ಮೂರು ಕೇಸ್ ಗಳ ವಿಚಾರಣೆ ಎದುರಿಸಬೇಕಾಗಿರುವ ಪ್ರಜ್ವಲ್ ರೇವಣ್ಣ!.. ಹಾಗಾದ್ರೆ ಆ ಕೇಸ್ ಗಳು ಯಾವು ಅಂತ ಗೊತ್ತ

ಹಾಸನ ಲೋಕಸಭಾ ಕ್ಷೇತ್ರದ ಮಾಜಿ ಸದಸ್ಯ ಪ್ರಜ್ವಲ್ ರೇವಣ್ಣ ವಿರುದ್ಧದ ಒಂದು ರೇಪ್ ಕೇಸ್ ನಲ್ಲಿ ಕೋರ್ಟ್ ತೀರ್ಪು ನೀಡಿ ಜೀವಾವಧಿ ಶಿಕ್ಷೆ ವಿಧಿಸಿದೆ. ಆದರೇ, ಪ್ರಜ್ವಲ್ ರೇವಣ್ಣ ವಿರುದ್ಧ ಇನ್ನೂ ಮೂರು ಕ್ರಿಮಿನಲ್ ಕೇಸ್ ಗಳಿವೆ. ಆ ಕೇಸ್ ಗಳು ಯಾವುವು? ಈಗ ಯಾವ ಹಂತದಲ್ಲಿವೆ? ಪ್ರಜ್ವಲ್ ಮುಂದೇನು ಮಾಡಬಹುದು ಎಂಬ ಚರ್ಚೆ ನಡೆಯುತ್ತಿದೆ.

  • ಪ್ರಜ್ವಲ್ ರೇವಣ್ಣ ವಿರುದ್ಧ ಇರುವ ಇನ್ನೂ ಮೂರು ಕೇಸ್ ಗಳಾವುವು?
  • ಆ ಮೂರು ಕೇಸ್ ಗಳು ಈಗ ಯಾವ ಸ್ಥಿತಿಯಲ್ಲಿವೆ?
  • ತೀರ್ಪು ಯಾವಾಗ ಬರುತ್ತೆ?

ಪ್ರಜ್ವಲ್ ರೇವಣ್ಣ ಈಗ ಮುಂದೇನು ಮಾಡಬಹುದು?
ಅತ್ಯಾಚಾರ ಕೇಸ್ ನಲ್ಲಿ ಅಪರಾಧಿಯಾಗಿರುವ ಮಾಜಿ ಸಂಸದ ಪ್ರಜ್ವಲ್​ ರೇವಣ್ಣ ಹೈಕೋರ್ಟ್ ಮೊರೆ ಹೋದ್ರೆ ಜೀವಾವಧಿ ಶಿಕ್ಷೆಯಿಂದ ರಿಲೀಫ್​ ಪಡೆಯಬಹುದೇ ವಿನಃ, ಜೈಲಿನಿಂದ ಸದ್ಯಕ್ಕಂತೂ ವಾಪಸ್​ ಬರೋದಕ್ಕಾಗಲ್ಲ. ಯಾಕಂದ್ರೆ, ಪ್ರಜ್ವಲ್​ ವಿರುದ್ಧ ಬಂದಿರೋ ತೀರ್ಪು ಬರೀ ಒಂದು ಪ್ರಕರಣದಲ್ಲಷ್ಟೇ. ಬಾಕಿ ಇರೋ ಇನ್ನೂ 3 ಪ್ರಕರಣಗಳಲ್ಲಿ ಪ್ರಜ್ವಲ್​ ಜೈಲುವಾಸ ಮುಂದುವರಿಸಲೇಬೇಕು..ಅಷ್ಟಕ್ಕೂ, ಉಳಿದ ಆ ಮೂರು ಪ್ರಕರಣಗಳು ಯಾವುವು ಅಂತ ನಾವು ವಿವರಿಸುತ್ತೇವೆ.

