policeman Archives - Good News 24x7 https://www.goodnews24x7.com/tag/policeman/ Kannada Wed, 22 Apr 2026 06:41:44 +0000 en-US hourly 1 https://wordpress.org/?v=7.0 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg policeman Archives - Good News 24x7 https://www.goodnews24x7.com/tag/policeman/ 32 32 ನ್ಯಾಯಾಂಗದ ಮೇಲೆ ಭರವಸೆ ಮೂಡಿಸಿದ ಇತ್ತೀಚಿನ ಮಹತ್ವದ ತೀರ್ಪುಗಳು https://www.goodnews24x7.com/the-number-of-criminal-cases-in-our-society-is-increasing-day-by-day-complex-cases-like-murder-property-disputes-and-marital-disputes-have-been-gathering-dust-in-the-courts-for-years-it-is-a-matter/ Wed, 22 Apr 2026 06:41:44 +0000 https://www.goodnews24x7.com/?p=9371 ನಮ್ಮ ಸಮಾಜದಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಕೊಲೆ, ಆಸ್ತಿ ಕಲಹ ಹಾಗೂ ದಾಂಪತ್ಯ ಕಲಹಗಳಂತಹ ಜಟಿಲ ಪ್ರಕರಣಗಳು ನ್ಯಾಯಾಲಯದ ಕಟಕಟೆಯಲ್ಲಿ ವರ್ಷಗಟ್ಟಲೆ ಧೂಳು ಹಿಡಿಯುತ್ತಿವೆ. ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಲಕ್ಷಾಂತರ ಪ್ರಕರಣಗಳು ಇಂದಿಗೂ ವಿಲೇವಾರಿಯಾಗದೆ ಬಾಕಿ…

The post ನ್ಯಾಯಾಂಗದ ಮೇಲೆ ಭರವಸೆ ಮೂಡಿಸಿದ ಇತ್ತೀಚಿನ ಮಹತ್ವದ ತೀರ್ಪುಗಳು appeared first on Good News 24x7.

]]>

ನಮ್ಮ ಸಮಾಜದಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಕೊಲೆ, ಆಸ್ತಿ ಕಲಹ ಹಾಗೂ ದಾಂಪತ್ಯ ಕಲಹಗಳಂತಹ ಜಟಿಲ ಪ್ರಕರಣಗಳು ನ್ಯಾಯಾಲಯದ ಕಟಕಟೆಯಲ್ಲಿ ವರ್ಷಗಟ್ಟಲೆ ಧೂಳು ಹಿಡಿಯುತ್ತಿವೆ. ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಲಕ್ಷಾಂತರ ಪ್ರಕರಣಗಳು ಇಂದಿಗೂ ವಿಲೇವಾರಿಯಾಗದೆ ಬಾಕಿ ಉಳಿದಿರುವುದು ಕಳವಳಕಾರಿ ಸಂಗತಿ. ಕೆಲವು ಜಮೀನು ವಿವಾದಗಳಂತೂ ಎಷ್ಟು ಸುದೀರ್ಘವಾಗಿ ನಡೆಯುತ್ತವೆ ಎಂದರೆ, ಒಂದು ತಲೆಮಾರು ನ್ಯಾಯಾಲಯ ಅಲೆದು ಸುಸ್ತಾಗಿ, ಅಂತಿಮವಾಗಿ ಅವರ ಮಕ್ಕಳು ಹೋರಾಟವನ್ನು ಮುಂದುವರಿಸುವ ಅನಿವಾರ್ಯತೆ ಎದುರಾಗಿದೆ. ಇಂತಹ ಸನ್ನಿವೇಶಗಳ ನಡುವೆ ಅಮಾನವೀಯ ಕೃತ್ಯ ಎಸಗಿದವರಿಗೆ ಗಲ್ಲು ಅಥವಾ ಜೀವಾವಧಿ ಶಿಕ್ಷೆಯಾದಾಗ ನ್ಯಾಯಾಂಗದ ಮೇಲೆ ತುಸು ನಂಬಿಕೆ ಮೂಡುತ್ತದೆ. ಆದರೂ, ಶಿಕ್ಷೆಗೊಳಗಾದವರು ಪ್ರಭಾವ ಬಳಸಿ ಅಥವಾ ಕ್ಷಮಾದಾನದ ಮೂಲಕ ಬಿಡುಗಡೆಯಾದಾಗ ಸಮಾಜದಲ್ಲಿ ಕೆಲವೊಮ್ಮೆ ಸಂಶಯಗಳು ಹುಟ್ಟಿಕೊಳ್ಳುವುದು ಸಹಜ.

