ಮೂರು ಕೇಸ್ ಗಳ ವಿಚಾರಣೆ ಎದುರಿಸಬೇಕಾಗಿರುವ ಪ್ರಜ್ವಲ್ ರೇವಣ್ಣ!.. ಹಾಗಾದ್ರೆ ಆ ಕೇಸ್ ಗಳು ಯಾವು ಅಂತ ಗೊತ್ತ

ಹಾಸನ ಲೋಕಸಭಾ ಕ್ಷೇತ್ರದ ಮಾಜಿ ಸದಸ್ಯ ಪ್ರಜ್ವಲ್ ರೇವಣ್ಣ ವಿರುದ್ಧದ ಒಂದು ರೇಪ್ ಕೇಸ್ ನಲ್ಲಿ ಕೋರ್ಟ್ ತೀರ್ಪು ನೀಡಿ ಜೀವಾವಧಿ ಶಿಕ್ಷೆ ವಿಧಿಸಿದೆ. ಆದರೇ, ಪ್ರಜ್ವಲ್ ರೇವಣ್ಣ ವಿರುದ್ಧ ಇನ್ನೂ ಮೂರು ಕ್ರಿಮಿನಲ್ ಕೇಸ್ ಗಳಿವೆ. ಆ ಕೇಸ್ ಗಳು ಯಾವುವು? ಈಗ ಯಾವ ಹಂತದಲ್ಲಿವೆ? ಪ್ರಜ್ವಲ್ ಮುಂದೇನು ಮಾಡಬಹುದು ಎಂಬ ಚರ್ಚೆ ನಡೆಯುತ್ತಿದೆ.

  • ಪ್ರಜ್ವಲ್ ರೇವಣ್ಣ ವಿರುದ್ಧ ಇರುವ ಇನ್ನೂ ಮೂರು ಕೇಸ್ ಗಳಾವುವು?
  • ಆ ಮೂರು ಕೇಸ್ ಗಳು ಈಗ ಯಾವ ಸ್ಥಿತಿಯಲ್ಲಿವೆ?
  • ತೀರ್ಪು ಯಾವಾಗ ಬರುತ್ತೆ?

ಪ್ರಜ್ವಲ್ ರೇವಣ್ಣ ಈಗ ಮುಂದೇನು ಮಾಡಬಹುದು?
ಅತ್ಯಾಚಾರ ಕೇಸ್ ನಲ್ಲಿ ಅಪರಾಧಿಯಾಗಿರುವ ಮಾಜಿ ಸಂಸದ ಪ್ರಜ್ವಲ್​ ರೇವಣ್ಣ ಹೈಕೋರ್ಟ್ ಮೊರೆ ಹೋದ್ರೆ ಜೀವಾವಧಿ ಶಿಕ್ಷೆಯಿಂದ ರಿಲೀಫ್​ ಪಡೆಯಬಹುದೇ ವಿನಃ, ಜೈಲಿನಿಂದ ಸದ್ಯಕ್ಕಂತೂ ವಾಪಸ್​ ಬರೋದಕ್ಕಾಗಲ್ಲ. ಯಾಕಂದ್ರೆ, ಪ್ರಜ್ವಲ್​ ವಿರುದ್ಧ ಬಂದಿರೋ ತೀರ್ಪು ಬರೀ ಒಂದು ಪ್ರಕರಣದಲ್ಲಷ್ಟೇ. ಬಾಕಿ ಇರೋ ಇನ್ನೂ 3 ಪ್ರಕರಣಗಳಲ್ಲಿ ಪ್ರಜ್ವಲ್​ ಜೈಲುವಾಸ ಮುಂದುವರಿಸಲೇಬೇಕು..ಅಷ್ಟಕ್ಕೂ, ಉಳಿದ ಆ ಮೂರು ಪ್ರಕರಣಗಳು ಯಾವುವು ಅಂತ ನಾವು ವಿವರಿಸುತ್ತೇವೆ.

