ಹಳೇ ಸ್ನೇಹಿತರಿಂದಲೇ ಸ್ನೇಹಿತನ ಹತ್ಯೆ.

ಮಂಡ್ಯ: ಅವ್ರೆಲ್ಲ ಹಳೆ ಸ್ನೇಹಿತರು. ಎರಡು ಗುಂಪುಗಳಾಗಿ ಪ್ರತ್ಯೇಕವಾಗಿ ಒಂದೇ ಬಾರ್ಗೆ ಎಂಟ್ರಿ ಕೊಟ್ಟಿದ್ರು. ಆದ್ರೆ ಈ ವೇಳೆ ಎಣ್ಣೆ ಮತ್ತು ನೆತ್ತಿಗೇರ್ತಿದ್ದಂತೆ ಎರಡು ಗುಂಪಿನ ನಡುವೆ ಗಲಾಟೆಯಾಗಿದೆ. ಎಣ್ಣೆ ಮತ್ತಲ್ಲಿದ್ದ ಗುಂಪು ಹಳೆ ಸ್ನೇಹಿತನನ್ನೆ ಅಟ್ಟಾಡಿಸಿ ಹತ್ಯೆ ಮಾಡಿದ್ದಾರೆ. ಹಾಗಿದ್ರೆ ಈ ಘಟನೆ ನಡೆದಿದ್ದು ಎಲ್ಲಿ.? ಸ್ನೇಹಿತರೆ ಸ್ನೇಹಿತನನ್ನ ಹತ್ಯೆ ಮಾಡಿದ್ದು ಹೇಕೆ ಅಂತೀರಾ? ಈ ಸ್ಟೋರಿ ನೋಡಿ.

 

ಇಂತಾದ್ದೊಂದು ಘಟನೆ ನಡೆದಿದ್ದು ಮಂಡ್ಯ ಜಿಲ್ಲೆಯ ಮದ್ದೂರಿನಲ್ಲ. ಈ ದೃಶ್ಯದಲ್ಲಿ ಕಾಣ್ತಿರುವ ಈತನ ಹೆಸ್ರು ಅರುಣ್ ಅಂತ ಮದ್ದೂರಿ ವಡ್ಡರದೊಡ್ಡಿ ಗ್ರಾಮದವ್ನು. ಕೆಲ ವರ್ಷಗಳ ಹಿಂದೆ ಗ್ರಾಮ ಬಿಟ್ಟು ಬೆಂಗಳೂರು ಸೇರಿಕೊಂಡಿದ್ದ ಅರುಣ್ ಆಟೋ ಚಾಲಕನಾಗಿದ್ದ. ಆದ್ರೆ ಹಬ್ಬದ ಪ್ರಯುಕ್ತ ಮೊನ್ನೆಯಷ್ಟೆ ಗ್ರಾಮಕ್ಕೆ ಬಂದಿದ್ದ ಅರುಣ್, ಗೆಳೆಯನ ಜೊತೆ ಎಣ್ಣೆ ಹೊಡೆಯೋಕೆ ಅಂತ ಬಾರ್ಗೆ ಹೋಗಿದ್ದ. ಈ ವೇಳೆ ಬಾರ್ಗೆ ಅರುಣುನ ಹಳೆ ಸ್ನೇಹಿತರ ಗ್ಯಾಂಗ್ ಕೂಡ ಎಂಟ್ರಿ ಕೊಟ್ಟಿತ್ತು. ಈ ವೇಳೆ ಮಾತಿಗೆ ಮಾತು ಬೆಳೆದು ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿಕೊಂಡಿದ್ದಾರೆ.

