ಮೈಸೂರಿನ ಮೊದಲ ಮಹಿಳಾ ಲಯನ್ಸ್ ಕ್ಲಬ್ ಗೆ ಅಧ್ಯಕ್ಷೆಯಾಗಿ ಮೀನಾಕುಮಾರಿ ಪದಗ್ರಹಣ

ಮೈಸೂರಿನ ಲಯನ್ಸ್ ಕ್ಲಬ್ ಗಂಗೋತ್ರಿಯಲ್ಲಿ ವಿಶಿಷ್ಟ ರೀತಿಯಲ್ಲಿ ಪದಗ್ರಹಣ ಸಮಾರಂಭ ನೆರವೇರಿ ಎಲ್ಲರ ಪ್ರಸಂಶೆಗೆ ಪಾತ್ರವಾಯಿತು..
ಯಾವತ್ತೂ ಸಾಮಾಜಿಕ ಕಾರ್ಯಗಳಿಗೆ ತನ್ನನ್ನು ಗುರುತಿಸಿಕೊಂಡು ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಹೆಸರು ಮಾಡುತ್ತಿರುವ ಲಯನ್ಸ್ ಕ್ಲಬ್ ಸಂಸ್ಥೆ ಅನನ್ಯ ಸೇವೆ ಒದಗಿಸುತ್ತಿದೆ.. ಹಳ್ಳಿಯಿಂದ ಹಿಡಿದು ಮಹಾನಗರ ತನಕ ಶೋಷಿತ ದಮನಿತ ಅನಾಥ ಮಹಿಳೆಯರಿಗೆ ಮಕ್ಕಳಿಗೆ ಸಹಾಯ ಸಹಕಾರ ಆರೋಗ್ಯ ಸೇವೆ ನೀಡುತ್ತಾ ಬಂದಿದೆ..

ಮೈಸೂರಿನ ಮೊದಲ ಮಹಿಳಾ ಲಯನ್ಸ್ ಕ್ಲಬ್ ಅನ್ನೋ ಪ್ರಖ್ಯಾತಿ ಪಡೆದಿರುವ ಗಂಗೋತ್ರಿ ಶಾಖೆಯಿಂದ ಸಾಕಷ್ಟು ಸಾಮಾಜಿಕ ಕಾರ್ಯ ನಿರ್ವಹಿಸುತ್ತಿದ್ದಾರೆ.. ಕ್ಲಬ್ ನ ಮಹಿಳೆಯರು ಮುಂದಾಗಿ ದೇಣಿಗೆ ಸಂಗ್ರಹಿಸಿ ಶ್ರವಣ ಶಸ್ತ್ರಚಿಕಿತ್ಸೆ,ಕಾಡಿನ ಅಂಗನವಾಡಿಗಳ ಆದುನಿಕ ಸ್ಪರ್ಶ ಮಕ್ಕಳಿಗೆ ಪಾಟೊಪಕರಣ ಶಾಲೆಗಳಿಗೆ ಸುಣ್ಣ ಬಣ್ಣ,ಮಕ್ಕಳಿಗೆ ಸಮವಸ್ತ್ರ ವಿತರಣೆ ಮಾಡಿ ಮಹಿಳಾಮಣಿಗಳು ಭೇಷ್ ಅನಿಸಿಕೊಂಡಿದ್ದಾರೆ..

ಮೊನ್ನೆ ನಡೆದ ಪದಗ್ರಹಣ ಸಮಾರಂಭ ಅರ್ಥಪೂರ್ಣವಾಗಿತ್ತು..ಸಭೆಯಲ್ಲಿ ಕೇವಲ ಹೊಸ ಅಧ್ಯಕ್ಷರ ಪದವಿ ಗ್ರಹಣ ಅಷ್ಟೇ ಆಗದೆ ಜೊತೆಗೆ ಹಲವು ಜನ ಮೆಚ್ಚುಗೆಯ ಕಾರ್ಯ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು..

