ಮಾದಪ್ಪನ ಸನ್ನಿಧಿಯಲ್ಲಿ ನಡೀತು ಮಹಾ ಪವಾಡ! ಕಣ್ಮರೆಯಾದ ಇಬ್ಬರು ಮಕ್ಕಳು ಪ್ರತ್ಯಕ್ಷ.

ಬೆಂಗಳೂರು: ಜೇನುಮಲೆ.. ಬುತ್ತಿಮಲೆ, ಪಚ್ಚೆಮಲೆ, ಪಾಣಿಮಲೆ, ಎಪ್ಪತೇಳುಮಲೆಯ ಒಡೆಯ ಮಾದಪ್ಪನಿಗೆ ಶರಣು ಶರಣೆನ್ನದವರೇ ಇಲ್ಲ. ಚಲ್ಲಾಟಗಾರನೂ ಇವನೇ ಮಾಯಗಾರನೂ ಇವನೇ. ಏಳು ಮಲೆ ಮೇಲೆ ಕೂತಿರೋ ಮಾದಪ್ಪನನ್ನ ಎಷ್ಟು ಕೊಂಡಾಡಿದ್ರೂ ಸಾಲಲ್ಲ ಬಿಡಿ. ಮಾದಪ್ಪನ ಸನ್ನಿಧಿ ಅಂದ್ರೆ ಸಾಕು ಮನದಲ್ಲೊಂದು ಭಕ್ತಿಭಾವ ಮೂಡುತ್ತೆ. ನಮಗರಿವಿಲ್ಲದೆಯೇ ಭಗವಂತನ ನಾಮಸ್ಮರಣೆ ಶುರುವಾಗುತ್ತೆ. ಇಂತಾ ಮಾಯ್ಕಾರನ ಸನ್ನಿಧಿಯಲ್ಲಿ ಮಹಾ ಪವಾಡವೊಂದು ನಡೆದಿದೆ.

ಕರುಳ ಕುಡಿಗಳನ್ನ ಕಳ್ಕೊಂಡು, ಮಾದಪ್ಪನ ಸನ್ನಿಧಿಗೆ ಬಂದ ಹೆತ್ತವರೇ ಶಾಕ್ ಆಗಿ ಹೋಗಿದ್ದಾರೆ. ಭಗವಂತ ಉರುಳು ಸೇವೆ ಮಾಡೋ ಹೊತ್ತಲ್ಲೇ, ನಾಪತ್ತೆಯಾದ ಇಬ್ಬರು ಮಕ್ಕಳು ಪ್ರತ್ಯಕ್ಷರಾಗಿದ್ದಾರೆ.

