ನಟಿ ರಮ್ಯಾ ಬಳಿಕ ಸೋನು ಶೆಟ್ಟಿಗೂ ಬಂತು ಅಶ್ಲೀಲ ಕಮೆಂಟ್ಸ್.

ಅಭಿಮಾನದ ಹೆಸರಲ್ಲಿ ರಮ್ಯಾಗೆ ಚುಚ್ಚಿದ ಅಶ್ಲೀಲ ಮೆಸೆಜ್​ಗಳ ಈಟಿ ಈಗ ಮತ್ತೊಬ್ಬ ಮಾಡೆಲ್ ಒಬ್ಬರತ್ತ ತಿರುಗಿವೆ. ರಮ್ಯಾ ನಂತರ ಮಾಡೆಲ್​​ ಒಬ್ಬರಿಗೆ ಅದೆ ರೀತಿಯ ಕಿರುಕುಳ ಶುರುವಾಗಿದೆ ಅಂತ ಆ ಮಾಡೆಲ್​ ಆರೋಪಿಸಿದ್ದಾರೆ.

ಅಭಿಮಾನದ ಹೆಸರಲ್ಲಿ ರಮ್ಯಾಗೆ ಚುಚ್ಚಿದ ಅಶ್ಲೀಲ ಮೆಸೆಜ್​ಗಳ ಈಟಿ ಈಗ ಮತ್ತೊಬ್ಬ ಮಾಡೆಲ್ ಒಬ್ಬರತ್ತ ತಿರುಗಿವೆ. ಜಾಮೀನು ಸಿಕ್ಕರೆ ಸಾಕು ದೇವರೇ ಅಂತ ದರ್ಶನ್​ ಅಂಡ್ ಗ್ಯಾಂಗ್​ ಕೋರ್ಟ್​ಗಳ ಸುತ್ತಾ ಅಲೆದಾಡ್ತಿದ್ರೆ, ಇತ್ತ ಅಶ್ಲೀಲ ಪದಗಳಿಂದ ಸೋಷಿಯಲ್​ ಮೀಡಿಯಾದಲ್ಲಿ ಕಂಟಕ ಹೆಚ್ಚಾಗ್ತಿದೆ. ರಮ್ಯಾ ನಂತರ ಮಾಡೆಲ್​​ ಒಬ್ಬರಿಗೆ ಅದೆ ರೀತಿಯ ಕಿರುಕುಳ ಶುರುವಾಗಿದೆ ಅಂತ ಆ ಮಾಡೆಲ್​ ಆರೋಪಿಸಿದ್ದಾರೆ.

https://youtu.be/3z6lK4bu4F4?si=WrYgYHV1zerXedbqಪಕ್ಷ ಅಧಿಕಾರಕ್ಕೆ ತರಲು 5 ವರ್ಷ ಕಷ್ಟ ಪಟ್ಟಿದ್ದು ನಾನು, SM ಕೃಷ್ಣ CM ಆದ್ರು : ಮಲ್ಲಿಕಾರ್ಜುನ ಖರ್ಗೆ

ಸೋನು ಶೆಟ್ಟಿ ಇನ್​ಸ್ಟಾಗ್ರಾಮ್​ನಲ್ಲಿ ತನ್ನ ಹಾಟ್​ ಹಾಟ್​ ಲುಕ್ ಮೂಲಕವೇ ಸಾವಿರಾರು ಫಾಲೋವರ್ಸ್​ ಹೊಂದಿರೋ ರೂಪದರ್ಶಿ ಕಮ್ ಡಿಜಿಟಲ್ ಕ್ರಿಯೇಟರ್. ಅಷ್ಟೇ ಅಲ್ಲ, ಸೋನು ಶೆಟ್ಟಿ ಅಪ್ಪಟ ಕಿಚ್ಚ ಸುದೀಪ್ ಅಭಿಮಾನಿ ಅಂತಾ ಹೇಳಿಕೊಳ್ತಾರೆ. ಇಂತಹ ಸೋನು ಶೆಟ್ಟಿಗೆ ಇತ್ತೀಚೆಗೆ ದರ್ಶನ್​ ಅಭಿಮಾನಿಗಳಿಂದ ಅಶ್ಲೀಲ ಸಂದೇಶಗಳು ಹೆಚ್ಚಾಗ್ತಿವೆ ಅಂತಾ ಈಕೆಯೂ ಸಿಡಿದೆದ್ದು ನಿಂತಿದ್ದಾರೆ.

