
ನಿವಾಸಿಯೊಬ್ಬರು ತಮ್ಮ ಮಗನಿಗೆ ಮಾತು ಬರುತ್ತಿರಲಿಲ್ಲ ಎಂದು ಶಾಲೆ, ಕಾಲೇಜುಗಳಿಗೆ ಕಳುಹಿಸಿ ಶಿಕ್ಷಣಕೊಡಿಸಲು ಸಾಧ್ಯವಿಲ್ಲವೆಂದು ,ಶಹಜಹಾನ್ಪುರದ ನಿವಾಸಿ ಶುಭಂ ಸಕ್ಸೇನಾ ಅವರನ್ನು ಅವರ ಮನೆಯಲ್ಲಿ ಶಿಕ್ಷಕರಾಗಿ ಇರಿಸಲಾಗಿತ್ತು. ಕಳೆದ ಎರಡು ವರ್ಷಗಳಿಂದ, ಶುಭಂ ಶಿಕ್ಷಣವನ್ನು ನೀಡುತ್ತಿದ್ದರು. ಏಪ್ರಿಲ್ 24 ರಂದು, ಶುಭಂ ತನ್ನ ಮಗನಿಗೆ ಹೇಗೆ ಪಾಠ ಮಾಡುತ್ತಿದ್ದಾನೆಂದು ನೋಡಲು ಕೋಣೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಶುಭಂ ತನ್ನ ಮಗನನ್ನು ಹೊಡೆಯುತ್ತಿರುವುದನ್ನು ನೋಡಿ ಬೆರಗಾಗಿದ್ದಾರೆ.

ಶಿಕ್ಷಕ ಶುಭಂ ವಿದ್ಯಾರ್ಥಿಯ ಬೆರಳುಗಳ ಮಧ್ಯೆ ಪೆನ್ ಇಟ್ಟು ಒತ್ತುತ್ತಿದ್ದ, ಬಾಯಿ ತೆರೆಯುವಂತೆ ಒತ್ತಾಯಿಸಿ ಹೊಡೆಯುತ್ತಿದ್ದ, ಮೆಣಸಿನಕಾಯಿ ತಿನ್ನಿಸುತ್ತಿದ್ದ. ಅವನು ಬಲವಂತವಾಗಿ ವಿದ್ಯಾರ್ಥಿಯ ಬಾಯಿಗೆ ಮೆಣಸಿನಕಾಯಿಗಳನ್ನು ತುಂಬುತ್ತಿದ್ದನು. ಅವನು ಅವನಿಗೆ ಕೆಲವು ಔಷಧಿಗಳನ್ನು ಸಹ ನೀಡುತ್ತಿದ್ದ ಎನ್ನುವುದು ತಿಳಿದುಬಂದಿದೆ. ಸಂತ್ರಸ್ತ ವಿದ್ಯಾರ್ಥಿಯ ತಂದೆ ಸೋಮವಾರ ಪೊಲೀಸರಿಗೆ ಮನವಿ ಮಾಡಿದರು – ಸರ್, ಕಳೆದ ಎರಡು ವರ್ಷಗಳಿಂದ ಅವನು ನನ್ನ ಮಗನಿಗೆ ಹೀಗೆ ಮಾಡುತ್ತಿದ್ದಾನೆ ಎಂದು ನನಗೆ ಅನುಮಾನವಿದೆ. ದಯವಿಟ್ಟು ಅವನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಹೇಳಿದ್ದಾರೆ.





