಾಯಕ ಹಾಗೂ ಅನುಭವಿ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ MS Dhoni ಕಾಲಿನ ಸ್ನಾಯು ಗಾಯ (calf strain)ದಿಂದ ಬಳಲುತ್ತಿದ್ದು, ಟೂರ್ನಿಯ ಮೊದಲ…

The post ಐಪಿಎಲ್ 2026 ಆರಂಭಕ್ಕೂ ಮುನ್ನ ಸಿಎಸ್ ಕೆಗೆ ಭಾರೀ ಹಿನ್ನಡೆ: ಕಾಲಿನ ಗಾಯದಿಂದ MS Dhoni ಮೊದಲ ಎರಡು ವಾರ ಔಟ್. appeared first on Good News 24x7.

]]>

ಐಪಿಎಲ್ 2026ರ 19ನೇ ಆವೃತ್ತಿ ಆರಂಭವಾಗುವ ಮುನ್ನವೇ Chennai Super Kings ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ತಂಡದ ಮಾಜಿ ನಾಯಕ ಹಾಗೂ ಅನುಭವಿ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ MS Dhoni ಕಾಲಿನ ಸ್ನಾಯು ಗಾಯ (calf strain)ದಿಂದ ಬಳಲುತ್ತಿದ್ದು, ಟೂರ್ನಿಯ ಮೊದಲ ಎರಡು ವಾರಗಳ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ ಎಂದು ಫ್ರಾಂಚೈಸಿ ಅಧಿಕೃತವಾಗಿ ತಿಳಿಸಿದೆ. ಧೋನಿ ಅನುಪಸ್ಥಿತಿ ತಂಡದ ಸಮತೋಲನದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದ್ದು, ಆರಂಭಿಕ ಪಂದ್ಯಗಳಲ್ಲಿ ತಂಡಕ್ಕೆ ದೊಡ್ಡ ಸವಾಲಾಗಲಿದೆ.

ಇಂದು ಶನಿವಾರದಿಂದ ಟೂರ್ನಿ ಶುರುವಾಗುತ್ತಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ Royal Challengers Bengaluru ತಂಡವು Sunrisers Hyderabad ವಿರುದ್ಧ M. Chinnaswamy Stadiumನಲ್ಲಿ ಮುಖಾಮುಖಿಯಾಗಲಿದೆ. ಇನ್ನೊಂದೆಡೆ, ಸಿಎಸ್ ಕೆ ತನ್ನ ಮೊದಲ ಪಂದ್ಯವನ್ನು ಸೋಮವಾರ Rajasthan Royals ವಿರುದ್ಧ ಆಡಲಿದ್ದು, ಧೋನಿ ಅನುಪಸ್ಥಿತಿಯಲ್ಲಿ ತಂಡದ ನಾಯಕತ್ವ ಮತ್ತು ವಿಕೆಟ್ ಕೀಪಿಂಗ್ ಜವಾಬ್ದಾರಿಗಳ ಬಗ್ಗೆ ಕುತೂಹಲ ಹೆಚ್ಚಾಗಿದೆ.

ಪ್ರಸ್ತುತ ಧೋನಿ ಗಾಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದು, ವೈದ್ಯಕೀಯ ತಂಡ ಅವರ ಚೇತರಿಕೆಯನ್ನು ನಿಗಾ ವಹಿಸುತ್ತಿದೆ. ಅವರು ಸಂಪೂರ್ಣ ಫಿಟ್ ಆದ ಬಳಿಕ ಮಾತ್ರ ತಂಡಕ್ಕೆ ಮರಳಲಿದ್ದಾರೆ ಎಂದು ತಿಳಿದುಬಂದಿದೆ. ಇತ್ತೀಚೆಗೆ M. A. Chidambaram Stadiumನಲ್ಲಿ ನಡೆದ ಅಭ್ಯಾಸ ಪಂದ್ಯದಲ್ಲಿ ಧೋನಿ ಬ್ಯಾಟಿಂಗ್ ಮಾಡುತ್ತಿರುವ ದೃಶ್ಯಗಳು ಅಭಿಮಾನಿಗಳಿಗೆ ಆತ್ಮವಿಶ್ವಾಸ ನೀಡಿದ್ದರೂ, ಗಾಯದ ಸಮಸ್ಯೆ ಮತ್ತೆ ತಲೆದೋರಿರುವುದು ಚಿಂತೆಗೆ ಕಾರಣವಾಗಿದೆ.

ಧೋನಿ ಹೊರಗುಳಿದಿರುವ ಹಿನ್ನೆಲೆಯಲ್ಲಿ, ಆರಂಭಿಕ ಪಂದ್ಯಗಳಲ್ಲಿ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು Sanju Samson ವಹಿಸುವ ಸಾಧ್ಯತೆ ಇದೆ. ನಾಯಕ Ruturaj Gaikwad ನೇತೃತ್ವದಲ್ಲಿ ತಂಡವು ತನ್ನ ಆರುನೇ ಐಪಿಎಲ್ ಪ್ರಶಸ್ತಿಗಾಗಿ ಪೈಪೋಟಿ ನಡೆಸಲು ಸಜ್ಜಾಗಿದೆ. ಇದೇ ವೇಳೆ, ಆಲ್‌ರೌಂಡರ್‌ಗಳಾದ Ravindra Jadeja ಮತ್ತು Sam Curran ತಂಡ ಬದಲಾವಣೆ ಸೇರಿದಂತೆ ಹಲವು ಬದಲಾವಣೆಗಳ ನಡುವೆ ಸೀಸ್‌ನ್ ಆರಂಭವಾಗುತ್ತಿದೆ.

ಇಂಗ್ಲೆಂಡ್‌ನ ಆಲ್‌ರೌಂಡರ್ Sam Curran ಕೂಡ ಗಾಯದ ಕಾರಣದಿಂದ ಟೂರ್ನಿಯಿಂದ ಹೊರಗುಳಿದಿರುವುದು ಸಿಎಸ್ ಕೆಗೆ ಮತ್ತೊಂದು ಹಿನ್ನಡೆಯಾಗಿದೆ. ಸೋಮವಾರ Barsapara Cricket Stadiumನಲ್ಲಿ ನಡೆಯುವ Rajasthan Royals ಮತ್ತು Chennai Super Kings ನಡುವಿನ ಪಂದ್ಯದಲ್ಲಿ, ಆಟಗಾರರ ಬದಲಾವಣೆಗಳು ಹಾಗೂ ಧೋನಿ ಗೈರುಹಾಜರಿ ಪಂದ್ಯಕ್ಕೆ ಹೆಚ್ಚುವರಿ ಕುತೂಹಲವನ್ನು ತಂದಿದೆ.

The post ಐಪಿಎಲ್ 2026 ಆರಂಭಕ್ಕೂ ಮುನ್ನ ಸಿಎಸ್ ಕೆಗೆ ಭಾರೀ ಹಿನ್ನಡೆ: ಕಾಲಿನ ಗಾಯದಿಂದ MS Dhoni ಮೊದಲ ಎರಡು ವಾರ ಔಟ್. appeared first on Good News 24x7.

