ಸಿಂಹಿಣಿ ಹಾಗೂ ಚಿರತೆಯ ರೋಚಕ ಕಾಳಗದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್.!

ಸೋಷಿಯಲ್ ಮೀಡಿಯಾದಲ್ಲಿ ಪ್ರತಿನಿತ್ಯ ಪ್ರಾಣಿ ಸಾಮ್ರಾಜ್ಯಗಳಿಗೆ ಸಂಬಂಧಪಟ್ಟ ಹಲವಾರು ಕುತೂಹಲಕಾರಿ ವಿಡಿಯೋಗಳು ಹರಿದಾಡುತ್ತಿರುತ್ತವೆ. ಇದೀಗ ಮರದ ಮೇಲೆ ಸಿಂಹ ಮತ್ತು ಚಿರತೆಯೂ ಕಾದಾಟ ನಡೆಸಿದೆ. ಆದರೆ ಚಿರತೆ ತನ್ನ ಚಾಣಾಕ್ಷತೆಯಿಂದ ಸಿಂಹಿಣಿಯ ದಾಳಿಯನ್ನು ತಪ್ಪಿಸಿ ಕೊಂಡಿದೆ. ಈ ಪ್ರಾಣಿಗಳ ಕಾಳಗದ ವಿಡಿಯೋವು ಮೈ ಜುಮ್ಮ್ ಎನ್ನುವಂತಿದ್ದು,
ಪ್ರಾಣಿಗಳ ಲೋಕದಲ್ಲಿ ಬೇಟೆಗಾಗಿ ಪ್ರಾಣಿಗಳ ನಡುವೆ ಪರಸ್ಪರ ಕಾದಾಟಗಳು ನಡೆಯುತ್ತಲೇ ಇರುತ್ತವೆ. ಹೀಗಾಗಿ ಸಾಕಷ್ಟು ಪ್ರಾಣಿಗಳು ಬೇಟೆಯಲ್ಲಿ ಪಳಗಿರುತ್ತವೆ. ಈ ಪ್ರಾಣಿ ಪ್ರಪಂಚದಲ್ಲಿನ ಕಾದಾಟದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ. ಈ ಕ್ರೂರ ಪ್ರಾಣಿಗಳಾದ ಹುಲಿ, ಚಿರತೆ, ಸಿಂಹವು ಹೊಂಚು ಹಾಕಿ ಬೇಟೆಯಾಡುವುದರಲ್ಲಿ ಒಂದು ಕೈ ಮುಂದೆ ಎನ್ನಬಹುದು. ಈ ಬಲಿಷ್ಠ ಜೀವಿಗಳು ಒಮ್ಮೆ ಗುರಿ ಇಟ್ಟು ಬೇಟೆಗಿಳಿದರೆ ಮುಗಿದೇ ಹೋಯಿತು ವಿಫಲವಾಗುವುದು ಬಹಳ ಕಡಿಮೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಮರದ ಮೇಲೆ ಸಿಂಹ ಹಾಗೂ ಚಿರತೆಯ ನಡುವಿನ ಕಾಳಗವು ಮೈ ಜುಮ್ಮ್ ಎನಿಸುವಂತಿದೆ.


AMAZlNGNATURE ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ಸಿಂಹ ಮತ್ತು ಚಿರತೆಯ ನಡುವಿನ ಸಂಘರ್ಷದ ವಿಡಿಯೋ ಇದಾಗಿದ್ದು, ಈ ಈ ಕಾಳಗ ಯಾವುದೇ ಕಾಡಿನಲ್ಲಿ ನಡೆಯದೇ ಮರದಲ್ಲಿ ನಡೆದಿದೆ. ಹೌದು, ಸಿಂಹ ಹಾಗೂ ಚಿರತೆ ನಡುವಿನ ಸಂಘರ್ಷ ನಡೆದಿದ್ದು, ಈ ಕ್ರೂರ ಪ್ರಾಣಿಗಳು ಮರದ ಮೇಲೆಯೇ ಉಗ್ರ ಹೋರಾಟಕ್ಕೆ ಇಳಿದಿದ್ದು, ಇತ್ತ ಈ ಸಿಂಹಿಣಿ ಕೂಡ ತನ್ನ ಶಕ್ತಿಯಿಂದ ಚಿರತೆಯನ್ನು ಮಣಿಸಲು ಮುಂದಾಗಿದೆ.
ಚಿರತೆಯು ನಾನೇನು ಕಮ್ಮಿ ಎಂದು ತನಗಿರುವ ಬಲದಿಂದ, ಸಿಂಹದ ಮೇಲೆ ಎರಗಿದೆ. ಆದರೆ ಕೊನೆಗೆ ಮರದ ಕೊಂಬೆಯೇ ಮುರಿದು ಬಿದಿದೆ. ಇತ್ತ ಚಿರತೆ ತನ್ನ ಚಾಣಾಕ್ಷತೆಯಿಂದ ಸಿಂಹಿಣಿಯ ದಾಳಿಯನ್ನು ತಪ್ಪಿಸಿ ಕೊಂಡಿದೆ. ಈ ಮೈ ಜುಮ್ಮ್ ಎನಿಸುವ ಕಾದಾಟದ ವಿಡಿಯೋ ವೈರಲ್ ಆಗುತ್ತಿದ್ದಂತೆ ಹತ್ತು ಮಿಲಿಯನ್ಸ್ ಗೂ ಅಧಿಕ ವೀಕ್ಷಣೆಗಳನ್ನು ಕಂಡಿದೆ.
ವೀಡಿಯೋ ನೋಡಿ ನೆಟ್ಟಿಗರು, ಕ್ರೂರ ಪ್ರಾಣಿಗಳ ಕಾದಾಟದ ಬಗ್ಗೆ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರನು “ಪ್ರಕೃತಿಯನ್ನು ಪ್ರಕೃತಿಗಾಗಿ ನಿರ್ಮಿಸಲಾಗಿದೆ” ಎಂದು ಬರೆದಿದ್ದಾರೆ. ಮತ್ತೊಬ್ಬರು, ‘ಈ ಕ್ರೂರ ಪ್ರಾಣಿಗಳು ಮರದಲ್ಲಿ ಏನು ಮಾಡುತ್ತಿವೆ’ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರ ಬಳಕೆದಾರರು, ‘ಈ ಪ್ರಾಣಿಗಳ ಕಾದಾಟ ನೋಡುವುದಕ್ಕೆ ಭಯಂಕರವಾಗಿದೆ’ ಎಂದಿದ್ದಾರೆ.

