officials Archives - Good News 24x7 https://www.goodnews24x7.com/tag/officials/ Kannada Sun, 12 Apr 2026 07:14:27 +0000 en-US hourly 1 https://wordpress.org/?v=7.0.2 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg officials Archives - Good News 24x7 https://www.goodnews24x7.com/tag/officials/ 32 32 ಅಬಕಾರಿ ಇಲಾಖೆಯಲ್ಲಿ ಬೃಹತ್ ಹಗರಣ: ಬೋಗಸ್ ದಾಖಲೆ ಸೃಷ್ಟಿಸಿ ನೂರಾರು CL-7 ಪರವಾನಗಿ ಮಂಜೂರು! https://www.goodnews24x7.com/massive-scam-in-the-excise-department-hundreds-of-cl-7-licenses-were-granted-by-creating-bogus-documents/ Sun, 12 Apr 2026 07:13:12 +0000 https://www.goodnews24x7.com/?p=9222 ಬೆಂಗಳೂರು : ರಾಜ್ಯ ಅಬಕಾರಿ ಇಲಾಖೆಯಲ್ಲಿನ ಭ್ರಷ್ಟಾಚಾರದ ಜೇನುಗೂಡು ಈಗ ಲೋಕಾಯುಕ್ತ ತನಿಖೆಯಿಂದ ಬಯಲಾಗಿದೆ. ಮಂಥ್ಲಿ ಮನಿ, ವರ್ಗಾವಣೆ ದಂಧೆ ಹಾಗೂ ಕಿಕ್‌ಬ್ಯಾಕ್ ಆರೋಪಗಳ ನಡುವೆಯೇ, ಅಧಿಕಾರಿಗಳು ನಕಲಿ ದಾಖಲೆಗಳನ್ನು ಸೃಷ್ಟಿಸಿ ನೂರಾರು CL-7 (ಹೋಟೆಲ್ ಮತ್ತು ವಸತಿಗೃಹ) ಪರವಾನಗಿಗಳನ್ನು ಕಾನೂನುಬಾಹಿರವಾಗಿ…

The post ಅಬಕಾರಿ ಇಲಾಖೆಯಲ್ಲಿ ಬೃಹತ್ ಹಗರಣ: ಬೋಗಸ್ ದಾಖಲೆ ಸೃಷ್ಟಿಸಿ ನೂರಾರು CL-7 ಪರವಾನಗಿ ಮಂಜೂರು! appeared first on Good News 24x7.

]]>

ಬೆಂಗಳೂರು : ರಾಜ್ಯ ಅಬಕಾರಿ ಇಲಾಖೆಯಲ್ಲಿನ ಭ್ರಷ್ಟಾಚಾರದ ಜೇನುಗೂಡು ಈಗ ಲೋಕಾಯುಕ್ತ ತನಿಖೆಯಿಂದ ಬಯಲಾಗಿದೆ. ಮಂಥ್ಲಿ ಮನಿ, ವರ್ಗಾವಣೆ ದಂಧೆ ಹಾಗೂ ಕಿಕ್‌ಬ್ಯಾಕ್ ಆರೋಪಗಳ ನಡುವೆಯೇ, ಅಧಿಕಾರಿಗಳು ನಕಲಿ ದಾಖಲೆಗಳನ್ನು ಸೃಷ್ಟಿಸಿ ನೂರಾರು CL-7 (ಹೋಟೆಲ್ ಮತ್ತು ವಸತಿಗೃಹ) ಪರವಾನಗಿಗಳನ್ನು ಕಾನೂನುಬಾಹಿರವಾಗಿ ಮಂಜೂರು ಮಾಡಿರುವುದು ವರದಿಯಲ್ಲಿ ಸಾಬೀತಾಗಿದೆ.

ಅಕ್ರಮದ ಆಳ-ಅಗಲ:
ಬೆಂಗಳೂರು ನಗರ ಜಿಲ್ಲೆಯ ಅಬಕಾರಿ ವಲಯ ಬಿಯುಡಿ-2 ವ್ಯಾಪ್ತಿಯ ಕೆ.ಆರ್. ಪುರ, ಮೇದಹಳ್ಳಿ, ಕೌದೇನಹಳ್ಳಿ, ಬೀದರಹಳ್ಳಿ ಮತ್ತು ರಾಮಪುರ ಪ್ರದೇಶಗಳಲ್ಲಿ ಈ ಅಕ್ರಮ ಅವಿಶ್ರಾಂತವಾಗಿ ನಡೆದಿದೆ. ತನಿಖಾ ವರದಿಯ ಪ್ರಕಾರ, ಅಧಿಕಾರಿಗಳು ಲೈಸೆನ್ಸ್ ನೀಡಲು ಅನುಸರಿಸಿದ ದಾರಿಗಳು ದಿಗಿಲು ಹುಟ್ಟಿಸುವಂತಿವೆ:

ನಕಲಿ ನೀಲನಕಾಶೆ: ಈಗಾಗಲೇ ಇರುವ CL-9 (ಬಾರ್ ಆ್ಯಂಡ್ ರೆಸ್ಟೋರೆಂಟ್) ಕೊಠಡಿಗಳನ್ನೇ CL-7 ಕೊಠಡಿಗಳೆಂದು ಬಿಂಬಿಸಲಾಗಿದೆ.
ದಾಖಲೆಗಳ ಮರೆಯಲ್ಲಿ ವಂಚನೆ: ಬೇರೆ ಕಟ್ಟಡದ ಕಿಚನ್, ಡೈನಿಂಗ್ ಹಾಲ್ ಹಾಗೂ ಶೌಚಾಲಯಗಳ ಛಾಯಾಚಿತ್ರಗಳನ್ನು ನೀಡಿ ಪರವಾನಗಿ ಪಡೆಯಲಾಗಿದೆ.
ಕೆರೆ ಜಾಗದಲ್ಲಿ ಪಾರ್ಕಿಂಗ್: ಪಾರ್ಕಿಂಗ್ ವ್ಯವಸ್ಥೆ ತೋರಿಸಲು ಕೆರೆ ಅಂಗಳದ ಜಾಗವನ್ನು ಬಳಸಿಕೊಳ್ಳಲಾಗಿದ್ದು, ಸುಳ್ಳು ಟ್ರೇಡ್ ಲೈಸೆನ್ಸ್ ಸೃಷ್ಟಿಸಲಾಗಿದೆ.
ಅಸ್ತಿತ್ವವಿಲ್ಲದ ಕಟ್ಟಡ: ಹಲವೆಡೆ ಕಟ್ಟಡಗಳೇ ಇಲ್ಲದಿದ್ದರೂ ಕಾಗದದ ಮೇಲೆ ಸಕಲ ಸೌಲಭ್ಯಗಳಿವೆಯೆಂದು ತೋರಿಸಿ ಲೈಸೆನ್ಸ್ ಮಂಜೂರು ಮಾಡಲಾಗಿದೆ.

ಆರೋಪಿತ ಅಧಿಕಾರಿಗಳ ‘ಕರಾಮತ್ತು’:
ಈ ಬೃಹತ್ ಹಗರಣದಲ್ಲಿ ಅಬಕಾರಿ ಉಪ ಆಯುಕ್ತ ಅಜಿತ್‌ಕುಮಾರ್ ಉಪ ಅಧೀಕ್ಷಕ ತುಕಾರಂ ನಾಯಕ್ ಮತ್ತು ನಿರೀಕ್ಷಕ ಭರತ್ ಎಂಬುವವರ ಹೆಸರುಗಳು ಪ್ರಮುಖವಾಗಿ ಕೇಳಿಬಂದಿವೆ. ಇವರು ಜಿಲ್ಲಾಧಿಕಾರಿಗಳಿಗೆ ತಪ್ಪು ವರದಿ ನೀಡಿ ದಾರಿ ತಪ್ಪಿಸಿದ್ದಲ್ಲದೆ, ಮಧ್ಯವರ್ತಿಗಳ ಮೂಲಕ ಪ್ರತಿ ಲೈಸೆನ್ಸ್‌ಗೆ ಕೋಟ್ಯಂತರ ರೂಪಾಯಿ ಲಂಚ ಪಡೆದಿರುವ ಗಂಭೀರ ಆರೋಪ ಎದುರಿಸುತ್ತಿದ್ದಾರೆ. ವಕೀಲ ಡಾ. ಹರಿಪ್ರಸಾದ್ ಅವರು ನೀಡಿದ ದೂರಿನ ಆಧಾರದ ಮೇಲೆ ಲೋಕಾಯುಕ್ತರು ನಡೆಸಿದ ತನಿಖೆಯಲ್ಲಿ ಈ ಎಲ್ಲಾ ಸತ್ಯಾಂಶಗಳು ಸಾಬೀತಾಗಿವೆ.

ವರ್ಗಾವಣೆ ದಂಧೆ ಮತ್ತು ಸಾರ್ವಜನಿಕರ ಆಕ್ರೋಶ:
ಬೆಂಗಳೂರಿನಲ್ಲೇ ಸುಮಾರು 30 ವರ್ಷಗಳಿಂದ ಬೇರೂರಿರುವ ಕೆಲ ಅಧಿಕಾರಿಗಳು ಸಿಂಡಿಕೇಟ್ ಮಾಡಿಕೊಂಡು ಆಯಕಟ್ಟಿನ ಜಾಗಗಳಿಗಾಗಿ ಕೋಟ್ಯಂತರ ರೂ. ಲಂಚ ನೀಡುತ್ತಿದ್ದಾರೆ ಎಂಬ ಅಂಶವೂ ವರದಿಯಲ್ಲಿದೆ. ವರ್ಗಾವಣೆ ಪ್ರಕ್ರಿಯೆ ಆರಂಭವಾಗುತ್ತಿರುವ ಬೆನ್ನಲ್ಲೇ ಈ ಭ್ರಷ್ಟ ಅಧಿಕಾರಿಗಳನ್ನು ಕೂಡಲೇ ಅಮಾನತು (Suspend) ಮಾಡಬೇಕೆಂದು ಸಾರ್ವಜನಿಕ ವಲಯದಲ್ಲಿ ತೀವ್ರ ಒತ್ತಾಯ ಕೇಳಿಬಂದಿದೆ.

The post ಅಬಕಾರಿ ಇಲಾಖೆಯಲ್ಲಿ ಬೃಹತ್ ಹಗರಣ: ಬೋಗಸ್ ದಾಖಲೆ ಸೃಷ್ಟಿಸಿ ನೂರಾರು CL-7 ಪರವಾನಗಿ ಮಂಜೂರು! appeared first on Good News 24x7.

]]>
ವಿದ್ಯುತ್ ಶಾಕ್​​ಗೆ ಹೆಣ್ಣು ಹುಲಿ ಬಲಿ; ಅರಣ್ಯಾಧಿಕಾರಿಗಳ ಕಳ್ಳಾಟಕ್ಕೆ ರೊಚ್ಚಿಗೆದ್ದ ರೈತರು ! https://www.goodnews24x7.com/female-tiger-dies-of-electric-shock-farmers-angry-at-forest-officials-negligencefemale-tiger-dies-of-electric-shock-farmers-angry-at-forest-officials-negligence/ Tue, 17 Mar 2026 13:19:13 +0000 https://www.goodnews24x7.com/?p=8942   ಜಮೀನಿನ ಬೇಲಿಯಿಂದ ವಿದ್ಯುತ್ ಪ್ರವಹಿಸಿ 5 ವರ್ಷದ ಹೆಣ್ಣು ಹುಲಿ ಸಾವನ್ನಪ್ಪಿರುವಂತಹ ಘಟನೆ ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಪಡಗೂರು ಗ್ರಾಮದಲ್ಲಿ ನಡೆದಿದೆ. ಇದೇ ಹುಲಿ ಮೂರು ಹಸುಗಳನ್ನು ಕೊಂದಿತ್ತು. ಜಾನುವಾರು ಸತ್ತಾಗ ಸ್ಪಂದಿಸದ ಅರಣ್ಯ ಇಲಾಖೆ ಸಿಬ್ಬಂದಿ ಹುಲಿ ಸಾವಿನ…

The post ವಿದ್ಯುತ್ ಶಾಕ್​​ಗೆ ಹೆಣ್ಣು ಹುಲಿ ಬಲಿ; ಅರಣ್ಯಾಧಿಕಾರಿಗಳ ಕಳ್ಳಾಟಕ್ಕೆ ರೊಚ್ಚಿಗೆದ್ದ ರೈತರು ! appeared first on Good News 24x7.