]]>
ಈ ಬಾರಿ ಸುಲಭವಿಲ್ಲ ಎಂದು ಬಿಗ್ ವಾರ್ನಿಂಗ್ ಕೊಟ್ಟ ಕಿಂಗ್ ಕೊಹ್ಲಿ! https://www.goodnews24x7.com/king-kohli-gave-a-big-warning-that-it-will-not-be-easy-this-time/ Sat, 21 Mar 2026 09:04:31 +0000 https://www.goodnews24x7.com/?p=8946 ಬೆಂಗಳೂರು, ಮಾರ್ಚ್ 21: ಐಪಿಎಲ್ 2026 ಸೀಸನ್ ಆರಂಭಕ್ಕೂ ಮುನ್ನವೇ ಆರ್‌ಸಿಬಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ತಂಡದ ಆಟಗಾರರಿಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ತಂಡದ ತರಬೇತಿ ಶಿಬಿರದಲ್ಲಿ ಮಾತನಾಡಿದ ಕೊಹ್ಲಿ, ಈ ಸೀಸನ್ ಇನ್ನಷ್ಟು ಕಠಿಣವಾಗಲಿದೆ ಎಂದು ತಿಳಿಸಿದ್ದಾರೆ.ಮಾರ್ಚ್ 28ರಂದು…

The post ಈ ಬಾರಿ ಸುಲಭವಿಲ್ಲ ಎಂದು ಬಿಗ್ ವಾರ್ನಿಂಗ್ ಕೊಟ್ಟ ಕಿಂಗ್ ಕೊಹ್ಲಿ! appeared first on Good News 24x7.

]]>

ಬೆಂಗಳೂರು, ಮಾರ್ಚ್ 21: ಐಪಿಎಲ್ 2026 ಸೀಸನ್ ಆರಂಭಕ್ಕೂ ಮುನ್ನವೇ ಆರ್‌ಸಿಬಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ತಂಡದ ಆಟಗಾರರಿಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ತಂಡದ ತರಬೇತಿ ಶಿಬಿರದಲ್ಲಿ ಮಾತನಾಡಿದ ಕೊಹ್ಲಿ, ಈ ಸೀಸನ್ ಇನ್ನಷ್ಟು ಕಠಿಣವಾಗಲಿದೆ ಎಂದು ತಿಳಿಸಿದ್ದಾರೆ.ಮಾರ್ಚ್ 28ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ 2026 ಆರಂಭವಾಗಲಿದ್ದು, ಆರ್‌ಸಿಬಿ ಮೊದಲ ಪಂದ್ಯವನ್ನು ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ಆಡಲಿದೆ. ಈ ಹಿನ್ನೆಲೆ ಈಗಾಗಲೇ ತಂಡ ತಯಾರಿ ಆರಂಭಿಸಿದ್ದು, ಕೊಹ್ಲಿಯ ಭರ್ಜರಿ ಬ್ಯಾಟಿಂಗ್ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಈ ಸೀಸನ್ ಇನ್ನಷ್ಟು ಕಠಿಣ: ತಂಡದ ಸಹ ಆಟಗಾರರೊಂದಿಗೆ ಮಾತನಾಡಿದ ಕೊಹ್ಲಿ, ಕಳೆದ 2-3 ಸೀಸನ್‌ಗಳಲ್ಲಿ ನಾವು ತುಂಬಾ ಕಷ್ಟಪಟ್ಟಿದ್ದೇವೆ. ಕಳೆದ ವರ್ಷ ಸಾಧನೆ ಮಾಡಿದ್ದೇವೆ. ಆದರೆ ಈಗ ಇನ್ನಷ್ಟು ಕಷ್ಟವಾಗಲಿದೆ. ಇತರ ತಂಡಗಳು ನಮ್ಮ ವಿರುದ್ಧ ಇನ್ನಷ್ಟು ಆಕ್ರಮಣಕಾರಿ ಆಟ ಆಡಲಿವೆ ಎಂದು ಹೇಳಿದ್ದಾರೆ.ಒಂದು ನಿಮಿಷವೂ ವ್ಯರ್ಥ ಮಾಡಬಾರದು. ಪ್ರತಿಯೊಂದು ಸೆಷನ್‌ಗೂ 120 ಪರ್ಸೆಂಟ್ ಕೊಡುಗೆ ನೀಡಬೇಕು. ಈ ಎರಡೂವರೆ ತಿಂಗಳು ನಮ್ಮ ಪಾಲಿಗೆ ಬಹಳ ಮುಖ್ಯ ಎಂದು ತಂಡವನ್ನು ಕೊಹ್ಲಿ ಹುರಿದುಂಬಿಸಿದ್ದಾರೆ.

ಚಾಂಪಿಯನ್ ಆಗಿ ಹೊಸ ಸವಾಲು: ಆರ್‌ಸಿಬಿ ಕಳೆದ ಸೀಸನ್‌ನಲ್ಲಿ ಮೊದಲ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಿತ್ತು. ಈಗ ಚಾಂಪಿಯನ್ ತಂಡವಾಗಿ ಕಣಕ್ಕಿಳಿಯುತ್ತಿರುವುದರಿಂದ ಒತ್ತಡ ಹೆಚ್ಚಾಗಲಿದೆ. ಈ ಕಾರಣಕ್ಕೇ ಸಹ ಆಟಗಾರರಿಗೆ ಕೊಹ್ಲಿ ಕಿವಿಮಾತು ಹೇಳಿದ್ದಾರೆ.ತಂಡದ ಮುಖ್ಯ ಕೋಚ್ ಆ್ಯಂಡಿ ಫ್ಲವರ್ ಕೂಡ ಹೊಸ ಆಟಗಾರರ ಸೇರ್ಪಡೆಯಿಂದ ತಂಡ ಮತ್ತಷ್ಟು ಬಲವಾಗಿದೆಯೆಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ, 2026 ಋತುವಿನಲ್ಲಿ ಉತ್ತಮ ಪ್ರದರ್ಶನ ನೀಡಲು ಆರ್​​ಸಿಬಿ ಅಣಿಯಾಗುತ್ತಿದೆ ಎಂದು ತಿಳಿಸಿದ್ದಾರೆ.