ಇನ್ನು ಬಾರ್ನಲ್ಲಿ ಗಲಾಟೆ ಆಗ್ತಿದ್ದಂತೆ ಬಾರ್ ಓನರ್ ಎರಡು ಗ್ಯಾಂಗ್ನವರನ್ನ ಬಾರ್ನಿಂದ ಹೊರಕ್ಕೆ ಹಾಕಿದ್ದಾರೆ. ಇದಾದ ಬಳಿಕ ಗೆಳೆಯ ದೇವರಾಜ್ ಜೊತೆ ಅರುಣ್ ಮದ್ದೂರು ಕಡೆ ಹೊರಟಿದ್ದ. ಆದ್ರೆ ಇಷ್ಟಕ್ಕೆ ಸುಮ್ಮನಾಗದ ಮತ್ತೊಂದು ಗ್ಯಾಂಗ್ ಅರುಣನನ್ನ ಅಡ್ಡಗಟ್ಟಿ ರಸ್ತೆಯಲ್ಲಿ ಅಟ್ಟಾಡಿಸಿಕೊಂಡು ಹಲ್ಲೆ ನಡೆಸಿದ್ದಾರೆ. ಈ ವೇಳೆ ತೀವ್ರ ಗಾಯಗೊಂಡಿದ್ದ ಅರುಣ್ ಸಾವನ್ನಪ್ಪಿದ್ದ. ಆದ್ರೆ ಅರುಣ್ ಜೊತೆ ಇದ್ದ ದೇವರಾಜು ಘಟನೆ ಬಗ್ಗೆ ವಿವರಿಸಿದ್ದು, ಸೂರಿ ಹಾಗೂ ವಿಕಾಸ್ ಎಂಬುವವರ ನಡುವೆ ಜಗಳವಾಗಿತ್ತು. ಸೂರಿ ಹಾಗೂ ಅರುಣ್ ಇಬ್ಬರು ಒಂದೆ ರೀತಿ ಬಿಳಿ ಬಟ್ಟೆ ಹಾಕಿದ್ದರು. ಅವರಿಗೆ ಸೂರಿ ಮೇಲೆ ಕೋಪ ಇತ್ತು ಹೀಗಾಗಿ ಕತ್ತಲೆಯಲ್ಲಿ ಬಳಿ ಬಣ್ಣದ ಶರ್ಟ್ ನೋಡಿ ಸೂರಿ ಅಂತ ಅರುಣನನ್ನ ಹೊಡೆದು ಕೊಂದಿದ್ದಾರೆ ಎಂದಿದ್ದಾನೆ.

ಇನ್ನು ಘಟನೆ ಬಳಿಕ ಅರುಣ್ ಜೊತೆ ಇದ್ದ ದೇವರಾಜ್ ಪೊಲೀಸರಿಗೆ ವಿಚಾರ ಮುಟ್ಟಿಸಿದ್ದ. ನಂತ್ರ ಪೊಲೀಸರು ಸ್ಥಳಕ್ಕೆ ಹೋಗುವಷ್ಟರಲ್ಲಿ ಅರುಣ್ ಯಣವಾಗಿ ಬಿದ್ದಿದ್ದ. ಸದ್ಯ ಈ ಬಗ್ಗೆ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನ ತಮ್ಮ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

Related Posts

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

  ಹೃದಯವೇದ್ರಾವಕ ಘಟನೆಯೊಂದು ಹುಣಸೂರಿನಲ್ಲಿ ನಡೆದಿದೆ ಪತ್ನಿ ಮಕ್ಕಳನ್ನು ಹತ್ಯೆಗೈದು ಪತಿ ನೇಣಿಗೆ ಶರಣಾಗಿರುವ ಪ್ರಕರಣ ಹುಣಸೂರು ನಗರದ ನ್ಯೂ ಮಾರುತಿ ಬಡಾವಣೆಯಲ್ಲಿ ಘಟನೆ ನ್ಯೂ ಮಾರುತಿ ಬಡಾವಣೆಯ ಹರೀಶ್ 49, ಪತ್ನಿ ನಿಶ್ಚಿತ 36 ಮಕ್ಕಳಾದ ನೆಕ್ಸಾ 13 ರಕ್ಷಾ…

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

  ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ ! ಆದಿಚುಂಚನಗಿರಿ ಮಠದ ಶಿಕ್ಷಣ ಟ್ರಸ್ಟ್‌ಗೆ ಸೇರಿದ 100 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಆರು ಎಕರೆ ಭೂಮಿ ಕಬಳಿಸಲು ನಕಲಿ ದಾಖಲೆಗಳನ್ನು ಸೃಷ್ಟಿಸಿದ ಆರೋಪದ…

You Missed

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ !

ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ !

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!