kindness Archives - Good News 24x7 https://www.goodnews24x7.com/tag/kindness/ Kannada Wed, 18 Jun 2025 12:20:38 +0000 en-US hourly 1 https://wordpress.org/?v=7.0 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg kindness Archives - Good News 24x7 https://www.goodnews24x7.com/tag/kindness/ 32 32 ಚಿಲ್ಲರೆ ಕಾಸಿನಲ್ಲಿ ಪತ್ನಿಗೆ ಮಂಗಳಸೂತ್ರ ಖರೀದಿಸಲು ಬಂದ ವೃದ್ಧ, ಮಂಗಳಸೂತ್ರವನ್ನೇ ಉಡುಗೊರೆಯಾಗಿ ಕೊಟ್ಟ ಅಂಗಡಿಯ ಮಾಲೀಕ…. https://www.goodnews24x7.com/%e0%b2%9a%e0%b2%bf%e0%b2%b2%e0%b3%8d%e0%b2%b2%e0%b2%b0%e0%b3%86-%e0%b2%95%e0%b2%be%e0%b2%b8%e0%b2%bf%e0%b2%a8%e0%b2%b2%e0%b3%8d%e0%b2%b2%e0%b2%bf-%e0%b2%aa%e0%b2%a4%e0%b3%8d%e0%b2%a8%e0%b2%bf%e0%b2%97/ Wed, 18 Jun 2025 12:20:38 +0000 https://www.goodnews24x7.com/?p=4476 ಈಗಿನ ಕಾಲದಲ್ಲಿ ದುಡ್ಡಿಗೆ ಬೆಲೆ, ಯಾರಿಗಾದ್ರೂ ದುಡ್ಡು ಕೊಟ್ಟಿದ್ದರೆ ಒಂದು ರೂಪಾಯಿ ಬಿಡದೇ ವಸೂಲಿ ಮಾಡುವ ಕಾಲದಲ್ಲಿ ನಾವಿದ್ದೇವೆ. ಆದರೆ ಇದಕ್ಕೆ ತದ್ವಿರುದ್ಧವಾದ ಘಟನೆಯೂ ನಡೆದಿದೆ. ವೃದ್ಧ ದಂಪತಿಯ ಶುದ್ಧ ಪ್ರೀತಿ ಹಾಗೂ ಚಿನ್ನದಂಗಡಿ ಮಾಲೀಕನ ಹೃದಯವಂತಿಕೆಗೆ ಈ ವಿಡಿಯೋ ಸಾಕ್ಷಿಯಾಗಿದೆ.…

The post ಚಿಲ್ಲರೆ ಕಾಸಿನಲ್ಲಿ ಪತ್ನಿಗೆ ಮಂಗಳಸೂತ್ರ ಖರೀದಿಸಲು ಬಂದ ವೃದ್ಧ, ಮಂಗಳಸೂತ್ರವನ್ನೇ ಉಡುಗೊರೆಯಾಗಿ ಕೊಟ್ಟ ಅಂಗಡಿಯ ಮಾಲೀಕ…. appeared first on Good News 24x7.

]]>

ಈಗಿನ ಕಾಲದಲ್ಲಿ ದುಡ್ಡಿಗೆ ಬೆಲೆ, ಯಾರಿಗಾದ್ರೂ ದುಡ್ಡು ಕೊಟ್ಟಿದ್ದರೆ ಒಂದು ರೂಪಾಯಿ ಬಿಡದೇ ವಸೂಲಿ ಮಾಡುವ ಕಾಲದಲ್ಲಿ ನಾವಿದ್ದೇವೆ. ಆದರೆ ಇದಕ್ಕೆ ತದ್ವಿರುದ್ಧವಾದ ಘಟನೆಯೂ ನಡೆದಿದೆ. ವೃದ್ಧ ದಂಪತಿಯ ಶುದ್ಧ ಪ್ರೀತಿ ಹಾಗೂ ಚಿನ್ನದಂಗಡಿ ಮಾಲೀಕನ ಹೃದಯವಂತಿಕೆಗೆ ಈ ವಿಡಿಯೋ ಸಾಕ್ಷಿಯಾಗಿದೆ. ಮಾಂಗಲ್ಯ ಖರೀದಿಸಲು ಚಿನ್ನದಂಗಡಿಗೆ ಬಂದ ದಂಪತಿಯ ಬಳಿ, ಅಂಗಡಿ ಮಾಲೀಕನು ಕೇವಲ 20 ರೂ ಸ್ವೀಕರಿಸುವ ಮೂಲಕ ಹೃದಯವಂತಿಕೆ ಮೆರೆದಿದ್ದಾನೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಈ ವ್ಯಕ್ತಿಯ ಒಳ್ಳೆತನವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.