ಕೊಹ್ಲಿಗೆ ಮತ್ತೊಂದು ಮೈಲುಗಲ್ಲು: ಐಪಿಎಲ್ ಇತಿಹಾಸದಲ್ಲಿ ಈಗಾಗಲೇ 8,661 ರನ್ ಗಳಿಸಿರುವ ಕೊಹ್ಲಿ, ಈ ಸೀಸನ್‌ನಲ್ಲಿ 9,000 ರನ್ ಗಡಿ ದಾಟುವ ಮೊದಲ ಆಟಗಾರನಾಗುವ ಸಾಧ್ಯತೆಯೂ ಇದೆ. ಒಟ್ಟಿನಲ್ಲಿ, ಚಾಂಪಿಯನ್ ಆರ್‌ಸಿಬಿ ಈ ಬಾರಿ ಮತ್ತಷ್ಟು ಬಲಿಷ್ಠವಾಗಿ ಕಣಕ್ಕಿಳಿಯಲಿದ್ದು, ಕೊಹ್ಲಿಯ ಪ್ರೋತ್ಸಾಹದ ಹಾಗೂ ಎಚ್ಚರಿಕೆಯ ಮಾತುಗಳು ತಂಡಕ್ಕೆ ಹೊಸ ಉತ್ಸಾಹ ತುಂಬಿದೆ.

The post ಈ ಬಾರಿ ಸುಲಭವಿಲ್ಲ ಎಂದು ಬಿಗ್ ವಾರ್ನಿಂಗ್ ಕೊಟ್ಟ ಕಿಂಗ್ ಕೊಹ್ಲಿ! appeared first on Good News 24x7.

]]>
ಹಿರಿಯ ನೈರ್ಮಲ್ಯ ಕಾರ್ಮಿಕರಿಗೆ ತಿಂಗಳಿಗೆ 2 ಲಕ್ಷ ಸಂಬಳ! https://www.goodnews24x7.com/senior-sanitation-workers-get-2-lakhs-per-month-salary/ Thu, 26 Feb 2026 11:49:38 +0000 https://www.goodnews24x7.com/?p=8492 ಹೈದರಾಬಾದ್: ತೆಲಂಗಾಣದಲ್ಲಿ ಹಿರಿಯ ನೈರ್ಮಲ್ಯ ಕಾರ್ಮಿಕರು ತಿಂಗಳಿಗೆ ಸುಮಾರು 2 ಲಕ್ಷ ರೂ. ಸಂಬಳ  ಪಡೆಯುತ್ತಿರುವ ವಿಚಾರ ಬಳಕಿಗೆ ಬಂದಿದೆ. ಹೌದು. ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್  ನಲ್ಲಿರುವ ಹಿರಿಯ ನೈರ್ಮಲ್ಯ ಕಾರ್ಮಿಕರು ದೀರ್ಘ ವರ್ಷಗಳ ಸೇವೆ ಮತ್ತು ಪರಿಷ್ಕರಣೆಗಳ ನಂತರ…

The post ಹಿರಿಯ ನೈರ್ಮಲ್ಯ ಕಾರ್ಮಿಕರಿಗೆ ತಿಂಗಳಿಗೆ 2 ಲಕ್ಷ ಸಂಬಳ! appeared first on Good News 24x7.

]]>

ಹೈದರಾಬಾದ್: ತೆಲಂಗಾಣದಲ್ಲಿ ಹಿರಿಯ ನೈರ್ಮಲ್ಯ ಕಾರ್ಮಿಕರು ತಿಂಗಳಿಗೆ ಸುಮಾರು 2 ಲಕ್ಷ ರೂ. ಸಂಬಳ  ಪಡೆಯುತ್ತಿರುವ ವಿಚಾರ ಬಳಕಿಗೆ ಬಂದಿದೆ.

ಹೌದು. ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್  ನಲ್ಲಿರುವ ಹಿರಿಯ ನೈರ್ಮಲ್ಯ ಕಾರ್ಮಿಕರು ದೀರ್ಘ ವರ್ಷಗಳ ಸೇವೆ ಮತ್ತು ಪರಿಷ್ಕರಣೆಗಳ ನಂತರ ತಿಂಗಳಿಗೆ ಸುಮಾರು 2 ಲಕ್ಷ ರೂ. ಸಂಬಳ ಪಡೆದರೆ ಉನ್ನತ ಸರ್ಕಾರಿ ಎಂಜಿನಿಯರ್‌ಗಳು ತಿಂಗಳಿಗೆ 7 ಲಕ್ಷ ರೂ. ಸಂಬಳ ಪಡೆಯುತ್ತಿದ್ದಾರೆ.

ತೆಲಂಗಾಣದಲ್ಲಿ ಅತಿ ಹೆಚ್ಚು ವೇತನ ತೆಲಂಗಾಣ ರಾಜ್ಯ ವಿದ್ಯುತ್ ಉತ್ಪಾದನಾ ನಿಗಮ ಲಿಮಿಟೆಡ್ , ತೆಲಂಗಾಣ ರಾಜ್ಯ ಪ್ರಸರಣ ನಿಗಮ ಲಿಮಿಟೆಡ್ , ಮತ್ತು DISCOM ಗಳಾದ ತೆಲಂಗಾಣ ಸದರ್ನ್ ಪವರ್ ಡಿಸ್ಟ್ರಿಬ್ಯೂಷನ್ ಕಂಪನಿ ಲಿಮಿಟೆಡ್ ಮತ್ತು ತೆಲಂಗಾಣ ನಾರ್ದರ್ನ್ ಪವರ್ ಡಿಸ್ಟ್ರಿಬ್ಯೂಷನ್ ಕಂಪನಿ ಲಿಮಿಟೆಡ್‌ನ ಮುಖ್ಯ ಎಂಜಿನಿಯರ್‌ಗಳಿಗೆ ಸಿಗುತ್ತಿದೆ.

ತೆಲಂಗಾಣದ ಸಂಬಳ ಮತ್ತು ಪಿಂಚಣಿ ಏರಿಕೆಯಾಗಿದ್ದು ಬಜೆಟ್‌ಗೆ ಭಾರೀ ಹೊರೆಯಾಗಿದೆ. ರಾಜ್ಯವು ಈಗ ಪ್ರತಿ ತಿಂಗಳು ಸುಮಾರು 6,000 ಕೋಟಿ ರೂ.ಗಳನ್ನು ವೇತನ ಮತ್ತು ಪಿಂಚಣಿಗಾಗಿ ಖರ್ಚು ಮಾಡುತ್ತಿದೆ. 2014 ರಲ್ಲಿ ರಾಜ್ಯ ರಚನೆಯ ಸಮಯದಲ್ಲಿ ಖರ್ಚು ಮಾಡಿದ್ದಕ್ಕಿಂತ ಸುಮಾರು ನಾಲ್ಕು ಪಟ್ಟು ಏರಿಕೆಯಾಗಿದೆ ಎಂದು ಹಿರಿಯ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