]]>

 

ಜಮೀನಿನ ಬೇಲಿಯಿಂದ ವಿದ್ಯುತ್ ಪ್ರವಹಿಸಿ 5 ವರ್ಷದ ಹೆಣ್ಣು ಹುಲಿ ಸಾವನ್ನಪ್ಪಿರುವಂತಹ ಘಟನೆ ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಪಡಗೂರು ಗ್ರಾಮದಲ್ಲಿ ನಡೆದಿದೆ. ಇದೇ ಹುಲಿ ಮೂರು ಹಸುಗಳನ್ನು ಕೊಂದಿತ್ತು. ಜಾನುವಾರು ಸತ್ತಾಗ ಸ್ಪಂದಿಸದ ಅರಣ್ಯ ಇಲಾಖೆ ಸಿಬ್ಬಂದಿ ಹುಲಿ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ್ದು, ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಗಡಿನಾಡು ಚಾಮರಾಜನಗರದಲ್ಲಿ ಮಾನವ ಮತ್ತು ಕಾಡು ಪ್ರಾಣಿ ಸಂಘರ್ಷ ಮತ್ತೆ ಮುಂದುವರೆದಿದೆ. ಕಳೆದ ವಾರ ಮೂರು ಹಸುವನ್ನ ಕೊಂದು ತಿಂದಿದ್ದ 5 ವರ್ಷದ ಹೆಣ್ಣು ಹುಲಿ ವಿದ್ಯುತ್ ಶಾಕ್​​ಗೆ ಬಲಿಯಾಗಿರುವಂತಹ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಪಡಗೂರು ಗ್ರಾಮದಲ್ಲಿ ನಡೆದಿದೆ. ಜಾನುವಾರು ಸತ್ತಾಗ ಬಾರದ ಅರಣ್ಯ ಸಿಬ್ಬಂದಿ ಇದೀಗ ಹುಲಿ ಸಾವಿನ ವಿಚಾರ ತಿಳಿಯುತ್ತಿದ್ದಂತೆ ಓಡೋಡಿ ಬಂದಿದ್ದ ಅರಣ್ಯಾಧಿಕಾರಿಗಳಿಗೆ ರೈತರು ಚಳಿ ಕೂಡ ಬಿಡಿಸಿದ್ದಾರೆ.

ಅರಣ್ಯ ಇಲಾಖೆ ಸಿಬ್ಬಂದಿಗೆ ಘೇರಾವ್ ಹಾಕಿದ ಅನ್ನದಾತರು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಪಡಗೂರು ಗ್ರಾಮದ ಜಮೀನು ಒಂದಕ್ಕೆ ನೀಡಿದ್ದ ವಿದ್ಯುತ್ ಸಂಪರ್ಕದಿಂದ 5 ವರ್ಷ ಪ್ರಾಯದ ಹೆಣ್ಣು ಹುಲಿ ಸಾವನ್ನಪ್ಪಿದೆ. ಈ ಹಿನ್ನಲೆ ಸ್ಥಳಕ್ಕೆ ಬಂದ ಬಂಡೀಪುರ ಟೈಗರ್ ರಿಸರ್ವ್ ಫಾರೆಸ್ಟ್ ಸಿಬ್ಬಂದಿಗೆ ಘೇರಾವ್ ಹಾಕಿ ಅನ್ನದಾತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಇನ್ನು ಕಳೆದ 15 ದಿನಗಳಲ್ಲಿ ರವಿಚಂದ್ರ ಎಂಬುವವರ ಜಮೀನಿನಲ್ಲಿ ಮೇಯುತ್ತಿದ್ದ ಮೂರು ಜಾನುವಾರುಗಳ ಮೇಲೆ ವ್ಯಾಘ್ರ ದಾಳಿ ಮಾಡಿತ್ತು. ಮೂರು ಹಸುವನ್ನ ಕೊಂದು ತಿಂದು ತೇಗಿತ್ತು. ಆಗ ಬಂಡೀಪುರ ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಿದರೆ ಸ್ಥಳಕ್ಕೆ ಬಾರದೆ ಉಡಾಫೆ ತೋರಿದ್ದರು. ಆದರೆ ಇಂದು ಹುಲಿ ಸತ್ತ ವಿಚಾರ ತಿಳಿದ ತಕ್ಷಣ ಇಡೀ ಬಂಡೀಪುರ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದರು. ಇದರಿಂದ ರೊಚ್ಚಿಗೆದ್ದ ರೈತ ವರ್ಗ ಅರಣ್ಯ ಸಿಬ್ಬಂದಿಗೆ ಘೇರಾವ್ ಹಾಕಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.ಹುಲಿಯ ಕಾಟಕ್ಕೆ ಈ ಭಾಗದ ರೈತರು ರೋಸಿಹೋಗಿದ್ದಾರೆ. ಆಗಲೇ ಅರಣ್ಯ ಸಿಬ್ಬಂದಿ ಬೋನಿಟ್ಟು ಹುಲಿಯನ್ನ ಹಿಡಿದಿದ್ದರೆ ಇಂದು ಹುಲಿ ಬಲಿಯಾಗುತ್ತಿರಲಿಲ್ಲ ಎಂದು ರೈತ ದಿನೇಶ್​ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

 

ಜಮೀನಿನಲ್ಲಿ ವಿದ್ಯುತ್ ಕೊಟ್ಟು ಹುಲಿ ಸಾವಿಗೆ ಕಾರಣವಾದವರ ಮೇಲೆ ಎಫ್​ಐಆರ್ ಮಾಡಿ ಕಾನೂನು ಕ್ರಮ ತೆಗೆದುಕೊಳ್ಳಿ, ಆದರೆ ಕರ್ತವ್ಯ ಲೋಪ ಎಸಗಿದ ಅರಣ್ಯ ಇಲಾಖೆಯ ಸಿಎಫ್ ಪ್ರಭಾಕರನ್ ಮೇಲೆ ಎಫ್ ಐ ಆರ್ ಮಾಡಿದರೆ ಮಾತ್ರ ರೈತನ ಮೇಲೆ ಎಫ್​ಐಆರ್ ಮಾಡಬೇಕು. ಇಲ್ಲದೆ ಹೋದರೆ ಯಾವುದೇ ಕಾರಣಕ್ಕೂ ಪ್ರಕರಣ ದಾಖಲು ಮಾಡುವುದಕ್ಕೆ ಬಿಡಲ್ಲವೆಂದು ರೈತರು ಪಟ್ಟುಹಿಡಿದರು. ರೈತರ ಉಗ್ರ ರೂಪಕ್ಕೆ ಬೆದರಿದ ಬಂಡೀಪುರ ಸಿಎಫ್ ಪ್ರಭಾಕರನ್, ಪೊಲೀಸ್ ರಕ್ಷಣೆ ಜೊತೆ ಸ್ಥಳಕ್ಕೆ ಬಂದಿದ್ದು ಹಾಸ್ಯಸ್ಪದವಾಗಿತ್ತು.

 

The post ವಿದ್ಯುತ್ ಶಾಕ್​​ಗೆ ಹೆಣ್ಣು ಹುಲಿ ಬಲಿ; ಅರಣ್ಯಾಧಿಕಾರಿಗಳ ಕಳ್ಳಾಟಕ್ಕೆ ರೊಚ್ಚಿಗೆದ್ದ ರೈತರು ! appeared first on Good News 24x7.

]]>
ಕಾನ್‌ಫಿಡೆಂಟ್ ಗ್ರೂಪ್‌ನ ಅಧ್ಯಕ್ಷ ಸಿ.ಜೆ ರಾಯ್ ಸಾ#ವಿನ ಕೊನೆಯ ಕ್ಷಣ ಹೇಗಿತ್ತು ಗೊತ್ತಾ? https://www.goodnews24x7.com/do-you-know-what-the-last-moments-of-confident-group-chairman-c-j-roys-death-were-like/ Sat, 31 Jan 2026 07:15:56 +0000 https://www.goodnews24x7.com/?p=8342 ಸಾವಿರಾರು ಕೋಟಿ ಆಸ್ತಿಯ ಒಡೆಯ, ಕಾನ್‌ಫಿಡೆಂಟ್ ಗ್ರೂಪ್‌ನ ಸಂಸ್ಥಾಪಕ ಸಿ.ಜೆ. ರಾಯ್  ಲಾಂಗ್‌ಫೋರ್ಡ್ ಟೌನ್‌ನಲ್ಲಿರುವ ತಮ್ಮ ಕಚೇರಿಯಲ್ಲಿ ಶುಕ್ರವಾರ ಸಾವನ್ನಪ್ಪಿದ್ದಾರೆ. 57 ವರ್ಷದ ಈ ರಿಯಲ್ ಎಸ್ಟೇಟ್ ಉದ್ಯಮಿ ತಮ್ಮ ಪಿಸ್ತೂಲಿನಿಂದ ತಾವೇ ಗುಂಡುಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ಹಲವಾರು ಅನುಮಾನಗಳು…

The post ಕಾನ್‌ಫಿಡೆಂಟ್ ಗ್ರೂಪ್‌ನ ಅಧ್ಯಕ್ಷ ಸಿ.ಜೆ ರಾಯ್ ಸಾ#ವಿನ ಕೊನೆಯ ಕ್ಷಣ ಹೇಗಿತ್ತು ಗೊತ್ತಾ? appeared first on Good News 24x7.

]]>

ಸಾವಿರಾರು ಕೋಟಿ ಆಸ್ತಿಯ ಒಡೆಯ, ಕಾನ್‌ಫಿಡೆಂಟ್ ಗ್ರೂಪ್‌ನ ಸಂಸ್ಥಾಪಕ ಸಿ.ಜೆ. ರಾಯ್  ಲಾಂಗ್‌ಫೋರ್ಡ್ ಟೌನ್‌ನಲ್ಲಿರುವ ತಮ್ಮ ಕಚೇರಿಯಲ್ಲಿ ಶುಕ್ರವಾರ ಸಾವನ್ನಪ್ಪಿದ್ದಾರೆ. 57 ವರ್ಷದ ಈ ರಿಯಲ್ ಎಸ್ಟೇಟ್ ಉದ್ಯಮಿ ತಮ್ಮ ಪಿಸ್ತೂಲಿನಿಂದ ತಾವೇ ಗುಂಡುಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ಹಲವಾರು ಅನುಮಾನಗಳು ಕಾಡುತ್ತಿವೆ. ಅದರಲ್ಲದೆ ಅವರು ಬಳಸಿದ ಪಿಸ್ತೂಲಿಗೆ ಲೈಸೆನ್ಸ್ ಇರಲಿಲ್ಲವೆಂಬ ಶಂಕೆಯೂ ವ್ಯಕ್ತವಾಗಿದೆ.
ಕೇರಳದ ಕೊಚ್ಚಿಯಿಂದ ಬಂದ ಆದಾಯ ತೆರಿಗೆ (ಐಟಿ) ಅಧಿಕಾರಿಗಳ ತಂಡವು ಬೆಂಗಳೂರಿನ ತಮ್ಮ ಸಹೋದ್ಯೋಗಿಗಳೊಂದಿಗೆ ಕಳೆದ ಮೂರು ದಿನಗಳಿಂದ ಕಾನ್‌ಫಿಡೆಂಟ್ ಗ್ರೂಪ್ ಕಚೇರಿಯಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿತ್ತು. ಕಳೆದ ತಿಂಗಳು ಕಚೇರಿಯಲ್ಲಿ ನಡೆದ ದೊಡ್ಡ ಮಟ್ಟದ ದಾಳಿಯಲ್ಲಿ ಕೆಲವು ದಾಖಲೆಗಳನ್ನು ಐಟಿ ಅಧಿಕಾರಿಗಳು ಪರಿಶೀಲಿಸಿ ವಶಪಡಿಸಿಕೊಂಡಿದ್ದರು. ಅದರ ಬೆನ್ನಲ್ಲೇ ಮತ್ತೊಮ್ಮೆ ದಾಳಿ ನಡೆದಿತ್ತು.

