- ಸಂಸದ ಸುನೀಲ್ ಬೋಸ್ ಮನವಿಗೆ ಮನ್ನಣೆ
- ಚಾಮರಾಜನಗರಕ್ಕೆ ಲಾ ಕಾಲೇಜ್ ಮಂಜೂರು.
- ಬೇಸಿಕ್ ಪೆಸಲಿಟಿ ಕೊಟ್ಟು ಲಾ ಕಾಲೇಜ್ ಅಪ್ರೂಲ್
- ಚಾಮರಾಜ ನಗರ ಸಂಸದ ಸುನೀಲ್ ಬೋಸ್ ಶ್ರಮಕ್ಕೆ ಸಿಕ್ಕ ಪ್ರತಿಫಲ
ಚಾಮರಾಜನಗರ : ಚಾಮರಾಜನಗರದ ಸರಕಾರಿ ಕಾನೂನು ಕಾಲೇಜು ಆರಂಭಕ್ಕಾಗಿ ಅನುಮೋದನೆ ನೀಡುವಂತೆ ಲೋಕಸಭೆ ಸದಸ್ಯ ಸುನೀಲ್ ಬೋಸ್ ಹೊಸದಿಲ್ಲಿಯ బారా ಕೌನ್ಸಿಲ್ ಆಫ್ ಇಂಡಿಯಾಗೆ ಮಾಡಿದ್ದ ಮನವಿ ಪುರಸ್ಕೃತಗೊಂಡಿದ್ದು, ಪ್ರಸಕ್ತ ಸಾಲಿನಿಂದಲೇ ಮೂರು ವರ್ಷಗಳ ಪದವಿ ಕೋರ್ಸ್ ಪ್ರವೇಶಕ್ಕೆ ಅನುಮೋದನೆ ದೊರೆತಿದೆ.

ಮೂರು ವರ್ಷದ ಎಲ್ಎಲ್ಬಿ ಮತ್ತು ಐದು ವರ್ಷದ ಬಿಎ ಎಲ್ ಎಲ್ಬಿ ಕೋರ್ಸ್ಗೆ ಕರ್ನಾಟಕ ಸರಕಾರದ ಅನುಮತಿ ಪಡೆದುಕೊಂಡು ತಾತ್ಕಾಲಿಕವಾಗಿ ನಗರದ ಸಂತೇಮರಹಳ್ಳಿ ರಸ್ತೆಯಲ್ಲಿರುವ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಕಾನೂನು ಕಾಲೇಜು ಸ್ಥಾಪನೆಗೊಂಡಿತ್ತು.
ಹುಬ್ಬಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯ ಸಂಯೋಜನೆ ಪಡೆದುಕೊಳ್ಳಲಾಗಿತ್ತು. ಭಾರತೀಯ ವಕೀಲರ ಪರಿಷತ್ (ಬಾರ್ ಕೌನ್ಸಿಲ್ ಆಫ್ ಇಂಡಿಯಾ) ಅನುಮೋದನೆಗಾಗಿ ಶುಲ್ಕವನ್ನು ಪಾವತಿಸಲಾಗಿತ್ತು. ಕಳೆದ ಏ. 21ರಂದು ಸಂಸದ ಸುನೀಲ್ ಬೋಸ್ ಬಾರ್ ಕೌನ್ಸಿಲ್ ಆಫ್ ಇಂಡಿಯಾಗೆ ಪತ್ರ ಬರೆದು ನಗರದಲ್ಲಿ ಸರಕಾರಿ ಕಾನೂನು ಕಾಲೇಜು ಸ್ಥಾಪನೆ ಮತ್ತು ಅನುಮೋದನೆಯ ತುರ್ತು ಅಗತ್ಯವನ್ನು ವಿವರವಾಗಿ ಮನದಟ್ಟು ಮಾಡಿದ್ದರು.

ಪ್ರಸ್ತುತ ಬಾರ್ ಕೌನ್ಸಿಲ್ ನಗರದ ಕಾನೂನು 2025-26 ಸರಕಾರಿ ಕಾಲೇಜಿಗೆ ಹಾಗೂ 2026-27ನೇ ಶೈಕ್ಷಣಿಕ ಅವಧಿಗೆ 60 ವಿದ್ಯಾರ್ಥಿಗಳ ಒಂದು ವಿಭಾಗದ ಪ್ರವೇಶ ದೊಂದಿಗೆ ಮೂರು ವರ್ಷಗಳ ಎಲ್ಎಲ್ ಬಿ ಪದವಿ ಕೋರ್ಸ್ಗೆ ಹೊಸ ಅನುಮೋದನೆ ನೀಡಲಾಗಿದೆ ಎಂದು ಜೂ. 2ರಂದು ಹುಬ್ಬಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹಾಗೂ ನಗರದ ಸರಕಾರಿ ಕಾನೂನು ಕಾಲೇಜು ಪ್ರಾಂಶುಪಾಲರಿಗೆ ಪತ್ರದ ಮೂಲಕ ತಿಳಿಸಿದೆ.

(ಲೋಕಸಭೆ ಸದಸ್ಯ ಸುನೀಲ್ ಬೋಸ್)
ಕಾನೂನು ಕಾಲೇಜು ಆರಂಭದ ಹಿನ್ನೆಲೆಯಲ್ಲಿ ಸುನೀಲ್ ಬೋಸ್ ತಮ್ಮ ಸಂಸದರ ಕ್ಷೇತ್ರಾಭಿವೃದ್ಧಿ ನಿಧಿ ಯಿಂದ ಕಾನೂನು ಕಾಲೇಜಿನ ಗ್ರಂಥಾಲಯಕ್ಕೆ ಪುಸ್ತಕ ಖರೀದಿಗಾಗಿ ಲಕ್ಷ ರೂ. ಒದಗಿಸಲು ಜಿಲ್ಲಾಧಿಕಾರಿಗೆ ತಿಳಿಸಿದ್ದಾರೆ.





