ಬೆಂಗಳೂರು ವಿರುದ್ಧ ವಾರಿಯರ್ಸ್ ಗೆ ಸೂಪರ್ ಜಯ .

ಪಂದ್ಯ ದಲ್ಲಿ ಸಮಾನ ಸ್ಕೋರ್ ಗಳು ಬಂದ ನಂತರ ಪಂದ್ಯವು ಡ್ರಾಗೊಂಡಿತು. ಡಬ್ಲ್ಯೂಪಿಎಲ್ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ರೋಚಕ ಸೂಪರ್ಓವರ್ಗೆ ಎಡೆಮಾಡಿ ಕೊಟ್ಟ ಡಬ್ಲ್ಯೂ.ಪಿಎಲ್ ಪಂದ್ಯದಲ್ಲಿ ಸ್ಮೃತಿ ಮಂಧಾನ ಸಾರಥ್ಯದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಯುಪಿ ವಾರಿಯರ್ಸ್ ಎದುರು 4 ರನ್ ಗಳಿಂದ ಸೋಲು ಕಂಡಿದೆ. ಸೂಪರ್ ಓವರ್ನಲ್ಲಿ ಯುಪಿ ನೀಡಿದ 9 ರನ್ ಗುರಿಯನ್ನು ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು. ಬೆನ್ನಟ್ಟಿದ ಆರ್ಸಿಬಿ 9 ರನ್ಗಳನ್ನು ಕಲೆ ಹಾಕದೆ ಕೇವಲ 4 ರನ್ ಅಷ್ಟೇ ಮಾಡಿ ಸೋಲೊಪ್ಪಿಕೊಂಡಿತು. ಇದಕ್ಕೂ ಮುನ್ನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಆಹ್ವಾನ ಪಡೆದ ಆರ್ ಸಿ.ಬಿ 180 ರನ್ ಕಲೆಹಾಕಿತು. ಇದಕ್ಕುತ್ತರವಾಗಿ ಯುಪಿ ತಂಡವೂ 20 ಓವರ್ ಗಳಲ್ಲಿ 180 ರನ್ ಗಳಿಸಿ ಪಂದ್ಯ ಡ್ರಾಗೊಂಡಿತು.
ಆರ್ಸಿಬಿ ತಂಡದ ಬೆನ್ನೆಲುಬು ಎಂದೆ ಖ್ಯಾತಿಯನ್ನು ಪಡೆದಿರುವಂತಹ ಎಲ್ಲಿಸ್ ಪೆರ್ರಿ (90, 56, 9 ಪೋರ್, 3 ಸಿಕ್ಸರ್) ಮತ್ತು ಡೇನಿಯಲ್ ವೇಟ್ ಹಾಡ್ಜ್ (57: 41 ಎಸೆತ, 4 ಫೋರ್, 3 ಸಿಕ್ಸರ್) ಅವರ ಸಿಡಿಲಬ್ಬರದ ಅರ್ಧ ಶತಕಗಳ ಸಾಹಸದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಹಿಳಾ ಪ್ರೀಮಿಯರ್ ಲೀಗ್ನ ತನ್ನ ನಾಲ್ಕನೇ ಪಂದ್ಯದಲ್ಲಿ ಯು.ಪಿ.ವಾರಿಯರ್ಸ್ ವಿರುದ್ಧ ಸವಾಲಿನ ಮೊತ್ತವನ್ನು ಎದುರಾಳಿ ತಂಡಕ್ಕೆ ನೀಡಿತು.
ತವರಂಗಳದ ಮೊದಲ ಪಂದ್ಯದಲ್ಲಿ ಮುಂಬಯಿ ಇಂಡಿಯನ್ಸ್ ವಿರುದ್ಧ ಮುಗ್ಗರಿಸಿದ್ದ ಬೆಂಗಳೂರು ತಂಡ, ಪುಟಿ ದೇಳುವ ಹಂಬಲದೊಂದಿಗೆ ವಾರಿಯರ್ಸ್ ವಿರುದ್ಧ ಕಣಕ್ಕಿಳಿಯಿತು. ಆದರೆ ತಂಡದ ಮೊತ್ತ 23 ರನ್ ಆಗುವಷ್ಟರಲ್ಲಿ ಸ್ಟಾರ್ ಆಟಗಾರ್ತಿ ಹಾಗೂ ನಾಯಕಿ ಸ್ಮೃತಿ ಮಂದಾನ 6 ರನ್ ಗಳಿಸಿ , ದೀಪ್ತಿ ಶರ್ಮಾ ರವರಿಗೆ ತಮ್ಮ ವಿಕೆಟ್ ಒಪ್ಪಿಸಿದರು.ಈ ಹಂತದಲ್ಲಿ ಎಲಿಸ್ ಪೆರ್ರಿ ಹಾಗೂ ಡೇನಿಯಲ್ ವ್ಯಾಟ್ ಇಬ್ಬರು ಜೊತೆಗೂಡಿ ಯುಪಿ ವಾರಿಯರ್ಸ್ ಬೌಲರ್ಸ್ ಗಳನ್ನು ದಂಡಿಸಿ ಉತ್ತಮ ಪಾರ್ಟ್ನರ್ಷಿಪನ್ನು ಕಲೆ ಹಾಕಿದರು.