ಆದಾಯ ತೆರಿಗೆ (ಐಟಿ) ಅಧಿಕಾರಿಗಳ ದಾಳಿ ವೇಳೆ ನಡೆದಿದ್ದೇನು?
ಮಧ್ಯಾಹ್ನ 12 ಗಂಟೆ: ಬೆಂಗಳೂರಿನ ಕಾನ್‌ಫಿಡೆಂಟ್ ಗ್ರೂಪ್ ಕಚೇರಿಗೆ ಐ-ಟಿ ಅಧಿಕಾರಿಗಳ ಆಗಮನ
ಮಧ್ಯಾಹ್ನ 2 ಗಂಟೆ: ಕಚೇರಿಗೆ ಸಿ.ಜೆ. ರಾಯ್ ಆಗಮನ
ಮಧ್ಯಾಹ್ನ 2–3 ಗಂಟೆ:ಕೆಲವು ದಾಖಲೆಗಳಿಗೆ ಸಹಿ ಹಾಕಲು ಮತ್ತು ಪರಿಶೀಲಿಸಲು ಅಧಿಕಾರಿಗಳ ಸೂಚನೆ
ಮಧ್ಯಾಹ್ನ 3 ಗಂಟೆ: ರಾಯ್ ತಮ್ಮ ಖಾಸಗಿ ಕೇಬಿನ್‌ಗೆ ತೆರಳುತ್ತಾರೆ
ಮಧ್ಯಾಹ್ನ 3–3:10: ಪಿಸ್ತೂಲ್ ತೆಗೆದು ಎದೆಗೆ ಗುಂಡು ಹಾರಿಸಿಕೊಂಡು ಕುಸಿದು ಬೀಳುತ್ತಾರೆ
ಸಂಜೆ 3:10–4 ಗಂಟೆ: ಉದ್ಯೋಗಿಗಳು ಮತ್ತು ಅಧಿಕಾರಿಗಳು ರಾಯ್ ಅವರನ್ನು ಆಂಬ್ಯುಲೆನ್ಸ್ ಮೂಲಕ ಎಚ್‌ಎಸ್‌ಆರ್ ಲೇಔಟ್‌ನ ಆಸ್ಪತ್ರೆಗೆ ಕರೆದೊಯ್ಯುತ್ತಾರೆ; ಆಸ್ಪತ್ರೆಗೆ ತಲುಪುವಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿಯುತ್ತದೆ.
ಸುಮಾರು ಮಧ್ಯಾಹ್ನ 3 ಗಂಟೆಗೆ, ತಮ್ಮ ಕೇಬಿನ್‌ನಲ್ಲಿ ಕೆಲವು ದಾಖಲೆಗಳಿವೆ ಎಂದು ಹೇಳಿ ರಾಯ್ ಒಳಗೆ ತೆರಳಿದ್ದರು. ಕೆಲವೇ ನಿಮಿಷಗಳಲ್ಲಿ ಗುಂಡಿನ ಶಬ್ದ ಕೇಳಿಬಂದಿತ್ತು. ಕೇಬಿನ್‌ನಲ್ಲಿ ಸಿಸಿಟಿವಿ ಕ್ಯಾಮೆರಾ ಇತ್ತೋ ಇಲ್ಲವೋ ಎಂಬುದನ್ನು ಪೊಲೀಸರು ದೃಢಪಡಿಸಿಲ್ಲ.

ದಾಖಲೆಗಳಿರುವ ಬ್ರೀಫ್‌ಕೇಸ್ ಮತ್ತು ಪಿಸ್ತೂಲ್ ಸದಾ ಜೊತೆಗೇ ಇಟ್ಟುಕೊಳ್ಳುತ್ತಿದ್ದ ರಾಯ್
ರಾಯ್ ಅವರ ಆಪ್ತ ಸಹಾಯಕ ಹೇಳುವಂತೆ, ಪಿಸ್ತೂಲ್ ಇದ್ದ ಕಾರಣ ರಾಯ್ ಸದಾ ತಮ್ಮ ಬ್ರೀಫ್‌ಕೇಸ್ ಅನ್ನು ಜೊತೆಗೇ ಇಟ್ಟುಕೊಳ್ಳುತ್ತಿದ್ದರು. ಅಪರೂಪಕ್ಕೆ ಅವುಗಳನ್ನು ಮರೆತರೂ ಸಹ ತಕ್ಷಣ ತಮ್ಮ ಭದ್ರತಾ ಸಿಬ್ಬಂದಿಯನ್ನು ಕಳುಹಿಸಿ ತರಿಸಿಕೊಳ್ಳುತ್ತಿದ್ದರು.
ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮಾತನಾಡಿ, ಸಿ.ಜೆ ರಾಯ್ ಆತ್ಮಹತ್ಯೆಗೆ ಬಳಸಿದ ಪಿಸ್ತೂಲಿನ ತಯಾರಿಕೆ ಮತ್ತು ಕ್ಯಾಲಿಬರ್ ಅನ್ನು ಬಾಲಿಸ್ಟಿಕ್ ತಜ್ಞರ ತಂಡ ಪರಿಶೀಲಿಸಿ ದೃಢಪಡಿಸಬೇಕಿದೆ ಎಂದಿದ್ದಾರೆ.
ಕಾನ್‌ಫಿಡೆಂಟ್ ಗ್ರೂಪ್‌ನ ಸ್ಥಾಪಕ ನಿರ್ದೇಶಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಟಿ.ಎ. ಜೋಸೆಫ್ ಅವರು ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿದ್ದು, ಯಾವುದೇ ಐಟಿ ಅಧಿಕಾರಿಗಳ ವಿರುದ್ಧ ಆರೋಪಗಳನ್ನು ದೂರಿನಲ್ಲಿ ಮಾಡಿಲ್ಲ. ಆದ್ದರಿಂದ ನಾವು ಅಸಹಜ ಮರಣ ಪ್ರಕರಣವನ್ನು ದಾಖಲಿಸಿದ್ದೇವೆ. ಕುಟುಂಬದವರು ಹೊಸ ಆರೋಪಗಳನ್ನು ಮಾಡಿದರೆ ಪ್ರತ್ಯೇಕ ಎಫ್‌ಐಆರ್ ದಾಖಲಿಸುವ ಸಾಧ್ಯತೆಯಿದೆ ಎಂದು ತನಿಖಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಈ ನಡುವೆ ಅವರ ಸಹಾಯಕರೊಬ್ಬರು, ಇಷ್ಟು ವರ್ಷಗಳ ಕಾಲ ರಾಯ್ ಅವರೊಂದಿಗೆ ಕೆಲಸ ಮಾಡಿದ್ದೇನೆ. ಆದರೆ ಅವರು ದುರ್ಬಲ ಮನಸ್ಸಿನವರಾಗಿ ಎಂದಿಗೂ ಕಾಣಿಸಿಲ್ಲ ಎಂದು ಹೇಳಿದ್ದಾರೆ.

ಐ-ಟಿ ಅಧಿಕಾರಿಗಳೇ ಅವರ ಸಾವಿಗೆ ಕಾರಣವೆಂದ ಸಹೋದರ!
ರಾಯ್ ಅವರ ಸಹೋದರ ಮತ್ತು ವೈಟ್‌ಗೋಲ್ಡ್ ಸಂಸ್ಥೆಯ ಮಾಲೀಕ ಸಿ.ಜೆ. ಬಾಬು ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಕಳೆದ ಮೂರು ದಿನಗಳಿಂದ ಕೇರಳದ ಆದಾಯ ತೆರಿಗೆ ಅಧಿಕಾರಿಗಳು ಬೆಂಗಳೂರಿನಲ್ಲಿ ಶೋಧ ನಡೆಸುತ್ತಿದ್ದರು ಎಂದು ಹೇಳಿದರು. ಅಧಿಕಾರಿಗಳಿಂದ ಒತ್ತಡದ ಆರೋಪ ಮಾಡಿರುವ ಅವರು, ರಾಯ್ ಅವರು ಪಿಸ್ತೂಲ್ ಬಳಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಾವಿಗೆ ಐಟಿ ತಂಡವೇ ಕಾರಣ ಎಂದು ಆರೋಪಿಸಿದ್ದಾರೆ.
ರಾಯ್ ಅವರ ಪತ್ನಿ, ಇಪ್ಪತ್ತರ ವಯಸ್ಸಿನ ಮಗ ಮತ್ತು ಮಗಳು ದುಬೈನಲ್ಲಿ ನೆಲೆಸಿದ್ದು, ಶನಿವಾರ ಬೆಳಿಗ್ಗೆ ಬೆಂಗಳೂರಿಗೆ ಆಗಮಿಸುತ್ತಾರೆಂದು ಹೇಳಲಾಗಿದೆ. ರಾಯ್ ಅವರ ತಾಯಿ ಕೊರಮಂಗಲದ ನೆಕ್ಸಸ್ ಮಾಲ್ ಸಮೀಪ ವಾಸಿಸುತ್ತಿದ್ದು, ಅವರು ಅಲ್ಲಿ ಅಪರೂಪಕ್ಕೆ ಮಾತ್ರ ತಂಗುತ್ತಿದ್ದರು ಎಂದು ಸಹಾಯಕರು ತಿಳಿಸಿದ್ದಾರೆ. ಬೆಂಗಳೂರಿಗೆ ಬಂದಾಗ ಸಾಮಾನ್ಯವಾಗಿ ಅವರು ಕೇಂದ್ರ ವ್ಯಾಪಾರ ವಲಯದ ಫೈವ್ ಸ್ಟಾರ್ ಹೋಟೆಲ್‌ಗಳಲ್ಲಿ ವಾಸಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಅಧಿಕಾರಿಗಳು ಹೇಳಿದ್ದೇನು?
ಐಟಿ ಅಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿದ ಪೊಲೀಸರು, ಅಧಿಕಾರಿಗಳು ಕೇವಲ ಅವರ ಸಂಸ್ಥೆಯ ಮೇಲಿದ್ದ ನಿರ್ಬಂಧ ಆದೇಶಗಳನ್ನು ತೆರವುಗೊಳಿಸುವ ಸಲುವಾಗಿ ದಾಖಲೆ ಪರಿಶೀಲನೆ ನಡೆಸುತ್ತಿದ್ದರು. ರಾಯ್ ಅವರ ದಿನನಿತ್ಯದ ಕಾರ್ಯಗಳಿಗೆ ಯಾವುದೇ ನಿರ್ಬಂಧ ಇರಲಿಲ್ಲ. ರಾಯ್​ ಎಷ್ಟು ಸುತ್ತು ಗುಂಡು ಹಾರಿಸಿಕೊಂಡಿದ್ದಾರೆ ಎಂಬುದನ್ನು ತಿಳಿಯಲು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಒಬ್ಬ ಹಿರಿಯ ತನಿಖಾಧಿಕಾರಿ ಮಾತನಾಡಿ, ಗುಂಡಿನ ಶಬ್ದ ಕೇಳಿದ ತಕ್ಷಣ ಉದ್ಯೋಗಿಗಳು ಮತ್ತು ಅಧಿಕಾರಿಗಳಲ್ಲಿ ಗೊಂದಲ ಸೃಷ್ಟಿಯಾಗಿತ್ತು. ನಂತರ ರಾಯ್ ಅವರನ್ನು ಎಚ್‌ಎಸ್‌ಆರ್ ಲೇಔಟ್‌ನ ನಾರಾಯಣ ಆಸ್ಪತ್ರೆಗಳಿಗೆ ಕರೆದೊಯ್ದರು. ಅಲ್ಲಿ ವೈದ್ಯರು ಅವರನ್ನು ಆಸ್ಪತ್ರೆಗೆ ತಲುಪುವಷ್ಟರಲ್ಲಿ ಮೃತಪಟ್ಟಿದ್ದಾರೆಂದರು ಎಂದು ಹೇಳಿದ್ದಾರೆ.

The post ಕಾನ್‌ಫಿಡೆಂಟ್ ಗ್ರೂಪ್‌ನ ಅಧ್ಯಕ್ಷ ಸಿ.ಜೆ ರಾಯ್ ಸಾ#ವಿನ ಕೊನೆಯ ಕ್ಷಣ ಹೇಗಿತ್ತು ಗೊತ್ತಾ? appeared first on Good News 24x7.

