ದೇವರಿಗೂ ಮಿಗಿಲು ಅಮ್ಮನ ಮಡಿಲು ….

ಜೀವನದಲ್ಲಿ ಅಮ್ಮ ಎಂಬ ಎರಡಕ್ಷರ ಜೊತೆಗಿರಲು, ಕಷ್ಟ ಎಂಬ ಎರಡಕ್ಷರ ಕಾಣುವುದಿಲ್ಲ. ನವಮಾಸ ಗರ್ಭದಲ್ಲಿ ಹೊತ್ತು, ಜನ್ಮ ನೀಡಿದ ಅವಳು ಜನ್ಮ ಮಾಸುವವರೆಗೂ ಪ್ರೀತಿಯನ್ನು ಬಿಟ್ಟು ಇನ್ನೇನನ್ನೂ ನೀಡಲಾರಳು. ಮಕ್ಕಳು ತಪ್ಪು ಮಾಡಿದಾಗ ಕೋಪವೇ ಅವಳ ಬೆತ್ತ, ನಮಗೆ ನೋವಾದಾಗ ಅವಳು ಕಣ್ಣೀರಾಕುವಳು ಅದುವೇ ಅವಳ ಮುಗ್ಧತೆಯ ಪ್ರೀತಿ. ಶಿಸ್ತು ,ಬದುಕಿನ ಅರ್ಥ ತಿಳಿಸುವ ವೈಖರಿಯಲ್ಲಿಯೇ ಗುರುವಾದವಳು. ನಗುವೆಂಬ ಅಮೂಲ್ಯವಾದ ಆಭರಣ ತೊಟ್ಟವಳು ಅಮ್ಮ. ನಮ್ಮ ಏಳಿಗೆಗಾಗಿ ಕಾಣದ ದೇವರಿಗೆ ಹರಕೆ ಹೊತ್ತು, ಸದಾ ಸುಖವಿರಲಿ ಮಕ್ಕಳ ಬಾಳಿನಲ್ಲಿ ಎಂದು ಬೇಡಿದವಳು ನನ್ನಮ್ಮ. ಹೊಲ-ಗದ್ದೆಗಳಲ್ಲಿ, ಬಿಸಿಲು, ಮಳೆ,ಚಳಿ,ಗಾಳಿ ಎನ್ನದೇ ದೇಹದಂಡಿಸಿ ದುಡಿದು ಮಕ್ಕಳಿಗಾಗಿ ಒಂದಿಷ್ಟು ಹಣ ಕೂಡಿಡುವಳು. ಆ ಹಣದಿಂದ ಮಕ್ಕಳ ಜೀವನ ಹಸನಾಗುವುದನ್ನು ನೋಡುವುದೇ ಅವಳ ಜೀವನದ ಮುಖ್ಯ ಗುರಿ. ನಮಗಾಗಿ ಗುಡಿ-ಗೋಪುರ ಸುತ್ತುವ ಅವಳೇ ಕಣ್ಣಿಗೆ ಕಾಣುವ, ಮುಕ್ಕೋಟಿ ದೇವರನ್ನು ಮೀರಿಸುವ ಮಮತೆಯ ಸಿರಿ ಅಮ್ಮ. ಆಕೆಯ ಕಾಲಿನ ಧೂಳು ಸಹ ನನ್ನಣೆಗೆ ಸಿಂಧೂರವೇ ಸರಿ..

ಈ ಸುಂದರ ಜೀವನ ನೀಡಿದ್ದಕ್ಕೆ ಧನ್ಯವಾದಗಳು ಅಮ್ಮ…. ಎಂದಿಗೂ ನಿನ್ನ ಮಡಿಲಿನಲ್ಲಿ ಪುಟ್ಟ ಮಗು ನಾನು…. ದೇವರಿಗೂ ಸವಾಲಾಕುವೆ ನಿನ್ನ ಪ್ರೀತಿ ಪಡೆದ ನಾನು ಜಗತ್ತಿನ ಶ್ರೀಮಂತೆ ಎಂದು…..ಅಮ್ಮ; ಇದು ಖಂಡಿತ ಒಂದು ಶಬ್ದವಲ್ಲ. ಬದಲಿಗೆ ಅದೊಂದು ಭಾವನೆ. ಸಂತೋಷ, ಸುಖ, ದುಃಖ, ನೋವು, ನಲಿವು ಹೀಗೆ ಎಲ್ಲದಕ್ಕೆ ಅಮ್ಮನೇ ಆಧಾರ. ಆಕೆಯೇ ನಮ್ಮ ಮೊದಲ ನುಡಿ. ಜಗತ್ತಿನಲ್ಲಿ ಅಮ್ಮ ಅನ್ನುವ ಶಬ್ದಕ್ಕಿಂತ ತೂಕದ ಇನ್ನೊಂದು ಶಬ್ದ-ಭಾವನೆ ಇರಲಿಕ್ಕಿಲ್ಲ.ಪ್ರತಿ ವ್ಯಕ್ತಿಯ ಬದುಕಿನಲ್ಲಿ ಅಮ್ಮನ ಮನೆಯಷ್ಟು ಆಪ್ತ ಮನೆ ಇನ್ನೊಂದು ಸಿಗಲಾರದು. ಅಮ್ಮನ ಮಡಿಲು ನೀಡುವ ಸುಖವನ್ನು ಜಗತ್ತಿನ ಯಾವುದೇ ವಸ್ತು ನೀಡಲಾರದು.

ಅಮ್ಮನಿಗೆ ಸರಿ ಸಾಟಿ ಅಮ್ಮನೇ. ಅದಕ್ಕಾಗಿಯೇ ಅಮ್ಮನನ್ನು ನಮ್ಮಲ್ಲಿ ಮಾತೃ ದೇವತೆ ಎಂದೇ ಪೂಜಿಸುತ್ತಾರೆ. ಅಮ್ಮ ಅನ್ನುವುದು ಒಂದು ವ್ಯಕ್ತಿ ಅಲ್ಲ; ಅಮ್ಮ ಅನ್ನುವುದು ಕೇವಲ ಎರಡು ಪದಗಳಲ್ಲ; ಬದಲಿಗೆ ಅಮ್ಮ ಎಂದರೆ ಒಂದು ಸುಂದರ ಭಾವನೆ. ಅಮ್ಮ ಎಂದರೆ ಏನು? ಅದು ಶ್ರೀ ಕೃಷ್ಣ ಪರಮಾತ್ಮನ ವಿಶ್ವರೂಪದಂತೆ.ಅಲ್ಲಿ ಎಲ್ಲವೂ ಇದೆ; ಎಲ್ಲೆಡೆಯೂ ಇರುವುದು ಅಮ್ಮನೇ.ಇಂತಹ ಅಮ್ಮನ ಋಣ ನೆನಪಿಸಿಕೊಳ್ಳಲೊಂದು ಅಮ್ಮಂದಿರ ದಿನ. ಪ್ರಪಂಚದೆಲ್ಲೆಡೆ ಇರುವ ಎಲ್ಲಾ ತಾಯಂದಿರಿಗೂ ವಿಶ್ವ ತಾಯಂದಿರ ದಿನದ ಶುಭಾಶಯಗಳು.

 

Related Posts

3 ದಶಕಗಳ ಬಳಿಕ ನಟಿ ಬಿಂದ್ಯಾ ಕ್ಷಮೆ ಕೇಳಿದ್ದೇಕೆ?

ಕನ್ನಡ ಚಿತ್ರರಂಗದ ಕ್ಲಾಸಿಕ್ ಸಿನಿಮಾ ಎಂಬ ಖ್ಯಾತಿ ‘ಹಳ್ಳಿ ಮೇಷ್ಟ್ರು’ ಚಿತ್ರಕ್ಕಿದೆ. ಈ ಸಿನಿಮಾ ಬಿಡುಗಡೆಯಾಗಿ 3 ದಶಕಗಳೇ ಕಳೆದಿವೆ. ಈ ಚಿತ್ರದ ಶೂಟಿಂಗ್ ಸಮಯದಲ್ಲಿ ನಡೆದಿದ್ದ ಒಂದು ವಿವಾದ ಮಾತ್ರ ನಟಿ ಬಿಂದಿಯಾ ಮತ್ತು ಕ್ರೇಜಿಸ್ಟಾರ್ ರವಿಚಂದ್ರನ್ ನಡುವೆ ದೊಡ್ಡ…

ಭೀಮಾ ನದಿ ತೀರದಲ್ಲಿ ಒಂದೇ ಕುಟುಂಬದ ಐವರು ಸೇರಿ 6 ಜನರ ಭೀಕರ ಕೊ*ಲೆ!

