ಮೈಸೂರು : ಮೈಸೂರು ದಸರಾ ಆನೆಗಳೊಂದಿಗೆ ಆಗ ಮಿಸಿರುವ ಮಾವುತರು ಹಾಗೂ ಕಾವಾಡಿಗರಿಗೆ ರಾಕಿ ಕಟ್ಟಿ ಸಿಹಿ ಹಂಚಿ ಶ್ರೀ ದುರ್ಗಾ ಫೌಂಡೇಶನ್ನ ಮಹಿಳೆಯರು ರಕ್ಷಾ ಬಂಧನ ಆಚರಿಸಿದರು.
ಸವಾ ಆನೆಗಳೊಂದಿಗೆ ವಾಸಿಸುವ ಮಾವುತರು ಹಾಗೂ ಕಾವಾಡಿಗರಿಗೆ ರಾಕಿ ಕಟ್ಟುವ ಸೌಭಾಗ್ಯ ನಮ್ಮದಾಗಿರು ವುದೇ ಸಂತಸ ತಂದಿದೆ. ಭಾರತೀಯ ಪರಂಪರೆಯಲ್ಲಿ ರಕ್ಷಾ ಬಂಧನ ಹಬ್ಬಕ್ಕೆ ಬಹಳ ಮಹತ್ವವಿದ್ದು, ಮಾವುತರು ಹಾಗೂ ಕಾವಾಡಿಗರಿಗೆ ರಾಕಿ ಕಟ್ಟಿ ಈ ವರ್ಷದ ದಸರಾ ಉತ್ಸವವನ್ನು ಯಶಸ್ವಿ ಗೊಳಿಸಲಿ ಎಂದು ಪಾರ್ಥಿಸಿದ್ದೇವೆ
ಎಂದು ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷೆ ರೇಖಾ ತಿಳಿಸಿದರು. ಮಹಿಳಾ ಉದ್ಯಮಿ ಖುಷಿ ಏನು, ಕಾವ್ಯ, ಮುಖಂಡರಾದ ಜಿ.ರಾಘವೇಂದ್ರ, ಎಸ್.ಎನ್.ರಾಜೇಶ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.





