ಆದರೆ ಈಗ ಕಾಳಿಕಾಂಬ ದೇವಸ್ಥಾನ ದಿಂದ ಎಸ್ಪಿ ಕಚೇರಿ ವೃತ್ತದವರೆಗೆ 100 ಆಡಿಯ ಜೋಡಿ ರಸ್ತೆ ನಿರ್ಮಿಸಲು ಮೈಸೂರು ನಗರ ಪಾಲಿಕೆ ಯೋಜನೆ ರೂಪಿಸಿದೆ. ಈ ಹಿನ್ನೆಲೆ ಕಾಳಿಕಾಂಬ ದೇವಸ್ಥಾನ ದಿಂದ ಎಸ್ಪಿ ಕಚೇರಿ ವೃತ್ತದವರೆಗೆ ಇರುವ ಪೆಲ್ಲೋಪೋರಮ್ ಎಂಬ 40 ಮರ ಗಳನ್ನು ಇಂದು ಮುಂಜಾನೆ ಉರುಳಿಸ ಲಾಗಿದೆ. ಮರಗಳನ್ನು ಕತ್ತರಿಸಿದ ನಂತರ ಅವುಗಳನ್ನು ತೆರವುಗೊಳಿಸಿ ಮಾರಾಟ ಮಾಡಿಕೊಳ್ಳಲು ಅರಣ್ಯ ಇಲಾಖೆ ಸೈಯದ್ ಮೊಹಮ್ಮದ್ ಎಂಬಾತನಿಗೆ ಗುತ್ತಿಗೆ ನೀಡಿದೆ.
ರಸ್ತೆ ಅಗಲೀಕರಣ ಮಾಡಲು ಇದೇನು ಬ್ಲ್ಯಾಕ್ ಸ್ಪಾಟ್ ಅಲ್ಲ
ಅರಣ್ಯ ಇಲಾಖೆಗೆ 2.90 ಲಕ್ಷ ರೂಪಾಯಿ ಪಾವತಿ ಮಾಡಿರುವ ಸೈಯದ್ ಮೊಹ ಮ್ಮದ್ ಇಂದು ಮುಂಜಾನೆ ವೇಳೆಗೆ 40 ಮರಗಳ ಬುಡಕ್ಕೆ ಕೊಡಲಿ ಪೆಟ್ಟು ನೀಡಿದ್ದಾನೆ. ಮರ ಕತ್ತರಿಸುವ ಯಂತ್ರ ದಿಂದ ಕೇವಲ ಅರ್ಧ ಗಂಟೆಯಲ್ಲಿ ಎಲ್ಲಾ ಮರಗಳನ್ನು ಉರುಳಿಸಿದ್ದಾನೆ. ಮರ ಕತ್ತರಿಸುವಾಗ ಪರಿಸರವಾದಿ ಗಳು ಬಂದು ಅಡ್ಡಿ ಪಡಿಸುತ್ತಾರೆ ಎಂಬ ಮುಂದಾಲೋಚನೆಯಿಂದ ಮುಂಜಾನೆಯೇ ಎಲ್ಲಾ ಮರಗಳ ಬುಡಕ್ಕೆ ಕೊಡಲಿ ಪೆಟ್ಟು ನೀಡಲಾಗಿದೆ. ತರುವಾಯ ಕೆಳಗೆ ಬಿದ್ದ ಮರಗಳ ರೆಂಬೆ ಕೊಂಬೆಗಳನ್ನು ಹಂತ ಹಂತವಾಗಿ ಕತ್ತರಿಸಲಾಗಿದೆ.