]]>
ಗಣತಿ ಒತ್ತಡದಿಂದ ಶಿಕ್ಷಕಿ ಆ*ಹ* ! ಕೆರೆಯಲ್ಲಿ ಶ * ಪತ್ತೆ. https://www.goodnews24x7.com/teacher-dies-in-lake-due-to-census-pressure/ Thu, 16 Oct 2025 06:15:31 +0000 https://www.goodnews24x7.com/?p=7731 ಕೋಲಾರ :- ಬೇತಮಂಗಲ ರಾಜ್ಯ ಸರ್ಕಾರದ ಜಾತಿ ಗಣತಿಗೆ ತೆರಳಿದ್ದ ಕೋಲಾರ ಜಿಲ್ಲೆಯ ಶಿಕ್ಷಕಿ ಕೆರೆ ಯಲ್ಲಿ ಶವವಾಗಿ ಪತ್ತೆಯಾ ಗಿದ್ದು, ಗಣತಿಯಲ್ಲಿ ಹಿರಿಯ ಅಧಿಕಾರಿಗಳು ಕೊಟ್ಟ ಒತ್ತಡದಿಂ ದಾಗಿ ಆತ್ಮಹತ್ಯೆ ಮಾಡಿಕೊಂಡಿ ರಬಹುದು ಎನ್ನಲಾಗಿದೆ. ಅಕ್ತರ್ ಬೇಗಂ (50) ಶಿಕ್ಷಕಿ…

The post ಗಣತಿ ಒತ್ತಡದಿಂದ ಶಿಕ್ಷಕಿ ಆ*ಹ* ! ಕೆರೆಯಲ್ಲಿ ಶ * ಪತ್ತೆ. appeared first on Good News 24x7.

]]>

ಕೋಲಾರ :- ಬೇತಮಂಗಲ ರಾಜ್ಯ ಸರ್ಕಾರದ ಜಾತಿ ಗಣತಿಗೆ ತೆರಳಿದ್ದ ಕೋಲಾರ ಜಿಲ್ಲೆಯ ಶಿಕ್ಷಕಿ ಕೆರೆ ಯಲ್ಲಿ ಶವವಾಗಿ ಪತ್ತೆಯಾ ಗಿದ್ದು, ಗಣತಿಯಲ್ಲಿ ಹಿರಿಯ ಅಧಿಕಾರಿಗಳು ಕೊಟ್ಟ ಒತ್ತಡದಿಂ ದಾಗಿ ಆತ್ಮಹತ್ಯೆ ಮಾಡಿಕೊಂಡಿ ರಬಹುದು ಎನ್ನಲಾಗಿದೆ.

ಅಕ್ತರ್ ಬೇಗಂ (50) ಶಿಕ್ಷಕಿ ಯಾಗಿದ್ದರು, ಅವರು ಸೋಮವಾರ ಸಮೀ ಕೈಗೆ ತೆರಳಿದ್ದರು. ಇವರು ಕಾಣೆಯಾಗಿದ್ದಾರೆ ಎಂದು ಮನೆಯವರು ದೂರು ನೀಡಿದ್ದರು. ಬುಧವಾರ ಬೇತಮಂಗಲ ಹೋಬಳಿಯ ಅಮಾನಿಕೆರೆಯಲ್ಲಿ ಬ್ಯಾಗ್ ತೇಲುತ್ತಿದ್ದನ್ನು ಕಂಡ ಸಳೀಯರು, ಶವ ಕಂಡು ಪೊಲೀಸರ ಗಮನಕ್ಕೆ ತಂದಿದ್ದಾರೆ. ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಶವ ಮೇಲೆತ್ತಿದ್ದಾರೆ.

ಅಕ್ತರ್ ಅವರು ಕಳೆದ 15 ದಿನಗಳಿಂದ ಜಾತಿ ಗಣತಿಯಲ್ಲಿದ್ದರು. ಸಮೀಕ್ಷೆಯಲ್ಲಿ ಜನರು ಸರಿ ಯಾಗಿ ಸ್ಪಂದಿಸದ ಕಾರಣ, ಗಣತಿ ಮುಂದೆ ಸಾಗದೆ ಮಾನ ಸಿಕ ಹಿಂಸೆಗೆ ಒಳಗಾಗಿದ್ದರು. ಇದಿಷ್ಟೇ ಅಲ್ಲದೇ ಹಿರಿಯ ಅಧಿ ಕಾರಿಗಳ ಒತ್ತಡವೂ ಸಹ ಶಿಕ್ಷಕಿ ಖಿನ್ನತೆಗೆ ಒಳಗಾಗುವಂತೆ ಮಾಡಿತ್ತು ಎನ್ನಲಾಗಿದೆ. ಸೋಮವಾರ ಸಮೀಕ್ಷೆ ಮುಗಿಸಿ ಮನೆಗೆ ಬರದ್ದನ್ನು ಕಂಡು ಬೇಗಂ ಅವರ ಪತಿ ಪೊಲೀಸರಿಗೆ ದೂರಿತ್ತಿ ದ್ದರು. ಬುಧವಾರ ಶವ ಪತ್ತೆಯಾಗಿದ್ದು, ಕೆಜಿಎಫ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಸಾವಿಗೆ ಹಿರಿಯ ಅಧಿಕಾರಿಗಳ ಮಾನಸಿಕ ಹಿಂಸೆಯೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಕೋಲಾರದ ಮಹಾಲಕ್ಷ್ಮಿ ಬಡವಾಣೆಯ ನಿವಾಸಿಯಾಗಿದ್ದ ಅಖ್ತರ್ ಬೇಗಂ ಶವ ಕೆಜಿಎಫ್‌ನ ಬೇತಮಂಗಲ ಹೋಬಳಿ ಅಯ್ಯಪಲ್ಲಿ ಅಮಾನಿ ಕೆರೆಯಲ್ಲಿ ಪತ್ತೆಯಾಗಿದೆ. ಈ ಸಾವು ಹಲವು ಅನುಮಾನಗಳಿಗೆ ಕಾರಣವಾಗಿದೆ. ಮೂರು ದಿನದಿಂದ ನಾಪತ್ತೆಯಾಗಿದ್ದ ಅಖ್ತರ್ ಬೇಗಂ ಶವ ಪತ್ತೆಯಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಟೀ ಕೊಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಯ್ಯಪಲ್ಲಿ ಅಮಾನಿ ಕೆರೆಯ ದಡದಲ್ಲಿ ಅಖ್ತರ್ ಬೇಗಂಗೆ ಗಣತಿಗೆ ನೀಡಿದ್ದ ಕಿಟ್ ಪತ್ತೆಯಾಗಿದೆ. ಇದನ್ನು ನೋಡಿ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು, ಅಗ್ನಿಶಾಮಕ ದಳದ ಜೊತೆ ಹುಡುಕಾಟ ನಡೆಸಿ ಕೆರೆಯಲ್ಲಿ ಶವ ಪತ್ತೆ ಮಾಡಿ ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ.

ಸದ್ಯದ ಮಾಹಿತಿ ಪ್ರಕಾರ ಮಗನ ಬೈಕ್‌ನಲ್ಲಿ ಡ್ರಾಪ್ ತೆಗೆದುಕೊಂಡು ಮೂರು ದಿನದ ಹಿಂದೆ ಗಣತಿಗೆ ತೆರಳಿದ್ದರು. ಅವರ ಮೊಬೈಲ್ ಮನೆಯಲ್ಲಿಯೇ ಬಿಟ್ಟು ಹೋಗಿದ್ದರು. ಅವರು ಹಲವು ದಿನದಿಂದ ಮಾನಸಿಕ ಒತ್ತಡದಿಂದ ಬಳಲುತ್ತಿದ್ದರು ಎಂಬ ಮಾಹಿತಿಯೂ ಇದೆ. ಸೋಮವಾರ ರಾತ್ರಿ ಅಖ್ತರ್ ಬೇಗಂ ಮನೆಗೆ ವಾಪಸ್ ಆಗದೇ ಇದ್ದಾಗ ಕೋಲಾರ ನಗರ ಠಾಣೆಗೆ ದೂರು ನೀಡಲಾಗಿತ್ತು.

ಅಖ್ತರ್ ಬೇಗಂ ಮಾನಸಿಕ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ? ಅಥವ ಅವರನ್ನು ಕೊಲೆ ಮಾಡಿ ಶವವನ್ನು ಕೆರೆಗೆ ಎಸೆಯಲಾಗಿದೆಯೇ? ಎಂಬ ಕುರಿತು ತನಿಖೆ ಬಳಿಕ ಮಾಹಿತಿ ತಿಳಿಯಬೇಕಿದೆ.

ಕೆಲವು ದಿನಗಳ ಹಿಂದೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪ್ರಗತಿ ಕುರಿತ ವೀಡಿಯೋ ಕಾನ್ಫರೆನ್ಸ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ನಡೆಸಿದ್ದರು. ಶಿಕ್ಷಕರಿಗೆ ಗೌರವಧನದ ಬಗ್ಗೆ ಯಾವುದೇ ಅನುಮಾನ ಬೇಡ. ಈಗಾಗಲೇ ಗೌರವಧನವನ್ನು ಬಿಡುಗಡೆ ಮಾಡಿದ್ದೇವೆ. ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು ಗಣತಿ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದ್ದರು. ಈಗಾಗಲೇ ಗಣತಿಯಲ್ಲಿ ತೊಡಗಿದ್ದ ಇಬ್ಬರು ಸಿಬ್ಬಂದಿ ಮೃತಪಟ್ಟಿದ್ದರು ಅವರು ಅವಲಂಬಿತರಿಗೆ ತಲಾ 20 ಲಕ್ಷ ಪರಿಹಾರ ನೀಡಲು ಹಣವನ್ನು ಜಿಲ್ಲಾಧಿಕಾರಿಗಳ ಖಾತೆಗೆ ವರ್ಗಾವಣೆ ಮಾಡಲಾಗಿದೆ.

The post ಗಣತಿ ಒತ್ತಡದಿಂದ ಶಿಕ್ಷಕಿ ಆ*ಹ* ! ಕೆರೆಯಲ್ಲಿ ಶ * ಪತ್ತೆ. appeared first on Good News 24x7.

]]>
ಮತದಾರರ ಪಟ್ಟಿಯಲ್ಲಿ ಗೊಂದಲ: ಬಿಹಾರ ಕಾಂಗ್ರೆಸ್ ಆರೋಪಕ್ಕೆ ಗಯಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಸ್ಪಷ್ಟನೆ. https://www.goodnews24x7.com/confusion-in-voter-list-gaya-district-magistrate-clarifies-bihar-congress-allegations/ Sat, 30 Aug 2025 11:34:54 +0000 https://www.goodnews24x7.com/?p=7061 ಹೊಸದಿಲ್ಲಿ: ಬಿಹಾರದ ಮತದಾರರ ಪಟ್ಟಿಗಳಲ್ಲಿ ಮತ್ತೊಂದು ವ್ಯತ್ಯಾಸ ಕಂಡುಬಂದಿದ್ದು, ಕಾಂಗ್ರೆಸ್ ಪಕ್ಷವು ಇದನ್ನು ಪ್ರಶ್ನಿಸಿ ತನ್ನ ವಾದವನ್ನು ಮುಂದುವರೆಸಿದೆ. ಕ್ಷೇತ್ರದಲ್ಲಿ ಬೋಧಗಯಾದ ನಿಡಾನಿ ಗ್ರಾಮದಲ್ಲಿ 947 ಮತದಾರರು ಒಂದೇ ಮನೆ ಸಂಖ್ಯೆಯಲ್ಲಿಯೇ ವಾಸಿಸುತ್ತಿದ್ದಾರಾ ಎಂಬುದನ್ನು ಅವರು ಆರೋಪಿಸಿದ್ದಾರೆ. ಹೀಗಾಗಿ, ಸ್ಥಳೀಯ ಅಧಿಕಾರಿಗಳು…

The post ಮತದಾರರ ಪಟ್ಟಿಯಲ್ಲಿ ಗೊಂದಲ: ಬಿಹಾರ ಕಾಂಗ್ರೆಸ್ ಆರೋಪಕ್ಕೆ ಗಯಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಸ್ಪಷ್ಟನೆ. appeared first on Good News 24x7.

]]>

ಹೊಸದಿಲ್ಲಿ: ಬಿಹಾರದ ಮತದಾರರ ಪಟ್ಟಿಗಳಲ್ಲಿ ಮತ್ತೊಂದು ವ್ಯತ್ಯಾಸ ಕಂಡುಬಂದಿದ್ದು, ಕಾಂಗ್ರೆಸ್ ಪಕ್ಷವು ಇದನ್ನು ಪ್ರಶ್ನಿಸಿ ತನ್ನ ವಾದವನ್ನು ಮುಂದುವರೆಸಿದೆ. ಕ್ಷೇತ್ರದಲ್ಲಿ ಬೋಧಗಯಾದ ನಿಡಾನಿ ಗ್ರಾಮದಲ್ಲಿ 947 ಮತದಾರರು ಒಂದೇ ಮನೆ ಸಂಖ್ಯೆಯಲ್ಲಿಯೇ ವಾಸಿಸುತ್ತಿದ್ದಾರಾ ಎಂಬುದನ್ನು ಅವರು ಆರೋಪಿಸಿದ್ದಾರೆ.