ಹೈದರಾಬಾದ್ ನಗರವನ್ನು ನಿರ್ವಹಿಸುವ GHMC ಅಡಿ ಕೆಲಸ ಮಾಡುತ್ತಿರುವ ನೈರ್ಮಲ್ಯ ಕಾರ್ಮಿಕರು ತಿಂಗಳಿಗೆ ಸರಾಸರಿ 70 ಸಾವಿರ ರೂ. ಪಡೆಯುತ್ತಿದ್ದಾರೆ. ಆದರೆ ಆರಂಭಿಕ ಹಂತದ ಪುರಸಭೆಯ ಸಿಬ್ಬಂದಿ ಸುಮಾರು 28 ಸಾವಿರ ಪಡೆದರೆ, ದೀರ್ಘ ಸೇವೆಯನ್ನು ಹೊಂದಿರುವ ಹಿರಿಯ ವರ್ಗ -4ರ ಕಾರ್ಮಿಕರು ಮಾಸಿಕ 2 ಲಕ್ಷ ರೂ. ಗಳಿಸುತ್ತಿದ್ದಾರೆ. ಹೆಚ್ಚಿನ ಉದ್ಯೋಗಿಗಳು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಅಡಿಯಲ್ಲಿದ್ದಾರೆ. ಇತ್ತೀಚಿನ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ವರದಿಯ ಪ್ರಕಾರ 2023-24ರಲ್ಲಿ ರಾಜ್ಯದ ಆದಾಯದ ಸುಮಾರು 45% ಸಂಬಳ, ಪಿಂಚಣಿ ಮತ್ತು ಸಾಲದ ಮೇಲಿನ ಬಡ್ಡಿಯನ್ನು ಪಾವತಿಸಲು ಹೋಗುತ್ತಿದೆ.

#Hyderabad #Telangana#MunicipalCorporation

The post ಹಿರಿಯ ನೈರ್ಮಲ್ಯ ಕಾರ್ಮಿಕರಿಗೆ ತಿಂಗಳಿಗೆ 2 ಲಕ್ಷ ಸಂಬಳ! appeared first on Good News 24x7.

]]>
ಇರುವೆಗಳಿಗೆ ಹೆದರಿ ಆ*ಹ*ಗೆ ಶರಣಾದ ಮಹಿಳೆ! https://www.goodnews24x7.com/woman-commits-suicide-due-to-fear-of-ants/ Fri, 07 Nov 2025 10:36:25 +0000 https://www.goodnews24x7.com/?p=8057 ಹೈದರಾಬಾದ್: ಬಾಲ್ಯದ ಆಘಾತಗಳು ಅಥವಾ ಇತರೆ ಕಾರಣಗಳಿಂದಾಗಿ ಬಹುತೇಕ ರಲ್ಲಿ ಒಂದಲ್ಲಾ ಒಂದು ಭಯ ಸುಪ್ತವಾಗಿ ಇರುವುದು ಸಹಜ. ಕೆಲವರಲ್ಲಿ ಅದು ಅತಿರೇಕಕ್ಕೆ ಹೋಗುವುದನ್ನೂ ಕಾಣಬಹುದು. ಹೀಗಿರುವಾಗ, ತೆಲಂಗಾಣದ ಮಹಿಳೆಯೊಬ್ಬರು ತಮ್ಮ ಮನೆ ಯಲ್ಲಿದ್ದ ಇರುವೆಗಳಿಗೆ ಹೆದರಿ, ಆ*ಹ*ಗೆ ಮಾಡಿಕೊಂಡ ಘಟನೆ…

The post ಇರುವೆಗಳಿಗೆ ಹೆದರಿ ಆ*ಹ*ಗೆ ಶರಣಾದ ಮಹಿಳೆ! appeared first on Good News 24x7.

]]>

ಹೈದರಾಬಾದ್: ಬಾಲ್ಯದ ಆಘಾತಗಳು ಅಥವಾ ಇತರೆ ಕಾರಣಗಳಿಂದಾಗಿ ಬಹುತೇಕ ರಲ್ಲಿ ಒಂದಲ್ಲಾ ಒಂದು ಭಯ ಸುಪ್ತವಾಗಿ ಇರುವುದು ಸಹಜ. ಕೆಲವರಲ್ಲಿ ಅದು ಅತಿರೇಕಕ್ಕೆ ಹೋಗುವುದನ್ನೂ ಕಾಣಬಹುದು. ಹೀಗಿರುವಾಗ, ತೆಲಂಗಾಣದ ಮಹಿಳೆಯೊಬ್ಬರು ತಮ್ಮ ಮನೆ ಯಲ್ಲಿದ್ದ ಇರುವೆಗಳಿಗೆ ಹೆದರಿ, ಆ*ಹ*ಗೆ ಮಾಡಿಕೊಂಡ ಘಟನೆ ನಡೆದಿದೆ.

 

 

 

 

 

ಬಾಲ್ಯದಿಂದಲೂ ಇರುವೆಗಳನ್ನು ಕಂಡರೆ ಭಯಭೀತರಾಗುತ್ತಿದ್ದ 25 ವರ್ಷದ ಮಹಿಳೆ, ಮನೆ ಸ್ವಚ್ಛಗೊಳಿಸುವ ನೆಪದಲ್ಲಿ ತಮ್ಮ 3 ವರ್ಷದ ಮಗಳನ್ನು ಸಂಬಂಧಿಕರ ಮನೆಯಲ್ಲಿ ಬಿಟ್ಟುಬಂದಿದ್ದರು. ಸಂಜೆ ಅವರ ಪತಿ ಮನೆಗೆ ಮರಳಿದಾಗ ಬಾಗಿಲು ಒಳಗಿನಿಂದ ಮುಚ್ಚಲ್ಪಟ್ಟಿದ್ದನ್ನು ಗಮನಿಸಿ, ನೆರೆ ಹೊರೆಯವರ ಸಹಾಯದೊಂ ದಿಗೆ ಅದನ್ನು ತೆರೆದಿದ್ದಾರೆ. ಆಗ ಮಹಿಳೆ ಸೀರೆಯ ಸಹಾಯದಿಂದ ಫ್ಯಾನ್‌ಗೆ ನೇ* ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅಲ್ಲೇ ದೊರೆತ ಮರಣಪತ್ರದಲ್ಲಿ, ‘ನನಗೆ ಈ ಇರುವೆಗಳೊಂದಿಗೆ ಬದುಕಲು ಸಾಧ್ಯವಿಲ್ಲ. ನೀವು(ಪತಿ) ಮತ್ತು ಮಗಳು ಕ್ಷೇಮವಾಗಿರಿ’ ಎಂದು ಬರೆಯಲಾಗಿತ್ತು.

The post ಇರುವೆಗಳಿಗೆ ಹೆದರಿ ಆ*ಹ*ಗೆ ಶರಣಾದ ಮಹಿಳೆ! appeared first on Good News 24x7.