ಸುಮಾರು 50 ವರ್ಷಗಳ ಇತಿಹಾಸ ವಿರುವ ಈ ಮರಗಳನ್ನು ಇಂದು ಕ್ಷಣ ಮಾತ್ರದಲ್ಲಿ ಕತ್ತರಿಸಲಾಗಿದೆ. ಒಂದು ಮರ ಬೆಳೆಯಲು ಹತ್ತಾರು ವರ್ಷಗಳು ಬೇಕು. ಆದರೆ ಇಂದು ಮರ ಕತ್ತರಿಸುವ ಯಂತ್ರ ದಿಂದ ಕ್ಷಣ ಮಾತ್ರದಲ್ಲಿ 40 ವಕ್ಷಗಳನ್ನು ಹೊಡೆದು ಉರುಳಿಸಲಾಯಿತು. ಮತ್ತೆ 5 ಮರಗಳನ್ನು ಕತ್ತರಿಸಲು ಅರಣ್ಯ ಇಲಾಖೆ ಸೂಚನೆ ನೀಡಿದೆ. ಆದರೆ 5 ಮರಗಳು ಎಲ್ಲಿವೆ ಎಂಬ ಬಗ್ಗೆ ಇನ್ನು ಮಾಹಿತಿ ನೀಡಿಲ್ಲ ಎಂದು ಸೈಯದ್ ಮೊಹ ಮ್ಮದ್ ‘ಮೈಸೂರು ಮಿತ್ರ’ಗೆ ತಿಳಿಸಿದರು.

ಬೇಸಿಗೆ ಬಿಸಿಲಿನಲ್ಲಿ ಸುಸ್ತಾದಾಗ ಈ ಮರಗಳ ಕೆಳಗೆ ನಿಲ್ಲುತ್ತಿದ್ದ ಜನರು ದಣಿ ವಾರಿಸಿಕೊಳ್ಳುತ್ತಿದ್ದರು. ಈ ಮರಗಳ ತಂಪಾದ ವಾತಾವರಣ ಜನರ ಮನಸಿಗೆ ಮುದ ನೀಡುತ್ತಿತ್ತು. ಆದರೆ ಈಗ ರಸ್ತೆಗೆ ಹಸಿರು ಹೊದಿಕೆ ಹೊದಿಸಿದ್ದ ಮರಗಳ ಮಾರಣ ಹೋಮ ನಡೆದಿದೆ. ಮರಗಳಿ ಲ್ಲದೆ ಈಗ ಇಡೀ ರಸ್ತೆ ಬೋಳು ಬೋಳಾಗಿದೆ. ಒಂದು ಮರ ಕತ್ತರಿಸಿದರೆ 10 ಸಸಿ ನೆಡಬೇಕು. ಅಲ್ಲದೆ ಮರ ಕತ್ತರಿಸಿದವರೆ ಆ ಸಸಿಯನ್ನು 5 ವರ್ಷ ನಿರ್ವಹಣೆ ಮಾಡಬೇಕು. ಇದಕ್ಕಾಗಿ ಠೇವಣಿ ಹಣ ಇಡಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಪೀಠ ಹೇಳಿದೆ. ಅದರಂತೆ ನಗರ ಪಾಲಿಕೆ ಈಗ ಠೇವಣಿ ಹಣ ಇಟ್ಟು ಗಿಡ ನೆಡಲು ಮುಂದಾಗಿದೆ.
ಮೈಸೂರಿನಲ್ಲಿ ಈಗಾಗಲೇ ಸಾವಿರಾರು ಮರಗಳನ್ನು ಕಡಿದಿದ್ದಾರೆ. ರಾಷ್ಟ್ರೀಯ ಹಸಿರು ನ್ಯಾಯಪೀಠದ ಆದೇಶ ಪಾಲಿಸಿದ್ದರೆ ಇಂದು ಲಕ್ಷಾಂತರ ಮರಗಳು ಬೆಳೆಯಬೇಕಿತ್ತು. ಆದರೆ ಮರ ಕಡಿದರೆ ಸಸಿ ನೆಡಬೇಕೆಂಬ ಕಾನೂನು ನಿಯಮವನ್ನು ಅರಣ್ಯ ಇಲಾಖೆ ಈ ತನಕ ಪಾಲಿಸಿರುವ ನಿದರ್ಶನವಿಲ್ಲ.