ಹೀಗಾಗಿ, ಸ್ಥಳೀಯ ಅಧಿಕಾರಿಗಳು ಮತ್ತು ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳು ಈ ಆರೋಪಕ್ಕೆ ಪ್ರತಿಕ್ರಿಯೆ ನೀಡಿ, ಗ್ರಾಮದಲ್ಲಿರುವವರಿಗೆ ಯಾವುದೇ ಮನೆ ಸಂಖ್ಯೆ ನೀಡಲಾಗಿಲ್ಲ ಎಂಬುದನ್ನು ವಿವರಿಸಿದರು. ಈ ಕಾರಣದಿಂದಾಗಿ, ಮತದಾರರ ಪಟ್ಟಿಯಲ್ಲಿ ಕಾಲ್ಪನಿಕ ಮನೆಸಂಖ್ಯೆಗಳನ್ನು ಹಾಕಲಾಗಿದೆ ಎಂದು ಅವರು ತಿಳಿಸಿದ್ದಾರೆ.

947 ಜನರ ಮತದಾರರ ಪಟ್ಟಿಯಲ್ಲಿ ಒಂದೇ ಮನೆ?

ಕಾಂಗ್ರೆಸ್ ಪಕ್ಷವು 947 ಜನರ ಮತದಾರರ ಪಟ್ಟಿಯಲ್ಲಿ ಒಂದೇ ಮನೆ ಸಂಖ್ಯೆಗೆ ತಲುಪಿರುವುದನ್ನು ಪ್ರಶ್ನಿಸಿ, “ನಿಡಾನಿ ಗ್ರಾಮದಲ್ಲಿ ಅನೇಕ ಮನೆಗಳು ಮತ್ತು ಕುಟುಂಬಗಳು ಇದ್ದರೂ, ಹೇಗೆ ಇದು ಒಂದೇ ಮನೆ” ಎಂದು ಎಕ್ಸ್ ಪೋಸ್ಟ್‌ನಲ್ಲಿ ಸೂಚಿಸಿದೆ.

ಇದಕ್ಕೆ ಸಂಬಂಧಿಸಿದಂತೆ, ಕಾಂಗ್ರೆಸ್ ಪಕ್ಷವು “ಬೂತ್ ಮಟ್ಟದ ಅಧಿಕಾರಿಗಳು (BLO) ಮತದಾರರ ಪಟ್ಟಿಯಲ್ಲಿ ಮನೆ-ಮನೆ ಪರಿಶೀಲನೆ ಹೇಗೆ ನಡೆಸಿದ್ದಾರೆ? ಮತ್ತು “ನಿಜವಾದ ಮನೆ ಸಂಖ್ಯೆಗಳು” ಪಕ್ಷದ ಈ ಪ್ರಶ್ನೆಗೆ ಉತ್ತರ ನೀಡಿ.

ಅಪಹಾಸ್ಯ ಎನ್ನುವ ಕಾಂಗ್ರೆಸ್

ಕಾಂಗ್ರೆಸ್ ಈ ಪ್ರಕ್ರಿಯೆಯನ್ನು “ಪಾರದರ್ಶಕತೆ” ಎಂಬ ಹೆಸರಿನಲ್ಲಿ ಅಪಹಾಸ್ಯ ಎಂದು ಚರ್ಚಿಸಿದೆ.
“ಒಂದು ಸಣ್ಣ ಹಳ್ಳಿಯಲ್ಲಿನ 947 ಮತದಾರರನ್ನು ಒಂದೇ ವಿಳಾಸದಲ್ಲಿ ದಾಖಲಿಸುವುದು ಹೇಗೆ ಸಾಧ್ಯ?” ಎಂದು ಪ್ರಶ್ನಿಸಿದ ಪಕ್ಷವು, “ಬಿಹಾರ ಮತ್ತು ಭಾರತದಾದ್ಯಂತ ನಡೆಯುತ್ತಿರುವ ಅಕ್ರಮಗಳು” ಬಗ್ಗೆ ಕುತೂಹಲ ವ್ಯಕ್ತಪಡಿಸಿದೆ.

ಇದು “ಪ್ರಜಾಪ್ರಭುತ್ವ” ಅಥವಾ “ವಿಶ್ವಾಸದ ಧ್ರುವತೆ” ಕೊಳ್ಳೆ ಹೊಡೆಯಲು ಇರುವ ಹೊಸ ಮಾರ್ಗವೇ ಎಂಬುದರ ಕುರಿತು ಟಿಪ್ಪಣಿ ಮಾಡಿದೆ.

ರಾಹುಲ್ ಗಾಂಧಿಯ ಪ್ರತಿಕ್ರಿಯೆ

ರಾಹುಲ್ ಗಾಂಧಿ ತಮ್ಮ ಟ್ವೀಟ್ನಲ್ಲಿ, ಕಾಂಗ್ರೆಸ್‌ಪಕ್ಷದ ಆರೋಪವನ್ನು ಮತ್ತೊಮ್ಮೆ ಮುಚ್ಚಳ ಹಾಕಿದರು. ಅವರು “ಚುನಾವಣಾ ಆಯೋಗದ ಜಾದೂ” ಎಂಬ ಮಾತಿನಲ್ಲಿ, “ಇಡೀ ಗ್ರಾಮವನ್ನು ಒಂದೇ ಮನೆಯಲ್ಲಿ ನೆಲೆಗೊಳಿಸಲಾಗಿದೆ” ಎಂದಿದ್ದಾರೆ.

ಗಯಾ ಜಿಲ್ಲಾಡಳಿತದ ಸ್ಪಷ್ಟನೆ

ಈ ಮೂಲಕ, ಗಯಾ ಜಿಲ್ಲಾಡಳಿತವು 947 ಜನರ ಮತದಾರರ ಪಟ್ಟಿಯ ವಿವರಣೆಯನ್ನು ನಾಲ್ವರು ಸ್ಥಳೀಯರ ವಿಡಿಯೋಗಳೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ. “ಅನೇಕ ಗ್ರಾಮಗಳಲ್ಲಿ, ಮನೆ ಸಂಖ್ಯೆಗಳಿಲ್ಲದೆ, ಮತದಾರರ ಪಟ್ಟಿಯಲ್ಲಿ ಸಾಂಕೇತಿಕ ಮನೆ ಸಂಖ್ಯೆಗಳನ್ನು ನೀಡಲಾಗಿದೆ” ಎಂದು ಗಯಾ ಜಿಲ್ಲಾಡಳಿತವು ತನ್ನ ಉತ್ತರವನ್ನು ನೀಡಿದೆ.

“ಇಲ್ಲಿ ಪ್ರಸ್ತುತಪಡಿಸಲಾದ ಎಲ್ಲಾ ಮತದಾರರು ವಾಸಿಸುತ್ತಿರುವವರು ಮತ್ತು ನಿಜವಾದ ಮತದಾರರಾಗಿದ್ದಾರೆ” ಎಂದು ನಿಡಾನಿ ಗ್ರಾಮ ಬೂತ್ ನಂ.161 ರ ಮತದಾರರು ತಮ್ಮ ಸತ್ಯತೆಯನ್ನು ಸ್ಪಷ್ಟಪಡಿಸಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ.

The post ಮತದಾರರ ಪಟ್ಟಿಯಲ್ಲಿ ಗೊಂದಲ: ಬಿಹಾರ ಕಾಂಗ್ರೆಸ್ ಆರೋಪಕ್ಕೆ ಗಯಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಸ್ಪಷ್ಟನೆ. appeared first on Good News 24x7.

]]>
ಮಂಗಳೂರು ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸುವ ಭೀತಿ: ತಡೆಗೋಡೆಯಲ್ಲಿ ಭಾರೀ ಬಿರುಕು.! https://www.goodnews24x7.com/landslide-on-mangaluru-madikeri-national-highway-huge-crack-in-barrier/ Fri, 01 Aug 2025 05:04:24 +0000 https://www.goodnews24x7.com/?p=5204 ಮಡಿಕೇರಿ : ಮಡಿಕೇರಿ ಮಂಗಳೂರು ಮಧ್ಯೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 275 ರಲ್ಲಿ 2018ರ ವೇಳೆ ಭಾರೀ ಭೂಕುಸಿತ ಸಂಭವಿಸಿ ಸಂಚಾರವೇ ಬಂದ್ ಆಗಿತ್ತು. ಅದಾದ ಬಳಿಕ ನಾಲ್ಕೈದು ವರ್ಷ ಕಾಮಗಾರಿ ಮಾಡಿ ಮೂರು ಕೋಟಿ ರೂ. ವೆಚ್ಚದಲ್ಲಿ ಬೃಹತ್…

The post ಮಂಗಳೂರು ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸುವ ಭೀತಿ: ತಡೆಗೋಡೆಯಲ್ಲಿ ಭಾರೀ ಬಿರುಕು.! appeared first on Good News 24x7.

]]>

ಮಡಿಕೇರಿ : ಮಡಿಕೇರಿ ಮಂಗಳೂರು ಮಧ್ಯೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 275 ರಲ್ಲಿ 2018ರ ವೇಳೆ ಭಾರೀ ಭೂಕುಸಿತ ಸಂಭವಿಸಿ ಸಂಚಾರವೇ ಬಂದ್ ಆಗಿತ್ತು. ಅದಾದ ಬಳಿಕ ನಾಲ್ಕೈದು ವರ್ಷ ಕಾಮಗಾರಿ ಮಾಡಿ ಮೂರು ಕೋಟಿ ರೂ. ವೆಚ್ಚದಲ್ಲಿ ಬೃಹತ್ ತಡೆಗೋಡೆ ನಿರ್ಮಾಣ ಮಾಡಲಾಗಿತ್ತು.

ಆದರೆ, ಈ ತಡೆಗೋಡೆ ನಿರ್ಮಾಣವಾಗಿ ಒಂದು ಮಳೆಗಾಲ ಕಳೆಯುವುದರ ಒಳಗೆಯೇ ಬಿರುಕು ಬಿಟ್ಟು ಯಾವುದೇ ಕ್ಷಣದಲ್ಲಿ ಕುಸಿಯುವ ಭೀತಿ ಎದುರಾಗಿದೆ. ಮಡಿಕೇರಿ ನಗರದಿಂದ ಕೇವಲ ಅರ್ಧ ಕಿಲೋಮೀಟರ್ ದೂರದಲ್ಲಿ ಈ ಹೆದ್ದಾರಿ ತಡೆಗೋಡೆ ಬಾಯ್ಬಿಟ್ಟು ಕುಳಿತಿದೆ. ಸುಮಾರು ನಾಲ್ಕು ಹಂತಗಳಲ್ಲಿ 80 ಮೀಟರ್ ಎತ್ತರದಲ್ಲಿ ಈ ತಡೆಗೋಡೆಯನ್ನು ಬಲಿಷ್ಠವಾಗಿ ಕಟ್ಟಲಾಗಿದೆ. ಆದರೆ, ನೀರು ಮತ್ತು ಮಣ್ಣಿನ ವಿಪರೀತ ಒತ್ತಡದಿಂದ ಈ ತಡೆಗೋಡೆ ಬಿರುಕು ಬಿಟ್ಟಿದೆ. ಸದ್ಯಕ್ಕೆ ಹೆದ್ದಾರಿಗೆ ಯಾವುದೇ ಅಪಾಯ ಇಲ್ಲ ಅಂತ ಜಿಲ್ಲಾಧಿಕಾರಿ ಹೇಳಿದ್ದಾರೆ.

https://www.youtube.com/live/piuKXId_P5I?si=NEkWIYd3geJR59Xq  🔴LIVE | ಟ್ರೇಡಿಂಗ್ ಹೆಸರಲ್ಲಿ ರಾಜಕುಮಾರನನ್ನು ಬಲೆಗೆ ಕೆಡವಿದ ಸುಂದರಿ,ಲಾವಣ್ಯ ಎಂಬಾಕೆಯಿಂದ ಮೋಸ ಮಾಡಿರುವ ಆರೋಪ