ಪ್ರಜ್ವಲ್​ ಕೇಸ್​ 02
ಸಿಐಡಿ ಪೊಲೀಸ್​ ಸ್ಟೇಷನ್​ನಲ್ಲಿ ದಾಖಲಾಗಿರೋ ಕೇಸ್ ಹಾಸನ ಮೂಲದ ಮಹಿಳೆ ನೀಡಿರುವ ದೂರು. ಅತ್ಯಾಚಾರ, ಬೆದರಿಕೆ, ಲೈಂಗಿಕ ಕಿರುಕುಳ, ಇತರೆ
13/09/2024ರಂದು ದಾಖಲಿಸಿರುವ ದೂರು ಪ್ರಕರಣದಲ್ಲಿ 126 ಸಾಕ್ಷಿಗಳ ವಿಚಾರಣೆ ಆಗಿದೆ 1690 ಪುಟಗಳ ಚಾರ್ಟ್​ಶೀಟ್ ಸಲ್ಲಿಕೆಯಾಗಿದೆ
ಪ್ರಜ್ವಲ್​ ವಿರುದ್ಧ ಇರೋ 2ನೇ ಪ್ರಕರಣ ಸಿಐಡಿ ಪೊಲೀಸ್​ ಠಾಣೆಯಲ್ಲಿ ದಾಖಲಾಗಿದೆ..ಹಾಸನ ಮೂಲದ್ದೇ ಮಹಿಳೆ ನೀಡಿರೋ ದೂರು ಅದಾಗಿದ್ದು, ಅದೂ ಕೂಡ ತುಂಬಾನೇ ಗಂಭಿರ ಸ್ವರೂಪದ ಪ್ರಕರಣವಾಗಿದೆ..ಅತ್ಯಾಚಾರ, ಬೆದರಿಕೆ, ಲೈಂಗಿಕ ಕಿರುಕುಳ ಸೇರಿ ಇತರೆ ಆರೋಪಗಳು ಪ್ರಜ್ವಲ್ ಮೇಲಿದೆ.13/09/2024ರಂದು ದಾಖಲಿಸಿರುವ ದೂರು ಇದಾಗಿದ್ದು, ಇಲ್ಲಿವರೆಗೂ ಪ್ರಕರಣದಲ್ಲಿ 126 ಸಾಕ್ಷಿಗಳ ವಿಚಾರಣೆ ನಡೆಸಲಾಗಿದೆ..ಸಿಐಡಿಯ ಎಸ್​ಐಟಿ ತಂಡ ಈ ಕೇಸಲ್ಲಿ ಈಗಾಗಲೇ 1690 ಪುಟಗಳ ಚಾರ್ಟ್​ಶೀಟ್ ಸಲ್ಲಿಸಿದೆ.

ಪ್ರಜ್ವಲ್​ ಕೇಸ್​ 03
ಸಿಐಡಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ 3ನೇ ಸಂತ್ರಸ್ತೆ ನೀಡಿರುವ ದೂರಿನ ಮೇಲೆ FIR ಲೈಂಗಿಕ ಕಿರುಕುಳ, ದೌರ್ಜನ್ಯ, ಕೊಲೆ ಬೆದರಿಕೆ
ತನಿಖೆ ಮುಗಿಸಿ 681 ಪುಟಗಳ ಚಾರ್ಜ್​ಶೀಟ್​ ಸಲ್ಲಿಕೆ 74 ಸಾಕ್ಷಿಗಳ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ ಇನ್ನು, ಪ್ರಜ್ವಲ್​ ವಿರುದ್ಧದ ಮೂರನೇ ಪ್ರಕರಣ ನೋಡೋದಾದ್ರೆ, ಅದು ಸಿಐಡಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿರೋ ದೂರು..3ನೇ ಸಂತ್ರಸ್ತೆ ನೀಡಿರುವ ದೂರಿನ ಮೇಲೆ ಎಫ್​ಐಆರ್ ದಾಖಲಿಸಲಾಗಿದ್ದು, ಅದ್ರಲ್ಲೂ ಲೈಂಗಿಕ ಕಿರುಕುಳ, ದೌರ್ಜನ್ಯ, ಕೊಲೆ ಬೆದರಿಕೆಯಂತಹ ಘೋರ ಆರೋಪಗಳಿವೆ. ಆ ಪ್ರಕರಣದಲ್ಲಿ ತನಿಖೆ ಮುಗಿಸಿ 681 ಪುಟಗಳ ಚಾರ್ಜ್​ಶೀಟ್​​ನ ಸಿಐಡಿಯ ಎಸ್​ಐಟಿ ತಂಡ ಈಗಾಗಲೇ​ ಸಲ್ಲಿಕೆ ಮಾಡಿದೆ. 74 ಸಾಕ್ಷಿಗಳ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ.

