ಬೆಟ್ಟದಪುರದ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಜಾನುವಾರು ಜಾತ್ರೆ : ಸಿದ್ಧತೆ ಬಲು ಜೋರು!

ಬೆಟ್ಟದಪುರ: ಇಲ್ಲಿನ ಆರಾಧ್ಯ ದೈವ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಜಾನುವಾರು ಜಾತ್ರೆ ಸೋಮವಾರ (ಫೆ.3)ದಿಂದ ಶುಕ್ರವಾರದವರೆಗೆ (ಫೆ.7) ಜರುಗಲಿದ್ದು, ಸಿದ್ದತೆ ಭರದಿಂದ ಸಾಗಿದೆ.
ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಜರುಗುವ ಏಕೈಕ ಜಾನುವಾರು ಜಾತ್ರೆ ಇದಾಗಿದ್ದು, ಮೈಸೂರು ಜಿಲ್ಲೆ ಮಾತ್ರವಲ್ಲದೆ ರಾಜ್ಯದ ಹಲವು ಜಿಲ್ಲೆಗಳಿಂದಲೂ ರೈತರು ಎತ್ತುಗಳನ್ನು ಕರೆತರುತ್ತಾರೆ. ಜಾತ್ರೆ ಆರಂಭಗೊಳ್ಳುವ ಮೂರು ದಿನಗಳ ಮುಂಚಿತವಾಗಿಯೇ ರೈತರು ದನಗಳನ್ನು ಕಟ್ಟಲು ಸ್ಥಳಗಳನ್ನು ಕಾಯ್ದಿರಿಸುತ್ತಿದ್ದಾರೆ.

ಬೆಟ್ಟದಪುರದಲ್ಲಿ ಮಲ್ಲಿಕಾರ್ಜುನ ಸ್ವಾಮಿಗೆ ಇರುವಷ್ಟೇ ಪ್ರಾಧಾನ್ಯತೆ ಬಸವನಿಗೂ (ಬೆಳ್ಳಿಬಸಪ್ಪ) ಇದ್ದು, ರೈತರು ರಾಸುಗಳ ಮೇಲೆ ದೈವಿ ಭಾವ ತೋರುತ್ತಾರೆ. ಬಣ್ಣ ಬಣ್ಣದ ಮಾಲೆ ಹಾಗೂ ಗೆಜ್ಜೆಗಳಿಂದ ಕಣ್ಮನ ಸೆಳೆಯುವಂತೆ ರಾಸುಗಳಿಗೆ ಅಲಂಕಾರ ಮಾಡಿ, ವಾದ್ಯ ಮೇಳಗಳ ಸಹಿತವಾಗಿ ಜಾತ್ರೆಗೆ ಮೆರವಣಿಗೆ ಮೂಲಕ ಕರೆ ತರಲಾಗುತ್ತದೆ. ಸಂಕ್ರಾಂತಿ ಸುಗ್ಗಿಯ ನಂತರ ಆರಂಭವಾಗುವ ಜಾನುವಾರು ಜಾತ್ರೆಗಳಲ್ಲಿ ಸಮೀಪದ ಚುಂಚನಕಟ್ಟೆ, ಹೇಮಗಿರಿ, ಮುಡುಕುತೊರೆ ಕ್ಷೇತ್ರಗಳ ಜಾತ್ರೆ ನಂತರ ಬೆಟ್ಟದಪುರದ ಜಾತ್ರೆ ನಡೆಯುವುದು ರೂಢಿ.
ಬಹುತೇಕ ಕೃಷಿ ಚಟುವಟಿಕೆಗಳು ಪೂರ್ಣಗೊಂಡ ನಂತರ ಪ್ರತಿ ವರ್ಷ ಜಾತ್ರೆ ನಡೆಯಲಿದ್ದು, ಕಳೆದ ಸಾಲಿನಲ್ಲಿ ಒಂದು ಜೋಡಿ ಹಳ್ಳಿಕಾರ್ ಎತ್ತುಗಳು ಕನಿಷ್ಠ ₹ 45 ಸಾವಿರ ದಿಂದ ಗರಿಷ್ಠ ₹ 5 ಲಕ್ಷ ದವರೆಗೆ ಮಾರಾಟವಾಗಿದ್ದವು. ಸಾವಿರಕ್ಕೂ ಹೆಚ್ಚು ಜೋಡಿ ರಾಸುಗಳು ಪಾಲ್ಗೊಳ್ಳುವುದರಿಂದ ಖರೀದಿಗೆ ಹೊರ ಜಿಲ್ಲೆಗಳಿಂದಲೂ ರೈತರು ಆಗಮಿಸುತ್ತಾರೆ. ಅಲ್ಲದೇ ಪ್ರಸಕ್ತ ಸಾಲಿನಲ್ಲಿ ಉತ್ತಮ ಮಳೆಯಾಗಿದ್ದು, ರಾಸುಗಳಿಗೆ ಮೇವಿನ ಕೊರತೆ ಇಲ್ಲದಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಲಿವೆ ಎಂದು ಅಂದಾಜಿಸಲಾಗಿದೆ.
‘ಪ್ರತಿ ವರ್ಷವೂ ಜಾನುವಾರು ಜಾತ್ರೆಗೆ ಭಾಗವಹಿಸುತ್ತೇವೆ. ಉತ್ತಮ ರಾಸುಗಳನ್ನು ಖರೀದಿಸುತ್ತೇವೆ’ ಎಂದು ಅಲ್ಪನಾಯಕನ ಹಳ್ಳಿಯ ರೈತ ಯೋಗೇಶ್ ಹೇಳಿದರು.