ಪ್ರಜ್ವಲ್​ ಕೇಸ್​ 02
ಸಿಐಡಿ ಪೊಲೀಸ್​ ಸ್ಟೇಷನ್​ನಲ್ಲಿ ದಾಖಲಾಗಿರೋ ಕೇಸ್ ಹಾಸನ ಮೂಲದ ಮಹಿಳೆ ನೀಡಿರುವ ದೂರು. ಅತ್ಯಾಚಾರ, ಬೆದರಿಕೆ, ಲೈಂಗಿಕ ಕಿರುಕುಳ, ಇತರೆ
13/09/2024ರಂದು ದಾಖಲಿಸಿರುವ ದೂರು ಪ್ರಕರಣದಲ್ಲಿ 126 ಸಾಕ್ಷಿಗಳ ವಿಚಾರಣೆ ಆಗಿದೆ 1690 ಪುಟಗಳ ಚಾರ್ಟ್​ಶೀಟ್ ಸಲ್ಲಿಕೆಯಾಗಿದೆ
ಪ್ರಜ್ವಲ್​ ವಿರುದ್ಧ ಇರೋ 2ನೇ ಪ್ರಕರಣ ಸಿಐಡಿ ಪೊಲೀಸ್​ ಠಾಣೆಯಲ್ಲಿ ದಾಖಲಾಗಿದೆ..ಹಾಸನ ಮೂಲದ್ದೇ ಮಹಿಳೆ ನೀಡಿರೋ ದೂರು ಅದಾಗಿದ್ದು, ಅದೂ ಕೂಡ ತುಂಬಾನೇ ಗಂಭಿರ ಸ್ವರೂಪದ ಪ್ರಕರಣವಾಗಿದೆ..ಅತ್ಯಾಚಾರ, ಬೆದರಿಕೆ, ಲೈಂಗಿಕ ಕಿರುಕುಳ ಸೇರಿ ಇತರೆ ಆರೋಪಗಳು ಪ್ರಜ್ವಲ್ ಮೇಲಿದೆ.13/09/2024ರಂದು ದಾಖಲಿಸಿರುವ ದೂರು ಇದಾಗಿದ್ದು, ಇಲ್ಲಿವರೆಗೂ ಪ್ರಕರಣದಲ್ಲಿ 126 ಸಾಕ್ಷಿಗಳ ವಿಚಾರಣೆ ನಡೆಸಲಾಗಿದೆ..ಸಿಐಡಿಯ ಎಸ್​ಐಟಿ ತಂಡ ಈ ಕೇಸಲ್ಲಿ ಈಗಾಗಲೇ 1690 ಪುಟಗಳ ಚಾರ್ಟ್​ಶೀಟ್ ಸಲ್ಲಿಸಿದೆ.

ಪ್ರಜ್ವಲ್​ ಕೇಸ್​ 03
ಸಿಐಡಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ 3ನೇ ಸಂತ್ರಸ್ತೆ ನೀಡಿರುವ ದೂರಿನ ಮೇಲೆ FIR ಲೈಂಗಿಕ ಕಿರುಕುಳ, ದೌರ್ಜನ್ಯ, ಕೊಲೆ ಬೆದರಿಕೆ
ತನಿಖೆ ಮುಗಿಸಿ 681 ಪುಟಗಳ ಚಾರ್ಜ್​ಶೀಟ್​ ಸಲ್ಲಿಕೆ 74 ಸಾಕ್ಷಿಗಳ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ ಇನ್ನು, ಪ್ರಜ್ವಲ್​ ವಿರುದ್ಧದ ಮೂರನೇ ಪ್ರಕರಣ ನೋಡೋದಾದ್ರೆ, ಅದು ಸಿಐಡಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿರೋ ದೂರು..3ನೇ ಸಂತ್ರಸ್ತೆ ನೀಡಿರುವ ದೂರಿನ ಮೇಲೆ ಎಫ್​ಐಆರ್ ದಾಖಲಿಸಲಾಗಿದ್ದು, ಅದ್ರಲ್ಲೂ ಲೈಂಗಿಕ ಕಿರುಕುಳ, ದೌರ್ಜನ್ಯ, ಕೊಲೆ ಬೆದರಿಕೆಯಂತಹ ಘೋರ ಆರೋಪಗಳಿವೆ. ಆ ಪ್ರಕರಣದಲ್ಲಿ ತನಿಖೆ ಮುಗಿಸಿ 681 ಪುಟಗಳ ಚಾರ್ಜ್​ಶೀಟ್​​ನ ಸಿಐಡಿಯ ಎಸ್​ಐಟಿ ತಂಡ ಈಗಾಗಲೇ​ ಸಲ್ಲಿಕೆ ಮಾಡಿದೆ. 74 ಸಾಕ್ಷಿಗಳ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ.