ಪ್ರಜ್ವಲ್​ ಕೇಸ್​ 04
ಹೊಳೆ ನರಸೀಪುರ ಟೌನ್ ಠಾಣೆಯಲ್ಲಿ ದೂರು ದಾಖಲು 2ನೇ ಸಂತ್ರಸ್ತೆಯಿಂದ ಪ್ರಜ್ವಲ್​, ರೇವಣ್ಣ ಇಬ್ಬರ ವಿರುದ್ಧ ದೂರು ಲೈಂಗಿಕ ಕಿರುಕುಳ, ಅತ್ಯಾಚಾರ, ಬೆದರಿಕೆಗಳ ಆರೋಪ 2360 ಪುಟಗಳ ಚಾರ್ಜ್​ಶೀಟ್​ ಸಲ್ಲಿಕೆಯಾಗಿದೆ
ತನಿಖೆ ಮುಗಿದಿದ್ದು ವಿಚಾರಣೆಗೆ ನ್ಯಾಯಾಲಯಕ್ಕೆ ಮನವಿ ನಾಲ್ಕನೇ ಪ್ರಕರಣ ನೋಡೋದಾದ್ರೆ, ಹೊಳೆ ನರಸೀಪುರ ಟೌನ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಇದು. 2ನೇ ಸಂತ್ರಸ್ತೆಯಿಂದ ಪ್ರಜ್ವಲ್​ ಹಾಗೂ ತಂದೆ ರೇವಣ್ಣ ಇಬ್ಬರ ವಿರುದ್ಧವೂ ದೂರು ದಾಖಲಾಗಿತ್ತು.ಲೈಂಗಿಕ ಕಿರುಕುಳ, ಅತ್ಯಾಚಾರ, ಬೆದರಿಕೆಗಳ ಆರೋಪವೂ ಆ ದೂರಿನಲ್ಲಿದ್ದು, ಆ ಕೇಸಲ್ಲೂ ಬರೋಬ್ಬರಿ 2360 ಪುಟಗಳ ಚಾರ್ಜ್​ಶೀಟ್​ ಸಲ್ಲಿಕೆಯಾಗಿದೆ. ತನಿಖೆ ಸಂಪೂರ್ಣ ಮುಗಿದಿದ್ದು ವಿಚಾರಣೆಗೆ ನ್ಯಾಯಾಲಯಕ್ಕೆ ಸಿಐಡಿ ಎಸ್​ಐಟಿ ಮನವಿ ಮಾಡಿದೆ.

ಪ್ರಜ್ವಲ್​ ವಿರುದ್ಧ ಉಳಿದ ಅತ್ಯಾಚಾರ ಪ್ರಕರಣಗಳ ಸ್ಟೇಟಸ್​ ಹೀಗಿದೆ..

