
ಮೈಸೂರು ತಾಲ್ಲೂಕಿನ ಹಂಚ್ಯಾಗ್ರಾಮದ ಶ್ರೀಧರ್ ಗೌಡ ಅವರು ಸಾಕಿದ್ದ ರೇಸ್ ಹಸು ತಡರಾತ್ರಿ ಆಕಸ್ಮಿಕವಾಗಿ ಸಾವನಪ್ಪಿದೆ. ಜೋಡೆತ್ತಿನ ಗಾಡಿ ಓಟದಲ್ಲಿ ಇದುವರೆವಿಗೂ ಬರೋಬ್ಬರಿ 70 ಕ್ಕೂ ಹೆಚ್ಚು ರೇಸ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮೈಸೂರು ರಾಣಿ ಖ್ಯಾತಿಯ ಹಸು ಮೈಸೂರಿನ ರೇಸ್ ಹುಡುಗರ ಮನಸ್ಸು ಗೆದ್ದ ರಾಣಿಯಾಗಿತ್ತು. ಜೋಡೆತ್ತಿನ ಗಾಡಿ ಸ್ಪರ್ಧೆ ಎಲ್ಲೇ ನಡೆದಿದ್ದರೂ ಅಲ್ಲಿ ಭಾಗವಹಿಸುತ್ತಿದ್ದ ಮೈಸೂರು ರಾಣಿ ನಿಧನಕ್ಕೆ ಇಡೀ ಗ್ರಾಮದ ಜನತೆ ಶೋಕ ವ್ಯಕ್ತಪಡಿಸಿದೆ.

ಹಳ್ಳಿಕಾರ್ ತಳಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಯುವಪಡೆ ಅದನ್ನು ಚಿಕ್ಕ ಕರುವಿನಿಂದಲೂ ಸಾಕಿ, ತರಬೇತಿ ನೀಡಿದ್ದರು. ಇದರ ಫಲವಾಗಿಯೇ 70 ಕ್ಕೂ ಹೆಚ್ಚು ಸ್ಪರ್ಧೆಗಳಲ್ಲಿ ಭಾಗವಹಿಸತ್ತಲ್ಲದೆ, ಭಾಗವಹಿಸಿದ ಸ್ಪರ್ಧೆಗಳೆಲ್ಲದರಲ್ಲೂ ಪ್ರಥಮ ಅಥವಾ ದ್ವೀತಿಯ ಸ್ಥಾನ ಪಡೆದಿತ್ತು. ಮಾತ್ರವಲ್ಲದೆ 70 ಕ್ಕೂ ಹೆಚ್ಚು ಯುವಕರು ಹಾಗೂ ಹಿರಿಯರ ಪ್ರೀತಿಯ ರಾಣಿಯಾಗಿ ಇನ್ನಿಲ್ಲದಕ್ಕೆ ವಿವಿಧ ಗ್ರಾಮದ ಯುವಕರು ಸಂತಾಪ ವ್ಯಕ್ತಪಡಿಸಿದ್ದಾರೆ.





