ಮೈಸೂರಿನ ಡಿ.ಎ.ವಿ ಶಾಲೆಯ ಆವರಣದಲ್ಲಿ 76ನೇ ಗಣರಾಜ್ಯ ದಿನಾಚರಣೆಯನ್ನು ಆಚರಿಸಲಾಯಿತು. ಪಬ್ಲಿಕ್ TVಯ ಮೈಸೂರು ವಿಭಾಗದ ಬ್ಯೂರೋ ಚೀಫ್ ಆದ ಕೆ.ಪಿ. ನಾಗರಾಜ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಧ್ವಜಾರೋಹಣವನ್ನು ಮಾಡಿ, ಗಣರಾಜ್ಯೋತ್ಸವದ ಮಹತ್ವವನ್ನು ಕುರಿತು ಭಾಷಣವನ್ನು ಮಾಡಿದರು. ದೇಶಭಕ್ತಿಗೀತೆಯನ್ನು ಪ್ರತಿಬಿಂಬಿಸುವ ನೃತ್ಯ, ಗೀತೆ, ಭಾಷಣಗಳನ್ನು ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದರು.

ಶಾಲೆಯ ಅಧ್ಯಕ್ಷರಾದ ಸಚ್ಚಿದಾನಂದಮೂರ್ತಿ, ಸಿ.ಇ.ಒ ಜಯಶ್ರೀ.ಎಸ್.ಮೂರ್ತಿ, ಪ್ರಾಂಶುಪಾಲರಾದ ಶೋಭ, ಉಪಪ್ರಾಂಶುಪಾಲರಾದ. ಕಾವ್ಯ ಬಸಪ್ಪ, ಮುಖ್ಯೋಪಾಧ್ಯಾಯಿನಿ ಬಿಂದುಶ್ರೀ, ಎಲ್ಲ ಶಿಕ್ಷಕವೃಂದ, ಮಕ್ಕಳು ಹಾಗು ಪೋಷಕರು ಭಾಗವಹಿಸಿದ್ದರು.