ಇತ್ತೀಚಿನ ಕೆಲವು ಮಹತ್ವದ ತೀರ್ಪುಗಳು ಕಾನೂನಿನ ಶಕ್ತಿಯನ್ನು ಮರುಸ್ಥಾಪಿಸಿವೆ. ತಮಿಳುನಾಡಿನ ಸಾತಾಂಕುಳಂನಲ್ಲಿ ಲಾಕ್‌ಡೌನ್ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ತಂದೆ ಜಯರಾಜ್ ಮತ್ತು ಮಗ ಬೆನಿಕ್ಸ್ ಎಂಬವರನ್ನು ಪೊಲೀಸರು ಅಮಾನವೀಯವಾಗಿ ಥಳಿಸಿ ಕೊಂದ ಘಟನೆ ದೇಶವನ್ನೇ ಬೆಚ್ಚಿಬೀಳಿಸಿತ್ತು. ಪೊಲೀಸರೇ ಸಾಕ್ಷ್ಯ ನಾಶಪಡಿಸಲು ಯತ್ನಿಸಿದರೂ, ಅದೇ ಠಾಣೆಯ ಕಾನ್ಸ್ಟೇಬಲ್ ರೇವತಿ ಎಂಬವರು ಯಾವುದೇ ಬೆದರಿಕೆಗೆ ಬಗ್ಗದೆ ಸತ್ಯ ನುಡಿದ ಪರಿಣಾಮ ಒಂಬತ್ತು ಪೊಲೀಸರಿಗೆ ಮಧುರೈ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ. ಇದು ಕರ್ತವ್ಯ ಪ್ರಜ್ಞೆ ಮತ್ತು ನ್ಯಾಯಕ್ಕೆ ಸಂದ ಜಯವಾಗಿದೆ.

ಹಾಗೆಯೇ ಕರ್ನಾಟಕದಲ್ಲಿ ಸಂಚಲನ ಮೂಡಿಸಿದ್ದ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ರಾಜಕೀಯ ಪ್ರಭಾವದ ನಡುವೆಯೂ ಸಿಬಿಐ ತನಿಖೆ ನಡೆದು, ಮಾಜಿ ಸಚಿವ ವಿನಯ್ ಕುಲಕರ್ಣಿ ಸೇರಿದಂತೆ 16 ಮಂದಿಗೆ ಜೀವಾವಧಿ ಶಿಕ್ಷೆಯಾಗಿದೆ. ಇದರ ಜೊತೆಗೆ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ದೌರ್ಜನ್ಯ ಪ್ರಕರಣ, ನಟ ದರ್ಶನ್ ಪ್ರಕರಣ ಹಾಗೂ ಜನಾರ್ದನ ರೆಡ್ಡಿ ಅವರ ಪ್ರಕರಣಗಳಲ್ಲಿ ನಡೆಯುತ್ತಿರುವ ಕಾನೂನು ಪ್ರಕ್ರಿಯೆಗಳು ಸಮಾಜಕ್ಕೆ ಒಂದು ಸ್ಪಷ್ಟ ಸಂದೇಶ ನೀಡಿವೆ. “ಕಾನೂನಿಗಿಂತ ಯಾರೂ ದೊಡ್ಡವರಲ್ಲ” ಮತ್ತು ತಪ್ಪೆಸಗಿದವರು ಎಷ್ಟೇ ಪ್ರಭಾವಿಗಳಾಗಿದ್ದರೂ ನ್ಯಾಯದ ಮುಂದೆ ತಲೆಬಾಗಲೇಬೇಕು ಎಂಬ ಆಶಾವಾದವನ್ನು ಈ ಬೆಳವಣಿಗೆಗಳು ನಾಗರಿಕ ಸಮಾಜದಲ್ಲಿ ಮೂಡಿಸಿವೆ.

The post ನ್ಯಾಯಾಂಗದ ಮೇಲೆ ಭರವಸೆ ಮೂಡಿಸಿದ ಇತ್ತೀಚಿನ ಮಹತ್ವದ ತೀರ್ಪುಗಳು appeared first on Good News 24x7.

]]>