]]>
ಕೇರಳ ಕಾಂಗ್ರೆಸ್ ಶಾಸಕನ ವಿರುದ್ಧ ತೃತೀಯಲಿಂಗಿ ದೂರು https://www.goodnews24x7.com/transgender-woman-files-complaint-against-kerala-congress-mla/ Fri, 22 Aug 2025 06:29:39 +0000 https://www.goodnews24x7.com/?p=6453 ಪಾಲಕ್ಕಾಡ್ ಕಾಂಗ್ರೆಸ್ ಶಾಸಕ ರಾಹುಲ್ ಮಮ್ಕೂಟತಿಲ್ ವಿರುದ್ಧ ತೃತೀಯಲಿಂಗಿಯೊಬ್ಬರು ಲೈಂಗಿಕ ಕಿರುಕುಳ ಆರೋಪಹೊರಿಸಿದ್ದಾರೆ. ರಾಹುಲ್ ತನ್ನ ಮೇಲೆ ಅತ್ಯಾಚಾರ ಮಾಡುವ ಬಯಕೆಯನ್ನು ವ್ಯಕ್ತಪಡಿಸಿ ಸಂದೇಶಗಳನ್ನು ಕಳುಹಿಸಿದ್ದಾರೆ ಎಂದು ಆರೋಪಿಸಿದ್ದಾರೆ ನನ್ನನ್ನು ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಒತ್ತಾಯಿಸಿದ್ದ, ಬೆಂಗಳೂರು ಅಥವಾ ಹೈದರಾಬಾದ್​ಗೆ ಹೋಗೋಣ…

The post ಕೇರಳ ಕಾಂಗ್ರೆಸ್ ಶಾಸಕನ ವಿರುದ್ಧ ತೃತೀಯಲಿಂಗಿ ದೂರು appeared first on Good News 24x7.

]]>

ಪಾಲಕ್ಕಾಡ್ ಕಾಂಗ್ರೆಸ್ ಶಾಸಕ ರಾಹುಲ್ ಮಮ್ಕೂಟತಿಲ್ ವಿರುದ್ಧ ತೃತೀಯಲಿಂಗಿಯೊಬ್ಬರು ಲೈಂಗಿಕ ಕಿರುಕುಳ ಆರೋಪಹೊರಿಸಿದ್ದಾರೆ. ರಾಹುಲ್ ತನ್ನ ಮೇಲೆ ಅತ್ಯಾಚಾರ ಮಾಡುವ ಬಯಕೆಯನ್ನು ವ್ಯಕ್ತಪಡಿಸಿ ಸಂದೇಶಗಳನ್ನು ಕಳುಹಿಸಿದ್ದಾರೆ ಎಂದು ಆರೋಪಿಸಿದ್ದಾರೆ ನನ್ನನ್ನು ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಒತ್ತಾಯಿಸಿದ್ದ, ಬೆಂಗಳೂರು ಅಥವಾ ಹೈದರಾಬಾದ್​ಗೆ ಹೋಗೋಣ ಬಾ ಎಂದು ಕರೆದಿದ್ದ ಎಂದು ತೃತೀಯಲಿಂಗಿ ಎಂದು ಹೇಳಿದ್ದಾರೆ.

ಪಾಲಕ್ಕಾಡ್: ಪಾಲಕ್ಕಾಡ್ ಕಾಂಗ್ರೆಸ್ ಶಾಸಕ ರಾಹುಲ್ ಮಮ್ಕೂಟತಿಲ್ ವಿರುದ್ಧ ತೃತೀಯಲಿಂಗಿಯೊಬ್ಬರು ಲೈಂಗಿಕ ಕಿರುಕುಳ ಆರೋಪಹೊರಿಸಿದ್ದಾರೆ. ರಾಹುಲ್ ತನ್ನ ಮೇಲೆ ಅತ್ಯಾಚಾರ ಮಾಡುವ ಬಯಕೆಯನ್ನು ವ್ಯಕ್ತಪಡಿಸಿ ಸಂದೇಶಗಳನ್ನು ಕಳುಹಿಸಿದ್ದ ಎಂದು ಆರೋಪಿಸಿದ್ದಾರೆ. ನನ್ನನ್ನು ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಒತ್ತಾಯಿಸಿದ್ದ, ಬೆಂಗಳೂರು ಅಥವಾ ಹೈದರಾಬಾದ್​ಗೆ ಹೋಗೋಣ ಬಾ ಎಂದು ಕರೆದಿದ್ದ ಎಂದು ತೃತೀಯಲಿಂಗಿ ಎಂದು ಹೇಳಿದ್ದಾರೆ. ಚುನಾವಣಾ ಚರ್ಚೆಯ ಸಮಯದಲ್ಲಿ ಅವರು ಮೊದಲು ಭೇಟಿಯಾಗಿದ್ದರು. ಸಾಮಾನ್ಯ ಸ್ನೇಹವಾಗಿ ಪ್ರಾರಂಭವಾದದ್ದು ಸಾಮಾಜಿಕ ಮಾಧ್ಯಮದಲ್ಲಿನ ಸಂದೇಶಗಳ ಮೂಲಕ ಅಸಹ್ಯಕರ ಅನುಭವವಾಗಿ ಬದಲಾಯಿತು ಎಂದು ಅವಂತಿಕಾ ಹೇಳಿದ್ದಾರೆ.

ಮಲಯಾಳಂ ನಟಿ ರಿನಿ ಜಾರ್ಜ್ ಮತ್ತು ನಂತರ ಬರಹಗಾರ ಹನಿ ಭಾಸ್ಕರನ್ ಅವರು ನೀಡಿದ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ರಾಹುಲ್ ಗುರುವಾರ ಕೇರಳ ಯುವ ಕಾಂಗ್ರೆಸ್ ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ . ಪ್ರಮುಖ ರಾಜಕೀಯ ಪಕ್ಷದ ನಾಯಕಿಯೊಬ್ಬರು ಆಕ್ಷೇಪಾರ್ಹ ಸಂದೇಶಗಳನ್ನು ಕಳುಹಿಸಿ ಹೋಟೆಲ್‌ಗೆ ಆಹ್ವಾನಿಸಿದ್ದಾರೆ ಎಂದು ರಿನಿ ಆರೋಪಿಸಿದ್ದರು . ಅವರು ಯಾರನ್ನೂ ಹೆಸರಿಸದಿದ್ದರೂ, ಬಿಜೆಪಿ ಮತ್ತು ಡಿವೈಎಫ್‌ಐ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮಮ್‌ಕೂಟತಿಲ್ ಕಚೇರಿಯಲ್ಲಿ ಪ್ರತಿಭಟನೆ ನಡೆಸಿದ್ದವು. ಹನಿ ಭಾಸ್ಕರನ್, ರಾಹುಲ್ ಅವರನ್ನು ಹೆಸರಿಸಿ , ಪದೇ ಪದೇ ಆಕ್ಷೇಪಾರ್ಹ ಸಂದೇಶಗಳನ್ನು ಕಳುಹಿಸುತ್ತಿದ್ದರು ಎಂದು ಆರೋಪಿಸಿದ್ದಾರೆ, ಯುವ ಕಾಂಗ್ರೆಸ್‌ನೊಳಗಿನ ದೂರುಗಳು ಬಗೆಹರಿಯದೆ ಉಳಿದಿವೆ ಎಂದು ಹೇಳಿದರು.