ಈಗ ಹೈಕೋರ್ಟ್​ ಮೊರೆ ಹೋದ್ರೂ ಕೂಡ ಪ್ರಜ್ವಲ್​ ಜೀವಾವಧಿ ಶಿಕ್ಷೆಗೆ ತಡೆಯಾಜ್ಞೆ ತರೋದಕ್ಕೆ ಹೋಗ್ಬೇಕೇ ವಿನಃ, ಬೇಲ್​​ಗಾಗಿ ಮನವಿ ಮಾಡೋದು ಸದ್ಯಕ್ಕಂತೂ ಕನಸಿನ ಮಾತೇ ಸರಿ ಅನ್ನೋದು ಕಾನೂನು ಪಂಡಿತರದ್ದೇ ಅಭಿಪ್ರಾಯ.

 

Related Posts

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ರಾಜ್ಯದಲ್ಲಿ ಸೆಪ್ಟೆಂಬರ್ 21ರಿಂದ ಮೂರು ದಿನಗಳ ಕಾಲ ವಿಶೇಷ ವಿಧಾನಮಂಡಲ ಅಧಿವೇಶನ ನಡೆಸಲು ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಸೆ. 21ರಿಂದ ಸೆ.…

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಗುಂಡ್ಲುಪೇಟೆ ಪಟ್ಟಣದ ಇಂದಿರಾ ಕ್ಯಾಂಟೀನ್‌ಗೆ ಸೋಮವಾರ ಬೆಳಿಗ್ಗೆ ಅಧಿಕಾರಿಗಳ ತಂಡ ದಿಢೀರ್ ಭೇಟಿ ನೀಡಿ ಆಹಾರದ ಶುಚಿತ್ವ, ಗುಣಮಟ್ಟ ಹಾಗೂ ಕುಡಿಯುವ ನೀರಿನ ಪೂರೈಕೆಯನ್ನು ಕೂಲಂಕಷವಾಗಿ ಪರಿಶೀಲಿಸಿತು. ಬಡವರು ಮತ್ತು ಶ್ರಮಿಕರಿಗೆ ಪೌಷ್ಟಿಕ ಹಾಗೂ ಶುಚಿ-ರುಚಿಯಾದ ಆಹಾರ ದೊರೆಯಬೇಕು ಎಂಬ ಶಾಸಕರ…

You Missed

ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು

ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಬಿಗ್ ಬಾಸ್ ಕನ್ನಡ 13: ಈ ಭಾನುವಾರದಿಂದ ‘ಏವಿಯೇಷನ್’ ಥೀಮ್‌ನೊಂದಿಗೆ ಗ್ರ್ಯಾಂಡ್ ಟೇಕ್ ಆಫ್!

ಬಿಗ್ ಬಾಸ್ ಕನ್ನಡ 13: ಈ ಭಾನುವಾರದಿಂದ ‘ಏವಿಯೇಷನ್’ ಥೀಮ್‌ನೊಂದಿಗೆ ಗ್ರ್ಯಾಂಡ್ ಟೇಕ್ ಆಫ್!

ಟಾಕ್ಸಿಕ್‌’ನಲ್ಲಿ ಯಶ್‌ ಅಭಿನಯಕ್ಕೆ ಕಿಚ್ಚನ ಪುತ್ರಿ ಫಿದಾ: ಪ್ರತಿಯೊಂದು ಫ್ರೇಮ್‌ನಲ್ಲೂ ಮ್ಯಾಜಿಕ್‌ ಎಂದ ಸಾನ್ವಿ ಸುದೀಪ್‌

ಟಾಕ್ಸಿಕ್‌’ನಲ್ಲಿ ಯಶ್‌ ಅಭಿನಯಕ್ಕೆ ಕಿಚ್ಚನ ಪುತ್ರಿ ಫಿದಾ: ಪ್ರತಿಯೊಂದು ಫ್ರೇಮ್‌ನಲ್ಲೂ ಮ್ಯಾಜಿಕ್‌ ಎಂದ ಸಾನ್ವಿ ಸುದೀಪ್‌

FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ!

FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ!