ಮಾದಪ್ಪನ ಸನ್ನಿಧಿಯಲ್ಲಿ ನಡೀತು ಮಹಾ ಪವಾಡ! ಕಣ್ಮರೆಯಾದ ಇಬ್ಬರು ಮಕ್ಕಳು ಪ್ರತ್ಯಕ್ಷ.

ಬೆಂಗಳೂರು: ಜೇನುಮಲೆ.. ಬುತ್ತಿಮಲೆ, ಪಚ್ಚೆಮಲೆ, ಪಾಣಿಮಲೆ, ಎಪ್ಪತೇಳುಮಲೆಯ ಒಡೆಯ ಮಾದಪ್ಪನಿಗೆ ಶರಣು ಶರಣೆನ್ನದವರೇ ಇಲ್ಲ. ಚಲ್ಲಾಟಗಾರನೂ ಇವನೇ ಮಾಯಗಾರನೂ ಇವನೇ. ಏಳು ಮಲೆ ಮೇಲೆ ಕೂತಿರೋ ಮಾದಪ್ಪನನ್ನ ಎಷ್ಟು ಕೊಂಡಾಡಿದ್ರೂ ಸಾಲಲ್ಲ ಬಿಡಿ. ಮಾದಪ್ಪನ ಸನ್ನಿಧಿ ಅಂದ್ರೆ ಸಾಕು ಮನದಲ್ಲೊಂದು ಭಕ್ತಿಭಾವ ಮೂಡುತ್ತೆ. ನಮಗರಿವಿಲ್ಲದೆಯೇ ಭಗವಂತನ ನಾಮಸ್ಮರಣೆ ಶುರುವಾಗುತ್ತೆ. ಇಂತಾ ಮಾಯ್ಕಾರನ ಸನ್ನಿಧಿಯಲ್ಲಿ ಮಹಾ ಪವಾಡವೊಂದು ನಡೆದಿದೆ.

ಕರುಳ ಕುಡಿಗಳನ್ನ ಕಳ್ಕೊಂಡು, ಮಾದಪ್ಪನ ಸನ್ನಿಧಿಗೆ ಬಂದ ಹೆತ್ತವರೇ ಶಾಕ್ ಆಗಿ ಹೋಗಿದ್ದಾರೆ. ಭಗವಂತ ಉರುಳು ಸೇವೆ ಮಾಡೋ ಹೊತ್ತಲ್ಲೇ, ನಾಪತ್ತೆಯಾದ ಇಬ್ಬರು ಮಕ್ಕಳು ಪ್ರತ್ಯಕ್ಷರಾಗಿದ್ದಾರೆ.

