ಮಾದಪ್ಪನ ಸನ್ನಿಧಿಯಲ್ಲಿ ನಡೀತು ಮಹಾ ಪವಾಡ! ಕಣ್ಮರೆಯಾದ ಇಬ್ಬರು ಮಕ್ಕಳು ಪ್ರತ್ಯಕ್ಷ.

ಬೆಂಗಳೂರು: ಜೇನುಮಲೆ.. ಬುತ್ತಿಮಲೆ, ಪಚ್ಚೆಮಲೆ, ಪಾಣಿಮಲೆ, ಎಪ್ಪತೇಳುಮಲೆಯ ಒಡೆಯ ಮಾದಪ್ಪನಿಗೆ ಶರಣು ಶರಣೆನ್ನದವರೇ ಇಲ್ಲ. ಚಲ್ಲಾಟಗಾರನೂ ಇವನೇ ಮಾಯಗಾರನೂ ಇವನೇ. ಏಳು ಮಲೆ ಮೇಲೆ ಕೂತಿರೋ ಮಾದಪ್ಪನನ್ನ ಎಷ್ಟು ಕೊಂಡಾಡಿದ್ರೂ ಸಾಲಲ್ಲ ಬಿಡಿ. ಮಾದಪ್ಪನ ಸನ್ನಿಧಿ ಅಂದ್ರೆ ಸಾಕು ಮನದಲ್ಲೊಂದು ಭಕ್ತಿಭಾವ ಮೂಡುತ್ತೆ. ನಮಗರಿವಿಲ್ಲದೆಯೇ ಭಗವಂತನ ನಾಮಸ್ಮರಣೆ ಶುರುವಾಗುತ್ತೆ. ಇಂತಾ ಮಾಯ್ಕಾರನ ಸನ್ನಿಧಿಯಲ್ಲಿ ಮಹಾ ಪವಾಡವೊಂದು ನಡೆದಿದೆ.

ಕರುಳ ಕುಡಿಗಳನ್ನ ಕಳ್ಕೊಂಡು, ಮಾದಪ್ಪನ ಸನ್ನಿಧಿಗೆ ಬಂದ ಹೆತ್ತವರೇ ಶಾಕ್ ಆಗಿ ಹೋಗಿದ್ದಾರೆ. ಭಗವಂತ ಉರುಳು ಸೇವೆ ಮಾಡೋ ಹೊತ್ತಲ್ಲೇ, ನಾಪತ್ತೆಯಾದ ಇಬ್ಬರು ಮಕ್ಕಳು ಪ್ರತ್ಯಕ್ಷರಾಗಿದ್ದಾರೆ.