ಮಾದಪ್ಪನ ಲೀಲೆಯನ್ನ ಬಲ್ಲವೇ ಬಲ್ಲರು ಬಿಡಿ. ವಿಜ್ಞಆನ ಎಷ್ಟೇ ಮುಂದುವರಿದಿದೆ ಅಂದ್ರೂ ಜನ್ರ ನಂಬಿಕೆ ಕಮ್ಮಿ ಆಗ್ತಿಲ್ಲ. ವಿಜ್ಞಾನಿಗಳು ಕೂಡಾ ಗ್ರಹಗತಿಗಳನ್ನ ನೋಡೋದನ್ನ ನಿಲ್ಲಿಸ್ತಿಲ್ಲ. ಇದಕ್ಕೆ ತಾಜಾ ಉದಾಹರಣೆಯೇ ಈ ಸ್ಟೋರಿ. ಈ ಇಬ್ಬರು ಬಾಲಕರು ಪಕ್ಕಾ ಚೆಡ್ಡಿ ದೋಸ್ತ್ಗಳು. ಇವ್ನ ಹೆಸ್ರು ರವಿ, ಮತ್ತೊಬ್ಬ ಪ್ರವೀಣ. ರವಿ 9ನೇ ಕ್ಲಾಸ್ ಓದ್ತಿದ್ರೆ, ಪ್ರವೀಣ್ 7ನೇ ಕ್ಲಾಸ್. ಇಬ್ರೂ ಬೇರೆ ಬೇರೆ ಸ್ಕೂಲ್ ಆದ್ರೂ ಅಕ್ಕ ಪಕ್ಕದ ಮನೆಯವ್ರು. ಹೀಗಾಗಿ ಸಣ್ಣೋರಿದ್ದಾಗಿಂದ್ಲೂ ಕುಚಿಕುಗಳಂತಿದ್ದಾರೆ. ಆದರೆ, ಕಳೆದ ಆರು ದಿನಗಳ ಹಿಂದೆ ಸಂಜೆ ಹೊತ್ತಲ್ಲಿ ಹೊರಗೆ ಹೋದವರು, ಎಲ್ಲೋದ್ರು ಏನಾದ್ರು ಅನ್ನೋ ಸಣ್ಣ ಸುಳಿವೂ ಇರ್ಲಿಲ್ಲ. ಹುಡುಕಿ ಹುಡುಕಿ ಸುಸ್ತಾಗಿ ಹೋಗಿದ್ದ ಪೋಷಕರು ಬೆಂಗಳೂರಿನ ತಿಲಕನಗರ ಪೊಲೀಸ್ ಠಾಣೆ ಮೆಟ್ಟಿಲೇರಿದ್ರು.ಕಳೆದ ಶನಿವಾರ ಪ್ರವೀಣ್ಗೆ ಹುಷಾರಿಲ್ಲ ಅಂತಾ ಮನೆಯಲ್ಲೇದ್ದ. ಶಾಲೆಗೆ ಹೋಗಿದ್ದ ರವಿ ಗೆಳೆಯನಿಗೆ ಹುಷಾರಿಲ್ಲ ಅಂತಾ ಬೇಗನೇ ಬಂದಿದ್ದ. ಸೀದಾ ಸ್ನೇಹಿತನ ಮನೆಗೋಗಿ ಪ್ರಾಜೆಕ್ಟ್ ವರ್ಕ್ಗೆ ಒಂದಿಷ್ಟು ಐಟಂಸ್ ತಗೊಂಡು ಬರ್ಬೇಕು ಬಾ ಅಂತಾ ಕರ್ಕೊಂಡು ಹೋಗಿದ್ದಾನೆ. ಹೀಗೆ ಹೊರ ಹೋದವ್ರು ಜಯನಗರ ಬಸ್ ನಿಲ್ದಾಣದಲ್ಲಿ ಬಸ್ ಹತ್ತಿದ್ದೇ ಕೊನೆ. ಆಮೇಲೆ ಎಲ್ಲೋದ್ರು ಅನ್ನೋ ಯಾವ ಕುರುಹೂ ಸಿಕ್ಕಿರ್ಲಿಲ್ಲ. ಪೊಲೀಸ್ರು ಕೂಡಾ ಮೂಲೆ ಮೂಲೆ ಜಾಲಾಡಿದ್ರು. ಆದ್ರೆ, ಇಬ್ಬರು ಬಾಲಕರು ಮಾತ್ರ ಸಿಕ್ಕಿರ್ಲಿಲ್ಲ. ಹೀಗಾಗಿ ಪ್ರವೀಣ್ ಪೋಷಕರು ಮಲೆ ಮಹದೇಶ್ವರನ ಮೊರೆ ಹೋಗಿದ್ದಾರೆ. ಆಗ್ಲೇ ನೋಡಿ ಪವಾಡ ನಡೆದಿದ್ದು.

ದಿಕ್ಕು ಕಾಣದಂತಾದ ಪ್ರವೀಣ್ ಹೆತ್ತವ್ರು, ಮಾದಪ್ಪನ ಸನ್ನಿಧಿಗೆ ಹೋಗಿ ಭಕ್ತಿಯಿಂದ ಬೇಡಿಕೊಂಡಿತ್ತು. ಉರುಳುಸೇವೆ ಮಾಡೋ ಮೂಲಕ ಮಕ್ಕಳ ಪತ್ತೆಗಾಗಿ ಕಣ್ಣೀರ ಬೇಡಿಕೆ ಒಪ್ಪಿಸ್ತಿದ್ರು. ಇದೇ ಹೊತ್ತಲ್ಲಿ ಅದೆಲ್ಲಿಂದ ಬಂದ್ರೋ ಗೊತ್ತಿಲ್ಲ. ಹೆತ್ತವರು ಉರುಳು ಸೇವೆ ಮಾಡುವಾಗ್ಲೇ ಇಬ್ಬರು ಮಕ್ಕಳು ಪ್ರತ್ಯಕ್ಷರಾಗಿದ್ದಾರೆ.
ಎಂಥಾ ವಿಚಿತ್ರ ನೋಡಿ, ಮಕ್ಕಳಿಬ್ಬರು ಸಿಕ್ತಿದ್ದಂತೆ ನೀವಿಲ್ಲಿ ಹೇಗೆ ಬಂದ್ರಿ ಅಂತಾ ಹೆತ್ತವರು ವಿಚಾರಿಸೋದಕ್ಕೆ ಶುರು ಮಾಡಿದ್ದಾರೆ. ಆಗಲೇ ನೋಡಿ ಸತ್ಯ ಬಿಚ್ಚಿಕೊಳ್ಳೋದಕ್ಕೆ ಶುರು ಮಾಡಿದ್ದು. ಸ್ನೇಹಿತ ಪ್ರವೀಣ್ಗೆ ಹುಷಾರಿಲ್ಲದೇ ಇದ್ದಿದ್ರಿಂದ ರವಿ ತುಂಬಾನೇ ಬೇಸರಗಿಂಡಿದ್ದನಂತೆ. ಹೀಗಾಗಿ ನಿಮ್ಮ ಮನೆದೇವ್ರಾದ ಮಲೆ ಮಹದೇಶ್ವರಕ್ಕೆ ಹೋಗೋಣ ಅಂತಾ ರವಿಯೇ ಹೇಳಿದ್ದಾನೆ. ಅಷ್ಟೇ ಅಲ್ಲ ಮನೆ ದೇವರ ದರ್ಶನ ಮಾಡಿದ್ರೆ ಬೇಗ ಹುಷಾರಾಗ್ತೀಯ ಅಂತಾ ಕರ್ಕೊಂಡ್ ಹೋಗಿದ್ನಂತೆ. ಒಟ್ನಲ್ಲಿ ಕಳೆದೊಂದು ವಾರದಿಂದ ಕಣ್ಮರೆಯಾಗಿದ್ದ ಮಕ್ಕಳೀಗ ಪತ್ತೆಯಾಗಿದ್ದು, ಹೆತ್ತವರು ನಿಟ್ಟುಸಿರು ಬಿಟ್ಟಿದ್ದಾರೆ.

Related Posts

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

  ಹೃದಯವೇದ್ರಾವಕ ಘಟನೆಯೊಂದು ಹುಣಸೂರಿನಲ್ಲಿ ನಡೆದಿದೆ ಪತ್ನಿ ಮಕ್ಕಳನ್ನು ಹತ್ಯೆಗೈದು ಪತಿ ನೇಣಿಗೆ ಶರಣಾಗಿರುವ ಪ್ರಕರಣ ಹುಣಸೂರು ನಗರದ ನ್ಯೂ ಮಾರುತಿ ಬಡಾವಣೆಯಲ್ಲಿ ಘಟನೆ ನ್ಯೂ ಮಾರುತಿ ಬಡಾವಣೆಯ ಹರೀಶ್ 49, ಪತ್ನಿ ನಿಶ್ಚಿತ 36 ಮಕ್ಕಳಾದ ನೆಕ್ಸಾ 13 ರಕ್ಷಾ…

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

  ಒಡಿಶಾದ ಶಿಕ್ಷಾ ಓ ಅನುಸಂಧಾನ ವಿಶ್ವವಿದ್ಯಾಲಯವು ಕರ್ನಾಟಕದ ಹೆಮ್ಮೆಯ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿ ಸನ್ಮಾನಿಸಿದೆ. ನ್ಯಾಯಾಂಗ ಕ್ಷೇತ್ರದಲ್ಲಿ ಸಲ್ಲಿಸಿದ ವಿಶಿಷ್ಟ ಸೇವೆ, ನ್ಯಾಯದ ಪರವಾದ ಬದ್ಧತೆ, ವಿದ್ವತ್ತು ಹಾಗೂ ಮಾನವೀಯ ಮೌಲ್ಯಗಳ…

You Missed

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ !

ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ !

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!