ಮೈಸೂರಿನ ಸ. ಹಿ. ಪ್ರಾ. ಶಾಲೆ. ಬೊಂತಗಹಳ್ಳಿಯ ವಿದ್ಯಾರ್ಥಿಗಳಿಗೆ ಹಾಗೂ ಸ್ಥಳೀಯ ವಿದ್ಯಾರ್ಥಿಗಳಿಗೆ ಸುಮಾರು 20ಸಾವಿರ ರೂಪಾಯಿ ಮೌಲ್ಯದ ಸ್ಟೇಷನರಿ ಕಿಟ್ಸ್, ಸ್ಕೂಲ್ ಬಾಗ್ಸ್ ಮತ್ತು ಸ್ವೀಟರ್ಸ್ ಗಳನ್ನು ನೀಡಲಾಯಿತು..ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಕ್ಯಾತನಹಳ್ಳಿಯ ಗುರುಕುಲಾಶ್ರಮದ ಮಕ್ಕಳಿಗೆ ಸ್ಕೂಲ್ ಶುಗಳನ್ನು ವಿತರಿಸಲಾಯಿತು..ಇದಷ್ಟೇ ಅಲ್ಲದೇ ಇಂಟರ್ನ್ಯಾಷನಲ್ ವೈದ್ಯರ ದಿನ ಹಿನ್ನೆಲೆಯಲ್ಲಿ ಮೈಸೂರಿನ ಖ್ಯಾತ ವೈದ್ಯರಾದ ಡಾ.ಮುದ್ದಾಸೀರ್ ಅಜೀಜ್ ಖಾನ್ ಮತ್ತು ಡ್ಯಾಕ್ಟರ್.ಕೆ ಮಮತಾ ಅವರನ್ನು ಗಂಗೋತ್ರಿ ಶಾಖೆಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಕಾರ್ಯದರ್ಶಿ ಅನುರಾಧ ಖಜಾಂಚಿ ಉಮರಾಣಿ ಉಪಸ್ಥಿತರಿದ್ದರು..

ಮೈಸೂರು ಗಂಗೋತ್ರಿ ಲಯನ್ಸ್ ಸಂಸ್ಥೆಯ ನೂತನ ಅಧ್ಯಕ್ಷೆಯಾಗಿ ಮೀನಾಕುಮಾರಿ ಕೆಟಿ ಅವರ ಪದಗ್ರಹಣ ಸಮಾರಂಭವನ್ನು, ಇಂಟರ್ನ್ಯಾಷನಲ್ ಡೈರೆಕ್ಟರ್ ಎಂಡೋರ್ಸಿ ರಾಮಚಂದ್ರನ್ ರವರು ನೆರವೇರಿಸಿದರು. ಎಂಸಿಸಿ ಡಾಕ್ಟರ್ ಕೃಷ್ಣೇಗೌಡರು, ಪಿಡಿಜಿ -ಉಂಖಿ ಕೋಆರ್ಡಿನೇಟರ ಲಯನ್ ದೇವೇಗೌಡರು, ಮೊದಲ ಉಪ ರಾಜ್ಯಪಾಲ ಲಯನ್ ರಾಜಶೇಖರ್ ರವರು ಹಾಗೂ ಸಂಸ್ಥೆಯ ಸದಸ್ಯರು,ಸಂಸ್ಥೆಯ ಸೇವಾ ಕಾರ್ಯದಲ್ಲಿ ಭಾಗವಹಿಸಿದ್ದರು..

ಮಂಡ್ಯಜಿಲ್ಲೆಯ ಕೆನ್ನಾಳು ಗ್ರಾಮದ ಮೀನಾಕುಮಾರಿ ಹಲವು ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡವರು..ಕೋವಿಡ್ ಸಮಯದಲ್ಲಿ ಮಂಡ್ಯ ಜಿಲ್ಲಾಡಳಿತಕ್ಕೆ ಸರ್ವಜಿಕನವಾಗಿ ಮೊದಲು 100 ಫುಡ್ ಕಿಟ್ ನೀಡಿ ಸರಕಾರದಿಂದ ಪ್ರಶಂಸೆಗೆ ಪಾತ್ರರಾಗಿದ್ದರು..ನೂರಾರು ಅನಾಥ ಮಕ್ಕಳಿಗೆ ಸಹಾಯ ಮಾಡಿ ಅವರ ಶೈಕ್ಷಣಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಕೈ ಹೊಡಿಸಿದವರು..ಹಲವು ಮಾಧ್ಯಮ ಸಂಸ್ಥೆಗಳಿಂದ ಸಾಧಕಿ ಪ್ರಶಸ್ತಿಗೆ ಭಾಜನರಾಗಿದ್ದರು..ಈಗ ಮೀನಾಕುಮಾರಿ ಮೈಸೂರಿನ ಮೊದಲ ಮಹಿಳಾ ಲಯನ್ಸ್ ಕ್ಲಬ್ ಗಂಗೋತ್ರಿ ಯ ಅಧ್ಯಕ್ಷೆಯಾಗಿ ಪದಗ್ರಹಣ ಮಾಡಿದ್ದಾರೆ..

  • Related Posts

    ನಾನು ಸಿಎಂ ಆದ್ರೆ ಮಹಿಳೆಯರಿಗೆ 3,000 ರೂ. ಪುರುಷರಿಗೆ 2,000 ರೂ.: ಶಾಸಕ ಯತ್ನಾಳ್ !

      ಬಾಗಲಕೋಟೆ ಉಪಚುನಾವಣೆ ಅಖಾಡದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ವೀರಣ್ಣ ಚರಂತಿಮಠ ಅವರ ಪರವಾಗಿ ಪ್ರಚಾರ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಅವರು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಹಿಂದೂ ಸಮಾಜದ ಐಕ್ಯತೆಯನ್ನು…

    ಮೈಸೂರಿನ ಫಾಲ್ಕನ್ ಟೈರ್ಸ್ ಲಿ. ನ ಮಾಜಿ ಮಾಲೀಕ ಅಂದರ್ !