ಮಾದಪ್ಪನ ಲೀಲೆಯನ್ನ ಬಲ್ಲವೇ ಬಲ್ಲರು ಬಿಡಿ. ವಿಜ್ಞಆನ ಎಷ್ಟೇ ಮುಂದುವರಿದಿದೆ ಅಂದ್ರೂ ಜನ್ರ ನಂಬಿಕೆ ಕಮ್ಮಿ ಆಗ್ತಿಲ್ಲ. ವಿಜ್ಞಾನಿಗಳು ಕೂಡಾ ಗ್ರಹಗತಿಗಳನ್ನ ನೋಡೋದನ್ನ ನಿಲ್ಲಿಸ್ತಿಲ್ಲ. ಇದಕ್ಕೆ ತಾಜಾ ಉದಾಹರಣೆಯೇ ಈ ಸ್ಟೋರಿ. ಈ ಇಬ್ಬರು ಬಾಲಕರು ಪಕ್ಕಾ ಚೆಡ್ಡಿ ದೋಸ್ತ್ಗಳು. ಇವ್ನ ಹೆಸ್ರು ರವಿ, ಮತ್ತೊಬ್ಬ ಪ್ರವೀಣ. ರವಿ 9ನೇ ಕ್ಲಾಸ್ ಓದ್ತಿದ್ರೆ, ಪ್ರವೀಣ್ 7ನೇ ಕ್ಲಾಸ್. ಇಬ್ರೂ ಬೇರೆ ಬೇರೆ ಸ್ಕೂಲ್ ಆದ್ರೂ ಅಕ್ಕ ಪಕ್ಕದ ಮನೆಯವ್ರು. ಹೀಗಾಗಿ ಸಣ್ಣೋರಿದ್ದಾಗಿಂದ್ಲೂ ಕುಚಿಕುಗಳಂತಿದ್ದಾರೆ. ಆದರೆ, ಕಳೆದ ಆರು ದಿನಗಳ ಹಿಂದೆ ಸಂಜೆ ಹೊತ್ತಲ್ಲಿ ಹೊರಗೆ ಹೋದವರು, ಎಲ್ಲೋದ್ರು ಏನಾದ್ರು ಅನ್ನೋ ಸಣ್ಣ ಸುಳಿವೂ ಇರ್ಲಿಲ್ಲ. ಹುಡುಕಿ ಹುಡುಕಿ ಸುಸ್ತಾಗಿ ಹೋಗಿದ್ದ ಪೋಷಕರು ಬೆಂಗಳೂರಿನ ತಿಲಕನಗರ ಪೊಲೀಸ್ ಠಾಣೆ ಮೆಟ್ಟಿಲೇರಿದ್ರು.ಕಳೆದ ಶನಿವಾರ ಪ್ರವೀಣ್ಗೆ ಹುಷಾರಿಲ್ಲ ಅಂತಾ ಮನೆಯಲ್ಲೇದ್ದ. ಶಾಲೆಗೆ ಹೋಗಿದ್ದ ರವಿ ಗೆಳೆಯನಿಗೆ ಹುಷಾರಿಲ್ಲ ಅಂತಾ ಬೇಗನೇ ಬಂದಿದ್ದ. ಸೀದಾ ಸ್ನೇಹಿತನ ಮನೆಗೋಗಿ ಪ್ರಾಜೆಕ್ಟ್ ವರ್ಕ್ಗೆ ಒಂದಿಷ್ಟು ಐಟಂಸ್ ತಗೊಂಡು ಬರ್ಬೇಕು ಬಾ ಅಂತಾ ಕರ್ಕೊಂಡು ಹೋಗಿದ್ದಾನೆ. ಹೀಗೆ ಹೊರ ಹೋದವ್ರು ಜಯನಗರ ಬಸ್ ನಿಲ್ದಾಣದಲ್ಲಿ ಬಸ್ ಹತ್ತಿದ್ದೇ ಕೊನೆ. ಆಮೇಲೆ ಎಲ್ಲೋದ್ರು ಅನ್ನೋ ಯಾವ ಕುರುಹೂ ಸಿಕ್ಕಿರ್ಲಿಲ್ಲ. ಪೊಲೀಸ್ರು ಕೂಡಾ ಮೂಲೆ ಮೂಲೆ ಜಾಲಾಡಿದ್ರು. ಆದ್ರೆ, ಇಬ್ಬರು ಬಾಲಕರು ಮಾತ್ರ ಸಿಕ್ಕಿರ್ಲಿಲ್ಲ. ಹೀಗಾಗಿ ಪ್ರವೀಣ್ ಪೋಷಕರು ಮಲೆ ಮಹದೇಶ್ವರನ ಮೊರೆ ಹೋಗಿದ್ದಾರೆ. ಆಗ್ಲೇ ನೋಡಿ ಪವಾಡ ನಡೆದಿದ್ದು.

ದಿಕ್ಕು ಕಾಣದಂತಾದ ಪ್ರವೀಣ್ ಹೆತ್ತವ್ರು, ಮಾದಪ್ಪನ ಸನ್ನಿಧಿಗೆ ಹೋಗಿ ಭಕ್ತಿಯಿಂದ ಬೇಡಿಕೊಂಡಿತ್ತು. ಉರುಳುಸೇವೆ ಮಾಡೋ ಮೂಲಕ ಮಕ್ಕಳ ಪತ್ತೆಗಾಗಿ ಕಣ್ಣೀರ ಬೇಡಿಕೆ ಒಪ್ಪಿಸ್ತಿದ್ರು. ಇದೇ ಹೊತ್ತಲ್ಲಿ ಅದೆಲ್ಲಿಂದ ಬಂದ್ರೋ ಗೊತ್ತಿಲ್ಲ. ಹೆತ್ತವರು ಉರುಳು ಸೇವೆ ಮಾಡುವಾಗ್ಲೇ ಇಬ್ಬರು ಮಕ್ಕಳು ಪ್ರತ್ಯಕ್ಷರಾಗಿದ್ದಾರೆ.
ಎಂಥಾ ವಿಚಿತ್ರ ನೋಡಿ, ಮಕ್ಕಳಿಬ್ಬರು ಸಿಕ್ತಿದ್ದಂತೆ ನೀವಿಲ್ಲಿ ಹೇಗೆ ಬಂದ್ರಿ ಅಂತಾ ಹೆತ್ತವರು ವಿಚಾರಿಸೋದಕ್ಕೆ ಶುರು ಮಾಡಿದ್ದಾರೆ. ಆಗಲೇ ನೋಡಿ ಸತ್ಯ ಬಿಚ್ಚಿಕೊಳ್ಳೋದಕ್ಕೆ ಶುರು ಮಾಡಿದ್ದು. ಸ್ನೇಹಿತ ಪ್ರವೀಣ್ಗೆ ಹುಷಾರಿಲ್ಲದೇ ಇದ್ದಿದ್ರಿಂದ ರವಿ ತುಂಬಾನೇ ಬೇಸರಗಿಂಡಿದ್ದನಂತೆ. ಹೀಗಾಗಿ ನಿಮ್ಮ ಮನೆದೇವ್ರಾದ ಮಲೆ ಮಹದೇಶ್ವರಕ್ಕೆ ಹೋಗೋಣ ಅಂತಾ ರವಿಯೇ ಹೇಳಿದ್ದಾನೆ. ಅಷ್ಟೇ ಅಲ್ಲ ಮನೆ ದೇವರ ದರ್ಶನ ಮಾಡಿದ್ರೆ ಬೇಗ ಹುಷಾರಾಗ್ತೀಯ ಅಂತಾ ಕರ್ಕೊಂಡ್ ಹೋಗಿದ್ನಂತೆ. ಒಟ್ನಲ್ಲಿ ಕಳೆದೊಂದು ವಾರದಿಂದ ಕಣ್ಮರೆಯಾಗಿದ್ದ ಮಕ್ಕಳೀಗ ಪತ್ತೆಯಾಗಿದ್ದು, ಹೆತ್ತವರು ನಿಟ್ಟುಸಿರು ಬಿಟ್ಟಿದ್ದಾರೆ.