ಮಾದಪ್ಪನ ಲೀಲೆಯನ್ನ ಬಲ್ಲವೇ ಬಲ್ಲರು ಬಿಡಿ. ವಿಜ್ಞಆನ ಎಷ್ಟೇ ಮುಂದುವರಿದಿದೆ ಅಂದ್ರೂ ಜನ್ರ ನಂಬಿಕೆ ಕಮ್ಮಿ ಆಗ್ತಿಲ್ಲ. ವಿಜ್ಞಾನಿಗಳು ಕೂಡಾ ಗ್ರಹಗತಿಗಳನ್ನ ನೋಡೋದನ್ನ ನಿಲ್ಲಿಸ್ತಿಲ್ಲ. ಇದಕ್ಕೆ ತಾಜಾ ಉದಾಹರಣೆಯೇ ಈ ಸ್ಟೋರಿ. ಈ ಇಬ್ಬರು ಬಾಲಕರು ಪಕ್ಕಾ ಚೆಡ್ಡಿ ದೋಸ್ತ್ಗಳು. ಇವ್ನ ಹೆಸ್ರು ರವಿ, ಮತ್ತೊಬ್ಬ ಪ್ರವೀಣ. ರವಿ 9ನೇ ಕ್ಲಾಸ್ ಓದ್ತಿದ್ರೆ, ಪ್ರವೀಣ್ 7ನೇ ಕ್ಲಾಸ್. ಇಬ್ರೂ ಬೇರೆ ಬೇರೆ ಸ್ಕೂಲ್ ಆದ್ರೂ ಅಕ್ಕ ಪಕ್ಕದ ಮನೆಯವ್ರು. ಹೀಗಾಗಿ ಸಣ್ಣೋರಿದ್ದಾಗಿಂದ್ಲೂ ಕುಚಿಕುಗಳಂತಿದ್ದಾರೆ. ಆದರೆ, ಕಳೆದ ಆರು ದಿನಗಳ ಹಿಂದೆ ಸಂಜೆ ಹೊತ್ತಲ್ಲಿ ಹೊರಗೆ ಹೋದವರು, ಎಲ್ಲೋದ್ರು ಏನಾದ್ರು ಅನ್ನೋ ಸಣ್ಣ ಸುಳಿವೂ ಇರ್ಲಿಲ್ಲ. ಹುಡುಕಿ ಹುಡುಕಿ ಸುಸ್ತಾಗಿ ಹೋಗಿದ್ದ ಪೋಷಕರು ಬೆಂಗಳೂರಿನ ತಿಲಕನಗರ ಪೊಲೀಸ್ ಠಾಣೆ ಮೆಟ್ಟಿಲೇರಿದ್ರು.ಕಳೆದ ಶನಿವಾರ ಪ್ರವೀಣ್ಗೆ ಹುಷಾರಿಲ್ಲ ಅಂತಾ ಮನೆಯಲ್ಲೇದ್ದ. ಶಾಲೆಗೆ ಹೋಗಿದ್ದ ರವಿ ಗೆಳೆಯನಿಗೆ ಹುಷಾರಿಲ್ಲ ಅಂತಾ ಬೇಗನೇ ಬಂದಿದ್ದ. ಸೀದಾ ಸ್ನೇಹಿತನ ಮನೆಗೋಗಿ ಪ್ರಾಜೆಕ್ಟ್ ವರ್ಕ್ಗೆ ಒಂದಿಷ್ಟು ಐಟಂಸ್ ತಗೊಂಡು ಬರ್ಬೇಕು ಬಾ ಅಂತಾ ಕರ್ಕೊಂಡು ಹೋಗಿದ್ದಾನೆ. ಹೀಗೆ ಹೊರ ಹೋದವ್ರು ಜಯನಗರ ಬಸ್ ನಿಲ್ದಾಣದಲ್ಲಿ ಬಸ್ ಹತ್ತಿದ್ದೇ ಕೊನೆ. ಆಮೇಲೆ ಎಲ್ಲೋದ್ರು ಅನ್ನೋ ಯಾವ ಕುರುಹೂ ಸಿಕ್ಕಿರ್ಲಿಲ್ಲ. ಪೊಲೀಸ್ರು ಕೂಡಾ ಮೂಲೆ ಮೂಲೆ ಜಾಲಾಡಿದ್ರು. ಆದ್ರೆ, ಇಬ್ಬರು ಬಾಲಕರು ಮಾತ್ರ ಸಿಕ್ಕಿರ್ಲಿಲ್ಲ. ಹೀಗಾಗಿ ಪ್ರವೀಣ್ ಪೋಷಕರು ಮಲೆ ಮಹದೇಶ್ವರನ ಮೊರೆ ಹೋಗಿದ್ದಾರೆ. ಆಗ್ಲೇ ನೋಡಿ ಪವಾಡ ನಡೆದಿದ್ದು.