ಚಿನ್ನದ ಬೆಲೆ ಗಗನಕ್ಕೆ ಏರುತ್ತಿದೆ, ಹೀಗಾಗಿ ಆಭರಣವನ್ನು ದೂರದಿಂದ ನೋಡಿಯೇ ಖುಷಿ ಪಡಬೇಕು. ಈಗಿನ ಕಾಲದಲ್ಲಿ ಆಭರಣ ಖರೀದಿ ಮಾಡುವುದೆಂದರೆ ಮಧ್ಯಮ ಹಾಗೂ ಬಡವರ್ಗದ ಜನರಿಗೆ ಕನಸೇ ಸರಿ. ಆಭರಣ ಎಷ್ಟೇ ದುಬಾರಿಯಾಗಿರಲಿ ಈ ಹೆಣ್ಣು ಮಕ್ಕಳು ತಮ್ಮ ಪತಿ ಉಡುಗೊರೆಯಾಗಿ ಆಭರಣ ನೀಡಿದರೆ ಖುಷಿ ಪಡುತ್ತಾರೆ. ವೃದ್ಧ ವ್ಯಕ್ತಿಯೊಬ್ಬನು ತನ್ನ ಪತ್ನಿಗೆ ಮಂಗಳಸೂತ್ರ ಕೊಡಿಸಲು ಆಭರಣದ ಅಂಗಡಿಗೆ ಕರೆದುಕೊಂಡು ಬಂದಿದ್ದಾನೆ. ಆದರೆ ಅಂಗಡಿ ಮಾಲೀಕನು ಈ ದಂಪತಿಯ ಕಷ್ಟವನ್ನು ಅರಿತು ಇವರಿಂದ 20 ರೂಪಾಯಿ ಸ್ವೀಕರಿಸುವ ಮೂಲಕ ಹೃದಯ ಶ್ರೀಮಂತಿಕೆ ಮೆರೆದಿದ್ದಾನೆ. ಈ ಘಟನೆಯೂ ಮಹಾರಾಷ್ಟ್ರದ ಸಂಭಾಜಿನಗರದ ಗೋಪಿಕಾ ಜ್ಯುವೆಲ್ಲರ್ಸ್ನಲ್ಲಿ ನಡೆದಿದೆ ಎನ್ನಲಾಗಿದೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರ ಹೃದಯ ಗೆದ್ದುಕೊಂಡಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ 93 ವರ್ಷದ ವೃದ್ಧನು ಆಭರಣ ಖರೀದಿಸಲು ತನ್ನ ಮಡದಿಯೊಂದಿಗೆ ಆಭರಣದ ಅಂಗಡಿಗೆ ಬಂದಿದ್ದಾನೆ. ಅವರು ತೊಟ್ಟ ಉಡುಗೆಯೇ ಅವರ ಆರ್ಥಿಕ ಸ್ಥಿತಿ ಹೇಗಿದೆ ಎನ್ನುವುದನ್ನು ಸೂಚಿಸುತ್ತದೆ. ಅಂಗಡಿಗೆ ಬಂದ ಈ ವೃದ್ಧ ದಂಪತಿಗಳು ಹಾರ ಮತ್ತು ಮಂಗಳಸೂತ್ರವನ್ನು ಖರೀದಿಸಲು ಮುಂದಾಗುತ್ತಾರೆ. ಇವರಿಬ್ಬರ ಪ್ರೀತಿ ಬಾಂಧವ್ಯವನ್ನು ನೋಡಿದ ಚಿನ್ನದ ಅಂಗಡಿ ಮಾಲೀಕನು ಅವರೊಂದಿಗೆ ಸಂಭಾಷಣೆಗೆ ಇಳಿದಿದ್ದಾನೆ. ಈ ವೇಳೆಯಲ್ಲಿ ನಿಮ್ಮ ಬಳಿ ಹಣ ಎಷ್ಟಿದೆ ಎಂದು ಕೇಳಿದ್ದು, ವೃದ್ಧ ಮಹಿಳೆ 1,120 ರೂ. ಹಣವನ್ನು ತೋರಿಸುತ್ತಿರುವುದನ್ನು ನೋಡಬಹುದು.ಅವರ ಆರ್ಥಿಕ ಸ್ಥಿತಿ ಹಾಗೂ ಕಷ್ಟವನ್ನು ಅರಿತ ಅಂಗಡಿ ಮಾಲೀಕನು “ಇಷ್ಟು ಹಣ?” ಎಂದಿದ್ದಾನೆ. ಆ ವ್ಯಕ್ತಿಯ ಮಾತಿನ ದಾಟಿಯನ್ನು ಅರಿತ ವೃದ್ಧ ಚೀಲಕ್ಕೆ ಕೈ ಹಾಕಿ ನಾಣ್ಯ ತುಂಬಿದ ಗಂಟನು ತೆಗೆದುಕೊಡುತ್ತಾನೆ. ಈ ವೇಳೆಯಲ್ಲಿ ಅಂಗಡಿ ಮಾಲೀಕನು ವೃದ್ಧ ಮಹಿಳೆಯೂ ನೀಡಿದ ಹಣವನ್ನು ಆಕೆಗೆ ಹಿಂದಿರುಗಿಸಿ, ಇದು ಪ್ರೀತಿಯ ಉಡುಗೊರೆ ಎಂದು ಹೇಳಿ ಈ ಆಭರಣಕ್ಕೆ ತಲಾ 20 ರೂ ಹಾಗೂ 10 ರೂ ಮಾತ್ರ ವಿಧಿಸಿರುವುದಾಗಿ ಹೇಳಿರುವುದನ್ನು ನೋಡಬಹುದು. ಹೀಗೆನ್ನುತ್ತಿದ್ದಂತೆ ಈ ವೃದ್ಧ ದಂಪತಿಗಳು ಭಾವುಕರಾಗಿ ಕಣ್ಣೀರು ಸುರಿಸಿದ್ದಾರೆ.

 

 

The post ಚಿಲ್ಲರೆ ಕಾಸಿನಲ್ಲಿ ಪತ್ನಿಗೆ ಮಂಗಳಸೂತ್ರ ಖರೀದಿಸಲು ಬಂದ ವೃದ್ಧ, ಮಂಗಳಸೂತ್ರವನ್ನೇ ಉಡುಗೊರೆಯಾಗಿ ಕೊಟ್ಟ ಅಂಗಡಿಯ ಮಾಲೀಕ…. appeared first on Good News 24x7.

]]>