        ಬಹು ವರ್ಷಗಳ ಹಿಂದೆ ಫಾಲ್ಕನ್ ಟೈರ್ಸ್ ನ ಕಾರ್ಮಿಕರಿಗೆ ಅನ್ಯಾಯವೆಸಗಿ ಕಾರ್ಮಿಕರನ್ನು ಬೀದಿ ಪಾಲು ಮಾಡಿದ್ದ ಪವನ್ ಕುಮಾರ್ ರುಹಿಯಾ 315 ಕೋಟಿ ರೂ. ಸೈಬರ್ ವಂಚನೆ ಪ್ರತ್ಯೇಕ ಪ್ರಕರಣದಲ್ಲಿ ಪವನ್ ಕುಮಾರ್ ರುಹಿಯಾ ಬಂಧನ ಈ ಕಳ್ಳನಿಗೆ…

    You Missed

    ಗೆಲುವನ್ನು ಲೆಕ್ಕಿಸದೆ ಕುಸಿದು ಬಿದ್ದ ಓಟಗಾರನಿಗೆ ನೆರವಾದ ಸಹ-ಸ್ಪರ್ಧಿಗಳು; ಹೃದಯಸ್ಪರ್ಶಿ ವಿಡಿಯೋ!

    ಗೆಲುವನ್ನು ಲೆಕ್ಕಿಸದೆ ಕುಸಿದು ಬಿದ್ದ ಓಟಗಾರನಿಗೆ ನೆರವಾದ ಸಹ-ಸ್ಪರ್ಧಿಗಳು; ಹೃದಯಸ್ಪರ್ಶಿ ವಿಡಿಯೋ!

    ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ? ಕೇಂದ್ರ ಸರ್ಕಾರದ ಸ್ಪಷ್ಟನೆ

    ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ? ಕೇಂದ್ರ ಸರ್ಕಾರದ ಸ್ಪಷ್ಟನೆ

    ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ದಾಖಲೆ ಬರೆದ ವಿದ್ಯಾರ್ಥಿಗಳು, 7 ವಿದ್ಯಾರ್ಥಿಗಳಿಗೆ ಪೂರ್ಣ ಅಂಕ!

    ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ದಾಖಲೆ ಬರೆದ ವಿದ್ಯಾರ್ಥಿಗಳು, 7 ವಿದ್ಯಾರ್ಥಿಗಳಿಗೆ ಪೂರ್ಣ ಅಂಕ!

    ಸಿ.ಟಿ. ರವಿ, ಪ್ರಧಾನಿ ಮೋದಿಯವರ ಕುರಿತಾದ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಯನ್ನು ಕಠಿಣವಾಗಿ ಖಂಡಿಸಿದ್ದಾರೆ.

    ಸಿ.ಟಿ. ರವಿ, ಪ್ರಧಾನಿ ಮೋದಿಯವರ ಕುರಿತಾದ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಯನ್ನು ಕಠಿಣವಾಗಿ ಖಂಡಿಸಿದ್ದಾರೆ.

    ಸೂರ್ಯವಂಶಿ, ಇತ್ತೀಚಿನ ಸಂದರ್ಶನವೊಂದರಲ್ಲಿ ತಾವು ಬಾಲ್ಯದಿಂದಲೂ ಎದುರಿಸುತ್ತಾ ಬಂದಿರುವ ಜಾತಿ ತಾರತಮ್ಯ ಮತ್ತು ಬಣ್ಣದ ಅಸಮಾನತೆಯ ಬಗ್ಗೆ ಕಹಿ ಸತ್ಯಗಳನ್ನು ಹಂಚಿಕೊಂಡಿದ್ದಾರೆ.

    ಸೂರ್ಯವಂಶಿ, ಇತ್ತೀಚಿನ ಸಂದರ್ಶನವೊಂದರಲ್ಲಿ ತಾವು ಬಾಲ್ಯದಿಂದಲೂ ಎದುರಿಸುತ್ತಾ ಬಂದಿರುವ ಜಾತಿ ತಾರತಮ್ಯ ಮತ್ತು ಬಣ್ಣದ ಅಸಮಾನತೆಯ ಬಗ್ಗೆ ಕಹಿ ಸತ್ಯಗಳನ್ನು ಹಂಚಿಕೊಂಡಿದ್ದಾರೆ.

    ನ್ಯಾಯಾಂಗದ ಮೇಲೆ ಭರವಸೆ ಮೂಡಿಸಿದ ಇತ್ತೀಚಿನ ಮಹತ್ವದ ತೀರ್ಪುಗಳು

    ನ್ಯಾಯಾಂಗದ ಮೇಲೆ ಭರವಸೆ ಮೂಡಿಸಿದ ಇತ್ತೀಚಿನ ಮಹತ್ವದ ತೀರ್ಪುಗಳು