Related Posts

ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್!

ಹಣದುಬ್ಬರ ಹಾಗೂ ಬೆಲೆ ಏರಿಕೆಯಿಂದ ತತ್ತರಿಸಿರುವ ಸಾಮಾನ್ಯ ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್ ನೀಡಿವೆ. ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದ ಬಿಸಿ ಇದೀಗ ನೇರವಾಗಿ ಭಾರತೀಯರ ಜೇಬಿಗೆ ತಟ್ಟಿದೆ. ನವದೆಹಲಿ: ಹಣದುಬ್ಬರ ಹಾಗೂ ಬೆಲೆ ಏರಿಕೆಯಿಂದ…

ಸ್ಟೂಡೆಂಟ್ ಎಲೆಕ್ಷನ್ ಗೆ ಅಸ್ತು ಎಂದ ಸಿಎಂ!

(ಕೆಎಂಶಿ)-ಉನ್ನತ ‘ಶಿಕ್ಷಣ ವಲಯದಲ್ಲಿ ಸಾಮಾಜಿಕ ನ್ಯಾಯ ಕಲ್ಪಿ ಸಲು, ರಾಜ್ಯದ ಎಲ್ಲ ಸರ್ಕಾರಿ, ಖಾಸಗಿ ಮತ್ತು ಡೀಮ್ಸ್ ವಿಶ್ವವಿದ್ಯಾಲಯಗಳಲ್ಲಿ ಜಾತಿ ಆಧಾರಿತ ದೌರ್ಜನ್ಯ ತಡೆಯಲು ರೋಹಿತ್ ವೇಮುಲ ಕಾಯಿದೆ ಜಾರಿಗೆ ತರಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ…

You Missed

ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್!

ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್!

ಸ್ಟೂಡೆಂಟ್ ಎಲೆಕ್ಷನ್ ಗೆ ಅಸ್ತು ಎಂದ ಸಿಎಂ!

ಸ್ಟೂಡೆಂಟ್ ಎಲೆಕ್ಷನ್ ಗೆ ಅಸ್ತು ಎಂದ ಸಿಎಂ!

ರಾಧಿಕಾ ಪಂಡಿತ್ ಜೊತೆ ಹೊಸ ಲುಕ್‌ನಲ್ಲಿ ‘ರಾಕಿಂಗ್’ ಸ್ಟಾರ್!

ರಾಧಿಕಾ ಪಂಡಿತ್ ಜೊತೆ ಹೊಸ ಲುಕ್‌ನಲ್ಲಿ ‘ರಾಕಿಂಗ್’ ಸ್ಟಾರ್!

ಕನ್ನಡ ಚಿತ್ರರಂಗದ ವ್ಯಕ್ತಿಯೊಬ್ಬರ ನಿವಾಸ ಮ್ಯೂಸಿಯಂ ಆಗಲಿದೆ

ಕನ್ನಡ ಚಿತ್ರರಂಗದ ವ್ಯಕ್ತಿಯೊಬ್ಬರ ನಿವಾಸ ಮ್ಯೂಸಿಯಂ ಆಗಲಿದೆ

ಸಚಿನ್ ತೆಂಡೂಲ್ಕರ್ ಸೊಸೆ ಎಷ್ಟು ಶ್ರೀಮಂತೆ ಗೊತ್ತಾ?

ಸಚಿನ್ ತೆಂಡೂಲ್ಕರ್ ಸೊಸೆ ಎಷ್ಟು ಶ್ರೀಮಂತೆ ಗೊತ್ತಾ?

ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಮೇಲೆ ಪೊಲೀಸ್ ಕಣ್ಣು!

ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಮೇಲೆ ಪೊಲೀಸ್ ಕಣ್ಣು!