Ward 28 of Manjunatha Archives - Good News 24x7 https://www.goodnews24x7.com/tag/ward-28-of-manjunatha/ Kannada Wed, 02 Apr 2025 11:09:49 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Ward 28 of Manjunatha Archives - Good News 24x7 https://www.goodnews24x7.com/tag/ward-28-of-manjunatha/ 32 32 ಅವೈಜ್ಞಾನಿಕವಾಗಿ ಚರಂಡಿ ಕಾಮಗಾರಿ, ಅಧಿಕಾರಿಗಳಿಗೆ ಹಿಡಿಶಾಪ ಹಾಕಿದ ಸ್ಥಳೀಯರು. https://www.goodnews24x7.com/%e0%b2%85%e0%b2%b5%e0%b3%88%e0%b2%9c%e0%b3%8d%e0%b2%9e%e0%b2%be%e0%b2%a8%e0%b2%bf%e0%b2%95%e0%b2%b5%e0%b2%be%e0%b2%97%e0%b2%bf-%e0%b2%9a%e0%b2%b0%e0%b2%82%e0%b2%a1%e0%b2%bf-%e0%b2%95%e0%b2%be%e0%b2%ae/ Wed, 02 Apr 2025 11:09:49 +0000 https://www.goodnews24x7.com/?p=2995 ಹುಣಸೂರು :- ಅವೈಜ್ಞಾನಿಕವಾಗಿ ಚರಂಡಿ ಕಾಮಗಾರಿ ನಡೆಸಿದ ಹಿನ್ನಲೆ ಚರಂಡಿ ನೀರು ಮನೆಗಳಿಗೆ ನುಗ್ಗುತ್ತಿರುವ ಘಟನೆ ಹುಣಸೂರು ಬಡಾವಣೆ ನಿವಾಸಿಗಳನ್ನ ಹೈರಾಣುಗೊಳಿಸಿದೆ. ಕಾಮಗಾರಿ ನಡೆಸಿ ಕೈಕಟ್ಟಿ ಕುಳಿತ ಅಧಿಕಾರಿಗಳಿಗೆ ಸ್ಥಳೀಯರು ಹಿಡಿಶಾಪ ಹಾಕುತ್ತಿದ್ದಾರೆ.ಕೂಡಲೇ ಅವ್ಯವಸ್ಥೆಗೆ ಪರಿಹಾರ ಕಲ್ಪಿಸದಿದ್ದಲ್ಲಿ ಪ್ರತಿಭಟನೆ ದಾರಿ ಹಿಡಿಯಬೇಕಾಗುತ್ತದೆಂದು…

The post ಅವೈಜ್ಞಾನಿಕವಾಗಿ ಚರಂಡಿ ಕಾಮಗಾರಿ, ಅಧಿಕಾರಿಗಳಿಗೆ ಹಿಡಿಶಾಪ ಹಾಕಿದ ಸ್ಥಳೀಯರು. appeared first on Good News 24x7.

]]>

ಹುಣಸೂರು :- ಅವೈಜ್ಞಾನಿಕವಾಗಿ ಚರಂಡಿ ಕಾಮಗಾರಿ ನಡೆಸಿದ ಹಿನ್ನಲೆ ಚರಂಡಿ ನೀರು ಮನೆಗಳಿಗೆ ನುಗ್ಗುತ್ತಿರುವ ಘಟನೆ ಹುಣಸೂರು ಬಡಾವಣೆ ನಿವಾಸಿಗಳನ್ನ ಹೈರಾಣುಗೊಳಿಸಿದೆ. ಕಾಮಗಾರಿ ನಡೆಸಿ ಕೈಕಟ್ಟಿ ಕುಳಿತ ಅಧಿಕಾರಿಗಳಿಗೆ ಸ್ಥಳೀಯರು ಹಿಡಿಶಾಪ ಹಾಕುತ್ತಿದ್ದಾರೆ.ಕೂಡಲೇ ಅವ್ಯವಸ್ಥೆಗೆ ಪರಿಹಾರ ಕಲ್ಪಿಸದಿದ್ದಲ್ಲಿ ಪ್ರತಿಭಟನೆ ದಾರಿ ಹಿಡಿಯಬೇಕಾಗುತ್ತದೆಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.ಹುಣಸೂರು ತಾಲೂಕು ಮಂಜುನಾಥ ಬಡಾವಣೆ ವಾರ್ಡ್ 28 ರಲ್ಲಿನ ನಿವಾಸಿಗಳು ಚರಂಡಿ ನೀರಿನ ಅವ್ಯವಸ್ಥೆಯಿಂದಾಗಿ ಅಧಿಕಾರಿಗಳ ವಿರುದ್ದ ಆಕ್ರೋಷ ವ್ಯಕ್ತಪಡಿಸುತ್ತಿದ್ದಾರೆ.ಇತ್ತೀಚೆಗೆ ನಡೆಸಿದ ಚರಂಡಿ ಕಾಮಗಾರಿ ಅವೈಜ್ಞಾನಿಕವಾಗಿ ಮಾಡಿರುವ ಹಿನ್ನಲೆ ನೀರು ಸರಾಗವಾಗಿ ಹರಿದುಹೋಗದೆ ಮನೆಗಳಿಗೇ ನುಗ್ಗುತ್ತಿದೆ.ಲಕ್ಷಾಂತರ ವೆಚ್ಚ ಮಾಡಿ ಮಾಡಿದ ಕಾಮಗಾರಿ ಉಪಯೋಗಕ್ಕೆ ಬಾರದಂತಾಗಿದೆ.ಶೌಚಾಲಯ ನೀರು ಹರಿದುಹೋಗಲೆಂದು ಚರಂಡಿ ನಿರ್ಮಾಣ ಮಾಡಲಾಗಿದೆ.ಆದ್ರೆ ಚರಂಡಿಗೆ ಸೇರಿದ ನೀರು ಮುಂದೆ ಹರಿದುಹೋಗದೆ ತಟಸ್ಥವಾಗಿ ನಿಂತಿದೆ.ಅಲ್ಲದೆ ಮನೆಗೇ ವಾಪಸ್ ನುಗ್ಗುತ್ತಿದೆ.

ಇದರಿಂದಾಗಿ ಸಮಸ್ಯೆ ಮತ್ತಷ್ಟು ಉಲ್ಭಣವಾಗಿದೆ.ಈಗಾಗಲೇ ಸಮಸ್ಯಗೆ ಪರಿಹಾರ ಕಲ್ಪಿಸುವಂತೆ ಸ್ಥಳೀಯರು ಸಾಕಷ್ಟು ಬಾರಿ ದೂರು ನೀಡಿದ್ದಾರೆ.ಹೀಗಿದ್ದೂ ಕ್ಯಾರೆ ಎನ್ನದ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ.ಕೂಡಲೇ ಚರಂಡಿಯನ್ನ ವೈಜ್ಞಾನಿಕವಾಗಿ ನಿರ್ಮಿಸಿ ಸಮಸ್ಯೆಗೆ ಪರಿಹಾರ ಕಲ್ಪಿಸದಿದ್ದಲ್ಲಿ ಪ್ರತಿಭಟನೆ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ…

The post ಅವೈಜ್ಞಾನಿಕವಾಗಿ ಚರಂಡಿ ಕಾಮಗಾರಿ, ಅಧಿಕಾರಿಗಳಿಗೆ ಹಿಡಿಶಾಪ ಹಾಕಿದ ಸ್ಥಳೀಯರು. appeared first on Good News 24x7.

]]>