3 ದಿನಗಳಿಂದ ಅಶ್ಲೀಲವಾದ ಕಮೆಂಟ್ಸ್​ ಮಾಡ್ತಿದ್ದಾರೆ. ಅವರ ಪದಗಳಲ್ಲಿ ಅಶ್ಲೀಲತೆ ಅದೆಷ್ಟರ ಮಟ್ಟಿಗಿದೆ ಅಂದ್ರೆ, ಅದನ್ನ ನೋಡೋದಕ್ಕೂ ಆಗ್ತಿಲ್ಲ..ಅಷ್ಟೇ ಅಲ್ಲ…ನಾನು ಕಿಚ್ಚ ಸುದೀಪ್ ಅಭಿಮಾನಿಯಾಗಿರೋದ್ರಿಂದ ನನಗೆ ಈ ಥರಾ ಹಿಂಸೆ ಮಾಡ್ತಿದ್ದಾರೆ ಅನ್ನೋದು ಸೋನು ಶೆಟ್ಟಿಯ ಗಂಭೀರ ಆರೋಪ ಆಗಿದೆ.

ದರ್ಶನ್​ ಅಭಿಮಾನಿಗಳು ಸುದೀಪ್​ರನ್ನ ಟ್ರೋಲ್​ ಮಾಡ್ತಿದ್ರಂತೆ. ಅದನ್ನ ನೋಡೋದಕ್ಕಾಗದೇ, ಸೋನು ಅವರ ವಿರುದ್ಧ ರಿಯಾಕ್ಟ್​ ಮಾಡಿದ್ದಾರೆ. ಅವ್ರಿಗೆ ತಕ್ಕ ಪಾಠ ಕಲಿಸಲೇಬೇಕು ಅಂತಾ ಒಂದು ವಿಡಿಯೋ ಮಾಡಿ ಹಾಕಿದ್ದಾರೆ. ದರ್ಶನ್​ ಹಾಗೂ ಅವರ ಫ್ಯಾನ್ಸ್ ಇಷ್ಟ ಆಗಲ್ಲ. ಅವರು ರೌಡಿ ಆಗಬೇಕಿತ್ತು. ಅಪ್ಪಿ-ತಪ್ಪಿ ಹೀರೋ ಆಗಿದ್ದಾರೆ. ಅದುವೇ ಪ್ರಾಬ್ಲಂ. ಅವರ ಫ್ಯಾನ್ಸ್ ಕೂಡ ಹಾಗೆಯೇ ಇದ್ದಾರೆ. ಅವರ ಫ್ಯಾನ್ಸ್​ಗೆ ಬುದ್ಧಿ ಕಲಿಸಬೇಕು ಅಂತೆಲ್ಲಾ ಆ ವಿಡಿಯೋದಲ್ಲಿ ಸೋನು ಹೇಳಿದ್ದರು. ಅದ್ಯಾವಾಗ ದರ್ಶನ್​ ಫ್ಯಾನ್ಸ್​ನ ಹಿಯಾಳಿಸಿ ಈಕೆಯೂ ಟ್ರೋಲ್​ ಮಾಡೋದಕ್ಕೆ ಶುರುಮಾಡಿದ್ರೋ, ಈಕೆಯ ವಿರುದ್ಧ ಮತ್ತಷ್ಟು ಅಶ್ಲೀಲ ಪದಗಳ ದಾಳಿ ನಡೆಸಲಾಗಿದೆ. ತಾಯಿ ಬಗ್ಗೆ ಮಾತನಾಡಿದ್ದಾರೆ. ಅದ್ಯಾವಾಗ ತಾಯಿ ಬಗ್ಗೆ ಮಾತನಾಡೋದನ್ನ ಸಹಿಸಿಕೊಳ್ಳೋದಕ್ಕೆ ಸಾಧ್ಯವಾಗ್ಲಿಲ್ವೋ.. ಮತ್ತೆ ಸೋನು ಒಂದು ವಿಡಿಯೋ ಮಾಡಿದ್ದಳು. ನಾನ್​ ನಿಮಗೆ ಠಕ್ಕರ್ ಕೊಡ್ತಾನೆ ಇರ್ತೀನಿ ಏನ್​ ಮಾಡ್ತೀರಾ ಮಾಡ್ಕೊಳ್ಳಿ ಅಂತಾನೇ ಹೇಳಿ ಮತ್ತೊಂದು ವಿಡಿಯೋ ಮಾಡಿ ಹಾಕಿದ್ದಾರೆ.