ದಿಕ್ಕು ಕಾಣದಂತಾದ ಪ್ರವೀಣ್ ಹೆತ್ತವ್ರು, ಮಾದಪ್ಪನ ಸನ್ನಿಧಿಗೆ ಹೋಗಿ ಭಕ್ತಿಯಿಂದ ಬೇಡಿಕೊಂಡಿತ್ತು. ಉರುಳುಸೇವೆ ಮಾಡೋ ಮೂಲಕ ಮಕ್ಕಳ ಪತ್ತೆಗಾಗಿ ಕಣ್ಣೀರ ಬೇಡಿಕೆ ಒಪ್ಪಿಸ್ತಿದ್ರು. ಇದೇ ಹೊತ್ತಲ್ಲಿ ಅದೆಲ್ಲಿಂದ ಬಂದ್ರೋ ಗೊತ್ತಿಲ್ಲ. ಹೆತ್ತವರು ಉರುಳು ಸೇವೆ ಮಾಡುವಾಗ್ಲೇ ಇಬ್ಬರು ಮಕ್ಕಳು ಪ್ರತ್ಯಕ್ಷರಾಗಿದ್ದಾರೆ.
ಎಂಥಾ ವಿಚಿತ್ರ ನೋಡಿ, ಮಕ್ಕಳಿಬ್ಬರು ಸಿಕ್ತಿದ್ದಂತೆ ನೀವಿಲ್ಲಿ ಹೇಗೆ ಬಂದ್ರಿ ಅಂತಾ ಹೆತ್ತವರು ವಿಚಾರಿಸೋದಕ್ಕೆ ಶುರು ಮಾಡಿದ್ದಾರೆ. ಆಗಲೇ ನೋಡಿ ಸತ್ಯ ಬಿಚ್ಚಿಕೊಳ್ಳೋದಕ್ಕೆ ಶುರು ಮಾಡಿದ್ದು. ಸ್ನೇಹಿತ ಪ್ರವೀಣ್ಗೆ ಹುಷಾರಿಲ್ಲದೇ ಇದ್ದಿದ್ರಿಂದ ರವಿ ತುಂಬಾನೇ ಬೇಸರಗಿಂಡಿದ್ದನಂತೆ. ಹೀಗಾಗಿ ನಿಮ್ಮ ಮನೆದೇವ್ರಾದ ಮಲೆ ಮಹದೇಶ್ವರಕ್ಕೆ ಹೋಗೋಣ ಅಂತಾ ರವಿಯೇ ಹೇಳಿದ್ದಾನೆ. ಅಷ್ಟೇ ಅಲ್ಲ ಮನೆ ದೇವರ ದರ್ಶನ ಮಾಡಿದ್ರೆ ಬೇಗ ಹುಷಾರಾಗ್ತೀಯ ಅಂತಾ ಕರ್ಕೊಂಡ್ ಹೋಗಿದ್ನಂತೆ. ಒಟ್ನಲ್ಲಿ ಕಳೆದೊಂದು ವಾರದಿಂದ ಕಣ್ಮರೆಯಾಗಿದ್ದ ಮಕ್ಕಳೀಗ ಪತ್ತೆಯಾಗಿದ್ದು, ಹೆತ್ತವರು ನಿಟ್ಟುಸಿರು ಬಿಟ್ಟಿದ್ದಾರೆ.

Related Posts

3 ದಶಕಗಳ ಬಳಿಕ ನಟಿ ಬಿಂದ್ಯಾ ಕ್ಷಮೆ ಕೇಳಿದ್ದೇಕೆ?

ಕನ್ನಡ ಚಿತ್ರರಂಗದ ಕ್ಲಾಸಿಕ್ ಸಿನಿಮಾ ಎಂಬ ಖ್ಯಾತಿ ‘ಹಳ್ಳಿ ಮೇಷ್ಟ್ರು’ ಚಿತ್ರಕ್ಕಿದೆ. ಈ ಸಿನಿಮಾ ಬಿಡುಗಡೆಯಾಗಿ 3 ದಶಕಗಳೇ ಕಳೆದಿವೆ. ಈ ಚಿತ್ರದ ಶೂಟಿಂಗ್ ಸಮಯದಲ್ಲಿ ನಡೆದಿದ್ದ ಒಂದು ವಿವಾದ ಮಾತ್ರ ನಟಿ ಬಿಂದಿಯಾ ಮತ್ತು ಕ್ರೇಜಿಸ್ಟಾರ್ ರವಿಚಂದ್ರನ್ ನಡುವೆ ದೊಡ್ಡ…

ಭೀಮಾ ನದಿ ತೀರದಲ್ಲಿ ಒಂದೇ ಕುಟುಂಬದ ಐವರು ಸೇರಿ 6 ಜನರ ಭೀಕರ ಕೊ*ಲೆ!

ವಿಜಯಪುರ ಜಿಲ್ಲೆಯ ಭೀಮಾ ನದಿ ತೀರದಲ್ಲಿ ಮತ್ತೆ ನೆತ್ತರ ಹರಿದಿದ್ದು, ಭೀಕರ ಸಾಮೂಹಿಕ ಹತ್ಯಾಕಾಂಡ ಇಡೀ ಜಿಲ್ಲೆಯನ್ನು ತಲ್ಲಣಗೊಳಿಸಿದೆ. ಜಮೀನು ವ್ಯಾಜ್ಯದ ಹಿನ್ನೆಲೆಯಲ್ಲಿ ಒಂದೇ ಕುಟುಂಬದ ಐವರು ಹಾಗೂ ಅವರ ಸ್ನೇಹಿತ ಸೇರಿದಂತೆ ಒಟ್ಟು ಆರು ಜನರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ, ಗುಂಡು…

You Missed

ಮತದಾರರ ಪಟ್ಟಿ ಪರಿಷ್ಕರಣೆ (SIR): ಅಧಿಕಾರಿಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಸೂಚನೆ

ಮತದಾರರ ಪಟ್ಟಿ ಪರಿಷ್ಕರಣೆ (SIR): ಅಧಿಕಾರಿಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಸೂಚನೆ

3 ದಶಕಗಳ ಬಳಿಕ ನಟಿ ಬಿಂದ್ಯಾ ಕ್ಷಮೆ ಕೇಳಿದ್ದೇಕೆ?

3 ದಶಕಗಳ ಬಳಿಕ  ನಟಿ ಬಿಂದ್ಯಾ  ಕ್ಷಮೆ ಕೇಳಿದ್ದೇಕೆ?

ಭೀಮಾ ನದಿ ತೀರದಲ್ಲಿ ಒಂದೇ ಕುಟುಂಬದ ಐವರು ಸೇರಿ 6 ಜನರ ಭೀಕರ ಕೊ*ಲೆ!

ಭೀಮಾ ನದಿ ತೀರದಲ್ಲಿ  ಒಂದೇ ಕುಟುಂಬದ ಐವರು ಸೇರಿ 6 ಜನರ ಭೀಕರ ಕೊ*ಲೆ!

ಕರ್ನಾಟಕ ನೂತನ ಸಿಎಂ ಆಯ್ಕೆ: ಇಂದು ಸಂಜೆ ವಿಧಾನಸೌಧದಲ್ಲಿ ಮಹತ್ವದ ಸಿಎಲ್‌ಪಿ ಸಭೆ

ಕರ್ನಾಟಕ ನೂತನ ಸಿಎಂ ಆಯ್ಕೆ: ಇಂದು ಸಂಜೆ ವಿಧಾನಸೌಧದಲ್ಲಿ ಮಹತ್ವದ ಸಿಎಲ್‌ಪಿ ಸಭೆ

ಆತ್ಮನಿರ್ಭರ ಭಾರತಕ್ಕೆ ದೊಡ್ಡ ಬಲ: ಅತ್ಯಂತ ಬಲಿಷ್ಠ ‘ವೆಲ್ಡೆಡ್ ಪೈಪ್’ ಉತ್ಪಾದಿಸಿ ದಾಖಲೆ ಬರೆದ AM/NS ಇಂಡಿಯಾ!

ಆತ್ಮನಿರ್ಭರ ಭಾರತಕ್ಕೆ ದೊಡ್ಡ ಬಲ: ಅತ್ಯಂತ ಬಲಿಷ್ಠ ‘ವೆಲ್ಡೆಡ್ ಪೈಪ್’ ಉತ್ಪಾದಿಸಿ ದಾಖಲೆ ಬರೆದ AM/NS ಇಂಡಿಯಾ!

ಕರ್ನಾಟಕ ರಾಜಕೀಯದಲ್ಲಿ ಹೈಡ್ರಾಮಾ: ಸಿದ್ದರಾಮಯ್ಯ ರಾಜೀನಾಮೆಗೆ ಹೈಕಮಾಂಡ್ ಗಡುವು!

ಕರ್ನಾಟಕ ರಾಜಕೀಯದಲ್ಲಿ ಹೈಡ್ರಾಮಾ: ಸಿದ್ದರಾಮಯ್ಯ ರಾಜೀನಾಮೆಗೆ ಹೈಕಮಾಂಡ್ ಗಡುವು!