ಸ್ಥಳೀಯ ನಿವಾಸಿಗಳ ಸ್ಥಳಾಂತರಕ್ಕೆ ಸೂಚನೆ


ತಡೆಗೋಡೆಯ ಕೆಳಗೆ ಹಲವು ಮನೆಗಳಿದ್ದು ಎಲ್ಲಾ ಮನೆಗಳೂ ಅಪಾಯಕ್ಕೆ ಸಿಲುಕಿವೆ. ತಡೆಗೋಡೆ ಕುಸಿದು ಹೋದರೆ ಮನೆಗಳು ಮತ್ತು ಅವುಗಳಲ್ಲಿರುವ ನಿವಾಸಿಗಳೂ ಅಪಾಯಕ್ಕೆ ಸಿಲುಕಲಿದ್ದಾರೆ. ಹಾಗಾಗಿ ಈ ನಿವಾಸಿಗಳ ಸ್ಥಳಾಂತರ ಮಾಡುವಂತೆ ಸೂಚನೆ ನೀಡಲಾಗಿದೆ. ತಡೆಗೋಡೆ ಬಿರುಕು ಬಿಟ್ಟ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಎಂಜಿನಿಯರ್ಗಳು ಸ್ಥಳ ಪರಿಶೀಲನೆ ಮಾಡಿ ಹಿರಿಯ ಅಧಿಕಾರಿಗಳಿಗೆ ವರದಿ ನೀಡಿದ್ದಾರೆ. ಸದ್ಯ ಹೆದ್ದಾರಿಯಲ್ಲಿ ಬ್ಯಾರಿಕೇಡ್ ಹಾಕಿ ಸಂಚಾರ ನಿಯಂತ್ರಣ ಮಾಡಿದ್ದಾರೆ. ಇದರಿಂದ ಸಂಚಾರಕ್ಕೆ ಅಡಚಣೆ ಯಾಗಿದೆ.

The post ಮಂಗಳೂರು ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸುವ ಭೀತಿ: ತಡೆಗೋಡೆಯಲ್ಲಿ ಭಾರೀ ಬಿರುಕು.! appeared first on Good News 24x7.

]]>
ಧ*ರ್ಮಸ್ಥಳದಲ್ಲಿ ನೂರಾರು ಶ*ಗಳ ಹೂತಿಟ್ಟ ಕೇಸ್: 6ನೇ ಪಾಯಿಂಟ್ ನಲ್ಲಿ ಮೂಳೆಗಳು ಪತ್ತೆ. https://www.goodnews24x7.com/hundreds-of-bodies-buried-in-dharmasthala-bones-found-at-6th-point/ Thu, 31 Jul 2025 11:14:43 +0000 https://www.goodnews24x7.com/?p=5194 ಧರ್ಮಸ್ಥಳ : ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದಾಗಿ ತಪ್ಪೊಪ್ಪಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕಾಗಿದ್ದು 6ನೇ ಪಾಯಿಂಟ್ ನಲ್ಲಿ ಅಸ್ಥಿಪಂಜರದ ಮೂಳೆಗಳು ಪತ್ತೆಯಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ. ದೂರುದಾರ ಗುರುತಿಸಿದ 6 ನೇ ಪಾಯಿಂಟ್ ನಲ್ಲಿ 2 ಮೂಳೆಗಳು ಸಿಕ್ಕಿದೆ ಎಂಬ…

The post ಧ*ರ್ಮಸ್ಥಳದಲ್ಲಿ ನೂರಾರು ಶ*ಗಳ ಹೂತಿಟ್ಟ ಕೇಸ್: 6ನೇ ಪಾಯಿಂಟ್ ನಲ್ಲಿ ಮೂಳೆಗಳು ಪತ್ತೆ. appeared first on Good News 24x7.

]]>

ಧರ್ಮಸ್ಥಳ : ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದಾಗಿ ತಪ್ಪೊಪ್ಪಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕಾಗಿದ್ದು 6ನೇ ಪಾಯಿಂಟ್ ನಲ್ಲಿ ಅಸ್ಥಿಪಂಜರದ ಮೂಳೆಗಳು ಪತ್ತೆಯಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ.

ದೂರುದಾರ ಗುರುತಿಸಿದ 6 ನೇ ಪಾಯಿಂಟ್ ನಲ್ಲಿ 2 ಮೂಳೆಗಳು ಸಿಕ್ಕಿದೆ ಎಂಬ ಮಾಹಿತಿ ಲಭ್ಯವಾಗಿದೆ. 2 ಎಲುಬುಗಳು ಸಿಕ್ಕ ಬಗ್ಗೆ ಎಸ್ ಐಟಿ ಅಧಿಕಾರಿಗಳು ಮಾಹಿತಿ ನೀಡಿದ್ದು, ಹೆಚ್ಚಿನ ಆಳ ತೆಗೆಯಲು ಮುಂದಾಗಿದ್ದಾರೆ.

ಮೂಳೆ ಸಿಕ್ಕ ಹಿನ್ನೆಲೆಯಲ್ಲಿ ಅಕ್ಕಪಕ್ಕದಲ್ಲಿ ಅಗೆಯಲಾಗುತ್ತಿದ್ದು, ಎಸ್ ಐಟಿ ತಂಡದ ಅಧಿಕಾರಿಗಳು ಮೂಳೆ ಸಿಕ್ಕ ಬಗ್ಗೆ ಲ್ಯಾಪ್ ಟಾಪ್ ನಲ್ಲಿ ದಾಖಲು ಮಾಡಿಕೊಳ್ಳುತ್ತಿದ್ದಾರೆ. ಜಿಪಿಎಸ್ ಆನ್ ಮಾಡಿಕೊಂಡು ರಿಪೋರ್ಟ್ ದಾಖಲು ಮಾಡಿಕೊಂಡಿದ್ದಾರೆ. ದೇಹದ ಪೂರ್ತಿ ಭಾಗಗಳು ಸಿಕ್ಕಿಲ್ಲ, ಆದರೆ ದೇಹದ ಕೆಲವು ಭಾಗಗಳು ಮಾತ್ರ ಸಿಕ್ಕಿದ್ದು, ಆಳಕ್ಕೆ ತೆಗೆದು ಹುಡುಕಾಟ ನಡೆಸಲಾಗುತ್ತಿದೆ.

The post ಧ*ರ್ಮಸ್ಥಳದಲ್ಲಿ ನೂರಾರು ಶ*ಗಳ ಹೂತಿಟ್ಟ ಕೇಸ್: 6ನೇ ಪಾಯಿಂಟ್ ನಲ್ಲಿ ಮೂಳೆಗಳು ಪತ್ತೆ. appeared first on Good News 24x7.

]]>
ಬೈಕ್ ಟ್ಯಾಕ್ಸಿ ಸಂಚಾರ ನಿಷೇಧವಿದ್ದರೂ ಹಲವೆಡೆ ಸಂಚರ: RTO ಅಧಿಕಾರಿಗಳಿಂದ ಸೀಜ್! https://www.goodnews24x7.com/bike-taxis-plying-in-many-places-despite-ban-rto-officials-seize/ Mon, 16 Jun 2025 12:07:12 +0000 https://www.goodnews24x7.com/?p=4451 ಬೆಂಗಳೂರು : ಇಂದಿನಿಂದ ರಾಜ್ಯಾದ್ಯಂತ ಅನಧಿಕೃತ ಬೈಕ್ ಟ್ಯಾಕ್ಸಿಗಳನ್ನ ನಿಷೇಧಿಸಲಾಗಿದ್ದು, ನಿಷೇಧವಿದ್ದರೂ ಬೆಂಗಳೂರಿನ ಹಲವು ಕಡೆಗಳಲ್ಲಿ ಸಂಚರಿಸುತ್ತಿದ್ದ ಬೈಕ್ ಟ್ಯಾಕ್ಸಿಗಳನ್ನ ಆರ್ ಟಿಒ ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಬೈಕ್ ಟ್ಯಾಕ್ಸಿಗಳ ಸಂಚಾರಕ್ಕೆ ಮಧ್ಯಂತರ ಅನುಮತಿ ನೀಡಲು ಇತ್ತೀಚೆಗೆ ಹೈಕೋರ್ಟ್ ನಿರಾಕರಿಸಿ ಓಲಾ,…

The post ಬೈಕ್ ಟ್ಯಾಕ್ಸಿ ಸಂಚಾರ ನಿಷೇಧವಿದ್ದರೂ ಹಲವೆಡೆ ಸಂಚರ: RTO ಅಧಿಕಾರಿಗಳಿಂದ ಸೀಜ್! appeared first on Good News 24x7.

]]>

ಬೆಂಗಳೂರು : ಇಂದಿನಿಂದ ರಾಜ್ಯಾದ್ಯಂತ ಅನಧಿಕೃತ ಬೈಕ್ ಟ್ಯಾಕ್ಸಿಗಳನ್ನ ನಿಷೇಧಿಸಲಾಗಿದ್ದು, ನಿಷೇಧವಿದ್ದರೂ ಬೆಂಗಳೂರಿನ ಹಲವು ಕಡೆಗಳಲ್ಲಿ ಸಂಚರಿಸುತ್ತಿದ್ದ ಬೈಕ್ ಟ್ಯಾಕ್ಸಿಗಳನ್ನ ಆರ್ ಟಿಒ ಅಧಿಕಾರಿಗಳು ಸೀಜ್ ಮಾಡಿದ್ದಾರೆ.


ಬೈಕ್ ಟ್ಯಾಕ್ಸಿಗಳ ಸಂಚಾರಕ್ಕೆ ಮಧ್ಯಂತರ ಅನುಮತಿ ನೀಡಲು ಇತ್ತೀಚೆಗೆ ಹೈಕೋರ್ಟ್ ನಿರಾಕರಿಸಿ ಓಲಾ, ಊಬರ್, ರ್ಯಾಪಿಡೋ ಬೈಕ್ ಟ್ಯಾಕ್ಸಿಗಳಿಗೆ ಹೈಕೋರ್ಟ್ ಬಿಗ್ ಶಾಕ್ ನೀಡಿತ್ತು. ಈ ಹಿನ್ನೆಲೆಯಲ್ಲಿ ಇಂದಿನಿಂದ ರಾಜ್ಯಾದ್ಯಂತ ಬೈಕ್ ಟ್ಯಾಕ್ಸಿ ನಿಷೇಧಿಸಲಾಗಿದ್ದು ಈ ನಡುವೆಲೂ ಬೆಂಗಳೂರಿನ ಕೆಲವು ಕಡೆಗಳಲ್ಲಿ ಬೈಕ್ ಟ್ಯಾಕ್ಸಿಗಳು ಸಂಚರಿಸುತ್ತಿದ್ದವು.

ಇದೀಗ RTO ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ನಗರದ ಹಲವೆಡೆ ಕಡೆ ಬೈಕ್ ಟ್ಯಾಕ್ಸಿ ಸೀಜ್ ಮಾಡಿದ್ದಾರೆ. ರಾಜಾಜಿನಗರ, ಯಶವಂತಪುರ ಸೇರಿದಂತೆ ಹಲವು ಕಡೆ ನಿಷೇಧದ ನಡುವೆಯೂ ಬೈಕ್ ಟ್ಯಾಕ್ಸಿ ಸಂಚರಿಸುತ್ತಿದ್ದವು. ಈ ಹಿನ್ನೆಲೆ ಬೆಂಗಳೂರಿನಲ್ಲಿ RTO ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಸೀಜ್ ಮಾಡಿದ್ದಾರೆ.

The post ಬೈಕ್ ಟ್ಯಾಕ್ಸಿ ಸಂಚಾರ ನಿಷೇಧವಿದ್ದರೂ ಹಲವೆಡೆ ಸಂಚರ: RTO ಅಧಿಕಾರಿಗಳಿಂದ ಸೀಜ್! appeared first on Good News 24x7.