ಪವರ್ ಪ್ಲೇ ಅವಧಿಯಲ್ಲಿ ಒಂದು ವಿಕೆಟ್ ಗೆ 42 ರನ್ ಕಲೆ ಹಾಕಿದ ಆರ್.ಸಿ.ಬಿ, 13 ಓವರ್ ಗಳಲ್ಲಿ 3 ಅಂಕಿ ಮೊತ್ತ ಮುಟ್ಟುವಲ್ಲಿ ಸಫಲವಾಯಿತು. ಈ ಕಷ್ಟದ ಸಮಯದಲ್ಲಿ ಆಶ್ಚರ್ಯದ ಬ್ಯಾಟಿಂಗ್ ತಾರೆ ಪೆರ್ರಿ ಕೇವಲ 36 ಎಸೆತಗಳಲ್ಲಿ 6 ಫೋರ್ ,1 ಸಿಕ್ಸರ್ ಸಹಿತ ಆರ್ಭಶತಕವನ್ನು ಪೂರ್ಣಗೊಳಿಸಿ ಅಭಿಮಾನಿಗಳಿಗೆ ಸಂತಸವನ್ನು ನೀಡಿದರು.
ಎಲೀಸ್ ಪೆರ್ರಿ ಏಳನೇ ಅರ್ಧಶತಕ ಗಳಿಸುವ ಮೂಲಕ ಡಬ್ಲ್ಯೂಪಿಎಲ್ ನಲ್ಲಿ ಅತ್ಯಧಿಕ ಅರ್ಧಶತಕ ಗಳಿಸಿದ ಮೆಗ್ ಲ್ಯಾನಿಂಗ್ಸ್ ಅವರ ದಾಖಲೆಯನ್ನು ಸರಿಗಟ್ಟಿದರು. ಹಾಗೂ ಡಬ್ಲ್ಯೂ ಪಿ ಎಲ್ ಇತಿಹಾಸದಲ್ಲಿ ಅತ್ಯಧಿಕ ರನ್ ಸ್ಕೋರರ್ ಆಗಿ ಆರ್.ಸಿ.ಬಿ ಪರ ಪೆರ್ರಿ ಅವರು ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ. ಎಕ್ಲಿ ಸ್ಟೋನ್ ಎಸೆದ 14ನೇ ಓವರ್ ನ 3 ನೇ ಎಸೆತವನ್ನು ಸಿಕ್ಸರ್ ಗೆ ಹಟ್ಟಿದ ವೇಟ್ ಕೂಡ ಕೇವಲ 36 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ಸಂಭ್ರಮಿಸಿದರು. ಬಳಿಕ ಮತ್ತಷ್ಟು ಬಿರುಸಿನ ಆಟಕ್ಕೆ ಮುಂದಾಗಿ ಡೇನಿಯಲ್ ತಹ್ಲಿ ಯಾಗೆ ತಮ್ಮ ವಿಕೆಟ್ ಒಪ್ಪಿಸಿದರು. ಇದರೊಂದಿಗೆ ಬಿರುಸಾಗಿ ಸಾಗುತ್ತಿದ್ದ 66 ಎಸೆತಗಳಲ್ಲಿ 94 ರನ್ ಗಳ ಇಬ್ಬರ ಜೊತೆ ಆಟ ಕೊನೆಗೊಂಡಿತು. ಇದು ಆರ್ .ಸಿ. ಬಿ ಪರ ಯಾವುದೇ ವಿಕೆಟ್ ಗೆ ಮೂಡಿ ಬಂದ ನಾಲ್ಕನೇ ಗರಿಷ್ಠ ರನ್ ಜೊತೆ ಆಟವಾಗಿರುತ್ತದೆ.
ಅಗ್ರ ಕ್ರಮಾಂಕದ ಬ್ಯಾಟರ್ಗಳ ಅಬ್ಬರದ ಆಟವನ್ನು ಮಧ್ಯಮ ಕ್ರಮಾಂಕದ ಬ್ಯಾಟರ್ ಗಳು ಮುಂದುವರಿಸುವಲ್ಲಿ ವಿಫಲರಾದರು. ಬ್ಯಾಟಿಂಗ್ ಶಕ್ತಿ ಎನಿಸಿರುವ ರಿಚಾ ಘೋಷ್, ಕನಿಕ ಅಹುಜಾ,ಮತ್ತು ಜಾರ್ಜಿಯಾ ವೇರ್ ಹ್ಯಾಂ ಒಂದಂಕಿ ಮೊತ್ತಕ್ಕೆ ಸೀಮಿತರಾದರು. ಇದು ತಂಡದ ಸರಾಸರಿ ರೇಟ್ ಮೇಲೆ ಪರಿಣಾಮವನ್ನು ಬೀರಿತು. ಅಂತಿಮವಾಗಿ ಆರ್.ಸಿ.ಬಿ, ಎಲಿಸ್ ಪೆರ್ರಿ ಅವರ ಬಿರುಸಿನ ಆಟದ ನೆರವಿನಿಂದ 181 ರನ್ ಗುರಿ ಒಡ್ಡುವಲ್ಲಿ ಯಶಸ್ವಿಯಾಯಿತು.
ಸಂಕ್ಷಿಪ್ತ ಸ್ಕೋರ್ ವಿವರ ಇಲ್ಲಿದೆ.
ಆರ್.ಸಿ. ಬಿ :- 20 ಓವರ್ ಗಳಲ್ಲಿ 6 ವಿಕೆಟ್ ಗೆ 180 (ಎಲಿಸ್ ಪರಿ 90″, ಡೇನಿಯಲ್ ವೇಟ್ ಹಾಡ್ಜ್ :57, ;
(ತಹ್ಲಿಯಾ 30ಕ್ಕೆ1, ಹೆನ್ರಿ 34ಕ್ಕೆ1).
ಯುಪಿ ವಾರಿಯರ್ಸ್: 20 ಓವರ್ ಗಳಲ್ಲಿ 180 (ಎಕ್ಲೆಸ್ಟೋನ್ 33, ಶ್ವೇತಾ 31; ಸ್ನೇಹ ರಾಣಾ 27ಕ್ಕೆ3, ರೇಣುಕಾ 36ಕ್ಕೆ 2).
ಸೂಪರ್ ಓವರ್
ಯುಪಿ ವಾರಿಯರ್ಸ್ :- 1 ವಿಕೆಟ್ ಗೆ 8 ರನ್. ಆರ್.ಸಿ.ಬಿ :- ವಿಕೆಟ್ ಕಳೆದುಕೊಳ್ಳದೆ 4 ರನ್ .