Related Posts

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ರಾಜ್ಯದಲ್ಲಿ ಸೆಪ್ಟೆಂಬರ್ 21ರಿಂದ ಮೂರು ದಿನಗಳ ಕಾಲ ವಿಶೇಷ ವಿಧಾನಮಂಡಲ ಅಧಿವೇಶನ ನಡೆಸಲು ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಸೆ. 21ರಿಂದ ಸೆ.…

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಗುಂಡ್ಲುಪೇಟೆ ಪಟ್ಟಣದ ಇಂದಿರಾ ಕ್ಯಾಂಟೀನ್‌ಗೆ ಸೋಮವಾರ ಬೆಳಿಗ್ಗೆ ಅಧಿಕಾರಿಗಳ ತಂಡ ದಿಢೀರ್ ಭೇಟಿ ನೀಡಿ ಆಹಾರದ ಶುಚಿತ್ವ, ಗುಣಮಟ್ಟ ಹಾಗೂ ಕುಡಿಯುವ ನೀರಿನ ಪೂರೈಕೆಯನ್ನು ಕೂಲಂಕಷವಾಗಿ ಪರಿಶೀಲಿಸಿತು. ಬಡವರು ಮತ್ತು ಶ್ರಮಿಕರಿಗೆ ಪೌಷ್ಟಿಕ ಹಾಗೂ ಶುಚಿ-ರುಚಿಯಾದ ಆಹಾರ ದೊರೆಯಬೇಕು ಎಂಬ ಶಾಸಕರ…

You Missed

ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು

ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಬಿಗ್ ಬಾಸ್ ಕನ್ನಡ 13: ಈ ಭಾನುವಾರದಿಂದ ‘ಏವಿಯೇಷನ್’ ಥೀಮ್‌ನೊಂದಿಗೆ ಗ್ರ್ಯಾಂಡ್ ಟೇಕ್ ಆಫ್!

ಬಿಗ್ ಬಾಸ್ ಕನ್ನಡ 13: ಈ ಭಾನುವಾರದಿಂದ ‘ಏವಿಯೇಷನ್’ ಥೀಮ್‌ನೊಂದಿಗೆ ಗ್ರ್ಯಾಂಡ್ ಟೇಕ್ ಆಫ್!

ಟಾಕ್ಸಿಕ್‌’ನಲ್ಲಿ ಯಶ್‌ ಅಭಿನಯಕ್ಕೆ ಕಿಚ್ಚನ ಪುತ್ರಿ ಫಿದಾ: ಪ್ರತಿಯೊಂದು ಫ್ರೇಮ್‌ನಲ್ಲೂ ಮ್ಯಾಜಿಕ್‌ ಎಂದ ಸಾನ್ವಿ ಸುದೀಪ್‌

ಟಾಕ್ಸಿಕ್‌’ನಲ್ಲಿ ಯಶ್‌ ಅಭಿನಯಕ್ಕೆ ಕಿಚ್ಚನ ಪುತ್ರಿ ಫಿದಾ: ಪ್ರತಿಯೊಂದು ಫ್ರೇಮ್‌ನಲ್ಲೂ ಮ್ಯಾಜಿಕ್‌ ಎಂದ ಸಾನ್ವಿ ಸುದೀಪ್‌

FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ!

FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ!