ಮೈಸೂರು : ಮೈಸೂರು ಅರಮನೆ ಆವರಣದಲ್ಲಿ ಬೀಡು ಬಿಟ್ಟಿ ರುವ ದಸರಾ ಆನೆಗಳ ಸಮ್ಮುಖದಲ್ಲಿ ‘ವಿಶ್ವ ಆನೆ ದಿನ’ ಆಚರಿಸಲಾಯಿತು.
ಮೈಸೂರು ವನ್ಯಜೀವಿ ವಲಯದ ವನ್ಯ ಜೀವಿ ವಿಭಾಗದ ವತಿಯಿಂದ ಕರುಣಾ ಮಯಿ ವಿಶೇಷಚೇತನ ಮಕ್ಕಳ ಶಾಲೆ ಸಹಯೋಗದೊಂದಿಗೆ ವಿಶೇಷ ಮಕ್ಕಳಿಗೆ ಆನೆ ಸೇರಿದಂತೆ ವನ್ಯಜೀವಿಗಳ ಪರಿ ಚಯ ಮಾಡಿಕೊಡುವ ಮೂಲಕ ವಿಶ್ವ ಆನೆ ದಿನಾಚರಣೆ ನಡೆಸಲಾಯಿತು.
ಈ ವೇಳೆ ರಂಗನತಿಟ್ಟು ಪಕ್ಷಿಧಾಮದ ಪರಿಸರ ಶಿಕ್ಷಣಾಧಿಕಾರಿ ಗಗನ, ಆನೆ ಸೇರಿ ದಂತೆ ಇನ್ನಿತರೆ ವನ್ಯಜೀವಿಗಳ ಚಲನ ವಲನ ಕುರಿತು ವಿಶೇಷ ಮಕ್ಕಳಿಗೆ ತಿಳಿಸಿ ಕೊಟ್ಟರಲ್ಲದೆ, ವನ್ಯಜೀವಿಗಳ ರಕ್ಷಣೆ ನಮ್ಮೆ ಲ್ಲರ ಕರ್ತವ್ಯ ಎಂಬುದರ ಕುರಿತು ಅರಿವು ಮೂಡಿಸಿದರು. ಈ ವೇಳೆ ವೈದ್ಯ ಡಾ.ಆದರ್ಶ್, ಮಾವುತರು, ಕಾವಾಡಿ ಗರು, ಕರುಣಾಮಯಿ ವಿಶೇಷಚೇತನ ಮಕ್ಕಳ ಶಾಲೆ ಶಿಕ್ಷಕರು ಉಪಸ್ಥಿತರಿದ್ದರು.
#########