Related Posts

ಗೆಲುವನ್ನು ಲೆಕ್ಕಿಸದೆ ಕುಸಿದು ಬಿದ್ದ ಓಟಗಾರನಿಗೆ ನೆರವಾದ ಸಹ-ಸ್ಪರ್ಧಿಗಳು; ಹೃದಯಸ್ಪರ್ಶಿ ವಿಡಿಯೋ!

ಕ್ರೀಡೆ ಅಂದಾಗ ಅಲ್ಲಿ ಎದುರಾಳಿಗಳ ವಿರುದ್ಧ ಗೆಲ್ಲಲೇಬೇಕು ಎನ್ನುವ ಹಠ ಇದ್ದೇ ಇರುತ್ತದೆ. ಆದರೆ ಇಲ್ಲೊಂದು ಮ್ಯಾರಾಥಾನ್‌ನಲ್ಲಿ ಸೋಲು-ಗೆಲುವುಗಿಂತಲೂ ಮಾನವೀಯತೆ ಮುಖ್ಯ ಅನ್ನೋದನ್ನು ಇಬ್ಬರು ಯುವ ಕ್ರೀಡಾಪಟುಗಳು ತೋರಿಸಿಕೊಟ್ಟಿದ್ದಾರೆ‌. ತಮ್ಮ ವೈಯಕ್ತಿಕ ದಾಖಲೆಯನ್ನು ಬದಿಗಿಟ್ಟು ಸಂಕಷ್ಟದಲ್ಲಿದ್ದ ಸಹ ಕ್ರೀಡಾಪಟುವಿಗೆ ಸಹಾಯ ಮಾಡುವ…

ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ? ಕೇಂದ್ರ ಸರ್ಕಾರದ ಸ್ಪಷ್ಟನೆ

ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 25 ರಿಂದ 28 ರೂಪಾಯಿಗಳಷ್ಟು ಹೆಚ್ಚಾಗಲಿದೆ ಎಂಬ ವದಂತಿಗಳು ಹರಡಿವೆ. ಆದರೆ, ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಈ ವರದಿಗಳನ್ನು ಅಧಿಕೃತವಾಗಿ…

You Missed

ಗೆಲುವನ್ನು ಲೆಕ್ಕಿಸದೆ ಕುಸಿದು ಬಿದ್ದ ಓಟಗಾರನಿಗೆ ನೆರವಾದ ಸಹ-ಸ್ಪರ್ಧಿಗಳು; ಹೃದಯಸ್ಪರ್ಶಿ ವಿಡಿಯೋ!

ಗೆಲುವನ್ನು ಲೆಕ್ಕಿಸದೆ ಕುಸಿದು ಬಿದ್ದ ಓಟಗಾರನಿಗೆ ನೆರವಾದ ಸಹ-ಸ್ಪರ್ಧಿಗಳು; ಹೃದಯಸ್ಪರ್ಶಿ ವಿಡಿಯೋ!

ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ? ಕೇಂದ್ರ ಸರ್ಕಾರದ ಸ್ಪಷ್ಟನೆ

ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ? ಕೇಂದ್ರ ಸರ್ಕಾರದ ಸ್ಪಷ್ಟನೆ

ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ದಾಖಲೆ ಬರೆದ ವಿದ್ಯಾರ್ಥಿಗಳು, 7 ವಿದ್ಯಾರ್ಥಿಗಳಿಗೆ ಪೂರ್ಣ ಅಂಕ!

ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ದಾಖಲೆ ಬರೆದ ವಿದ್ಯಾರ್ಥಿಗಳು, 7 ವಿದ್ಯಾರ್ಥಿಗಳಿಗೆ ಪೂರ್ಣ ಅಂಕ!

ಸಿ.ಟಿ. ರವಿ, ಪ್ರಧಾನಿ ಮೋದಿಯವರ ಕುರಿತಾದ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಯನ್ನು ಕಠಿಣವಾಗಿ ಖಂಡಿಸಿದ್ದಾರೆ.

ಸಿ.ಟಿ. ರವಿ, ಪ್ರಧಾನಿ ಮೋದಿಯವರ ಕುರಿತಾದ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಯನ್ನು ಕಠಿಣವಾಗಿ ಖಂಡಿಸಿದ್ದಾರೆ.

ಸೂರ್ಯವಂಶಿ, ಇತ್ತೀಚಿನ ಸಂದರ್ಶನವೊಂದರಲ್ಲಿ ತಾವು ಬಾಲ್ಯದಿಂದಲೂ ಎದುರಿಸುತ್ತಾ ಬಂದಿರುವ ಜಾತಿ ತಾರತಮ್ಯ ಮತ್ತು ಬಣ್ಣದ ಅಸಮಾನತೆಯ ಬಗ್ಗೆ ಕಹಿ ಸತ್ಯಗಳನ್ನು ಹಂಚಿಕೊಂಡಿದ್ದಾರೆ.

ಸೂರ್ಯವಂಶಿ, ಇತ್ತೀಚಿನ ಸಂದರ್ಶನವೊಂದರಲ್ಲಿ ತಾವು ಬಾಲ್ಯದಿಂದಲೂ ಎದುರಿಸುತ್ತಾ ಬಂದಿರುವ ಜಾತಿ ತಾರತಮ್ಯ ಮತ್ತು ಬಣ್ಣದ ಅಸಮಾನತೆಯ ಬಗ್ಗೆ ಕಹಿ ಸತ್ಯಗಳನ್ನು ಹಂಚಿಕೊಂಡಿದ್ದಾರೆ.

ನ್ಯಾಯಾಂಗದ ಮೇಲೆ ಭರವಸೆ ಮೂಡಿಸಿದ ಇತ್ತೀಚಿನ ಮಹತ್ವದ ತೀರ್ಪುಗಳು

ನ್ಯಾಯಾಂಗದ ಮೇಲೆ ಭರವಸೆ ಮೂಡಿಸಿದ ಇತ್ತೀಚಿನ ಮಹತ್ವದ ತೀರ್ಪುಗಳು