
ಜೂನ್ ತಿಂಗಳ ಆಷಾಢ ಶುಕ್ರವಾರದ ಹಿನ್ನೆಲೆ ಮೈಸೂರಿನ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ದೇವಿಯ ದರ್ಶನ ಪಡೆಯುವ ಭಕ್ತರಿಗೆ ಈ ಬಾರಿ ಮೊದಲ ಬಾರಿಗೆ ವಿಶೇಷ ಪ್ಯಾಕೇಜ್ ಕಲ್ಪಿಸಲಾಗಿದೆ.
ಜೂನ್ 27ರಂದು ಆಷಾಢ ಶುಕ್ರವಾರ ಆರಂಭವಾಗಲಿದ್ದು, ಜುಲೈ 4, 11 ಮತ್ತು 18 ಆಷಾಢ ಶುಕ್ರವಾರವಾಗಿದೆ. ದೇವಿಗೆ ವಿಶೇಷ ಪೂಜೆ ಜೊತೆಗೆ ಜುಲೈ 17ರಂದು ಚಾಮುಂಡೇಶ್ವರಿ ಅಮ್ಮನವರ ವರ್ಧಂತ್ಯೋತ್ಸವ ನಡೆಯಲಿದೆ.
ಆಷಾಢ ವಿಶೇಷ ಪ್ರಯುಕ್ತ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸಹಯೋಗದಲ್ಲಿ ದೇವರ ದರ್ಶನಕ್ಕೆ ಸಕಲ ಸಿದ್ಧತೆ ಕೈಗೊಂಡಿದೆ. ಯಾವುದೇ ಗೊಂದಲ, ಅಡಚಣೆಯಾಗದಂತೆ ಶಾಂತಿಯುತವಾಗಿ ದೇವಿಯ ದರ್ಶನ ಪಡೆಯಲು ಭಕ್ತರ ಅನುಕೂಲಕ್ಕಾಗಿ ಹಾಗೂ ನೂಕುನುಗ್ಗಲು ತಡೆಗಟ್ಟಲು 2000 ರೂ. ವೆಚ್ಚದ ವಿಶೇಷ ದರ್ಶನದ ಟಿಕೆಟ್ ನೀಡಲು ಮುಂದಾಗಿದೆ.
ಈ ಬಾರಿ ವಿಶೇಷ ದಶರ್ನಕ್ಕೆ 2 ಸಾವಿರ ರೂ ನಿಗದಿ ಮಾಡಿರುವುದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. “ಇದು ಹಗಲು ದರೋಡೆ” ಎನ್ನುತ್ತಾರೆ
“ತಮಿಳುನಾಡಿನ ದೇವಾಲಯಗಳಲ್ಲಿ ಎಲ್ಲರಿಗೂ ಸಮಾನತೆ ಕಲ್ಪಿಸುವ ದೃಷ್ಟಿಯಿಂದ ಯಾವುದೇ ತಾರತಮ್ಯವಿಲ್ಲದೆ ದೇವಾಲಯಕ್ಕೆ ಅವಕಾಶ ನೀಡಲಾಗಿದೆ. ಅದೇ ರೀತಿ ಚಾಮುಂಡೇಶ್ವರಿ ದರ್ಶನಕ್ಕೂ ಅವಕಾಶ ಕಲ್ಪಿಸಿ, ಉಚಿತ ದರ್ಶನಕ್ಕೆ ವ್ಯವಸ್ಥೆ ಮಾಡಬೇಕು” ಎಂದು ಭಕ್ತರು ಒತ್ತಾಯಿಸಿದರು.
ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್

ಅವರು ಕೂಡ ವಿಶೇಷ ದರ್ಶನಕ್ಕೆ ಹಣ ನಿಗದಿ ಮಾಡಿರುವುದು ಬೇಕಿಲ್ಲ. ದೇವರನ್ನು ದುಡ್ಡು ಕೊಟ್ಟು ನೋಡಬೇಕಾ? ಎರಡು ಸಾವಿರ ದುಬಾರಿಯಾಯಿತು” ಎನ್ನುತ್ತಾರೆ.
ಸಂಸದ ಯದುವೀರ್ ಒಡೆಯರ್,

“ಆಷಾಢ ಮಾಸದಂದು ದೇವಿಯ ವಿಶೇಷ ದರ್ಶನಕ್ಕೆ ಎರಡು ಸಾವಿರ ನಿಗದಿ ಮಾಡಿರುವುದು ಸರಿಯಲ್ಲ. ದೇವರ ದರ್ಶನಕ್ಕೆ ಏಕೆ ಇಷ್ಟು ದುಬಾರಿ ಹಣ ವಸೂಲಿ? ಕೂಡಲೇ ವಾಪಸ್ ಪಡೆಯಬೇಕು” ಎಂದು ಆಗ್ರಹಿಸಿದರು.