ತಮ್ಮ ರಾಜೀನಾಮೆಯಲ್ಲಿ, ರಾಹುಲ್ ಅವರು ತಾವು ರಾಜೀನಾಮೆ ನೀಡುತ್ತಿರುವುದು ತಪ್ಪು ಕಾರಣದಿಂದಲ್ಲ, ಬದಲಾಗಿ ಪಕ್ಷದ ಕಾರ್ಯಕರ್ತರು ಮುಂಬರುವ ಚುನಾವಣೆಗಳತ್ತ ಗಮನಹರಿಸಲು ಅವಕಾಶ ನೀಡುವ ಉದ್ದೇಶದಿಂದ ಎಂದು ಹೇಳಿದ್ದಾರೆ. ಪಕ್ಷದ ಯಾವುದೇ ನಾಯಕರು ರಾಜೀನಾಮೆ ನೀಡುವಂತೆ ತಮ್ಮನ್ನು ಕೇಳಿಲ್ಲ ಎಂದು ಅವರು ಒತ್ತಿ ಹೇಳಿದರು ಮತ್ತು ಅದು ತಮ್ಮ ವೈಯಕ್ತಿಕ ಜವಾಬ್ದಾರಿ ಎಂದು ಹೇಳಿದರು. ರಾಜೀನಾಮೆ ಬಗ್ಗೆ ಕೇರಳ ಸಚಿವೆ ಆರ್ ಬಿಂದು ಪ್ರತಿಕ್ರಿಯೆ ನೀಡಿದ್ದು, ಯುವ ಶಾಸಕ ರಾಹುಲ್ ವಿರುದ್ಧ ಅನೇಕ ಮಹಿಳೆಯರು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ಅವರು ಯುವ ಕಾಂಗ್ರೆಸ್ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಸಮಾಜವನ್ನು ರಕ್ಷಿಸಲು ಅವರು ಶಾಸಕ ಸ್ಥಾನದಿಂದ ಕೆಳಗಿಳಿಯುವುದು ಸೂಕ್ತ ಎಂದು ಹೇಳಿದರು.

The post ಕೇರಳ ಕಾಂಗ್ರೆಸ್ ಶಾಸಕನ ವಿರುದ್ಧ ತೃತೀಯಲಿಂಗಿ ದೂರು appeared first on Good News 24x7.

]]>
ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆ : ಆಭರಣಪ್ರಿಯರಿಗೆ ಗುಡ್ ನ್ಯೂಸ್! https://www.goodnews24x7.com/gold-price-drops-slightly-good-news-for-jewelry-lovers/ Thu, 19 Jun 2025 11:46:41 +0000 https://www.goodnews24x7.com/?p=4498 ಬೆಂಗಳೂರು: ಕೆಲ ದಿನಗಳ ಹಿಂದೆ ಗಗನಕ್ಕೇರಿದ್ದ ಬಂಗಾರದ ಬೆಲೆ ಇಂದು ಕೊಂಚ ಇಳಿಕೆಯಾಗಿದೆ. ಸೋಮವಾರ 1,01,510 ರೂ. ಇದ್ದ 10 ಗ್ರಾಂ ಚಿನ್ನದ ಬೆಲೆ ಇಂದು 1,140 ರೂ. ಇಳಿಕೆಯೊಂದಿಗೆ 1,00,370 ರೂ.ಗೆ ತಲುಪಿದೆ. ಆದರೆ ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗಿದೆ. ಶನಿವಾರ…

The post ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆ : ಆಭರಣಪ್ರಿಯರಿಗೆ ಗುಡ್ ನ್ಯೂಸ್! appeared first on Good News 24x7.

]]>

ಬೆಂಗಳೂರು: ಕೆಲ ದಿನಗಳ ಹಿಂದೆ ಗಗನಕ್ಕೇರಿದ್ದ ಬಂಗಾರದ ಬೆಲೆ ಇಂದು ಕೊಂಚ ಇಳಿಕೆಯಾಗಿದೆ. ಸೋಮವಾರ 1,01,510 ರೂ. ಇದ್ದ 10 ಗ್ರಾಂ ಚಿನ್ನದ ಬೆಲೆ ಇಂದು 1,140 ರೂ. ಇಳಿಕೆಯೊಂದಿಗೆ 1,00,370 ರೂ.ಗೆ ತಲುಪಿದೆ. ಆದರೆ ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗಿದೆ. ಶನಿವಾರ 1,09,165 ರೂ. ಇದ್ದ ಒಂದು ಕೆಜಿ ಬೆಳ್ಳಿಯ ಬೆಲೆ ಇಂದು 1,10,000 ರೂ.ಗೆ ತಲುಪಿದೆ.

 

 

 

 

 

 

ಇಂದಿನ ಚಿನ್ನದ ದರ: ರಾಜಧಾನಿ ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂಗೆ 10,037 ರೂ. ಇದೆ ಉಳಿದಂತೆ 22 ಕ್ಯಾರೆಟ್ ಚಿನ್ನದ ದರ 9,200 ರೂ. ಹಾಗೂ 18 ಕ್ಯಾರೆಟ್ ಚಿನ್ನದ ಬೆಲೆ 7,528 ರೂ. ಇದೆ.
ಹೈದರಾಬಾದ್ನಲ್ಲಿ ಹತ್ತು ಗ್ರಾಂ ಚಿನ್ನದ ಬೆಲೆ 1,00,370 ರೂ. ಹಾಗೂ ಒಂದು ಕೆಜಿ ಬೆಳ್ಳಿಯ ಬೆಲೆ 1,20,000 ರೂ. ಇದೆ. ನಿನ್ನೆಯಿಂದ ಇಂದಿಗೆ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 10 ಗ್ರಾಂಗೆ 1140 ರೂ. ಇಳಿಕೆಯಾಗಿದೆ. ಉಳಿದಂತೆ, 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 1050ರೂ. ಹಾಗೂ 18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 860 ರೂ. ಇಳಿಕೆ ಕಂಡಿದೆ.
ಸ್ಪಾಟ್ ಚಿನ್ನದ ಬೆಲೆ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಸ್ವಲ್ಪ ಹೆಚ್ಚಾಗಿದೆ. ಶುಕ್ರವಾರ ಒಂದು ಔನ್ಸ್ ಚಿನ್ನದ ಬೆಲೆ $3331 ರಷ್ಟಿತ್ತು. ಆದರೆ ಭಾನುವಾರ $54 ರಷ್ಟು ಹೆಚ್ಚಾಗಿ $3385 ಕ್ಕೆ ತಲುಪಿದೆ. ಪ್ರಸ್ತುತ ಒಂದು ಔನ್ಸ್ ಬೆಳ್ಳಿಯ ಬೆಲೆ 36.23 ಡಾಲರ್.
(ಮುನ್ಸೂಚನೆ :-ಮೇಲಿನ ಬೆಲೆಗಳು ಬೆಳಗಿನ ಮಾರುಕಟ್ಟೆಯ ಆರಂಭದಲ್ಲಿ ಇದ್ದ ದರವಾಗಿದೆ. ಈ ಚಿನ್ನ ಮತ್ತು ಬೆಳ್ಳಿ ದರಗಳು ಬದಲಾವಣೆಯಾಗುತ್ತಿರುತ್ತವೆ ಎಂಬುದನ್ನು ಗ್ರಾಹಕರು ದಯವಿಟ್ಟು ಗಮನಿಸಿ.)

