
ಹೌದು, ಬೋಪಾಲ್ ರಸ್ತೆಯಲ್ಲಿ ರೆಸಾರ್ಟ್ ವೊಂದರಲ್ಲಿ ಸಾಗರ ಜಿಲ್ಲೆಯ ಯುವಕ ಹಾಗೂ ಲಲಿತಾಪುರದ ಯುವತಿಯ ಮದುವೆಯೂ ಅದ್ದೂರಿಯಾಗಿ ನಡೆದಿದೆ. ಮದುವೆಯೂ ಸಡಗರದಿಂದ ನಡೆದು ವಧುವು ತನ್ನ ಗಂಡನ ಮನೆಗೆ ತೆರಳಲು ಕಾರು ಹತ್ತಿದ್ದಾಳೆ. ಸ್ವಲ್ಪ ದೂರ ಹೋಗುತ್ತಿದ್ದಂತೆ ವಧುವು ಅಸಲಿ ವಿಚಾರ ತಿಳಿಸಿದ್ದು ಇದುವೇ ಈ ಮದುವೆ ಮುರಿಯಲು ಮುಖ್ಯ ಕಾರಣವಾಗಿದೆ. ನನಗೆ ಈ ಮದುವೆ ಇಷ್ಟವಿಲ್ಲ, ನಾನು ಒಬ್ಬನ್ನನ್ನು ಪ್ರೀತಿಸುತ್ತಿದ್ದೇನೆ. ನಿನ್ನನ್ನು ಮದುವೆಯಾಗಿದ್ದೇನೊ ನಿಜ, ಆದರೆ ಪತ್ನಿಯಾಗಿ ಸಂಸಾರ ಮಾಡಲು ಸಾಧ್ಯವಿಲ್ಲ.. ನಾವಿಬ್ಬರೂ ಅಣ್ಣ ತಂಗಿಯಂತೆ ಇದ್ದು ಬಿಡೋಣ ಎಂದಿದ್ದಾಳೆ.

ಈ ಆಘಾತದಿಂದ ಸುಧಾರಿಸಿಕೊಳ್ಳಲು ಆಗದ ವರನು ತನ್ನ ನಿರ್ಧಾರವನ್ನು ಬದಲಾಯಿಸಿದ್ದಾನೆ. ಮಧಮಗನು ಈ ವಿಚಾರವನ್ನು ತನ್ನ ಕುಟುಂಬಕ್ಕೆ ತಿಳಿಸಿ, ಆ ಕ್ಷಣವೇ ಈ ಮದುವೆಯನ್ನು ಮುರಿಯಲು ಮತ್ತೆ ಮದುವೆ ಮಂಟಪದ ಕಡೆಗೆ ಬಂದಿದ್ದಾನೆ. ಹೌದು, ಮದುವೆ ಮಂಟಪದಲ್ಲಿದ್ದ ವಧುವಿನ ಕಡೆಯವರಿಗೆ ಈ ವಿಷಯ ತಿಳಿಸಿ, ವಧುವನ್ನು ಅಲ್ಲೇ ಬಿಟ್ಟು ಮರುಮಾತಾನಾಡದೇ ಅಲ್ಲಿಂದ ವರನು ಹೊರಟು ಹೋಗಿದ್ದಾನೆ. ಆದರೆ ಈ ವಧುವು ಮದುವೆಯಾಗುವವರೆಗೂ ಈ ವಿಚಾರ ಮುಚ್ಚಿಟ್ಟಿದರಿಂದ ವರನ ಆಸೆ ಕನಸುಗಳೆಲ್ಲವೂ ನುಚ್ಚು ನೂರು ಆಗುವಂತಾಗಿದೆ ಎನ್ನುವುದು ನಿಜಕ್ಕೂ ವಿಪರ್ಯಾಸ.