Related Posts

ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್!

ಹಣದುಬ್ಬರ ಹಾಗೂ ಬೆಲೆ ಏರಿಕೆಯಿಂದ ತತ್ತರಿಸಿರುವ ಸಾಮಾನ್ಯ ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್ ನೀಡಿವೆ. ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದ ಬಿಸಿ ಇದೀಗ ನೇರವಾಗಿ ಭಾರತೀಯರ ಜೇಬಿಗೆ ತಟ್ಟಿದೆ. ನವದೆಹಲಿ: ಹಣದುಬ್ಬರ ಹಾಗೂ ಬೆಲೆ ಏರಿಕೆಯಿಂದ…

ಸ್ಟೂಡೆಂಟ್ ಎಲೆಕ್ಷನ್ ಗೆ ಅಸ್ತು ಎಂದ ಸಿಎಂ!

(ಕೆಎಂಶಿ)-ಉನ್ನತ ‘ಶಿಕ್ಷಣ ವಲಯದಲ್ಲಿ ಸಾಮಾಜಿಕ ನ್ಯಾಯ ಕಲ್ಪಿ ಸಲು, ರಾಜ್ಯದ ಎಲ್ಲ ಸರ್ಕಾರಿ, ಖಾಸಗಿ ಮತ್ತು ಡೀಮ್ಸ್ ವಿಶ್ವವಿದ್ಯಾಲಯಗಳಲ್ಲಿ ಜಾತಿ ಆಧಾರಿತ ದೌರ್ಜನ್ಯ ತಡೆಯಲು ರೋಹಿತ್ ವೇಮುಲ ಕಾಯಿದೆ ಜಾರಿಗೆ ತರಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ…

You Missed

ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್!

ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್!

ಸ್ಟೂಡೆಂಟ್ ಎಲೆಕ್ಷನ್ ಗೆ ಅಸ್ತು ಎಂದ ಸಿಎಂ!

ಸ್ಟೂಡೆಂಟ್ ಎಲೆಕ್ಷನ್ ಗೆ ಅಸ್ತು ಎಂದ ಸಿಎಂ!

ರಾಧಿಕಾ ಪಂಡಿತ್ ಜೊತೆ ಹೊಸ ಲುಕ್‌ನಲ್ಲಿ ‘ರಾಕಿಂಗ್’ ಸ್ಟಾರ್!

ರಾಧಿಕಾ ಪಂಡಿತ್ ಜೊತೆ ಹೊಸ ಲುಕ್‌ನಲ್ಲಿ ‘ರಾಕಿಂಗ್’ ಸ್ಟಾರ್!

ಕನ್ನಡ ಚಿತ್ರರಂಗದ ವ್ಯಕ್ತಿಯೊಬ್ಬರ ನಿವಾಸ ಮ್ಯೂಸಿಯಂ ಆಗಲಿದೆ

ಕನ್ನಡ ಚಿತ್ರರಂಗದ ವ್ಯಕ್ತಿಯೊಬ್ಬರ ನಿವಾಸ ಮ್ಯೂಸಿಯಂ ಆಗಲಿದೆ

ಸಚಿನ್ ತೆಂಡೂಲ್ಕರ್ ಸೊಸೆ ಎಷ್ಟು ಶ್ರೀಮಂತೆ ಗೊತ್ತಾ?

ಸಚಿನ್ ತೆಂಡೂಲ್ಕರ್ ಸೊಸೆ ಎಷ್ಟು ಶ್ರೀಮಂತೆ ಗೊತ್ತಾ?

ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಮೇಲೆ ಪೊಲೀಸ್ ಕಣ್ಣು!

ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಮೇಲೆ ಪೊಲೀಸ್ ಕಣ್ಣು!