
ಸಾಕಾನೆ ಶಿಬಿರಗಳಲ್ಲಿ ಮುಂಜಾನೆಯಿಂದಲೇ ಆನೆಗಳನ್ನು ಕಾವೇರಿ ನೀರಿನಲ್ಲಿ ಜಳಕ ಮಾಡಿಸಿ ಬಣ್ಣ – ಬಣ್ಣಗಳಿಂದ ಅಲಂಕಾರ ಮಾಡಿ, ಆನೆ ಮೇಲೆ ಚಿತ್ರಬಿಡಿಸಲಾಯಿತು.ಬಳಿಕ ಹೂ, ಹಾರ ಹಾಕಿ ದೊಡ್ಡ ಮತ್ತು ಮರಿ ಆನೆಗಳಿಗೆ ಪೂಜೆ ಸಲ್ಲಿಸಿ ವಿಶೇಷ ಆಹಾರ ನೀಡಲಾಯಿತು.
ಕಾಡಿನ ಮಕ್ಕಳು ಎಲ್ಲರೂ ಒಗ್ಗೂಡಿ ಆನೆಗಳಿಗೆ ಸಿಹಿ ಕೊಟ್ಟು ತಾವು ಸಿಹಿ ತಿಂದು ವಿಜೃಂಭಣೆಯಿಂದ ಆನೆದಿನ ಆಚರಣೆ ಮಾಡಿದರು.
ಅರಣ್ಯ ಸಿಬ್ಬಂದಿ, ಮಾಹುತರು ಮತ್ತು ಕಾವಾಡಿಗಳು ಆನೆಗಳಿಗೆ ಪೂಜೆ ಮಾಡಿ ಗೌರವ ಸಲ್ಲಿಸಿದರು.
ಈ ವೇಳೆ ಗಜಪಡೆ ಮಾಹುತರಿಗೆ, ಅರಣ್ಯಾಧಿಕಾರಿಗಳಿಗೆ ಸೊಂಡಿಲನ್ನು ಎತ್ತಿ ಗೌರವ ಸಲ್ಲಿಸಿದವು. ಇನ್ನು ದುಬಾರೆ ಶಿಬಿರಕ್ಕೆ ಬಂದಿದ್ದ ಪ್ರವಾಸಿಗರು ಅಲಂಕಾರಗೊಂಡಿದ್ದ ಆನೆಗಳನ್ನು ಒಟ್ಟಿಗೆ ನೋಡಿ ಸಂತೋಷಪಟ್ಟರು.