]]>
2000 ಇರುವವರಿಗೆ ಮಾತ್ರ ಆಷಾಢ ಶುಕ್ರವಾರದ ವಿಶೇಷ ದರ್ಶನದ ಪ್ಯಾಕೇಜ್! ಉಳಿದವರ ಗತಿ ಏನು? https://www.goodnews24x7.com/special-darshan-package-for-ashada-friday-only-for-those-who-have-2000-what-will-happen-to-the-rest/ Thu, 12 Jun 2025 10:51:33 +0000 https://www.goodnews24x7.com/?p=4358 ಮೈಸೂರು :- ಈ ಬಾರಿ ಆಷಾಢ ಮಾಸದ ಶುಕ್ರವಾರದ ದರ್ಶನದ ಹಿನ್ನೆಲೆಯಲ್ಲಿ ವಾರಾಂತ್ಯದ ಶುಕ್ರವಾರ, ಶನಿವಾರ ಮತ್ತು ಭಾನುವಾರಗಳಂದು ಚಾಮುಂಡಿಬೆಟ್ಟಕ್ಕೆ ಖಾಸಗಿ ವಾಹನ ಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಚಾಮುಂಡಿಬೆಟ್ಟದ ಶ್ರೀ ಚಾಮುಂ ಡೇಶ್ವರಿ ದೇಗುಲದಲ್ಲಿ ಜೂ.27, ಜು.4, 11 ಮತ್ತು 15ರಂದು…

The post 2000 ಇರುವವರಿಗೆ ಮಾತ್ರ ಆಷಾಢ ಶುಕ್ರವಾರದ ವಿಶೇಷ ದರ್ಶನದ ಪ್ಯಾಕೇಜ್! ಉಳಿದವರ ಗತಿ ಏನು? appeared first on Good News 24x7.

]]>

ಮೈಸೂರು :- ಈ ಬಾರಿ ಆಷಾಢ ಮಾಸದ ಶುಕ್ರವಾರದ ದರ್ಶನದ ಹಿನ್ನೆಲೆಯಲ್ಲಿ ವಾರಾಂತ್ಯದ ಶುಕ್ರವಾರ, ಶನಿವಾರ ಮತ್ತು ಭಾನುವಾರಗಳಂದು ಚಾಮುಂಡಿಬೆಟ್ಟಕ್ಕೆ ಖಾಸಗಿ ವಾಹನ ಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಚಾಮುಂಡಿಬೆಟ್ಟದ ಶ್ರೀ ಚಾಮುಂ ಡೇಶ್ವರಿ ದೇಗುಲದಲ್ಲಿ ಜೂ.27, ಜು.4, 11 ಮತ್ತು 15ರಂದು ದೇವರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಜ.17ರಂದು ಶ್ರೀ ಚಾಮುಂಡೇಶ್ವರಿ ಅಾನವರ ವರ್ಧಂತ್ಯುತ್ಸವ ನಡೆಯಲಿದ್ದು, ಚಾಮುಂಡೇಶ್ವರಿ ಕ್ಷೇತ್ರಾಭಿವೃದ್ಧಿ ಪ್ರಾಧಿ ಕಾರ, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸಹಯೋಗದಲ್ಲಿ ದೇವರ ದರ್ಶನಕ್ಕೆ ಸರ್ವ ಸಿದ್ಧತೆ ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.

ಮೈಸೂರಿನ ಜಿಲ್ಲಾ ಪಂಚಾಯ್ತಿ ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಆಷಾಢ ಶುಕ್ರವಾರ ಸಂಬಂಧ ಪೂರ್ವಭಾವಿ ಸಭೆ ನಡೆಸಿದ ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಚಾಮುಂಡಿಬೆಟ್ಟದಲ್ಲಿ ಜೂನ್ 27ರಿಂದ ಜುಲೈ 18ರವರೆಗೆ ನಾಲ್ಕು ಶುಕ್ರವಾರಗಳಂದು ಆಷಾಢ ಮಾಸಾಚರಣೆ ಇರುವುದರಿಂದ ಲಕ್ಷಾಂತರ ಭಕ್ತರು ಅಧಿದೇವತೆ ತಾಯಿ ಶ್ರೀ ಚಾಮುಂಡೇಶ್ವರಿ ಅಮ್ಮನವರ ದರ್ಶನ ಪಡೆಯಲು ಬರುವುದರಿಂದ ಸರ್ವ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ.

ನೂಕು-ನುಗ್ಗಲನ್ನು ತಡೆಯುವ ಸಲು ವಾಗಿ ವಾರಾಂತ್ಯದ ಶುಕ್ರವಾರ, ಶನಿವಾರ ಮತ್ತು ಭಾನುವಾರಗಳಂದು ಚಾಮುಂಡಿ ಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶ ನಿರ್ಬಂಧಿಸಲಾಗಿದ್ದು, ಲಲಿತಮಹಲ್ ಹೆಲಿಪ್ಯಾಡ್ ನಿಂದ 2,000 ರೂ. ವಿಶೇಷ ಗಾಗಿ ಪ್ರತ್ಯೇಕ ಎಸಿ ಬಸ್ಗಳನ್ನು ವ್ಯವಸ್ಥೆ. ಈ ಪ್ಯಾಕೇಜ್ ನಲ್ಲಿ ತೆರಳುವ ದರ್ಶನದ ಟಿಕೆಟ್ ಪಡೆಯುವ ಭಕ್ತರಿಗೆ ಪ್ರತ್ಯೇಕ ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಮಾಡಬಹುದಾಗಿದ್ದು, ಅಂತಹ ಭಕ್ತರಿಗೆ ಲಾಡು ಪ್ರಸಾದ, ಗಂಡ ಭೇರುಂಡ ವಿಗ್ರಹ, ಕುಂಕುಮ, ಕೈ ದಾರ ವುಳ್ಳ ಕಿಟ್ ಅನ್ನು ನೀಡಲಾಗುವುದು. ಆದೇ ರೀತಿ 300 ರೂ.ಗಳ ಟಿಕೆಟ್ ದರ್ಶನದ ಸರತಿ ಸಾಲಿನ ವ್ಯವಸ್ಥೆಯೂ ಇರುತ್ತದೆ . 2000 ರೂ. ವಿಶೇಷ 6ನೇ ಪುಟಕ್ಕೆ ಸರತಿ ಸಾಲು ಹಾಗೂ ಉಚಿತ ದರ್ಶನದ
ದರ್ಶನದ ಟಿಕೆಟ್ ಪಡೆದು ಬರುವ ಭಕ್ತರನ್ನು ಸಿಬ್ಬಂದಿ ಕರೆದೊಯ್ದು ದೇವರ ದರ್ಶನ ಮಾಡಿಸಿ ಸುರಕ್ಷಿತವಾಗಿ ಕರೆತರು ವರಲ್ಲದೆ, ಅವರ ವಾಹನಗಳಿಗೂ ಪ್ರತ್ಯೇಕ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ.

ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ಭಕ್ತರಿಗಾಗಿ ಚಾಮುಂಡಿಬೆಟ್ಟದಲ್ಲಿ ಕುಡಿಯುವ ನೀರು, ಶೌಚಾಲಯ, ಪ್ರಸಾದ, ಸ್ವಚ್ಛತೆ ವ್ಯವಸ್ಥೆ ಯನ್ನು ಮಾಡಲಾಗಿದ್ದು, ವಿವಿಧ ಇಲಾಖೆ ಗಳ ಅಧಿಕಾರಿಗಳು ಸಮನ್ವಯ ಸಾಧಿಸಿ ಯಾವುದೇ ತೊಂದರೆ, ಗೊಂದಲ ಉಂಟಾಗದಂತೆ ಸರ್ವ ರೀತಿಯಲ್ಲಿ ಸೌಲಭ್ಯ ಕಲ್ಪಿಸಬೇಕೆಂದು ಅಧಿಕಾರಿಗಳಿಗೆ ನಿರ್ದೆಶನ ನೀಡಲಾಗಿದ್ದು, ಭದ್ರತೆಗಾಗಿ ನಗರ ಪೊಲೀಸ್ ಘಟಕದ ವತಿಯಿಂದ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಿ ಭಕ್ತರ ಸುರಕ್ಷತೆಗೆ ಆಧ್ಯತೆ ನೀಡ ಲಾಗುವುದು ಎಂದು ಡಾ. ಹೆಚ್.ಸಿ. ಮಹದೇವಪ್ಪ ಇದೇ ವೇಳೆ ತಿಳಿಸಿದರು.

ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಅಭಿವೃದ್ಧಿ ಪ್ರಾಧಿಕಾರ, ಮೈಸೂರು ಮಹಾನಗರಪಾಲಿಕೆ, ನಿರ್ಮಿತಿ ಕೇಂದ್ರ, ಆರೋಗ್ಯ ಇಲಾಖೆ, ಅಗ್ನಿಶಾಮಕ ದಳ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ, ಕೆಎಸ್ಆರ್ಟಿಸಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ನಾಲ್ಕೂ ಆಷಾಢ ಶುಕ್ರವಾರಗಳಂದು ಹಾಜರಿದ್ದು, ಭಕ್ತರಿಗೆ ಸಕಲ ಸೌಲಭ್ಯ ಗಳನ್ನು ಒದಗಿಸುವಂತೆ ನಿರ್ದೇಶನ ನೀಡಲಾಗಿದ್ದು, ಬೆಟ್ಟಕ್ಕೆ ಆಗಮಿಸುವ ಭಕ್ತಾದಿಗಳ ಅನುಕೂಲಕ್ಕಾಗಿ ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಲ್ಲಿರುವ ಲಲಿತ ಮಹಲ್ ಹೆಲಿಪ್ಯಾಡ್ ಮೈದಾನದಿಂದ ಕೆಎಸ್ಆರ್ಟಿಸಿ ಬಸ್ಸುಗಳಲ್ಲಿ ಉಚಿತ ವಾಗಿ ತೆರಳಲು ವ್ಯವಸ್ಥೆ ಮಾಡಲಾಗಿದೆ ಎಂದರು. ಈ ಸಂಬಂಧ ಈಗಾಗಲೇ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಗಳನ್ನು ನಡೆಸಿ ಪೂರ್ವ ಸಿದ್ಧತೆ ಮಾಡಿಕೊಂಡಿ ದ್ದಾರೆ. ಭಕ್ತರು ಯಾವುದೇ ಗೊಂದಲ ಇಲ್ಲದಂತೆ ಶಾಂತಿಯಿಂದ ತಾಯಿ ಚಾಮುಂಡೇಶ್ವರಿ ದೇವಿಯ ದರ್ಶನ ಮಾಡುವಂತೆಯೂ ಅವರು ಇದೇ ಸಂದರ್ಭ ತಿಳಿಸಿದರು.


ಶಾಸಕ ಜಿ.ಟಿ.ದೇವೇಗೌಡ, ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದ ರಾಮಯ್ಯ, ಜಿಲ್ಲಾಧಿಕಾರಿ ಜಿ.ಲಕ್ಷ್ಮೀ ಕಾಂತ ರೆಡ್ಡಿ, ನಗರಪಾಲಿಕೆ ಆಯುಕ್ತ ಶೇಕ್ ತನ್ನೀರ್ ಆಸಿಫ್, ನಗರ ಪೊಲೀಸ್ ಕಮಿಷ್ಕರ್ ಸೀಮಾ ಲಾಟ್ಕರ್, ಎಸ್ಪಿ ಎನ್.ವಿಷ್ಣುವರ್ಧನ, ಎಂಡಿಎ ಆಯುಕ್ತ ಕೆ.ಆರ್.ರಕ್ಷಿತ್, ಕಬಿನಿ ವೃತ್ತದ ಸೂಪರಿಂ ಟೆಂಡಿಂಗ್ ಇಂಜಿನಿಯರ್ ಕೆ.ಮಹೇಶ್, ಮೈಸೂರು ವೃತ್ತದ ಅರಣ್ಯ ಸಂರಕ್ಷಣಾ ಧಿಕಾರಿ (ಸಿಎಫ್) ಡಾ. ಮಾಲತಿಪ್ರಿಯ, ಎಐಎಡಿಬಿ ವಿಶೇಷ ಭೂ ಸ್ವಾಧೀನಾಧಿ ಕಾರಿ ಡಾ. ಎನ್.ಸಿ.ವೆಂಕಟರಾಜು, ಸೆಸ್ಕ್ ಸೂಪರಿಂಟೆಂಡಿಂಗ್ ಇಂಜಿನಿಯರ್ ಸುನಿಲ್, ತಹಸೀಲ್ದಾರ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿ ಗಳು ಸಭೆಯಲ್ಲಿ ಉಪಸ್ಥಿತರಿದ್ದರು.

The post 2000 ಇರುವವರಿಗೆ ಮಾತ್ರ ಆಷಾಢ ಶುಕ್ರವಾರದ ವಿಶೇಷ ದರ್ಶನದ ಪ್ಯಾಕೇಜ್! ಉಳಿದವರ ಗತಿ ಏನು? appeared first on Good News 24x7.