ಈ ಮೊದಲು ಬೆಟ್ಟದಪುರದ ಸಂತೆಮಾಳದ ಸಮೀಪ ಜಾನುವಾರು ಜಾತ್ರೆ ನಡೆಸಲಾಗುತ್ತಿತ್ತು. ಆದರೆ, ಕಳೆದ ನಾಲ್ಕು ವರ್ಷಗಳಿಂದ ಜಾಗದ ಮತ್ತು ನೀರಿನ ಕೊರತೆ ಉಂಟಾದ ಕಾರಣ ಹರದೂರು ಗೇಟ್ ಬಳಿ ರೈತರ ಜಮೀನುಗಳಲ್ಲಿಯೇ ಜಾತ್ರೆ ಆಯೋಜಿಸಲಾಗುತ್ತಿದೆ. ಅಲ್ಲಿಗೆ ಬೇಕಾದ ಮೂಲಸೌಕರ್ಯಗಳನ್ನು ಕಂದಾಯ ಇಲಾಖೆಯಿಂದ ಒದಗಿಸಲಾಗಿದೆ. ‘ಕಳೆದ ಬಾರಿ ರಾಸುಗಳಿಗೆ ಯಾವುದೇ ರೀತಿಯ ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲಾಗಿತ್ತು. ಈ ವರ್ಷವೂ ಜಾನುವಾರುಗಳ ಸಂಖ್ಯೆ ಹೆಚ್ಚಾಗಲಿದ್ದು, ಮುಂಜಾಗ್ರತೆ ಕ್ರಮ ವಹಿಸಲಾಗಿದೆ’ ಎಂದು ಪಶು ವೈದ್ಯಕೀಯ ಸಹಾಯಕ ನಿರ್ದೇಶಕ ಸೋಮಯ್ಯ ಮಾಹಿತಿ ನೀಡಿದರು.

ಮಗಳಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಪತಿಯನ್ನ ಕೊಂ* ಪತ್ನಿ !


ತಾತ್ಕಾಲಿಕವಾಗಿ ವಿದ್ಯುತ್ ಸಂಪರ್ಕ, 24 x 7 ಪಶು ವೈದ್ಯಕೀಯ ಸೇವೆ, ಅಕ್ಕಪಕ್ಕದ ರೈತರ ಪಂಪ್ಸೆಟ್ಗಳಿಂದ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ಜಾತ್ರೆ ಮಾಳದಲ್ಲಿ ತಾತ್ಕಾಲಿಕ ಹೋಟೆಲ್ಗಳು, ಮಂಡಕ್ಕಿ ಹಾಗೂ ಸಿಹಿ ತಿನಿಸುಗಳ ಅಂಗಡಿಗಳು ತಲೆಯೆತ್ತಿದ್ದು, ವ್ಯಾಪಾರ ವಹಿವಾಟಿಗೆ ತಯಾರಿ ನಡೆದಿದೆ.

Related Posts

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

  ಹೃದಯವೇದ್ರಾವಕ ಘಟನೆಯೊಂದು ಹುಣಸೂರಿನಲ್ಲಿ ನಡೆದಿದೆ ಪತ್ನಿ ಮಕ್ಕಳನ್ನು ಹತ್ಯೆಗೈದು ಪತಿ ನೇಣಿಗೆ ಶರಣಾಗಿರುವ ಪ್ರಕರಣ ಹುಣಸೂರು ನಗರದ ನ್ಯೂ ಮಾರುತಿ ಬಡಾವಣೆಯಲ್ಲಿ ಘಟನೆ ನ್ಯೂ ಮಾರುತಿ ಬಡಾವಣೆಯ ಹರೀಶ್ 49, ಪತ್ನಿ ನಿಶ್ಚಿತ 36 ಮಕ್ಕಳಾದ ನೆಕ್ಸಾ 13 ರಕ್ಷಾ…

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

  ಒಡಿಶಾದ ಶಿಕ್ಷಾ ಓ ಅನುಸಂಧಾನ ವಿಶ್ವವಿದ್ಯಾಲಯವು ಕರ್ನಾಟಕದ ಹೆಮ್ಮೆಯ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿ ಸನ್ಮಾನಿಸಿದೆ. ನ್ಯಾಯಾಂಗ ಕ್ಷೇತ್ರದಲ್ಲಿ ಸಲ್ಲಿಸಿದ ವಿಶಿಷ್ಟ ಸೇವೆ, ನ್ಯಾಯದ ಪರವಾದ ಬದ್ಧತೆ, ವಿದ್ವತ್ತು ಹಾಗೂ ಮಾನವೀಯ ಮೌಲ್ಯಗಳ…

You Missed

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ !

ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ !

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!