ವಿಜಯಪುರ ಜಿಲ್ಲೆಯ ಭೀಮಾ ನದಿ ತೀರದಲ್ಲಿ ಮತ್ತೆ ನೆತ್ತರ ಹರಿದಿದ್ದು, ಭೀಕರ ಸಾಮೂಹಿಕ ಹತ್ಯಾಕಾಂಡ ಇಡೀ ಜಿಲ್ಲೆಯನ್ನು ತಲ್ಲಣಗೊಳಿಸಿದೆ. ಜಮೀನು ವ್ಯಾಜ್ಯದ ಹಿನ್ನೆಲೆಯಲ್ಲಿ ಒಂದೇ ಕುಟುಂಬದ ಐವರು ಹಾಗೂ ಅವರ ಸ್ನೇಹಿತ ಸೇರಿದಂತೆ ಒಟ್ಟು ಆರು ಜನರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ, ಗುಂಡು…

You Missed

ಮತದಾರರ ಪಟ್ಟಿ ಪರಿಷ್ಕರಣೆ (SIR): ಅಧಿಕಾರಿಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಸೂಚನೆ

ಮತದಾರರ ಪಟ್ಟಿ ಪರಿಷ್ಕರಣೆ (SIR): ಅಧಿಕಾರಿಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಸೂಚನೆ

3 ದಶಕಗಳ ಬಳಿಕ ನಟಿ ಬಿಂದ್ಯಾ ಕ್ಷಮೆ ಕೇಳಿದ್ದೇಕೆ?

3 ದಶಕಗಳ ಬಳಿಕ  ನಟಿ ಬಿಂದ್ಯಾ  ಕ್ಷಮೆ ಕೇಳಿದ್ದೇಕೆ?

ಭೀಮಾ ನದಿ ತೀರದಲ್ಲಿ ಒಂದೇ ಕುಟುಂಬದ ಐವರು ಸೇರಿ 6 ಜನರ ಭೀಕರ ಕೊ*ಲೆ!

ಭೀಮಾ ನದಿ ತೀರದಲ್ಲಿ  ಒಂದೇ ಕುಟುಂಬದ ಐವರು ಸೇರಿ 6 ಜನರ ಭೀಕರ ಕೊ*ಲೆ!

ಕರ್ನಾಟಕ ನೂತನ ಸಿಎಂ ಆಯ್ಕೆ: ಇಂದು ಸಂಜೆ ವಿಧಾನಸೌಧದಲ್ಲಿ ಮಹತ್ವದ ಸಿಎಲ್‌ಪಿ ಸಭೆ

ಕರ್ನಾಟಕ ನೂತನ ಸಿಎಂ ಆಯ್ಕೆ: ಇಂದು ಸಂಜೆ ವಿಧಾನಸೌಧದಲ್ಲಿ ಮಹತ್ವದ ಸಿಎಲ್‌ಪಿ ಸಭೆ

ಆತ್ಮನಿರ್ಭರ ಭಾರತಕ್ಕೆ ದೊಡ್ಡ ಬಲ: ಅತ್ಯಂತ ಬಲಿಷ್ಠ ‘ವೆಲ್ಡೆಡ್ ಪೈಪ್’ ಉತ್ಪಾದಿಸಿ ದಾಖಲೆ ಬರೆದ AM/NS ಇಂಡಿಯಾ!

ಆತ್ಮನಿರ್ಭರ ಭಾರತಕ್ಕೆ ದೊಡ್ಡ ಬಲ: ಅತ್ಯಂತ ಬಲಿಷ್ಠ ‘ವೆಲ್ಡೆಡ್ ಪೈಪ್’ ಉತ್ಪಾದಿಸಿ ದಾಖಲೆ ಬರೆದ AM/NS ಇಂಡಿಯಾ!

ಕರ್ನಾಟಕ ರಾಜಕೀಯದಲ್ಲಿ ಹೈಡ್ರಾಮಾ: ಸಿದ್ದರಾಮಯ್ಯ ರಾಜೀನಾಮೆಗೆ ಹೈಕಮಾಂಡ್ ಗಡುವು!

ಕರ್ನಾಟಕ ರಾಜಕೀಯದಲ್ಲಿ ಹೈಡ್ರಾಮಾ: ಸಿದ್ದರಾಮಯ್ಯ ರಾಜೀನಾಮೆಗೆ ಹೈಕಮಾಂಡ್ ಗಡುವು!