]]>
ಆಷಾಢ ಮಾಸಾದಲ್ಲಿ ಚಾಮುಂಡಿಬೆಟ್ಟಕ್ಕೆ ವಾರಾಂತ್ಯ ಖಾಸಗಿ ವಾಹನ ನಿರ್ಬಂಧ! https://www.goodnews24x7.com/private-vehicle-ban-on-chamundi-hill-during-ashada-masa/ Thu, 12 Jun 2025 07:05:02 +0000 https://www.goodnews24x7.com/?p=4339 ಮೈಸೂರು : ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇಗುಲದಲ್ಲಿ ಜೂ. 27 ರಂದು ಮೊದಲ ಜು. 4 ರಂದು 2ನೇ, ಜು. 11ರಂದು 3ನೇ, ಜು. 18ರಂದು 4ನೇ ಆಷಾಢ ಶುಕ್ರವಾರ ಆಚರಣೆ ನಡೆಯುತ್ತದೆ. ಈ ಹಿನ್ನಲೆಯಲ್ಲಿ ವಾರಾಂತ್ಯದ ಮೂರು ದಿನ(ಆಷಾಢ ಶುಕ್ರವಾರ, ಶನಿವಾರ,…

The post ಆಷಾಢ ಮಾಸಾದಲ್ಲಿ ಚಾಮುಂಡಿಬೆಟ್ಟಕ್ಕೆ ವಾರಾಂತ್ಯ ಖಾಸಗಿ ವಾಹನ ನಿರ್ಬಂಧ! appeared first on Good News 24x7.

]]>

ಮೈಸೂರು : ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇಗುಲದಲ್ಲಿ ಜೂ. 27 ರಂದು ಮೊದಲ ಜು. 4 ರಂದು 2ನೇ, ಜು. 11ರಂದು 3ನೇ, ಜು. 18ರಂದು 4ನೇ ಆಷಾಢ ಶುಕ್ರವಾರ ಆಚರಣೆ ನಡೆಯುತ್ತದೆ. ಈ ಹಿನ್ನಲೆಯಲ್ಲಿ ವಾರಾಂತ್ಯದ ಮೂರು ದಿನ(ಆಷಾಢ ಶುಕ್ರವಾರ, ಶನಿವಾರ, ಭಾನುವಾರ) ಖಾಸಗಿ ವಾಹನಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.

ಈ ನಿಟ್ಟಿನಲ್ಲಿ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ, ಜಿಲ್ಲಾಡಳಿತ ಹಾಗೂ ಇನ್ನಿತರ ಸಂಬಂಧಪಟ್ಟ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.

”ಜೂ. 27 ರಿಂದ ನಾಲ್ಕು ಶುಕ್ರವಾರಗಳಂದು ಲಕ್ಷಾಂತರ ಭಕ್ತರು ದೇವಿಯ ದರ್ಶನ ಪಡೆಯುತ್ತಾರೆ. ಶನಿವಾರ, ಭಾನುವಾರವೂ ಇದೇ ರಶ್ ಮುಂದುವರಿಯುತ್ತದೆ. ಹಾಗಾಗಿ ಇದೇ ಮೊದಲ ಬಾರಿಗೆ ಶುಕ್ರವಾರದೊಂದಿಗೆ ಶನಿವಾರ, ಭಾನುವಾರವೂ ಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ,” ಎಂದು ಮಾಹಿತಿ ನೀಡಿದರು.

 

ವಿಶೇಷ ದರ್ಶನಕ್ಕೆ ಎಸಿ ಬಸ್:

ವಿಶೇಷ ದರ್ಶನಕ್ಕಾಗಿ 2000 ರೂ. ಟಿಕೆಟ್ ಪಡೆದು ಬರುವ ಭಕ್ತಾದಿಗಳಿಗಾಗಿ ಇದೇ ಮೊದಲ ಬಾರಿಗೆ ಎಸಿ ಬಸ್ ವ್ಯವಸ್ಥೆ ಮಾಡಲಾಗಿದೆ. ಇವರು ತಮ್ಮ ವಾಹನಗಳನ್ನು ಹೆಲಿಪ್ಯಾಡ್ನಲ್ಲಿ ನಿಲುಗಡೆ ಮಾಡಿ ಎಸಿ ಬಸ್ನಲ್ಲಿ ತೆರಳಿ, 2000 ರೂ.ನ ವಿಶೇಷ ಕ್ಯೂನಲ್ಲಿ ದೇವಿಯ ದರ್ಶನ ಪಡೆಯಬಹುದು. ಸಾಮಾನ್ಯ(ಉಚಿತ)ಸರತಿ ಸಾಲು, 300 ರೂ. ಟಿಕೆಟ್ ಸಾಲು ಕೂಡ ಇರುತ್ತವೆ. ಹಣಕೊಟ್ಟು ತೆರಳುವ ಸಾಲಿನವರಿಗೆ ಒಂದು ಲಾಡು ಪ್ರಸಾದ ಉಚಿತವಾಗಿ ನೀಡಲಾಗುವುದು. ದರ್ಶನಕ್ಕೆ ಯಾವುದೇ ತೊಂದರೆ ಆಗದಂತೆ ಕ್ರಮವಹಿಸಲು ಸಂಬಂಧಿಸಿದ ಎಲ್ಲಾ ಇಲಾಖೆಗಳಿಗೂ ಸೂಚನೆ ನೀಡಲಾಗಿದೆ,” ಎಂದರು.

6000 ಹೆಕ್ಟೇರ್ ಡೀಮ್ಡ್ ಫಾರೆಸ್ಟ್ ಸರ್ವೆ:


”ಕೆಲವೆಡೆ ಗೈಡ್ಲೈನ್ ಇಲ್ಲದಿದ್ದರೂ ಡೀಮ್ಡ್ ಫಾರೆಸ್ಟ್ ಎಂದು ಘೋಷಣೆ ಮಾಡಲಾಗಿದೆ. ಈ ರೀತಿಯ ಸುಮಾರು 6 ಸಾವಿರ ಹೆಕ್ಟೇರ್ ಪ್ರದೇಶವನ್ನು ಗುರುತಿಸಲಾಗಿದೆ. ರೆವಿನ್ಯೂ ಹಾಗೂ ಅರಣ್ಯ ಇಲಾಖೆ ಸರ್ವೆ ಮಾಡಿ ಇದನ್ನು ಪನರ್ ಪರಿಶೀಲಿಸಲು ಸೂಚನೆ ನೀಡಲಾಗಿದೆ. ಪರಿಶೀಲನೆ ವೇಳೆ ಗೈಡ್ಲೈನ್ ವ್ಯಾಪ್ತಿಗೆ ಬಾರದ ಜಮೀನನ್ನು ರೈತರಿಗೆ ಮರಳಿಸಲು ತಿಳಿಸಲಾಗಿದೆ,” ಎಂದರು.

ಅನುಕಂಪದ ಆಧಾರದಲ್ಲಿ ಪರಿಹಾರ:
”ಚಿತ್ರನಗರಿ ನಿರ್ಮಾಣ ಯೋಜನೆ ಹಾಗೂ ಕೋಚನಹಳ್ಳಿ ಕೈಗಾರಿಕೆ ಪ್ರದೇಶದ ಭೂಮಿಯನ್ನು ಅಧಿಕೃತವಾಗಿ ಸರಕಾರ ಪಡೆದುಕೊಂಡಿದ್ದರೂ ಕೆಲವರು ತಮ್ಮ ಬಳಿ ಯಾವುದೇ ದಾಖಲೆಗಳಿಲ್ಲದಿದ್ದರೂ ತಮಗೆ ಸೇರಿದ್ದೆಂದು ಹೇಳುತ್ತಿದ್ದಾರೆ. ಕೆಲವರಿಗೆ ಅನುಕಂಪದ ಆಧಾರದ ಮೇಲೆ ಪರಿಹಾರಕ್ಕೆ ಕ್ರಮವಹಿಸಲಾಗುವುದು. ಒಂದು ವೇಳೆ ಸುಳ್ಳು ಹೇಳಿಕೊಂಡು ವಿನಾಕಾರಣ ತೊಂದರೆ ಕೊಡುತ್ತಿದ್ದರೆ ಅಂತವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು,” ಎಂದು ಎಚ್ಚರಿಸಿದರು.

ರನ್ವೇ ವಿಸ್ತರಣೆ ಪ್ರಗತಿ :
”ವಿಮಾನ ನಿಲ್ದಾಣ ವಿಸ್ತರಣೆಗೆ ಬೇಕಾದ 240 ಎಕರೆ ಭೂಮಿ ಸ್ವಾಧೀನ ಪ್ರಕ್ರಿಯೆ ಇನ್ನೆರಡು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಸಿಎಂ ಅವರೇ ಕೇಂದ್ರಕ್ಕೆ ರನ್ವೇ ವಿಸ್ತರಣೆ ಜಾಗದಲ್ಲಿ ಬರುವ ಕೆಇಬಿ ಲೈನ್ ಸ್ಥಳಾಂತರ, ಮೂರು ಕಾಲುವೆಗಳಿರುವಲ್ಲಿ ಬಾಕ್ಸ್ ಬ್ರಿಡ್ಜ್ ಮಾಡಲು ಅನುದಾನ ನೀಡುವಂತೆ ಮನವಿ ಮಾಡಿದ್ದಾರೆ. ಆದರೆ, ಕೇಂದ್ರ ಅದಕ್ಕೆ ಒಪ್ಪಲಿಲ್ಲ. ಹೀಗಾಗಿ ರಾಜ್ಯ ಸರಕಾರ 100 ಕೋಟಿ ರೂ. ವೆಚ್ಚವನ್ನು ಭರಿಸಲು ಕ್ಯಾಬಿನೆಟ್ನಲ್ಲಿ ನಿರ್ಧರಿಸಿದೆ. ಮೈಸೂರು-ನಂಜನಗೂಡು ಹೆದ್ದಾರಿ ಸ್ಥಳಾಂತರಕ್ಕೆ 60 ಎಕರೆ ಜಮೀನು ಪಡೆಯಲು ರಾಷ್ಟ್ರೀಯ ಹೆದ್ದಾರಿ ಪ್ರಾಕಾರಕ್ಕೆ ಮನವಿ ಮಾಡಲಾಗಿದೆ,” ಎಂದರು.

ಕಬಿನಿಯಲ್ಲಿ ಜಲಕ್ರೀಡೆಗೆ ಅನುಮತಿ :

”ಕಬಿನಿ ಹಿನ್ನೀರಿನಲ್ಲಿ ಜಲಕ್ರೀಡೆಗಳ ಆಯೋಜನೆಗೆ ಜೆಎಲ್ಆರ್ಗೆ ಅನುಮತಿ ನೀಡಲಾಗಿದೆ. ‘ಮೈಸೂರು ಅಭಿವೃದ್ಧಿ ಪ್ರಾಧಿಕಾರದಿಂದ (ಎಂಡಿಎ)57 ಸಿಎ ನಿವೇಶನ ಹಾಗೂ 200 ನಿವೇಶನಗಳನ್ನು ಆನ್ಲೈನ್ನಲ್ಲಿ ಹರಾಜು ಮಾಡಲಾಗುವುದು,” ಎಂದು ಮಹದೇವಪ್ಪ ತಿಳಿಸಿದರು.

ಶಾಸಕ ಜಿ.ಟಿ.ದೇವೇಗೌಡ, ಜಿಲ್ಲಾಕಾರಿ ಲಕ್ಷ್ಮೇಕಾಂತರೆಡ್ಡಿ, ಜಿ.ಪಂ ಸಿಇಒ ಯುಕೇಶ್ ಕುಮಾರ್, ಜಿಲ್ಲಾಎಸ್ಪಿ ವಿಷ್ಣುವರ್ಧನ್, ಎಂಡಿಎ ಆಯುಕ್ತ ರಕ್ಷಿತ್ ಹಾಗೂ ನಾನಾ ಇಲಾಖೆ ಅಧಿಕಾರಿಗಳು ಇದ್ದರು.

The post ಆಷಾಢ ಮಾಸಾದಲ್ಲಿ ಚಾಮುಂಡಿಬೆಟ್ಟಕ್ಕೆ ವಾರಾಂತ್ಯ ಖಾಸಗಿ ವಾಹನ ನಿರ್ಬಂಧ! appeared first on Good News 24x7.

]]>