ಪ್ರಜ್ವಲ್​ ಕೇಸ್​ 04
ಹೊಳೆ ನರಸೀಪುರ ಟೌನ್ ಠಾಣೆಯಲ್ಲಿ ದೂರು ದಾಖಲು 2ನೇ ಸಂತ್ರಸ್ತೆಯಿಂದ ಪ್ರಜ್ವಲ್​, ರೇವಣ್ಣ ಇಬ್ಬರ ವಿರುದ್ಧ ದೂರು ಲೈಂಗಿಕ ಕಿರುಕುಳ, ಅತ್ಯಾಚಾರ, ಬೆದರಿಕೆಗಳ ಆರೋಪ 2360 ಪುಟಗಳ ಚಾರ್ಜ್​ಶೀಟ್​ ಸಲ್ಲಿಕೆಯಾಗಿದೆ
ತನಿಖೆ ಮುಗಿದಿದ್ದು ವಿಚಾರಣೆಗೆ ನ್ಯಾಯಾಲಯಕ್ಕೆ ಮನವಿ ನಾಲ್ಕನೇ ಪ್ರಕರಣ ನೋಡೋದಾದ್ರೆ, ಹೊಳೆ ನರಸೀಪುರ ಟೌನ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಇದು. 2ನೇ ಸಂತ್ರಸ್ತೆಯಿಂದ ಪ್ರಜ್ವಲ್​ ಹಾಗೂ ತಂದೆ ರೇವಣ್ಣ ಇಬ್ಬರ ವಿರುದ್ಧವೂ ದೂರು ದಾಖಲಾಗಿತ್ತು.ಲೈಂಗಿಕ ಕಿರುಕುಳ, ಅತ್ಯಾಚಾರ, ಬೆದರಿಕೆಗಳ ಆರೋಪವೂ ಆ ದೂರಿನಲ್ಲಿದ್ದು, ಆ ಕೇಸಲ್ಲೂ ಬರೋಬ್ಬರಿ 2360 ಪುಟಗಳ ಚಾರ್ಜ್​ಶೀಟ್​ ಸಲ್ಲಿಕೆಯಾಗಿದೆ. ತನಿಖೆ ಸಂಪೂರ್ಣ ಮುಗಿದಿದ್ದು ವಿಚಾರಣೆಗೆ ನ್ಯಾಯಾಲಯಕ್ಕೆ ಸಿಐಡಿ ಎಸ್​ಐಟಿ ಮನವಿ ಮಾಡಿದೆ.

ಪ್ರಜ್ವಲ್​ ವಿರುದ್ಧ ಉಳಿದ ಅತ್ಯಾಚಾರ ಪ್ರಕರಣಗಳ ಸ್ಟೇಟಸ್​ ಹೀಗಿದೆ..

ಈಗ ಹೈಕೋರ್ಟ್​ ಮೊರೆ ಹೋದ್ರೂ ಕೂಡ ಪ್ರಜ್ವಲ್​ ಜೀವಾವಧಿ ಶಿಕ್ಷೆಗೆ ತಡೆಯಾಜ್ಞೆ ತರೋದಕ್ಕೆ ಹೋಗ್ಬೇಕೇ ವಿನಃ, ಬೇಲ್​​ಗಾಗಿ ಮನವಿ ಮಾಡೋದು ಸದ್ಯಕ್ಕಂತೂ ಕನಸಿನ ಮಾತೇ ಸರಿ ಅನ್ನೋದು ಕಾನೂನು ಪಂಡಿತರದ್ದೇ ಅಭಿಪ್ರಾಯ.

 

Related Posts

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

  ಹೃದಯವೇದ್ರಾವಕ ಘಟನೆಯೊಂದು ಹುಣಸೂರಿನಲ್ಲಿ ನಡೆದಿದೆ ಪತ್ನಿ ಮಕ್ಕಳನ್ನು ಹತ್ಯೆಗೈದು ಪತಿ ನೇಣಿಗೆ ಶರಣಾಗಿರುವ ಪ್ರಕರಣ ಹುಣಸೂರು ನಗರದ ನ್ಯೂ ಮಾರುತಿ ಬಡಾವಣೆಯಲ್ಲಿ ಘಟನೆ ನ್ಯೂ ಮಾರುತಿ ಬಡಾವಣೆಯ ಹರೀಶ್ 49, ಪತ್ನಿ ನಿಶ್ಚಿತ 36 ಮಕ್ಕಳಾದ ನೆಕ್ಸಾ 13 ರಕ್ಷಾ…

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

  ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ ! ಆದಿಚುಂಚನಗಿರಿ ಮಠದ ಶಿಕ್ಷಣ ಟ್ರಸ್ಟ್‌ಗೆ ಸೇರಿದ 100 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಆರು ಎಕರೆ ಭೂಮಿ ಕಬಳಿಸಲು ನಕಲಿ ದಾಖಲೆಗಳನ್ನು ಸೃಷ್ಟಿಸಿದ ಆರೋಪದ…

You Missed

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ !

ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ !

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!