The post ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆ : ಆಭರಣಪ್ರಿಯರಿಗೆ ಗುಡ್ ನ್ಯೂಸ್! appeared first on Good News 24x7.

]]>
ವೇದಿಕೆ ಮೇಲೆ ಭಾಷಣ ಮಾಡುತ್ತಿರುವಾಗಲೇ ಕಳಚಿತು ಬಾಲಯ್ಯ ಮೀಸೆ; https://www.goodnews24x7.com/%e0%b2%b5%e0%b3%87%e0%b2%a6%e0%b2%bf%e0%b2%95%e0%b3%86-%e0%b2%ae%e0%b3%87%e0%b2%b2%e0%b3%86-%e0%b2%ad%e0%b2%be%e0%b2%b7%e0%b2%a3-%e0%b2%ae%e0%b2%be%e0%b2%a1%e0%b3%81%e0%b2%a4%e0%b3%8d%e0%b2%a4/ Sat, 14 Jun 2025 11:30:44 +0000 https://www.goodnews24x7.com/?p=4384 ಬಾಲಯ್ಯ ಅವರು ಇತ್ತೀಚೆಗೆ ತಮ್ಮ 65ನೇ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡರು. ಹೈದರಾಬಾದ್ನ ಬಸವತಾರಕಂ ಆಸ್ಪತ್ರೆಯಲ್ಲಿ ತಮ್ಮ ಅಭಿಮಾನಿಗಳ ಸಮ್ಮುಖದಲ್ಲಿ ಅವರು ವೇದಿಕೆ ಏರಿ ಮಾತನಾಡಿದರು. ಭಾಷಣ ಮಾಡುವಾಗ ರೋಷದಲ್ಲಿ ಮಾತನಾಡುತ್ತಿದ್ದರು. ಆದರೆ, ಈ ವೇಳೆ ಅವರ ಬಲಭಾಗದ ಮೀಸೆ ಸ್ವಲ್ಪ ಕಳಚಿದೆ.…

The post ವೇದಿಕೆ ಮೇಲೆ ಭಾಷಣ ಮಾಡುತ್ತಿರುವಾಗಲೇ ಕಳಚಿತು ಬಾಲಯ್ಯ ಮೀಸೆ; appeared first on Good News 24x7.

]]>

ಬಾಲಯ್ಯ ಅವರು ಇತ್ತೀಚೆಗೆ ತಮ್ಮ 65ನೇ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡರು. ಹೈದರಾಬಾದ್ನ ಬಸವತಾರಕಂ ಆಸ್ಪತ್ರೆಯಲ್ಲಿ ತಮ್ಮ ಅಭಿಮಾನಿಗಳ ಸಮ್ಮುಖದಲ್ಲಿ ಅವರು ವೇದಿಕೆ ಏರಿ ಮಾತನಾಡಿದರು. ಭಾಷಣ ಮಾಡುವಾಗ ರೋಷದಲ್ಲಿ ಮಾತನಾಡುತ್ತಿದ್ದರು. ಆದರೆ, ಈ ವೇಳೆ ಅವರ ಬಲಭಾಗದ ಮೀಸೆ ಸ್ವಲ್ಪ ಕಳಚಿದೆ. ಇದರಿಂದ ಅವರು ಆತಂಕಗೊಂಡರು. ತಕ್ಷಣ ಚೇತರಿಸಿಕೊಂಡು ಸಿಬ್ಬಂದಿಗೆ ಗಮ್ ನೀಡುವಂತೆ ಕೂಗಿದರು. ‘ಅಖಂಡ 2’ ಚಿತ್ರದ ಪ್ರಚಾರದ ವೇಳೆ ಈ ಘಟನೆ ನಡೆದಿದ್ದು, ಅವರು ತಕ್ಷಣ ಸಿಬ್ಬಂದಿಯ ಸಹಾಯ ಪಡೆದು ಮೀಸೆಯನ್ನು ಸರಿಪಡಿಸಿಕೊಂಡರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲ್ಪಟ್ಟಿದೆ.

ಗಮ್ ಕೊಟ್ಟ ತಕ್ಷಣ ಮೀಸೆಯನ್ನು ಸರಿಯಾಗಿ ಅಂಟಿಸಿಕೊಂಡು ಭಾಷಣ ಮುಂದುವರಿಸಿದರು. ಈ ವಿಡಿಯೋ ಈಗ ಇಂಟರ್ನೆಟ್ನಲ್ಲಿ ವೈರಲ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಅನೇಕರು ಇದನ್ನು ಮೀಮ್ ಮಾಡುತ್ತಿದ್ದಾರೆ. ಇದಕ್ಕೆ ನಾನಾ ಕಮೆಂಟ್ಗಳು ಬರುತ್ತಿವೆ. ‘ಮುಂದೊಂದು ದಿನ ತಲೆಗೆ ಹಾಕಿದ ಟೋಕನ್ ಕೂಡ ಕಳಚಬಹುದು. ಆ ಬಗ್ಗೆ ಗಮನ ಇರಲಿ’ ಎಂದು ಕೆಲವರು ಹೇಳಿದ್ದಾರೆ. ‘ಸಿನಿಮಾಗಳಲ್ಲೇನೋ ಮೀಸೆ ಅಂಟಿಸಿಕೊಳ್ಳುವುದು ಅನಿವಾರ್ಯ. ಆದರೆ, ನಿಜ ಜೀವನದಲ್ಲಿ ಇದೆಲ್ಲ ಬೇಕೇ’ ಎಂದು ಕೆಲವರು ಕೇಳಿದ್ದಾರೆ. ‘ಅಖಂಡ 2’ ಸಿನಿಮಾದ ಟೀಸರ್ ಇತ್ತೀಚೆಗೆ ರಿಲೀಸ್ ಆಗಿದೆ. ಸಾಮಾನ್ಯವಾಗಿ ಬಾಲಯ್ಯ ಸಿನಿಮಾಗಳಲ್ಲಿ ಮಾಸ್ ಅಂಶ ಹೆಚ್ಚೇ ಇರುತ್ತದೆ. ಆದರೆ, ‘ಅಖಂಡ 2’ ಚಿತ್ರದಲ್ಲಿ ಮಾಸ್ ಅಂಶ ಮಿತಿ ಮೀರಿದೆ ಎನ್ನಲಾಗುತ್ತಿದೆ. ಈ ಟೀಸರ್ನ ಅನೇಖರು ಮೀಮ್ಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ.

The post ವೇದಿಕೆ ಮೇಲೆ ಭಾಷಣ ಮಾಡುತ್ತಿರುವಾಗಲೇ ಕಳಚಿತು ಬಾಲಯ್ಯ ಮೀಸೆ; appeared first on Good News 24x7.

]]>
ಹೈದರಾಬಾದ್ ಚಾರ್ಮಿನಾರ್ ಬಳಿ ಅಗ್ನಿ ಅವಘಡ, 17ಮಂದಿ ಸ*ಜೀವ ದಹನ. https://www.goodnews24x7.com/hyderabad-fire-near-charminar-17-people-burnt-alive/ Sun, 18 May 2025 07:46:50 +0000 https://www.goodnews24x7.com/?p=3951 ಹೈದರಾಬಾದ್ : ಚಾರ್ಮಿನಾರ್ ಬಳಿ ಸಂಭವಿಸಿದ ಅಗ್ನಿ ಅವಘಡದಲ್ಲಿ 17 ಮಂದಿ ಸಾವನ್ನಪ್ಪಿರುವ ಕುರಿತು ಮಾಹಿತಿ ಲಭ್ಯವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ರಜೆಗೆ ಬಂದಿದ್ದ ಮಕ್ಕಳು ಸೇರಿ ಒಂದೇ ಕುಟುಂಬದ 17 ಮಂದಿ ಸುಟ್ಟು ಕರಕಲಾಗಿದ್ದಾರೆ. ಕೇಂದ್ರ ಸಚಿವ…

The post ಹೈದರಾಬಾದ್ ಚಾರ್ಮಿನಾರ್ ಬಳಿ ಅಗ್ನಿ ಅವಘಡ, 17ಮಂದಿ ಸ*ಜೀವ ದಹನ. appeared first on Good News 24x7.

]]>

ಹೈದರಾಬಾದ್ : ಚಾರ್ಮಿನಾರ್ ಬಳಿ ಸಂಭವಿಸಿದ ಅಗ್ನಿ ಅವಘಡದಲ್ಲಿ 17 ಮಂದಿ ಸಾವನ್ನಪ್ಪಿರುವ ಕುರಿತು ಮಾಹಿತಿ ಲಭ್ಯವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ರಜೆಗೆ ಬಂದಿದ್ದ ಮಕ್ಕಳು ಸೇರಿ ಒಂದೇ ಕುಟುಂಬದ 17 ಮಂದಿ ಸುಟ್ಟು ಕರಕಲಾಗಿದ್ದಾರೆ. ಕೇಂದ್ರ ಸಚಿವ ಮತ್ತು ರಾಜ್ಯ ಬಿಜೆಪಿ ಮುಖ್ಯಸ್ಥ ಜಿ. ಕಿಶನ್ ರೆಡ್ಡಿ ಮತ್ತು ತೆಲಂಗಾಣ ಸಚಿವ ಪೊನ್ನಂ ಪ್ರಭಾಕರ್ ಗುಲ್ಜಾರ್ ಹೌಸ್ ಭೇಟಿ ನೀಡಿದ್ದಾರೆ. ಆ ಪ್ರದೇಶದ ಮಾಜಿ ಶಾಸಕ ಮತ್ತು ಎಐಎಂಐಎಂ ನಾಯಕಿ ಮುಮ್ತಾಜ್ ಅಹ್ಮದ್ ಖಾನ್ ಕೂಡ ಸ್ಥಳದಲ್ಲಿದ್ದರು.
ತೆಲಂಗಾಣದ ಐತಿಹಾಸಿಕ ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ ಕಟ್ಟಡದಲ್ಲಿ ಭಾನುವಾರ ಭಾರಿ ಬೆಂಕಿ ಅವಘಡ ಸಂಭವಿಸಿದೆ. ಘಟನೆಯ ಬಗ್ಗೆ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ದುಃಖ ವ್ಯಕ್ತಪಡಿಸಿದ್ದಾರೆ. ಕಟ್ಟಡದಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅವರು ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.


ಮೋದಿ ಸಂತಾಪ, ಪರಿಹಾರ ಘೋಷಣೆ
ಅಪಘಾತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ತೆಲಂಗಾಣದ ಹೈದರಾಬಾದ್ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಜೀವ ಮತ್ತು ಆಸ್ತಿಪಾಸ್ತಿ ನಷ್ಟವಾಗಿದ್ದರಿಂದ ಪ್ರಧಾನಿ ಮೋದಿ ತೀವ್ರ ದುಃಖಿತರಾಗಿದ್ದಾರೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ನನ್ನ ಸಂತಾಪಗಳು. ಮೃತರ ಕುಟುಂಬ ಸದಸ್ಯರಿಗೆ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂಪಾಯಿಗಳ ಪರಿಹಾರ ನೀಡಲಾಗುವುದು. ಗಾಯಾಳುಗಳಿಗೆ 50,000 ರೂ. ಪರಿಹಾರ ನೀಡಲಾಗುವುದು ಎಂದು ಘೋಷಿಸಿದ್ದಾರೆ.


ತೆಲಂಗಾಣ ಬಿಜೆಪಿ ಅಧ್ಯಕ್ಷ ಜಿ ಕಿಶನ್ ರೆಡ್ಡಿ ಮಾತನಾಡಿ, ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿರುವ ಕಟ್ಟಡದಲ್ಲಿ ಇಂದು ಶಾರ್ಟ್ ಸರ್ಕ್ಯೂಟ್ನಿಂದ ಉಂಟಾದ ಅಪಘಾತದಲ್ಲಿ ಕೆಲವರು ಸಾವನ್ನಪ್ಪಿದ್ದಾರೆ ಮತ್ತು ಕೆಲವರು ಗಾಯಗೊಂಡಿದ್ದಾರೆ. ಈ ಘಟನೆ ಬೆಳಿಗ್ಗೆ 6 ಗಂಟೆ ಸುಮಾರಿಗೆ ಸಂಭವಿಸಿದೆ. ಇಂತಹ ಘಟನೆಗಳು ತುಂಬಾ ದುಃಖಕರ ಎಂದಿದ್ದಾರೆ.


ಮೃತದೇಹಗಳನ್ನು ಹೊರತೆಗೆದು ಆಸ್ಪತ್ರೆಗಳಿಗೆ ಕಳುಹಿಸಲಾಗಿದ್ದು, ರಾಜ್ಯ ಸರ್ಕಾರ ಶೀಘ್ರದಲ್ಲೇ ಸಂಪೂರ್ಣ ವಿವರಗಳನ್ನು ಹಂಚಿಕೊಳ್ಳಲಿದೆ ಎಂದು ತೆಲಂಗಾಣ ಸಚಿವ ಪೊನ್ನಂ ಪ್ರಭಾಕರ್ ಹೇಳಿದ್ದಾರೆ.

The post ಹೈದರಾಬಾದ್ ಚಾರ್ಮಿನಾರ್ ಬಳಿ ಅಗ್ನಿ ಅವಘಡ, 17ಮಂದಿ ಸ*ಜೀವ ದಹನ. appeared first on Good News 24x7.

]]>